AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೇಮ್ಸ್​’ ಚಿತ್ರದಲ್ಲಿ ಪುನೀತ್​ಗೆ ಡಬ್​ ಮಾಡುವಾಗ ಶಿವಣ್ಣ ಎಮೋಷನಲ್​ ಆಗಿದ್ದರು: ನಿರ್ದೇಶಕ ಚೇತನ್​

‘ಪುನೀತ್​ ರಾಜ್​ಕುಮಾರ್​ ಅವರಿಗೆ ಬೇರೆ ಯಾರ ವಾಯ್ಸ್​ ಕೂಡ ಸರಿ ಎನಿಸಲಿಲ್ಲ. ಆದರೆ ಶಿವರಾಜ್​ಕುಮಾರ್​ ಧ್ವನಿ​ ನೀಡಿದ ಬಳಿಕ ಎಲ್ಲ ದೃಶ್ಯಗಳ ಮೆರುಗು ಹೆಚ್ಚಿದೆ’ ಎಂದು ಚೇತನ್​ ಕುಮಾರ್​ ಹೇಳಿದ್ದಾರೆ.

‘ಜೇಮ್ಸ್​’ ಚಿತ್ರದಲ್ಲಿ ಪುನೀತ್​ಗೆ ಡಬ್​ ಮಾಡುವಾಗ ಶಿವಣ್ಣ ಎಮೋಷನಲ್​ ಆಗಿದ್ದರು: ನಿರ್ದೇಶಕ ಚೇತನ್​
ಚೇತನ್​ ಕುಮಾರ್​, ಪುನೀತ್​ ರಾಜ್​ಕುಮಾರ್​, ಶಿವರಾಜ್​ಕುಮಾರ್​
Follow us
TV9 Web
| Updated By: ಮದನ್​ ಕುಮಾರ್​

Updated on: Feb 27, 2022 | 9:33 AM

ಬಹುನಿರೀಕ್ಷಿತ ‘ಜೇಮ್ಸ್​’ ಸಿನಿಮಾದ ಬಿಡುಗಡೆ ದಿನಾಂಕ ಹತ್ತಿರ ಆಗುತ್ತಿದೆ. ಪುನೀತ್​ ರಾಜ್​ಕುಮಾರ್​ (Puneeth Rajkumar) ನಟನೆಯ ಈ ಸಿನಿಮಾ ಬಗ್ಗೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪುನೀತ್​ ಜನ್ಮದಿನದ ಪ್ರಯುಕ್ತ ಮಾ.17ರಂದು ‘ಜೇಮ್ಸ್​’ (James Kannada Movie) ಬಿಡುಗಡೆ ಆಗಲಿದೆ. ಈ ಸಿನಿಮಾದ ಡಬ್ಬಿಂಗ್​ ಕೆಲಸಗಳು ಬಾಕಿ ಇರುವಾಗಲೇ ಅಪ್ಪು ಅವರು ಹೃದಯಾಘಾತದಿಂದ ನಿಧನರಾದರು. ಬಳಿಕ ಅವರ ಪಾತ್ರಕ್ಕೆ ಧ್ವನಿ ನೀಡುವವರು ಯಾರು ಎಂಬ ಪ್ರಶ್ನೆ ಎದುರಾಗಿತ್ತು. ಆಗ ಕೇಳಿಬಂದಿದ್ದೇ ಶಿವರಾಜ್​ಕುಮಾರ್​ (Shivarajkumar) ಹೆಸರು. ಹೌದು, ತಮ್ಮನ ಪಾತ್ರಕ್ಕೆ ಶಿವಣ್ಣ ಧ್ವನಿ ನೀಡಿದರೆ ಚೆನ್ನಾಗಿರುತ್ತದೆ ಎಂಬ ಅಭಿಪ್ರಾಯ ಎಲ್ಲರಿಂದಲೂ ವ್ಯಕ್ತವಾಯ್ತು. ಅದಕ್ಕೆ ಶಿವರಾಜ್​ಕುಮಾರ್​ ಕೂಡ ಸಮ್ಮತಿ ಸೂಚಿಸಿದರು. ಡಬ್ಬಿಂಗ್​ ಕೆಲಸಗಳೆಲ್ಲವೂ ಪೂರ್ಣಗೊಂಡಿದ್ದು, ಕೊನೇ ಹಂತದ ಪೋಸ್ಟ್​ ಪ್ರೊಡಕ್ಷನ್​ ಕೆಲಸದಲ್ಲಿ ಚಿತ್ರತಂಡ ನಿರತವಾಗಿದೆ. ಪುನೀತ್​ ರಾಜ್​ಕುಮಾರ್​ ಅವರ ಪಾತ್ರಕ್ಕೆ ಶಿವರಾಜ್​ಕುಮಾರ್​ ಅವರು ಡಬ್ಬಿಂಗ್​ ಮಾಡಿದ ಸಂದರ್ಭ ಹೇಗಿತ್ತು ಎಂಬುದನ್ನು ನಿರ್ದೇಶಕ ಚೇತನ್​ ಕುಮಾರ್​ ಅವರು ವಿವರಿಸಿದ್ದಾರೆ. ಎಮೋಷನಲ್​ ಕ್ಷಣಗಳನ್ನು ಅವರು ಮೆಲುಕು ಹಾಕಿದ್ದಾರೆ.

