ಶಂಕರ್ ನಾಗ್ ತಾಕತ್ತು ಎಂಥದ್ದು? ‘ಜನ್ಮ ಜನ್ಮದ’ ಕಥೆ ವಿವರಿಸಿದ ರೋಹಿತ್ ಶ್ರೀನಾಥ್

ಶಂಕರ್ ನಾಗ್ ಅವರು ದೊಡ್ಡ ಕಲಾವಿದ. ಶ್ರೆಷ್ಠ ನಿರ್ದೇಶಕರು ಹೌದು. ಅವರ ನಿರ್ದೇಶನದಲ್ಲಿ ಮೂಡಿಬಂದ ‘ಜನ್ಮ ಜನ್ಮದ ಅನುಬಂಧ’ ಸಿನಿಮಾ ಯಶಸ್ಸು ಕಂಡಿತ್ತು. ಈ ಚಿತ್ರದ ಹಿಂದಿನ ಕಥೆಯನ್ನು ರೋಹಿತ್ ಶ್ರೀನಾಥ್ ಅವರು ಜೀ ಕನ್ನಡ ವೇದಿಕೆ ಮೇಲೆ ಮಾತನಾಡಿದ್ದಾರೆ.

ಶಂಕರ್ ನಾಗ್ ತಾಕತ್ತು ಎಂಥದ್ದು? ‘ಜನ್ಮ ಜನ್ಮದ’ ಕಥೆ ವಿವರಿಸಿದ ರೋಹಿತ್ ಶ್ರೀನಾಥ್
ಶಂಕರ್​-ರೋಹಿತ್
Follow us
|

Updated on: Aug 13, 2024 | 7:18 AM

ಶಂಕರ್ ನಾಗ್ ಅವರು ಹಲವು ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ಕಲಾವಿದರನ್ನು ಪರಿಚಯಿಸಿದ ಖ್ಯಾತಿ ಅವರಿಗೆ ಇದೆ. ಶಂಕರ್ ನಾಗ್ ಅವರು ರೋಹಿತ್ ಶ್ರೀನಾಥ್ ಅವರು ಸಿನಿಮಾದಲ್ಲಿ ನಟಿಸಬೇಕು ಎಂದು ಒತ್ತಾಯ ಮಾಡಿದ್ದರು ಶಂಕರ್​ ನಾಗ್​. ಈ ಬಗ್ಗೆ ರೋಹಿತ್ ಅವರು ಜೀ ಕನ್ನಡ ವೇದಿಕೆ ಮೇಲೆ ಮಾತನಾಡಿದ್ದಾರೆ.

‘ಜನ್ಮ ಜನ್ಮದ ಅನುಬಂಧ’ ಸಿನಿಮಾ 1980ರಲ್ಲಿ ರಿಲೀಸ್ ಆಯಿತು. ಶಂಕರ್ ನಾಗ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದರು. ಅನಂತ್ ನಾಗ್, ಶಂಕರ್ ನಾಗ್, ಜಯಂತಿ, ಜಯಮಾಲಾ, ಮಂಜುಳಾ ಈ ಸಿನಿಮಾದಲ್ಲಿ ನಟಿಸಿದ್ದರು. ಹೆಸರೇ ಹೇಳುವಂತೆ ಈ ಚಿತ್ರ ಪುನರ್​ಜನ್ಮದ ಕಥೆ. ಕಥಾ ನಾಯಕ ಅನಂತ್ ನಾಗ್ ಅವರು ಮರುಜನ್ಮ ತಾಳಿ ಬರುವ ರೀತಿಯಲ್ಲಿ ಸಿನಿಮಾ ಮೂಡಿ ಬಂದಿದೆ. ಈ ಚಿತ್ರದಲ್ಲಿ ಕಥಾ ನಾಯಕನ ಬಾಲ್ಯದ ಪಾತ್ರವನ್ನು ರೋಹಿತ್ ಮಾಡಿದ್ದರು. ಈ ಬಗ್ಗೆ ರೋಹಿತ್ ಈಗ ಮಾತನಾಡಿದ್ದಾರೆ.

‘ಜೀ ವರಮಹಾಲಕ್ಷ್ಮಿ ಉತ್ಸವ’ದಲ್ಲಿ ರೋಹಿತ್ ಮಾತನಾಡಿದ್ದಾರೆ. ‘ನನ್ನ ಎರಡನೇ ದೊಡ್ಡ ಸಿನಿಮಾ ಜನ್ಮ ಜನ್ಮದ ಅನುಬಂಧ. ಶಂಕರ್ ನಾಗ್ ಅವರ ನಿರ್ದೇಶನ ಈ ಸಿನಿಮಾಗೆ ಇತ್ತು. ಅವರು ನಮ್ಮ ಮನೆಗೆ ಬಂದರು. ನಮ್ಮ ಸಿನಿಮಾಗೆ ಇವನೇ ಬೇಕು ಎಂದು ಹಠ ಹಿಡಿದರು. ಈತ ಹೇಗೆ ನಟಿಸುತ್ತಾನೆ ಎಂಬ ಚಿಂತೆ ನಮ್ಮ ತಂದೆ-ತಾಯಿಯದ್ದಾಗಿತ್ತು’ ಎಂದಿದ್ದಾರೆ ರೋಹಿತ್.

ಇದನ್ನೂ ಓದಿ: ‘ಈ ಪ್ರಶಸ್ತಿಯನ್ನು ಶಂಕರ್ ನಾಗ್​ಗೆ ಅರ್ಪಿಸುತ್ತೇನೆ’; ಭಾವುಕರಾಗಿ ಪತ್ರ ಬರೆದ ರಿಷಬ್ ಶೆಟ್ಟಿ

‘ಸಿನಿಮಾ ಆರಂಭ ಆಗೋದು ನನ್ನಿಂದ. 15 ನಿಮಿಷ ಆ ಸಿನಿಮಾದಲ್ಲಿ ಇರೋದು. ಆ ನಟನೆ ನೋಡಿ ನನಗೆ ಅಚ್ಚರಿ ಆಗಿತ್ತು. ಎಂಥವರಿಂದಾದರೂ ನಟನೆ ತೆಗೆಸಬಹುದು ಅನ್ನೋದಕ್ಕೆ ಶಂಕರ್ ನಾಗ್ ಉತ್ತಮ ಉದಾಹರಣೆ’ ಎಂದಿದ್ದಾರೆ ರೋಹಿತ್. ರೋಹಿತ್ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.