AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sathyajith Obituary: ಬಸ್​ ಡ್ರೈವರ್​ ಆಗಿದ್ದ ಸತ್ಯಜಿತ್​ ನೇರ ಬಾಲಿವುಡ್​ಗೆ ಕಾಲಿಟ್ಟಿದ್ದೇ ಅಚ್ಚರಿ; ಹಿರಿಯ ನಟ ಸಾಗಿ ಬಂದ ಹಾದಿ ಇಲ್ಲಿದೆ

ಸ್ಯಾಂಡಲ್​ವುಡ್​ನ ಹಿರಿಯ ನಟ ಸತ್ಯಜಿತ್​ ಅವರು ತೀವ್ರ ಅನಾರೋಗ್ಯದಿಂದ ಭಾನುವಾರ (ಅ.9) ನಿಧನರಾದರು. ಬೌರಿಂಗ್​ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿ ಆಗದೇ ಕೊನೆಯುಸಿರು ಎಳೆದಿದ್ದಾರೆ.

Sathyajith Obituary: ಬಸ್​ ಡ್ರೈವರ್​ ಆಗಿದ್ದ ಸತ್ಯಜಿತ್​ ನೇರ ಬಾಲಿವುಡ್​ಗೆ ಕಾಲಿಟ್ಟಿದ್ದೇ ಅಚ್ಚರಿ; ಹಿರಿಯ ನಟ ಸಾಗಿ ಬಂದ ಹಾದಿ ಇಲ್ಲಿದೆ
ಸತ್ಯಜಿತ್​
Follow us
ಮದನ್​ ಕುಮಾರ್​
|

Updated on: Oct 10, 2021 | 7:38 AM

ಕನ್ನಡ ಚಿತ್ರರಂಗದ ಬಹುಬೇಡಿಕೆಯ ಪೋಷಕ ನಟನಾಗಿದ್ದ ಸತ್ಯಜಿತ್​ ಅವರು ಭಾನುವಾರ (ಅ.10) ಕೊನೆಯುಸಿರೆಳೆದರು. 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಆ ಮೂಲಕ ಚಿತ್ರರಂಗದಲ್ಲಿ ಅಪಾರ ಅನುಭವ ಪಡೆದುಕೊಂಡಿದ್ದರು. ಚಂದನವನದ ಹಲವಾರು ಸ್ಟಾರ್​ ಕಲಾವಿದರ ಸಿನಿಮಾಗಳಲ್ಲಿ ನಟಿಸುವ ಅವಕಾಶ ಅವರಿಗೆ ಸಿಕ್ಕಿತ್ತು. ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ಕೈಕೊಟ್ಟಿದ್ದರಿಂದ ಅವರು ನಟನೆಯಿಂದ ದೂರ ಉಳಿಯಬೇಕಾಯಿತು. ಇಹಲೋಕ ತ್ಯಜಿಸಿರುವ ಹಿರಿಯ ನಟನಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಕೆಎಸ್​ಆರ್​ಟಿಸಿ ಚಾಲಕನಿಗೆ ಬಾಲಿವುಡ್ ಅವಕಾಶ

ಸತ್ಯಜಿತ್​ ಯಾವುದೇ ಫಿಲ್ಮೀ ಕುಟುಂಬದ ಹಿನ್ನೆಲೆಯಿಂದ ಬಂದವರಲ್ಲ. ಮೂರೂವರೆ ದಶಕಗಳ ಹಿಂದೆ ಅವರು ಹುಬ್ಬಳ್ಳಿಯಲ್ಲಿ ಬಸ್​ ಡ್ರೈವರ್​ ಆಗಿದ್ದರು. ಕೆಎಸ್​ಆರ್​ಟಿಸಿ ಬಸ್​ ಚಾಲಕನಾಗಿ ಕೆಲಸ ಮಾಡುತ್ತಿದ್ದಾಗಲೇ ಅವರಿಗೆ ನಟನೆ ಬಗ್ಗೆ ಅಪಾರ ಪ್ರೀತಿ ಇತ್ತು. ಹಾಗಾಗಿ ಹವ್ಯಾಸಿ ನಾಟಕ ತಂಡಗಳ ಜೊತೆ ಗುರುತಿಸಿಕೊಂಡಿದ್ದರು. ಅನೇಕ ಊರುಗಳಿಗೆ ತೆರಳಿ ಹಲವು ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಆ ಮೂಲಕ ಅವರಿಗೆ ಬಣ್ಣದ ಸಹವಾಸ ಅಂಟಿಕೊಂಡಿತು. ಅದು ಅವರನ್ನು ಬಾಲಿವುಡ್​ವರೆಗೆ ಕರೆದುಕೊಂಡು ಹೋಯಿತು ಎಂಬುದೇ ಅಚ್ಚರಿ.