ಪುನೀತ್​ ರಾಜ್​ಕುಮಾರ್​ ಅವರನ್ನು ಕಳೆದುಕೊಂಡ ಬಳಿಕ ದೊಡ್ಮನೆಗೆ ಆದ ನೋವು ಎಷ್ಟು ಎಂಬುದನ್ನು ಹೇಳಲು ಸಾಧ್ಯವಿಲ್ಲ. ಆ ನೋವಿನ ನಡುವೆಯೂ ಜೀವನ ಮುಂದುವರಿಯಲೇ ಬೇಕು. ನೋವು ನುಂಗಿಕೊಂಡು ಶಿವಣ್ಣ ‘ಜೇಮ್ಸ್​’ ಚಿತ್ರಕ್ಕೆ ಡಬ್ಬಿಂಗ್​ ಮಾಡಿಕೊಟ್ಟರು. ‘ಶಿವಣ್ಣ ಅವರದ್ದು ಯಾವಾಗಲೂ ಡಬಲ್​ ಗುಂಡಿಗೆ ಎನ್ನಬಹುದು. ಅವರಿಗೆ ಹ್ಯಾಟ್ಸಾಫ್​ ಹೇಳಲೇಬೇಕು. ಯಾಕೆಂದರೆ, ಇದು ತುಂಬ ಎಮೋಷನಲ್​ ಆದ ಕೆಲಸ. ಅಣ್ಣನಾಗಿ ತಮ್ಮನ ಸಿನಿಮಾಗೆ ಡಬ್​ ಮಾಡುವುದು ಅಷ್ಟು ಸುಲಭ ಅಲ್ಲ’ ಎಂದು ಚೇತನ್​ ಕುಮಾರ್​ ಹೇಳಿದ್ದಾರೆ.

‘ಡಬ್ಬಿಂಗ್​ ಎಂಬುದೇ ಕಠಿಣವಾದ ಕೆಲಸ. ಅಪ್ಪು ಸರ್​ ನಟನೆ ಮಾಡಿದ್ದನ್ನು ನೋಡಿಕೊಂಡು ಶಿವಣ್ಣ ಡಬ್ಬಿಂಗ್​ ಸಮಯದಲ್ಲಿ ಮತ್ತೆ ಆ್ಯಕ್ಟ್​ ಮಾಡಬೇಕು. ಅಂಥ ಎಷ್ಟೋ ಸಂದರ್ಭದಲ್ಲಿ ಶಿವಣ್ಣ ಭಾವುಕರಾದರು. ಬಳಿಕ ಆ ಎಮೋಷನ್​ಗಳನ್ನು ಕಂಟ್ರೋಲ್​ ಮಾಡಿಕೊಂಡು ಅದ್ಭುತವಾಗಿ ಡಬ್ಬಿಂಗ್​ ಮಾಡಿಕೊಟ್ಟಿದ್ದಾರೆ. ಒಬ್ಬ ನಿರ್ದೇಶಕನಾಗಿ ನನಗೆ ಬಹಳ ತೃಪ್ತಿ ಇದೆ. ಯಾಕೆಂದರೆ ಬೇರೆ ಯಾವ ವಾಯ್ಸ್​ ಕೂಡ ನಮಗೆ ಅಷ್ಟು ಸರಿ ಎನಿಸಲಿಲ್ಲ. ಬೇರೆ ವಾಯ್ಸ್​ ಇದ್ದಾಗ, ಅಪ್ಪು ಸರ್​ ಅಷ್ಟು ಚೆನ್ನಾಗಿ ನಟಿಸಿದ ದೃಶ್ಯಗಳು ಬಿದ್ದು ಹೋಗುತ್ತಿವೆ ಅಂತ ನನಗೆ ಅನಿಸುತ್ತಿತ್ತು. ಆದರೆ ಶಿವಣ್ಣ ವಾಯ್ಸ್​ ನೀಡಿದ ಬಳಿಕ ಆ ಎಲ್ಲ ದೃಶ್ಯಗಳ ಮೆರುಗು ಹೆಚ್ಚಿದೆ. ಅದಕ್ಕಾಗಿ ಶಿವಣ್ಣ ಅವರಿಗೆ ಧನ್ಯವಾದ ಹೇಳಬೇಕು’ ಎಂದಿದ್ದಾರೆ ಚೇತನ್​ ಕುಮಾರ್​.

