AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ಲ್ಯಾಟ್​ಗಳಲ್ಲಿ Drugs ಪಾರ್ಟಿ ಆಯೋಜನೆ.. ಕೆಲವರಿಗೆ ಮಾತ್ರ ಎಂಟ್ರಿ, ಯಾಕೆ ಗೊತ್ತಾ?

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಶೆ ನಂಟು ಪ್ರಕರಣದಲ್ಲಿ ಬಗೆದಷ್ಟೂ ಬಯಲಾಗ್ತಿದೆ ನಟಿಮಣಿಯರ ಪಾತ್ರ. ಇದೀಗ, ಫ್ಲ್ಯಾಟ್​ಗಳಲ್ಲಿ ರಾತ್ರಿಯಿಂದ ಬೆಳಗಾಗೋವರೆಗೂ ನಶೆ ಪಾರ್ಟಿಗಳು ನಡೆಯುತ್ತಿತ್ತು ಎಂಬ ಮಾಹಿತಿ ಬಯಲಾಗಿದೆ. ನಟಿ ಸಂಜನಾ ಗಲ್ರಾನಿ ಮತ್ತು ಆಕೆಯ ಗ್ಯಾಂಗ್ ಪರಿಚಿತರನ್ನೇ ಆಯ್ಕೆ ಮಾಡಿಕೊಂಡು ನೈಟ್​ ಫುಲ್​ ಡ್ರಗ್ ಪಾರ್ಟಿ ನಡೆಸುತ್ತಿದ್ರು ಎಂದು ತಿಳಿದುಬಂದಿದೆ. ಕೆಲವೇ ವ್ಯಕ್ತಿಗಳ ಜೊತೆಗೆ ಬೆಳಗಿನ ಜಾವದವರೆಗೂ ಡ್ರಗ್ಸ್ ಪಾರ್ಟಿ ಮಾಡಲಾಗುತ್ತಿತ್ತಂತೆ. ಈ ಪಾರ್ಟಿಗಳಲ್ಲಿ ಮಾದಕ ವಸ್ತು ವ್ಯಸನಿಗಳಿಗೆ ಮಾತ್ರ ಎಂಟ್ರಿ ಇರುತ್ತಿತ್ತು ಎಂಬ ಮಾಹಿತಿ […]

ಫ್ಲ್ಯಾಟ್​ಗಳಲ್ಲಿ Drugs ಪಾರ್ಟಿ ಆಯೋಜನೆ.. ಕೆಲವರಿಗೆ ಮಾತ್ರ ಎಂಟ್ರಿ, ಯಾಕೆ ಗೊತ್ತಾ?
ನಟಿ ಸಂಜನಾ ಗಲ್ರಾನಿ
ಆಯೇಷಾ ಬಾನು
ಆಯೇಷಾ ಬಾನು| Edited By: |

Updated on: Sep 13, 2020 | 11:57 AM

Share

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಶೆ ನಂಟು ಪ್ರಕರಣದಲ್ಲಿ ಬಗೆದಷ್ಟೂ ಬಯಲಾಗ್ತಿದೆ ನಟಿಮಣಿಯರ ಪಾತ್ರ. ಇದೀಗ, ಫ್ಲ್ಯಾಟ್​ಗಳಲ್ಲಿ ರಾತ್ರಿಯಿಂದ ಬೆಳಗಾಗೋವರೆಗೂ ನಶೆ ಪಾರ್ಟಿಗಳು ನಡೆಯುತ್ತಿತ್ತು ಎಂಬ ಮಾಹಿತಿ ಬಯಲಾಗಿದೆ.