ಸತ್ಯಜಿತ್​ ಮೊದಲ ಚಿತ್ರವೇ ಬಾಲಿವುಡ್​ನಲ್ಲಿ

ಬೇರೆ ಬೇರೆ ಊರುಗಳಲ್ಲಿ ನಡೆಯುತ್ತಿದ್ದ ನಾಟಕ ಸ್ಪರ್ಧೆಗಳಲ್ಲಿ ಸತ್ಯಜಿತ್​ ಅವರ ತಂಡ ಕೂಡ ಭಾಗವಹಿಸುತ್ತಿತ್ತು. ಒಮ್ಮೆ ಅವರು ಮುಂಬೈನಲ್ಲಿ ನಾಟಕ ಪ್ರದರ್ಶನ ನೀಡಿದರು. ಆಗ ಅವರಿಗೆ ಬಾಲಿವುಡ್​ ನಟ ನಾನಾ ಪಾಟೇಕರ್​ ಪರಿಚಯ ಆಯಿತು. ಆ ಪರಿಚಯದಿಂದಾಗಿ ಹಿಂದಿಯ ‘ಅಂಕುಶ್​’ ಸಿನಿಮಾದಲ್ಲಿ ನಟಿಸಲು ಸತ್ಯಜಿತ್​ ಅವರಿಗೆ ಅವಕಾಶ ಸಿಕ್ಕಿತು. ಆ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಹಿಟ್​ ಕೂಡ ಆಯಿತು. ಅದರಲ್ಲಿ ಸಣ್ಣದೊಂದು ಪಾತ್ರ ಮಾಡಿದ್ದ ಸತ್ಯಜಿತ್​ಗೆ ಜೀವನದಲ್ಲಿ ಹೊಸ ದಾರಿ ಕಾಣುವಂತಾಯಿತು.

ಬಹುಬೇಡಿಕೆಯ ಪೋಷಕ ನಟನಾಗಿದ್ದ ಸತ್ಯಜಿತ್​:

ಮೊದಲ ಸಿನಿಮಾ ‘ಅಂಕುಶ್​’ ತೆರೆಕಂಡ ಬಳಿಕ ಸತ್ಯಜಿತ್​ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಅವಕಾಶ ಸಿಗಲು ಪ್ರಾರಂಭ ಆಯಿತು. 1986ರಲ್ಲಿ ತೆರೆಕಂಡ ಅನಂತ್​ ನಾಗ್​ ಅಭಿನಯದ ‘ಅರುಣರಾಗ’ ಚಿತ್ರದಲ್ಲಿ ಸತ್ಯಜಿತ್​ ನಟಿಸಿದರು. ಬಳಿಕ ಸಾಲು ಸಾಲು ಆಫರ್​ಗಳು ಅವರಿಗೆ ಸಿಕ್ಕವು. ವಿಲನ್ ಆಗಿ, ಪೊಲೀಸ್​ ಆಗಿ, ತಂದೆಯಾಗಿ ಎಲ್ಲ ಪಾತ್ರಗಳಿಗೆ ಜೀವ ತುಂಬುವ ಮೂಲಕ ಅವರು ಬಹುಬೇಡಿಕೆಯ ಪೋಷಕ ನಟನಾಗಿ ಗುರುತಿಸಿಕೊಂಡರು. ಕಾಮಿಡಿ ಪಾತ್ರಗಳು ಕೂಡ ಅವರ ಕೈ ಹಿಡಿದವು.

ಮೂಲ ಹೆಸರು ಸಯ್ಯದ್​ ನಿಜಾಮುದ್ದೀನ್​:

ಸತ್ಯಜಿತ್​ ಅವರ ಮೂಲ ಹೆಸರು ಸಯ್ಯದ್​ ನಿಜಾಮುದ್ದೀನ್​. ಆದರೆ ಚಿತ್ರರಂಗಕ್ಕೆ ಕಾಲಿಟ್ಟಾಗ ಅವರು ಹೆಸರು ಬದಲಾಯಿಸಿಕೊಂಡರು. ಸತ್ಯಜಿತ್​ ಎಂಬ ಹೆಸರಿನಿಂದಲೇ ಅವರು ಫೇಮಸ್​ ಆದರು. ಗಡಿಬಿಡಿ ಗಂಡ, ಮನೆ ದೇವ್ರು, ಶಿವಮೆಚ್ಚಿದ ಕಣ್ಣಪ್ಪ, ಮಂಡ್ಯದ ಗಂಡು, ಪೊಲೀಸ್​ ಸ್ಟೋರಿ, ಅಪ್ಪು, ಅಭಿ, ಆಪ್ತಮಿತ್ರ ಮುಂತಾದ ಸಿನಿಮಾಗಳಲ್ಲಿ ನಟಿಸಿ ಅವರು ಕನ್ನಡ ಸಿನಿಪ್ರಿಯರನ್ನು ರಂಜಿಸಿದ್ದರು.

ಅನಾರೋಗ್ಯದ ಬಳಿಕ ಹಳಿ ತಪ್ಪಿದ ಬದುಕು

ಸತ್ಯಜಿತ್​ ಕಾಲಿಗೆ ಗ್ಯಾಂಗ್ರಿನ್​ ಆದ ಬಳಿಕ ಅವರ ಜೀವನ ಕಷ್ಟದ ಹಾದಿ ಹಿಡಿಯಿತು. ಒಂದು ಕಾಲನ್ನು ಕತ್ತರಿಸಲಾಯಿತು. ಒಬ್ಬ ನಟನಿಗೆ ಇದಕ್ಕಿಂತ ದೊಡ್ಡ ನಷ್ಟ ಬೇರೇನು ಇರಲು ಸಾಧ್ಯ? ಆ ನಂತರ ಅವರಿಗೆ ಅವಕಾಶ ಇಲ್ಲದಾದವು. ಚಿಕಿತ್ಸೆಗೆ ಹಣದ ಕೂರತೆ ಕೂಡ ಉಂಟಾಯಿತು. ಕುಟುಂಬದವರ ಜೊತೆಗೆ ಸತ್ಯಜಿತ್​ ಜಗಳ ಮಾಡಿಕೊಂಡು ಸುದ್ದಿಯಾದರು. ದಿನದಿಂದ ದಿನಕ್ಕೆ ಅವರ ಪರಿಸ್ಥಿತಿ ಹದಗೆಡುತ್ತಲೇ ಹೋಯಿತು.

ಕೊನೇ ಸಿನಿಮಾ ‘ಸೆಕೆಂಡ್​ ಹಾಫ್​’:

ಸತ್ಯಜಿತ್​ ಅವರು ಕೊನೆಯದಾಗಿ ನಟಿಸಿದ್ದು ‘ಸೆಕೆಂಡ್​ ಹಾಫ್​’ ಚಿತ್ರದಲ್ಲಿ. ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆ ನಿಭಾಯಿಸಿದ್ದ ಆ ಸಿನಿಮಾ 2018ರಲ್ಲಿ ತೆರೆ ಕಂಡಿತು. ಒಂದು ಕಾಲು ಕಳೆದುಕೊಂಡಿದ್ದ ಅವರು ವ್ಹೀಲ್​ ಚೇರ್​ ಮೇಲೆ ಕುಳಿತುಕೊಂಡೇ ನಟಿಸಿದ್ದರು.

ಇದನ್ನೂ ಓದಿ:

ನಟನಾಗಿರುವುದಕ್ಕೆ ತಂದೆ ಉತ್ತಮವಾಗಿ ಅಳುತ್ತಿದ್ದಾರೆ: ಸತ್ಯಜಿತ್ ಕಣ್ಣೀರನ್ನು ಟೀಕಿಸಿದ ಮಗಳು ಸ್ವಲೇಹಾ

ಮಗಳಿಗಾಗಿ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ; ಮಾಧ್ಯಮದ ಮುಂದೆ ಕಣ್ಣೀರಿಟ್ಟ ನಟ ಸತ್ಯಜಿತ್

RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿದ್ದು ಒಬ್ಬ ಮಹಿಳೆಗೆ ಗೊತ್ತೇ ಇರಲಿಲ್ಲವಂತೆ
ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿದ್ದು ಒಬ್ಬ ಮಹಿಳೆಗೆ ಗೊತ್ತೇ ಇರಲಿಲ್ಲವಂತೆ
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ
ಕಮಲ್ ಹಾಸನ್ ವಿಚಾರ: ಕಾನೂನು ಕೈಗೆ ತೆಗೆದುಕೊಳ್ಳದಂತೆ ಡಿಕೆಶಿ ಮನವಿ
ಕಮಲ್ ಹಾಸನ್ ವಿಚಾರ: ಕಾನೂನು ಕೈಗೆ ತೆಗೆದುಕೊಳ್ಳದಂತೆ ಡಿಕೆಶಿ ಮನವಿ