AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

30 ರೂಪಾಯಿಯ ಋಣ, ಗಿರಿಜಾ ಲೋಕೇಶ್ ಗ್ರೇಟ್ ಬಿಡಿ

Girija Lokesh: ಒಂದು ಹೊತ್ತಿನ ಊಟವೂ ಬರುವುದಿಲ್ಲ ಈಗ. ಆದರೆ ಅದೇ 30 ರೂಪಾಯಿ ಒಬ್ಬ ಹಿರಿಯ ನಟಿಯ ಜೀವ ಉಳಿಸಲು ನೆರವಾಗಿದೆ, ಆಶ್ರಯ ಸಿಗಲು ನೆರವಾಗಿದೆ. ಏನು ಈ ಮೂವತ್ತು ರೂಪಾಯಿಯ ಕತೆ. ಮೂವತ್ತು ರೂಪಾಯಿ ಯಾರ ಜೀವ ಉಳಿಸಿತು, ಯಾರ ಋಣಭಾರವನ್ನು ತಗ್ಗಿಸಿತು? ಇಲ್ಲಿದೆ ಮಾಹಿತಿ...

30 ರೂಪಾಯಿಯ ಋಣ, ಗಿರಿಜಾ ಲೋಕೇಶ್ ಗ್ರೇಟ್ ಬಿಡಿ
Girija Lokesh
ಮಂಜುನಾಥ ಸಿ.
|

Updated on: Apr 05, 2025 | 6:44 PM

Share

30 ರೂಪಾಯಿಗೆ ಏನಾಗಬಹುದು, ಒಂದು ಹೊತ್ತಿನ ಊಟವೂ ಬರುವುದಿಲ್ಲ ಈಗ. ಆದರೆ ಅದೇ 30 ರೂಪಾಯಿ ಒಬ್ಬ ಹಿರಿಯ ನಟಿಯ ಜೀವ ಉಳಿಸಲು ನೆರವಾಗಿದೆ, ಆಶ್ರಯ ಸಿಗಲು ನೆರವಾಗಿದೆ. ಶೈಲಶ್ರೀ ಸುದರ್ಶನ್ ಅವರು ಕನ್ನಡ ಚಿತ್ರರಂಗದ ಹಿರಿಯ ನಟಿ, ಕನ್ನಡ ಚಿತ್ರರಂಗದ ಹಿರಿಯ ನಟ ಸುದರ್ಶನ್ ಅವರ ಪತ್ನಿ ಮತ್ತು ಆರ್​ಎನ್ ನಾಗೇಂದ್ರರಾಯರ ಸೊಸೆ. ಇತ್ತೀಚೆಗೆ ಅವರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದರು. ಚಿತ್ರರಂಗದ ಕೆಲವು ಗಣ್ಯರು ಅವರಿಗೆ ನೆರವಾದರು, ಅದರಲ್ಲಿ ಪ್ರಮುಖರು ಹಿರಿಯ ನಟಿ ಗಿರಿಜಾ ಲೋಕೇಶ್.

ಶೈಲಶ್ರೀ ಅವರಿಗೆ ಕ್ಯಾನ್ಸರ್ ಆಗಿತ್ತು. ದರ್ಶನ್ ಸೇರಿದಂತೆ ಚಿತ್ರರಂಗದ ಕೆಲವು ಗೆಳೆಯರು ಸೇರಿಕೊಂಡು ಅವರಿಗೆ ನೆರವಾಗಿದ್ದಾರೆ. ನೆರವಿನಲ್ಲಿ ಗಿರಿಜಾ ಲೋಕೇಶ್ ಅವರ ಪಾತ್ರ ದೊಡ್ಡದಿದೆ. ಇದೀಗ ಶೈಲಶ್ರೀ ಅವರು ಮಡಿಲು ಆಶ್ರಮ ಸೇರಿದ್ದು ಅಲ್ಲಿಯೇ ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗೆ ಟಿವಿ9ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶೈಲಶ್ರೀ ಅವರು, ಗಿರಿಜಾ ಲೋಕೇಶ್ ತಮಗೆ ಮಾಡಿದ ಸಹಾಯ ನೆನಪು ಮಾಡಿಕೊಂಡಿದ್ದಾರೆ. ಜೊತೆಗೆ ಗಿರಿಜಾ ಲೋಕೇಶ್ ಅವರು ತಮಗೆ ಸಹಾಯ ಮಾಡಲು ಕಾರಣವಾದ 30 ರೂಪಾಯಿಯ ಸಂಗತಿಯನ್ನೂ ಹಂಚಿಕೊಂಡಿದ್ದಾರೆ.