ನಟಿ ಸಂಜನಾ ಗಲ್ರಾನಿ ಮತ್ತು ಆಕೆಯ ಗ್ಯಾಂಗ್ ಪರಿಚಿತರನ್ನೇ ಆಯ್ಕೆ ಮಾಡಿಕೊಂಡು ನೈಟ್​ ಫುಲ್​ ಡ್ರಗ್ ಪಾರ್ಟಿ ನಡೆಸುತ್ತಿದ್ರು ಎಂದು ತಿಳಿದುಬಂದಿದೆ. ಕೆಲವೇ ವ್ಯಕ್ತಿಗಳ ಜೊತೆಗೆ ಬೆಳಗಿನ ಜಾವದವರೆಗೂ ಡ್ರಗ್ಸ್ ಪಾರ್ಟಿ ಮಾಡಲಾಗುತ್ತಿತ್ತಂತೆ. ಈ ಪಾರ್ಟಿಗಳಲ್ಲಿ ಮಾದಕ ವಸ್ತು ವ್ಯಸನಿಗಳಿಗೆ ಮಾತ್ರ ಎಂಟ್ರಿ ಇರುತ್ತಿತ್ತು ಎಂಬ ಮಾಹಿತಿ ದೊರೆತಿದೆ. ಸಂಜನಾ ಮತ್ತು ಆಕೆಯ ಗ್ಯಾಂಗ್ ಇದಕ್ಕಾಗಿಯೇ ಪ್ರತ್ಯೇಕ ತಂಡ ಸಹ ರಚಿಸಿಕೊಂಡಿದ್ದರಂತೆ. ತಮ್ಮ ಪರಿಚಿತರಿಗೆ ಮಾತ್ರ ಪಾರ್ಟಿ ಆಯೋಜಿಸಿ ಆಹ್ವಾನ ನೀಡುತ್ತಿದ್ದರಂತೆ.

ಈ ವಿಷಯ ಹೊರಲೋಕಕ್ಕೆ ಗೊತ್ತಾಗಬಾರದೆಂದು ಕೆಲ ಫ್ಲ್ಯಾಟ್‌ಗಳನ್ನ ಆಯ್ಕೆ ಮಾಡಿಕೊಂಡು ಅಲ್ಲಿ ಪಾರ್ಟಿ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಮನೆಯಲ್ಲೇ ಡ್ರಗ್ಸ್​ ಸೇವನೆ ಮಾಡುವುದರಿಂದ ಯಾರಿಗೂ ಸಂಶಯ ಬರುವುದಿಲ್ಲ ಎಂಬುವುದು ಇವರ ಯೋಜನೆಯಾಗಿತ್ತು. ಈ ರೀತಿ ಜನರನ್ನು ಒಟ್ಟುಗೂಡಿಸಿ ಮಾದಕ ಲೋಕದಲ್ಲಿ ಮಿಂದೇಳುತ್ತಿದ್ದರು ಎಂಬ ಮಾಹಿತಿ ಬಯಲಾಗಿದೆ.

Follow Us
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ
ಬಿಜೆಪಿ ಅಭ್ಯರ್ಥಿಗಳಿಗೆ ಕಷ್ಟ ಆಗಿದ್ಯಾಕೆ? ರಘು ಕೌಟಿಲ್ಯ ಏನಂದ್ರು ನೋಡಿ
ಬಿಜೆಪಿ ಅಭ್ಯರ್ಥಿಗಳಿಗೆ ಕಷ್ಟ ಆಗಿದ್ಯಾಕೆ? ರಘು ಕೌಟಿಲ್ಯ ಏನಂದ್ರು ನೋಡಿ
ಪರಿಷತ್​​ ಚುನಾವಣೆ ಫಲಿತಾಂಶ: ಕಾಂಗ್ರೆಸ್​​ ನಾಯಕರಿಂದ ಸುದ್ದಿಗೋಷ್ಠಿ
ಪರಿಷತ್​​ ಚುನಾವಣೆ ಫಲಿತಾಂಶ: ಕಾಂಗ್ರೆಸ್​​ ನಾಯಕರಿಂದ ಸುದ್ದಿಗೋಷ್ಠಿ
ಸಂಪೂರ್ಣ ಬತ್ತಿದ ಕಾವೇರಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರ?
ಸಂಪೂರ್ಣ ಬತ್ತಿದ ಕಾವೇರಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರ?
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ
ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು
ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು
ಬಿಗ್​​ಬಾಸ್​​ಗೆ ಹೋಗಲು ರೆಡಿ ಆಗಿದ್ದಾರಾ ಸೂರಜ್: ಹಾಸ್ಯ ನಟ ಹೇಳಿದ್ದೇನು?
ಬಿಗ್​​ಬಾಸ್​​ಗೆ ಹೋಗಲು ರೆಡಿ ಆಗಿದ್ದಾರಾ ಸೂರಜ್: ಹಾಸ್ಯ ನಟ ಹೇಳಿದ್ದೇನು?