AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೌತ್​ ಇಂಡಿಯನ್​ ಹೀರೋ’ ಚಿತ್ರಕ್ಕೆ ರಜನಿಕಾಂತ್​ ಜೀವನವೇ ಸ್ಫೂರ್ತಿ: ನಟ ಸಾರ್ಥಕ್​

South Indian Hero Kannada Movie: ಟೀಸರ್​ ಮೂಲಕ ಗಮನ ಸೆಳೆದಿರುವ ‘ಸೌತ್​ ಇಂಡಿಯನ್​ ಹೀರೋ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಕುರಿತು ಅನೇಕ ವಿಷಯಗಳನ್ನು ನಟ ಸಾರ್ಥಕ್​ ಅವರು ಹಂಚಿಕೊಂಡಿದ್ದಾರೆ.

‘ಸೌತ್​ ಇಂಡಿಯನ್​ ಹೀರೋ’ ಚಿತ್ರಕ್ಕೆ ರಜನಿಕಾಂತ್​ ಜೀವನವೇ ಸ್ಫೂರ್ತಿ: ನಟ ಸಾರ್ಥಕ್​
ಸಾರ್ಥಕ್
ಮದನ್​ ಕುಮಾರ್​
|

Updated on:Jan 21, 2023 | 8:09 PM

Share

‘ಸೌತ್​ ಇಂಡಿಯನ್​ ಹೀರೋ’ (South Indian Hero) ಸಿನಿಮಾದಲ್ಲಿ ನಟ ಸಾರ್ಥಕ್​ ಅವರು ನಾಯಕನಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅವರಿಗೆ ಹಲವು ಶೇಡ್​ಗಳಿರುವ ಪಾತ್ರವಿದೆ. ಚಿತ್ರರಂಗದ ಕುರಿತ ಕಥೆಯೇ ಈ ಸಿನಿಮಾದಲ್ಲಿದೆ. ಸ್ಟಾರ್​ ಹೀರೋಗಳ ಇಮೇಜ್​, ಮಾಸ್​ ಹೀರೋಗಳ ಬಿಲ್ಡಪ್​, ಅಭಿಮಾನಿಗಳ ನಡುವೆ ನಡೆಯುವ ಸ್ಟಾರ್​ ವಾರ್ (Star War) ಇತ್ಯಾದಿ ವಿಷಯಗಳು ಈ ಸಿನಿಮಾದಲ್ಲಿ ಇದೆ. ಈ ಎಲ್ಲ ವಿಷಯಗಳ ಬಗ್ಗೆ ನಟ ಸಾರ್ಥಕ್​ ಅವರು ಮಾತನಾಡಿದ್ದಾರೆ. ‘ಟಿವಿ9 ಕನ್ನಡ’ ನಡೆಸಿದ ಸಂದರ್ಶನದಲ್ಲಿ ಅವರು ಸಿನಿಮಾದ ಥೀಮ್​ ಬಗ್ಗೆ ಮಾತನಾಡಿದ್ದಾರೆ. ‘ಸೌತ್​ ಇಂಡಿಯನ್​ ಹೀರೋ’ ಸಿನಿಮಾಗೆ ರಜನಿಕಾಂತ್​ (Rajinikanth) ಅವರ ರಿಯಲ್​ ಲೈಫ್​ ಕಥೆಯೇ ಸ್ಫೂರ್ತಿ ಎಂದು ಸಾರ್ಥಕ್​ ಹೇಳಿದ್ದಾರೆ.

ಎಲ್ಲದರಲ್ಲೂ ಲಾಜಿಕ್​ ಹುಡುಕುವಂತಹ ಫಿಸಿಕ್ಸ್​ ಟೀಚರ್​ ಒಬ್ಬನು ಚಿತ್ರರಂಗಕ್ಕೆ ಬಂದು ಹೇಗೆ ಹೀರೋ ಆಗುತ್ತಾನೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಸಾರ್ಥಕ್​ ಅವರಿಗೆ ಹೀರೋ ಆಗಿ ಇದು ಮೊದಲ ಸಿನಿಮಾ. ಚೊಚ್ಚಲ ಚಿತ್ರದಲ್ಲಿ ಹಲವು ಶೇಡ್​ ಇರುವ ಪಾತ್ರವನ್ನು ನಿಭಾಯಿಸುವ ಅವಕಾಶ ಸಿಕ್ಕಿದ್ದಕ್ಕೆ ಅವರಿಗೆ ಖುಷಿ ಇದೆ.

ಈ ಸಿನಿಮಾದಲ್ಲಿ ಏನೆಲ್ಲ ಇದೆ?