ಗಿರಿಜಾ ಲೋಕೇಶ್ ಮತ್ತು ಶೈಲಶ್ರೀ ಅವರೆಲ್ಲ ದೂರದ ಸಂಬಂಧಿಗಳೇ, ಇಬ್ಬರೂ ಕೆಲವು ಬಾರಿ ಒಟ್ಟಿಗೆ ಡ್ಯಾನ್ಸ್ ಪ್ರದರ್ಶನ ಎಲ್ಲ ನೀಡಿದ್ದರಂತೆ. ಒಮ್ಮೆ ಗಿರಿಜಾ ಲೋಕೇಶ್ ಅವರು ಡ್ಯಾನ್ಸ್ ಪ್ರದರ್ಶನ ನೀಡಿದಾಗ ಖುಷಿಯಿಂದ ಶೈಲಶ್ರೀ ಅವರು 30 ರೂಪಾಯಿ ನೀಡಿದ್ದರಂತೆ. ಈ ವಿಷಯವನ್ನು ಸ್ವತಃ ಶೈಲಶ್ರೀ ಮರೆತು ಹೋಗಿದ್ದಾರೆ ಆದರೆ ಗಿರಿಜಾ ಲೋಕೇಶ್ ಅವರಿಗೆ ನೆನಪಿದೆ. ಆ ಮೂವತ್ತು ರೂಪಾಯಿ ಋಣವನ್ನು ಇಷ್ಟು ಅದ್ಭುತವಾಗಿ ಅರ್ಥವಾಗಿ ತೀರಿಸಿದ್ದಾರೆ ಗಿರಿಜಾ ಲೋಕೇಶ್.

ಇದನ್ನೂ ಓದಿ
Image
ಐಶಾರಾಮಿ ಕಾರು ಖರೀದಿ ಮಾಡಿದ ರಶ್ಮಿಕಾ ಮಂದಣ್ಣ, ಬೆಲೆ ಎಷ್ಟು ಕೋಟಿ?
Image
‘ಕಣ್ಣಪ್ಪ’ ಸಿನಿಮಾ ಬಿಡುಗಡೆ ಮುಂದೂಡಿದ ಮಂಚು ಮನೋಜ್, ಯಾವುದರ ಭಯ?
Image
ರಶ್ಮಿಕಾಗೆ ಹಿಂದಿ ಕಲಿಯಲು ಆಗಲ್ಲ, ಕಾರಣ ಹೇಳಿದ ಸಲ್ಮಾನ್ ಖಾನ್
Image
ಎಲ್ 2:ಎಂಪುರಾನ್ ಕಲೆಕ್ಷನ್, ಮೂರೇ ದಿನಕ್ಕೆ ಹಳೆ ದಾಖಲೆಗಳು ಉಡೀಸ್

ಇದನ್ನೂ ಓದಿ:50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು

ಶೈಲಶ್ರೀ ಅವರ ಪತಿ ಸುದರ್ಶನ್ ಅವರಿಗೆ ಹುಷಾರು ತಪ್ಪಿದಾಗ ಮೊದಲು ಧಾವಿಸಿ ಬಂದಿದ್ದು ಗಿರಿಜಾ ಲೋಕೇಶ್ ಅವರೇ ಅಂತೆ. ಅದಾದ ಬಳಿಕ ಶೈಲಶ್ರೀ ಅವರಿಗೆ ಕ್ಯಾನ್ಸರ್ ಆಗಿದೆ ಎಂಬ ವಿಷಯ ಗೊತ್ತಾದಾಗ ಮೊದಲಿಗೆ ಬಂದು ಶೈಲಶ್ರೀ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆ ಮಾಡಿಸಿ, ಕೈಗೆ ಹಣವಿಟ್ಟು ಹೋಗಿದ್ದರಂತೆ. ಆ ಬಳಿಕ ಅವರ ಚಿಕಿತ್ಸೆಗೆ ಹಣ ನೀಡಿದ್ದು ಮಾತ್ರವೇ ಅಲ್ಲದೆ ಈಗಲೂ ಅವರಿಗೆ ಬೆನ್ನೆಲುಬಾಗಿ ಗಿರಿಜಾ ಲೋಕೇಶ್ ನಿಂತಿದ್ದಾರೆ.

ಮಾವ ಸುಬ್ಬಯ್ಯ ನಾಯ್ಡು, ಪತಿ ಲೋಕೇಶ್ ಅವರ ಹೆಸರು ಘನತೆ ಉಳಿಸುವ ಕಾರ್ಯವನ್ನು ಗಿರಿಜಾ ಲೋಕೇಶ್ ಮಾಡುತ್ತಿದ್ದಾರೆ. ಶೈಲಶ್ರೀ ಮಾತ್ರವೇ ಅಲ್ಲದೆ ಕನ್ನಡ ಚಿತ್ರರಂಗದ ಇನ್ನೂ ಕೆಲವು ಹಿರಿಯ ಜೀವಗಳಿಗೆ ಕೈಲಾದ ಮಟ್ಟಿಗೆ ನೆರವಾಗುತ್ತಿದ್ದಾರಂತೆ ಗಿರಿಜಾ ಲೋಕೇಶ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು