AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ನಡೆಯಿತು ಮದುವೆ ನಾಟಕ; ಸ್ಯಾಂಡಲ್​ವುಡ್​ ಸಹ ಕಲಾವಿದೆಯ ಚಿನ್ನ-ಹಣ ಕದ್ದು ವರ ಪರಾರಿ

ಪ್ರೀತಿ ಮಾಡುವ ನೆಪದಲ್ಲಿ ಯುವತಿ ಹಿಂದೆ ಹರೀಶ್ ಬಿದ್ದಿದ್ದರು. ನಿನ್ನನ್ನೇ ಮದುವೆಯಾಗ್ತೀನಿ ಎಂದು  ನಂಬಿಸಿದ್ದರು. ಅಲ್ಲದೆ, ಮನೆಯಲ್ಲೆ ತಾಳಿ ಕಟ್ಟಿದಂತೆ ನಾಟ ಕೂಡ ಆಡಿದ್ದರು.

ಮನೆಯಲ್ಲಿ ನಡೆಯಿತು ಮದುವೆ ನಾಟಕ; ಸ್ಯಾಂಡಲ್​ವುಡ್​ ಸಹ ಕಲಾವಿದೆಯ ಚಿನ್ನ-ಹಣ ಕದ್ದು ವರ ಪರಾರಿ
ಮನೆಯಲ್ಲಿ ನಡೆಯಿತು ಮದುವೆ ನಾಟಕ; ಸ್ಯಾಂಡಲ್​ವುಡ್​ ಸಹ ಕಾಲಾವಿದೆಯ ಚಿನ್ನ-ಹಣ ಕದ್ದು ವರ ಪರಾರಿ
TV9 Web
| Edited By: |

Updated on:Aug 15, 2021 | 5:35 PM

Share

ಸಿನಿಮಾದಲ್ಲಿ ನಡೆಯುವ ಕೆಲ ಘಟನೆಗಳು ಕಲ್ಪನೆಗೆ ಮೀರಿದ್ದು. ಸಿನಿಮಾದಲ್ಲಿ ಬರುವ ದೃಶ್ಯಗಳು ನಿಜ ಜೀವನದಲ್ಲಿ ಘಟಿಸೋದು ತುಂಬಾನೇ ಅಪರೂಪ. ಆದರೆ, ಈಗ ಯುವತಿಯೊಬ್ಬಳ ಬಾಳಲ್ಲಿ ಸಿನಿಮೀಯ ಘಟನೆ ನಡೆದಿದೆ. ಆ ಯುವತಿ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದರುಅನ್ನೋದು ವಿಚಿತ್ರ. ಆ ಘಟನೆ ಏನು? ಮಾಡಿದ್ದು ಯಾರು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಬೆಂಗಳೂರಿನ ರಾಜಗೋಪಾಲನಗರದ ಯುವತಿ ವಂಚನೆಗೆ ಒಳಗಾದವರು. ಇವರು ಕನ್ನಡ ಚಿತ್ರರಂಗದಲ್ಲಿ ಸಹ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದಾರೆ. ರೌಡಿಶೀಟರ್ ಕುಣಿಗಲ್ ಗಿರಿ ಅಣ್ಣ ಹರೀಶ್ ವಂಚನೆ ಮಾಡಿದ ವ್ಯಕ್ತಿ. ಯುವತಿ ಜತೆ ಹರೀಶ್​ ಪ್ರೀತಿಯ ನಾಟಕವಾಡಿದ್ದರು. ಮನೆಯಲ್ಲೇ ತಾಳಿ ಕಟ್ಟಿ ಮದುವೆಯಾದಂತೆ ಹರೀಶ್ ನಟಿಸಿದ್ದಾರೆ. ನಂತರ ಅವರ ಬಳಿ ಇದ್ದ ಹಣ ಹಾಗೂ ಚಿನ್ನ ಲೂಟಿ ಮಾಡಿ ಪರಾರಿಯಾಗಿದ್ದಾರೆ.

ಪ್ರೀತಿ ಮಾಡುವ ನೆಪದಲ್ಲಿ ಯುವತಿ ಹಿಂದೆ ಹರೀಶ್ ಬಿದ್ದಿದ್ದರು. ನಿನ್ನನ್ನೇ ಮದುವೆಯಾಗ್ತೀನಿ ಎಂದು  ನಂಬಿಸಿದ್ದರು. ಅಲ್ಲದೆ, ಮನೆಯಲ್ಲೆ ತಾಳಿ ಕಟ್ಟಿದಂತೆ ನಾಟ ಕೂಡ ಆಡಿದ್ದರು. ನಂತರ ಯುವತಿಯ ಬಳಿಯಿದ್ದ 180 ಗ್ರಾಂ ಚಿನ್ನಾಭರಣ, 2.5 ಲಕ್ಷ ರೂಪಾಯಿ ನಗದು ಪಡೆದು ಹರೀಶ್​ ಎಸ್ಕೇಪ್​ ಆಗಿದ್ದಾರೆ.

ಈ ಘಟನೆ ಬಳಿ ಹರೀಶ್ ಸಂಪರ್ಕಿಸಿದರೆ ಯುವತಿಗೆ ಅವರು ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಸಂತ್ರಸ್ತೆ ದೂರು ದಾಖಲು ಮಾಡಿದ್ದರು. ಒಂದೊಮ್ಮೆ ಕೇಸ್ ವಾಪಸ್ ಪಡೆಯದಿದ್ದರೆ ಕೊಲೆ ಮಾಡುವುದಾಗಿ ಹರೀಶ್​ ಬೆದರಿಕೆ ಹಾಕಿದ್ದರು. ‘ನನ್ನ ಸಹೋದರ ಕುಣಿಗಲ್ ಗಿರಿ’ ಎಂದು ಯುವತಿಗೆ ಬೆದರಿಸಲಾಗಿದೆ​. ಇತ್ತ ಯುವತಿಗೆ ಕುಣಿಗಲ್ ಗಿರಿಯಿಂದ ಬೆದರಿಕೆ ಬಂದಿದೆ. ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಂತ್ರಸ್ತ ಯುವತಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ‘ದುಬಾರಿ ಸಿನಿಮಾ ಖಂಡಿತಾ ಮಾಡ್ತೀವಿ’; ಜೊತೆಯಾಗಿ ನಿಂತು ಸ್ಪಷ್ಟನೆ ನೀಡಿದ ಧ್ರುವ ಸರ್ಜಾ-ನಂದಕಿಶೋರ್​

Published On - 5:04 pm, Sun, 15 August 21

ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!