‘ಮನೆಯಲ್ಲಿ ಕುಳಿತುಕೊಂಡು ವಿಮರ್ಶೆ ಹೇಳೋದು ಸುಲಭ. ಆದರೆ ಹೊಸಬರ ಚಿತ್ರವನ್ನು ನೋಡೋಕೆ ಚಿತ್ರಮಂದಿರಕ್ಕೆ ಬರೋರು ಕಡಿಮೆ ಆಗಿದ್ದಾರೆ. ನಮ್ಮದು ಒಳ್ಳೆಯ ಸಿನಿಮಾ. ಡಿಫರೆಂಟ್​ ಆದ ಒಂದು ಲವ್​ ಸ್ಟೋರಿ ಇದೆ. ಚಿತ್ರರಂಗದಲ್ಲಿನ ಅನೇಕ ವಿಚಾರಗಳು ಈ ಸಿನಿಮಾದಲ್ಲಿ ಇವೆ. ಒಬ್ಬ ಹೀರೋ ಬದುಕಿನಲ್ಲಿ ಏನೆಲ್ಲ ಆಗುತ್ತದೆ ಎಂಬುದನ್ನು ತೋರಿಸಿದ್ದೇವೆ. ಮನರಂಜನೆ ಜೊತೆ ಸಂದೇಶ ಕೂಡ ನೀಡಿದ್ದೇವೆ. ಎಲ್ಲವೂ ಒಂದು ಪ್ಯಾಕೇಜ್​ ರೀತಿ ಇದೆ. ಚಿತ್ರಮಂದಿರಕ್ಕೆ ಬಂದು ನಮ್ಮ ಸಿನಿಮಾ ನೋಡಿ ನಿಮ್ಮ ವಿಮರ್ಶೆ ತಿಳಿಸಿ’ ಎಂದು ನಟ ಸಾರ್ಥಕ್​ ಹೇಳಿದ್ದಾರೆ.

ಇದನ್ನೂ ಓದಿ
Image
Bholaa: ತ್ರಿಶೂಲ ಹಿಡಿದು ಬಂದ ಅಜಯ್​ ದೇವಗನ್​; ಕೌತುಕ ಮೂಡಿಸಿದೆ ‘ಭೋಲಾ’ ಚಿತ್ರದ ಪೋಸ್ಟರ್​
Image
Kantara 2 Shooting: ‘ಕಾಂತಾರ 2’ ಆರಂಭಿಸಲು ಮಳೆಗಾಲಕ್ಕೆ ಕಾದಿರುವ ರಿಷಬ್​ ಶೆಟ್ಟಿ; ಮಾಹಿತಿ ನೀಡಿದ ವಿಜಯ್​ ಕಿರಗಂದೂರು
Image
Emergency: ಇಂದಿರಾ ಗಾಂಧಿ ಕುರಿತು ಸಿನಿಮಾ ಮಾಡಲು ಆಸ್ತಿ ಅಡವಿಟ್ಟ ಕಂಗನಾ ರಣಾವತ್​
Image
Rajamouli: ಹಾಲಿವುಡ್​ನಲ್ಲಿ ಸಿನಿಮಾ ಮಾಡಲು ರಾಜಮೌಳಿಗೆ ‘ಅವತಾರ್​’ ನಿರ್ದೇಶಕನಿಂದ ಆಹ್ವಾನ

ಇದನ್ನೂ ಓದಿ: ‘ಸೌತ್​ ಇಂಡಿಯನ್​ ಹೀರೋ’ ಬಗ್ಗೆ ನಿಮಗೆಷ್ಟು ಗೊತ್ತು? ಇವನ ಅವತಾರ ಒಂದೆರಡಲ್ಲ

‘ಸೌತ್​ ಇಂಡಿಯನ್​ ಹೀರೋ ಅಂತ ಹೇಳಿಸಿಕೊಳ್ಳೋಕೆ ಬೇರೆ ಹೀರೋಗಳು ಅನೇಕ ಸಿನಿಮಾಗಳನ್ನು ಮಾಡಬೇಕು. ಆದರೆ ನನಗೆ ಮೊದಲ ಚಿತ್ರದಲ್ಲಿ ಆ ಟೈಟಲ್​ ಸಿಕ್ಕಿದೆ’ ಎಂದು ನಗು ಚೆಲ್ಲಿದ್ದಾರೆ ಸಾರ್ಥಕ್​. ಈ ಸಿನಿಮಾದ ಫಸ್ಟ್​ಲುಕ್​ ಗಮನ ಸೆಳೆದಿತ್ತು. ಟೀಸರ್​ನಲ್ಲೂ ಖಡಕ್​ ಡೈಲಾಗ್​ ಹೈಲೈಟ್​ ಆಗಿತ್ತು. ಅದಕ್ಕೆ ಜನರಿಂದ ಸಿಕ್ಕ ಒಳ್ಳೆಯ ಪ್ರತಿಕ್ರಿಯೆ ಕಂಡು ಚಿತ್ರತಂಡಕ್ಕೆ ಖುಷಿ ಆಗಿದೆ.

ಫೆಬ್ರವರಿಯಲ್ಲಿ ‘ಸೌತ್​ ಇಂಡಿಯನ್​ ಹೀರೋ’ ಸಿನಿಮಾ ಬಿಡುಗಡೆ ಆಗಲಿದೆ. ಯಾವುದೇ ಒಬ್ಬ ಹೀರೋವನ್ನು ಗಮನದಲ್ಲಿ ಇಟ್ಟುಕೊಂಡು ಈ ಸಿನಿಮಾ ಮಾಡಿಲ್ಲ. ಯಾವ ಡೈಲಾಗ್​ ಮೂಲಕವೂ ಯಾರನ್ನೂ ಟಾರ್ಗೆಟ್​ ಮಾಡುವ ಉದ್ದೇಶ ತಮಗಿಲ್ಲ ಎಂದು ಸಾರ್ಥಕ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:09 pm, Sat, 21 January 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್