AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗಳಿಗಾಗಿ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ; ಮಾಧ್ಯಮದ ಮುಂದೆ ಕಣ್ಣೀರಿಟ್ಟ ನಟ ಸತ್ಯಜಿತ್

ಪುತ್ರಿಗಾಗಿ ನಾನು ನನ್ನ ಹೆಂಡತಿ ಮನೆ ಮಠ ಮಾರಿ ಅಮೆರಿಕಗೆ ಕಳುಹಿಸಿ ಓದಿಸಿ ಪೈಲಟ್ ಮಾಡಿದ್ದೇವೆ. ಮಗಳು ನಮ್ಮ ಜತೆ ಇದ್ದಾಗ ಚೆನ್ನಾಗಿಯೇ ಇದ್ದಳು. ಒಂದು ದಿನ ಏಕಾಏಕಿ ಬಂದು ಆರ್ಕಿಟೆಕ್ಚರ್​ ಒಬ್ಬನನ್ನು ಮದುವೆ ಆಗುತ್ತೇನೆ ಅಂದಳು

ಮಗಳಿಗಾಗಿ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ; ಮಾಧ್ಯಮದ ಮುಂದೆ ಕಣ್ಣೀರಿಟ್ಟ ನಟ ಸತ್ಯಜಿತ್
ಸತ್ಯಜಿತ್​ ಹಾಗೂ ಅವರ ಮಗಳು ಸ್ವಲೇಹಾ
ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Feb 12, 2021 | 4:44 PM

Share

ಬೆಂಗಳೂರು: ನಾನು ಓದಿಸಿ ಬೆಳೆಸಿದ ಮಗಳೇ ಈಗ ನಮ್ಮ ವಿರುದ್ಧ ತಿರುಗಿ ಬಿದ್ದಿದ್ದಾಳೆ. ಆಕೆಗಾಗಿ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಸ್ವಂತ ಮನೆ ಮಾರಿ ಈಗ ಬಾಡಿಗೆ ಮನೆಯಲ್ಲಿ ಉಳಿದುಕೊಳ್ಳುವ ಪರಿಸ್ಥಿತಿ ಬಂದೊದಗಿದೆ ಎಂದು ಕನ್ನಡದ ಹಿರಿಯ ನಟ ಸತ್ಯಜಿತ್​ ಟಿವಿ9 ಕನ್ನಡದ ಎದುರು ಕಣ್ಣೀರಿಟ್ಟಿದ್ದಾರೆ.

ಪುತ್ರಿ ಸ್ವಲೇಹಾಗಾಗಿ ನಾನು ನನ್ನ ಹೆಂಡತಿ ಮನೆ ಮಠ ಮಾರಿ ಅಮೆರಿಕಗೆ ಕಳುಹಿಸಿ ಓದಿಸಿ ಪೈಲಟ್ ಮಾಡಿದ್ದೇವೆ. ಅವಳು ನಮ್ಮ ಜತೆ ಇದ್ದಾಗ ಚೆನ್ನಾಗಿಯೇ ಇದ್ದಳು. ಒಂದು ದಿನ ಏಕಾಏಕಿ ಆರ್ಕಿಟೆಕ್ಚರ್​ ಒಬ್ಬನನ್ನು ಮದುವೆ ಆಗುತ್ತೇನೆ ಅಂದಳು. ನಾನು, ಮಕ್ಕಳು ಹೋದರೆ ಹೋಗಲಿ ಎಂದು ಸುಮ್ಮನಾದೆ. ಮದುವೆ ನಂತರ ಮಗಳು ಬದಲಾಗಿದ್ದಾಳೆ ಎಂದು ಸತ್ಯಜಿತ್​ ದೂರಿದ್ದಾರೆ.

ಮನೆ ಸಾಲ, ಕಾರಿನ ಸಾಲ, ಕ್ರೆಡಿಟ್​ ಕಾರ್ಡ್​, ಪರ್ಸನಲ್ ಲೋನ್​ ಎಲ್ಲವೂ ಪುತ್ರಿ ಹೆಸರಿನಲ್ಲೇ ಇದೆ. ನನ್ನ ಪುತ್ರಿ ಸ್ವಲೇಹಾ ಹೆಸರಿನಲ್ಲಿ ಪತಿ ಲೋನ್ ಮಾಡಿದ್ದಾನೆ. ಮಗಳಿಗಾಗಿ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಸ್ವಂತ ಮನೆ ಮಾರಿಕೊಂಡು ಬಾಡಿಗೆ ಬಂದು ಕೂತಿದ್ದೇವೆ. ಮನೆ ಬಾಡಿಗೆಯನ್ನಾದರೂ ಕೊಡು ಎಂದು ಮನವಿಮಾಡಿದ್ದೆ. ಆದರೆ ಯಾವುದಕ್ಕೂ ನನ್ನ ಮಗಳು ಸ್ಪಂದಿಸುತ್ತಿಲ್ಲ ಎಂದು ಸತ್ಯಜಿತ್ ಹೇಳಿದ್ದಾರೆ.

ಸ್ವಲೇಹಾ ಹೇಳೋದೆ ಬೇರೆ.. ತಂದೆಯ ಆರೋಪಕ್ಕೆ ಮಗಳು ಸ್ವಲೇಹಾ ಉತ್ತರಿಸಿದ್ದಾರೆ. ನನ್ನ ಓದಿಗೆ ತಂದೆ ಯಾವುದೇ ಹಣ ನೀಡಿಲ್ಲ. ನನ್ನ ಸ್ವಂತ ಹಣದಿಂದ ನಾನು ಓದಿಕೊಂಡಿದ್ದೇನೆ. ನನ್ನ ಗಂಡ ತಂದೆಗೆ ಯಾವುದೇ ಮಾಟ-ಮಂತ್ರ ಮಾಡಿಲ್ಲ ಎಂದು ಹೇಳಿದ್ದಾರೆ.

ಇದಕ್ಕೆ ಸಿಟ್ಟಾಗಿರುವ ಸತ್ಯಜಿತ್​,ನನ್ನ ಪುತ್ರಿ ಸ್ವಲೇಹಾ ಹೇಳುವುದೆಲ್ಲಾ ಸುಳ್ಳು. ನಾನು 40 ಲಕ್ಷ ರೂಪೂಯಿ ಲೋನ್ ಕಟ್ಟಿದ್ದೇನೆ. ನನಗೆ ನನ್ನ ಮಗಳಿಂದ ಯಾವ ವಿಚಾರವೂ ಬೇಕಿಲ್ಲ. ತಿಂಗಳಿಗೆ ಒಂದು ಲಕ್ಷ ಕೊಟ್ಟಿರುವುದಾಗಿ ಅವಳು ಹೇಳುತ್ತಿದ್ದಾಳೆ. ಹಣ ಕೊಟ್ಟಿರುವುದಕ್ಕೆ ದಾಖಲೆಗಳು ಇರಬೇಕಲ್ಲವೆ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಮೋಸ ಮಾಡಿದ್ದ ಕಂಪನಿಯಿಂದಲೇ ಮತ್ತೆ ಮೋಸದ ಸಂಚು.. ವಂಚನೆಗೊಳಗಾಗಿದ್ದವರಿಂದಲೇ SPಗೆ ದೂರು

Published On - 4:26 pm, Fri, 12 February 21

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು