AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂದಿನಿ-ಸಂಜಿತ್ ಹೆಗಡೆ ಕೊಲ್ಯಾಬರೇಷನ್; ಸಖತ್ ಫನ್ ಆಗಿದೆ ಸಾಂಗ್

ಸಂಜಿತ್ ಹೆಗಡೆ ಮತ್ತು 'ನಾನು ನಂದಿನಿ' ಖ್ಯಾತಿಯ ವಿಕ್ಕಿ ಪೀಡಿಯಾ ಹೊಸ ಹಾಡಿಗೆ ಸಹಯೋಗಿಸಿದ್ದಾರೆ. 'ನೀ ನಂಗೆ ಅಲ್ಲವ..' ಹಾಡಿಗೆ ಹೊಸ ರೂಪ ನೀಡಿರುವ ಈ ಹಾಡು ಅಭಿಮಾನಿಗಳ ಗಮನ ಸೆಳೆದಿದೆ. ಕೇವಲ 10 ಗಂಟೆಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. ಈ ಕೊಲ್ಯಾಬರೇಷನ್ ಮಾಡಲು ಒಂದು ಕಾರಣ ಕೂಡ ಇದೆ.

ನಂದಿನಿ-ಸಂಜಿತ್ ಹೆಗಡೆ ಕೊಲ್ಯಾಬರೇಷನ್; ಸಖತ್ ಫನ್ ಆಗಿದೆ ಸಾಂಗ್
ಸಂಜಿತ್ ಹೆಗಡೆ-ನಂದಿನಿ
ರಾಜೇಶ್ ದುಗ್ಗುಮನೆ
|

Updated on: Nov 27, 2025 | 7:03 AM

Share

‘ನಾನು ನಂದಿನಿ’ ಎಂದು ಸಖತ್ ಫೇಮಸ್ ಆದವರು ವಿಕ್ಕಿ ಪೀಡಿಯಾ. ಈ ಹಾಡು ಎಲ್ಲರ ಗಮನ ಸೆಳೆದಿತ್ತು. ಈಗ ಅವರು ಸಂಜಿತ್ ಹೆಗಡೆ (Sanjit Hegde) ಜೊತೆ ಕೊಲ್ಯಾಬರೇಷನ್ ಮಾಡಿಕೊಂಡಿದ್ದಾರೆ. ಈ ಹಾಡು ಸಾಕಷ್ಟು ಗಮನ ಸೆಳೆದಿದೆ. ‘ನೀ ನಂಗೆ ಅಲ್ಲವ..’ ಹಾಡಿಗೆ ಹೊಸ ರೂಪ ಕೊಟ್ಟು ಸಾಂಗ್​ನ ರಚಿಸಲಾಗಿದೆ. ಇದು ಅಭಿಮಾನಿಗಳಿಗೆ ಇಷ್ಟ ಆಗಿದೆ. ಈ ವಿಡಿಯೋ ಕೇವಲ 10 ಗಂಟೆಯಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ.

ಸಂಜಿತ್ ಹೆಗಡೆ ಅವರು ಕನ್ನಡದ ಖ್ಯಾತ ಸಿಂಗರ್. ಅವರ ಧ್ವನಿಯಲ್ಲಿ ಮೂಡಿ ಬಂದ ಅನೇಕ ಹಾಡುಗಳು ಸೂಪರ್ ಹಿಟ್ ಆಗಿವೆ. ಅದರಲ್ಲೂ ‘ನೀ ನಂಗೆ ಅಲ್ಲವ..’ ಹಾಡು ಗಮನ ಸೆಳೆದಿತ್ತು. ಅವರ ಅಭಿಮಾನಿ ಬಳಗ ದೊಡ್ಡದಿದೆ. ಇನ್ನು, ವಿಕ್ಕಿ ಪೀಡಿಯಾ ಕೂಡ ಕಡಿಮೆ ಏನಿಲ್ಲ. ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 11 ಲಕ್ಷ ಹಿಂಬಾಲಕರು ಇದ್ದಾರೆ. ಈಗ ಇಬ್ಬರೂ ಸೇರಿರೋದು ವಿಶೇಷ.

