AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಣ್ಣನಿಗೆ ಅಪ್ಪು ನಿರ್ದೇಶನ, ಉಪ್ಪಿ ಅಸಿಸ್ಟೆಂಟ್​​ ಡೈರೆಕ್ಟರ್​, ಸಂತೋಷ್​ ಆನಂದ್​ರಾಮ್​ ಡೈಲಾಗ್​ ರೈಟರ್

ಪುನೀತ್​ ರಾಜ್​ಕುಮಾರ್​ ಅವರು ನಿರ್ದೇಶನ ಮಾಡಬೇಕು ಎಂದಿದ್ದನ್ನು ಕೇಳಿ ಶಿವರಾಜ್​ಕುಮಾರ್​ ಎಗ್ಸೈಟ್​ ಆದರು. ‘ಸಲಗ’ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಹೀಗೊಂದು ಘಟನೆ ನಡೆಯಿತು.

ಶಿವಣ್ಣನಿಗೆ ಅಪ್ಪು ನಿರ್ದೇಶನ, ಉಪ್ಪಿ ಅಸಿಸ್ಟೆಂಟ್​​ ಡೈರೆಕ್ಟರ್​, ಸಂತೋಷ್​ ಆನಂದ್​ರಾಮ್​ ಡೈಲಾಗ್​ ರೈಟರ್
ಶಿವರಾಜ್​ಕುಮಾರ್​, ಪುನೀತ್ ರಾಜ್​ಕುಮಾರ್​​, ಉಪೇಂದ್ರ
TV9 Web
| Updated By: ಮದನ್​ ಕುಮಾರ್​|

Updated on: Oct 11, 2021 | 8:14 AM

Share

ನಟ ದುನಿಯಾ ವಿಜಯ್​ ಅವರು ‘ಸಲಗ’ ಸಿನಿಮಾ ಮೂಲಕ ನಿರ್ದೇಶಕನಾಗಿದ್ದಾರೆ. ಈ ವಿಚಾರದಲ್ಲಿ ಅವರು ಪುನೀತ್​ ರಾಜ್​ಕುಮಾರ್​ ಅವರಿಗೂ ಸ್ಫೂರ್ತಿ ಆಗಿದ್ದಾರೆ. ಭಾನುವಾರ (ಅ.10) ನಡೆದ ಪ್ರೀ-ರಿಲೀಸ್​ ಇವೆಂಟ್​ಗೆ ಅತಿಥಿಯಾಗಿ ಬಂದಿದ್ದ ಪುನೀತ್​ ಅವರು ಈ ವಿಚಾರವನ್ನು ಹೇಳಿಕೊಂಡರು. ‘ಒಂದು ಕಾಲದಲ್ಲಿ ಡೈರೆಕ್ಷನ್​ ಮಾಡಬೇಕು ಎಂಬ ಹುಚ್ಚು ನನಗೂ ಇತ್ತು. ಶಿವಣ್ಣನ ಸಿನಿಮಾವನ್ನೇ ನಿರ್ದೇಶನ ಮಾಡಬೇಕು. ಯಾಕೆಂದರೆ ಶಿವಣ್ಣ ಯಾವಾಗಲೂ ನಿರ್ದೇಶಕರ ನಟ’ ಎಂದು ಪುನೀತ್ ಹೇಳಿದರು. ಶೀಘ್ರದಲ್ಲೇ ಈ ಆಸೆ ನೆರವೇರಲಿದೆ ಎಂದು ಹೇಳುವ ಮೂಲಕ ಅಭಿಮಾನಿಗಳ ಮನದಲ್ಲಿ ಕಾತರ ಹೆಚ್ಚುವಂತೆ ಅವರು ಮಾಡಿದ್ದಾರೆ.

ನಿರ್ದೇಶನದ ವಿಷಯದಲ್ಲಿ ಉಪೇಂದ್ರ ಕೂಡ ಪುನೀತ್ ಅವರಿಗೆ ಸ್ಫೂರ್ತಿ. ಉಪ್ಪಿ ನಿರ್ದೇಶನ ಮಾಡಿದ ಎಲ್ಲ ಚಿತ್ರಗಳೂ ಅಪ್ಪುಗೆ ಇಷ್ಟ. ಅದರಲ್ಲೂ ‘ತರ್ಲೆ ನನ್​ ಮಗ’ ಸಿನಿಮಾವನ್ನು ಅವರು ನೂರಾರು ಸಲ ನೋಡಿದ್ದಾರಂತೆ. ಈಗಲೂ ಅವರ ಮೊಬೈಲ್​ ಫೋನ್​ನಲ್ಲಿ ಆ ಸಿನಿಮಾ ಇಟ್ಟುಕೊಂಡಿದ್ದಾರೆ. ಪುನೀತ್​ ನಿರ್ದೇಶನ ಮಾಡಬೇಕು ಎಂದಿದ್ದನ್ನು ಕೇಳಿ ಶಿವರಾಜ್​ಕುಮಾರ್​ ಎಗ್ಸೈಟ್​ ಆದರು.