ಇದನ್ನೂ ಓದಿ:

ಪುನೀತ್​ ರಾಜ್​ಕುಮಾರ್ ಕುರಿತು ಬಯೋಗ್ರಫಿ; ಈ ಪುಸ್ತಕದಲ್ಲಿ ಏನೆಲ್ಲ ಮಾಹಿತಿ ಇರಲಿದೆ?

‘ಜೇಮ್ಸ್​’ ಸಿನಿಮಾ ಬಗ್ಗೆ ಹರಡಿದೆ ಹಲವು ಗಾಸಿಪ್​; ಎಲ್ಲದಕ್ಕೂ ನಿರ್ಮಾಪಕರಿಂದಲೇ ಬಂತು ಸೂಕ್ತ ಸ್ಪಷ್ಟನೆ

ಮಕ್ಕಳಿದ್ರೂ 17ರ ಯುವತಿ ಜತೆ ಲವ್, ಮದ್ವೆಗೆ ಒಪ್ಪದಿದ್ದಕ್ಕೆ ಮಾಡಿದ್ದೇನು?
ಮಕ್ಕಳಿದ್ರೂ 17ರ ಯುವತಿ ಜತೆ ಲವ್, ಮದ್ವೆಗೆ ಒಪ್ಪದಿದ್ದಕ್ಕೆ ಮಾಡಿದ್ದೇನು?
ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ವಿಜಯೇಂದ್ರ
ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ವಿಜಯೇಂದ್ರ
ಕಾಂಗ್ರೆಸ್ ಶಾಸಕ ಲಕ್ಷ್ಮಣ್‌ ಸವದಿ ಕಾರು ಅಪಘಾತ, ವಿಡಿಯೋ ನೋಡಿ
ಕಾಂಗ್ರೆಸ್ ಶಾಸಕ ಲಕ್ಷ್ಮಣ್‌ ಸವದಿ ಕಾರು ಅಪಘಾತ, ವಿಡಿಯೋ ನೋಡಿ
ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಕುಕ್ಕೆ ದೇಗುಲ ಸೇರಿ ಸರ್ಕಾರದ 3 ಸಾವಿರ ರೂಮ್​​​ ಆನ್​​ ಲೈನ್​ ಬುಕ್ಕಿಂಗ್
ಕುಕ್ಕೆ ದೇಗುಲ ಸೇರಿ ಸರ್ಕಾರದ 3 ಸಾವಿರ ರೂಮ್​​​ ಆನ್​​ ಲೈನ್​ ಬುಕ್ಕಿಂಗ್
ಬಿಜೆಪಿ ನಿಯೋಗದ ನಾಯಕತ್ವ ವಹಿಸಿದ್ದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಬಿಜೆಪಿ ನಿಯೋಗದ ನಾಯಕತ್ವ ವಹಿಸಿದ್ದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಸರ್ಕಾರವನ್ನು ದೂರಿ ಏನು ಪ್ರಯೋಜನ ಎಂದ ಅಶಯ್ ಅಂಬಲಿ ತಂದೆ
ಸರ್ಕಾರವನ್ನು ದೂರಿ ಏನು ಪ್ರಯೋಜನ ಎಂದ ಅಶಯ್ ಅಂಬಲಿ ತಂದೆ
ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ
ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?
ಕಳ್ಳನ ಕರಾಮತ್ತು ಸಿಸಿಟಿವಿ ಕೆಮೆರಾದಲ್ಲಿ ಸೆರೆ, ಪೊಲೀಸರಿಗೆ ಅದೇ ಕ್ಲೂ!
ಕಳ್ಳನ ಕರಾಮತ್ತು ಸಿಸಿಟಿವಿ ಕೆಮೆರಾದಲ್ಲಿ ಸೆರೆ, ಪೊಲೀಸರಿಗೆ ಅದೇ ಕ್ಲೂ!