‘ನನ್ ಜೊತೆ ಡೇಟ್​ಗೆ ಬರ್ತೀಯಾ’ ಎಂದು ಸಂಜಿತ್ ನಂದಿನಿ ಬಳಿ ಕೇಳುತ್ತಾರೆ. ಏಕೆ ಎಂಬ ಪ್ರಶ್ನೆ ಎದುರಿನಿಂದ ಬರುತ್ತದೆ. ‘ನೀ ನಂಗೆ ಅಲ್ಲವಾ..’ ರಾಗದಲ್ಲಿ ನೀ ಸಿಂಗಲ್ ಅಲ್ಲವಾ..’ ಎಂದು ಹಾಡುತ್ತಾರೆ ಸಂಜಿತ್. ಈ ರೀತಿ ಸಾಂಗ್ ಮುಂದುವರಿಯುತ್ತದೆ. ಈ ಹಾಡು ಸಾಕಷ್ಟು ಗಮನ ಸೆಳೆದಿದೆ.

ಈ ಹಾಡು ಮಾಡೋದಕ್ಕೂ ಒಂದು ಕಾರಣ ಇದೆ. ನವೆಂಬರ್ 30ರಂದು ಸಂಜಿತ್ ಹೆಗಡೆ ಕಾನ್ಸರ್ಟ್ ಬೆಂಗಳೂರಿನಲ್ಲಿ ಇದೆ. ಇದರ ಪ್ರಮೋಷನ್​​ಗೆ ಸಂಜಿತ್ ಅವರು ಈ ರೀತಿ ಮಾಡಿದ್ದಾರೆ. ನಾಗಾವರದ ಮ್ಯಾನ್​ಪೋ ಕನ್​ವೆನ್ಶನ್ ಸೆಂಟರ್​ನಲ್ಲಿ ಈ ಕಾನ್ಸರ್ಟ್ ನಡೆಯಲಿದೆ. ಸಂಜೆ ಆರು ಗಂಟೆಯಿಂದ ಕಾರ್ಯಕ್ರಮ ಆರಂಭ ಆದರೆ, 4 ಗಂಟೆ ಇರಲಿದೆ. 499 ರೂಪಾಯಿಯಿಂದ ಟಿಕೆಟ್ ಆರಂಭವಾಗಿ 5 ಸಾವಿರ ರೂಪಾಯಿವರೆಗೂ ಇದೆ.