‘ಒಂದು ಒಳ್ಳೆಯ ಕಾನ್ಸೆಪ್ಟ್​ ತೆಗೆದುಕೊಂಡು ಬಂದು, ಅಭಿಮಾನಿಗಳು ಸೀಟ್​ ತುದಿಯಲ್ಲಿ ಕುಳಿತು ನೋಡುವಂತಹ ಥ್ರಿಲ್ಲರ್​ ಸಿನಿಮಾವನ್ನು ಖಂಡಿತಾ ಮಾಡುತ್ತೇನೆ’ ಎಂದರು ಪುನೀತ್. ‘ನಾನು ನಿಮಗೆ ಸಹಾಯಕ ನಿರ್ದೇಶಕ ಆಗುತ್ತೇನೆ’ ಎಂದು ಉಪೇಂದ್ರ ಭರವಸೆ ಕೊಟ್ಟರು. ‘ಸಂತೋಷ್​ ಆನಂದ್​​ರಾಮ್​ ನನಗೆ ಡೈಲಾಗ್​ ಬರೆದುಕೊಡುತ್ತಾರೆ. ಚೇತನ್​ ಕುಮಾರ್​ ನನಗೆ ​ಸಪೋರ್ಟ್​ ಮಾಡೋಕೆ ಇರುತ್ತಾರೆ. ಇವರೆಲ್ಲ ಇರುವಾಗ ನಾನು ಸ್ಟೈಲ್​ ಆಗಿ ಬಂದು ಆ್ಯಕ್ಷನ್​-ಕಟ್​ ಹೇಳುತ್ತೇನೆ’ ಎಂದು ನಗು ಚೆಲ್ಲಿದರು ಪುನೀತ್ ರಾಜ್​ಕುಮಾರ್​.

ಅಷ್ಟೇ ಅಲ್ಲ, ಸ್ಟೇಜ್​​ ಮೇಲೆಯೇ ಶಿವಣ್ಣನಿಗೆ ಪುನೀತ್​ ಆ್ಯಕ್ಷನ್​-ಕಟ್​ ಹೇಳಿದರು. ಅವರು ಆ್ಯಕ್ಷನ್​ ಎಂದ ತಕ್ಷಣ ‘ಓಂ’ ಸಿನಿಮಾದ ಒಂದು ದೃಶ್ಯವನ್ನು ಶಿವಣ್ಣ ಅಭಿನಯಿಸಿ ತೋರಿಸಿದರು. ಆದಷ್ಟು ಬೇಗ ಪುನೀತ್​ ಅವರ ನಿರ್ದೇಶನದ ಆಸೆ ಈಡೇರಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಭಾನುವಾರ ನಡೆದ ಈ ಪ್ರೀ ರಿಲೀಸ್​ ಇವೆಂಟ್​ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಕೂಡ ಸಾಕ್ಷಿಯಾಗಿದ್ದರು. ಸಲಗ ತಂಡಕ್ಕೆ ಅವರು ಕೂಡ ಶುಭ ಕೋರಿದರು. ಈ ಚಿತ್ರಕ್ಕೆ ಕೆ.ಪಿ. ಶ್ರೀಕಾಂತ್​ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ:

‘ನಮ್ಮ ಫ್ಯಾಮಿಲಿ ಅಂತಲ್ಲ.. ಫ್ಯಾಮಿಲಿ ಅಂದ್ರೆ ಚಿತ್ರರಂಗ’: ನಿನ್ನ ಸನಿಹಕೆ ಚಿತ್ರ ನೋಡಿದ ಬಳಿಕ ಪುನೀತ್​ ಮಾತು

ದೊಡ್ಮನೆ ಮಗಳ ಚಿತ್ರ ನೋಡಿ ಅಣ್ಣಾವ್ರ ಮಕ್ಕಳು ಹೇಳಿದ್ದೇನು? ಒಂದೇ ಫ್ರೇಮ್​ನಲ್ಲಿ ಶಿವಣ್ಣ, ರಾಘಣ್ಣ, ಪುನೀತ್​

ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,