ಇದನ್ನೂ ಓದಿ: ಸಂಜಿತ್ ಹೆಗಡೆ-ಸೋನು ನಿಗಮ್ ಸಮ್ಮಿಲನ; ‘ಮಾಯಾವಿ..’ ಹಾಡು ಸಖತ್ ಇಂಪು

ವಿಕ್ಕಿಪೀಡಿಯಾ ಕಂಟೆಂಟ್​ಗಳು ಗಮನ ಸೆಳೆಯುವ ರೀತಿಯಲ್ಲಿ ಇರುತ್ತವೆ. ಫನ್​ ವಿಡಿಯೋಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಾ ಇರುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬಾವಿಗೆ ಬಿದ್ದರೂ ಪವಾಡ ಸದೃಶ್ಯವಾಗಿ ಬದುಕುಳಿದ 2 ವರ್ಷದ ಮಗು
ಬಾವಿಗೆ ಬಿದ್ದರೂ ಪವಾಡ ಸದೃಶ್ಯವಾಗಿ ಬದುಕುಳಿದ 2 ವರ್ಷದ ಮಗು
ಸರ್ಕಾರಕ್ಕೆ ಮುಜುಗರ ಆಗ್ತಿದೆ: ಗೃಹ ಸಚಿವರು ಸದನದಲ್ಲೇ ಹೀಗಂದಿದ್ದೇಕೆ?
ಸರ್ಕಾರಕ್ಕೆ ಮುಜುಗರ ಆಗ್ತಿದೆ: ಗೃಹ ಸಚಿವರು ಸದನದಲ್ಲೇ ಹೀಗಂದಿದ್ದೇಕೆ?
ದಾವಣಗೆರೆ ಬೈ ಎಲೆಕ್ಷನ್: ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ಮುಖಂಡ
ದಾವಣಗೆರೆ ಬೈ ಎಲೆಕ್ಷನ್: ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ಮುಖಂಡ
ಹೊಟ್ಟೆ ಆಯ್ತು ಈಗ ಬಟ್ಟೆಗೂ ತಟ್ಟಿದ ಯುದ್ಧದ ಎಫೆಕ್ಟ್​​!
ಹೊಟ್ಟೆ ಆಯ್ತು ಈಗ ಬಟ್ಟೆಗೂ ತಟ್ಟಿದ ಯುದ್ಧದ ಎಫೆಕ್ಟ್​​!
ಡೆಡ್ಲಿ ರೋಡ್​ರೇಜ್, ಕಾರು ಬಾನೆಟ್​ನಲ್ಲಿ ನೇತಾಡಿದ ಪೊಲೀಸ್! ವಿಡಿಯೋ ವೈರಲ್
ಡೆಡ್ಲಿ ರೋಡ್​ರೇಜ್, ಕಾರು ಬಾನೆಟ್​ನಲ್ಲಿ ನೇತಾಡಿದ ಪೊಲೀಸ್! ವಿಡಿಯೋ ವೈರಲ್
ಕ್ಯೂ ನೆಟ್, ವಿಹಾನ್ ಬಗ್ಗೆ ಸುಳ್ಳು ಸುದ್ದಿ ಬೇಡ: ಹೈಕೋರ್ಟ್ ತಡೆಯಾಜ್ಞೆ!
ಕ್ಯೂ ನೆಟ್, ವಿಹಾನ್ ಬಗ್ಗೆ ಸುಳ್ಳು ಸುದ್ದಿ ಬೇಡ: ಹೈಕೋರ್ಟ್ ತಡೆಯಾಜ್ಞೆ!
ಸೌದೆ ಒಲೆ ಬಳಸುವ ಮುನ್ನ ಹುಷಾರ್​​: ಕ್ಯಾನ್ಸರ್​​ ಬರಬಹುದು ಎಂದ ಡಾಕ್ಟರ್ಸ್​
ಸೌದೆ ಒಲೆ ಬಳಸುವ ಮುನ್ನ ಹುಷಾರ್​​: ಕ್ಯಾನ್ಸರ್​​ ಬರಬಹುದು ಎಂದ ಡಾಕ್ಟರ್ಸ್​
ಸೆಲ್ಫಿಗೆ ಕಾಜೋಲ್ ಮೇಲೆ ಮುಗಿಬಿದ್ದ ಫ್ಯಾನ್ಸ್; ಭಯಪಡುತ್ತಾ ಸಾಗಿದ ನಟಿ
ಸೆಲ್ಫಿಗೆ ಕಾಜೋಲ್ ಮೇಲೆ ಮುಗಿಬಿದ್ದ ಫ್ಯಾನ್ಸ್; ಭಯಪಡುತ್ತಾ ಸಾಗಿದ ನಟಿ
ಬಾಗಲಕೋಟೆ ಉಪಚುನಾವಣೆ: ಬಿಜೆಪಿ ಟಿಕೆಟ್​​ಗಾಗಿ ಹೈಕಮಾಂಡ್​​ ಮಟ್ಟದಲ್ಲಿ ಲಾಭಿ
ಬಾಗಲಕೋಟೆ ಉಪಚುನಾವಣೆ: ಬಿಜೆಪಿ ಟಿಕೆಟ್​​ಗಾಗಿ ಹೈಕಮಾಂಡ್​​ ಮಟ್ಟದಲ್ಲಿ ಲಾಭಿ
ಬಿರು ಬೇಸಿಗೆಯಲ್ಲೂ ಕಾರವಾರದಲ್ಲಿ ಭರ್ಜರಿ ಆಲಿಕಲ್ಲು ಮಳೆ!
ಬಿರು ಬೇಸಿಗೆಯಲ್ಲೂ ಕಾರವಾರದಲ್ಲಿ ಭರ್ಜರಿ ಆಲಿಕಲ್ಲು ಮಳೆ!