AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಪಂದನಾ ಆತ್ಮವನ್ನು ಒಳಗೆ ಕರೆಸುವ ಶಾಸ್ತ್ರ: ಸಂಬಂಧಿ ವಿವರಿಸಿದ್ದು ಹೀಗೆ

Spandan Vijay Raghavendra: ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾರ ಉತ್ತರ ಕ್ರಿಯೆಗಳು (ಆಗಸ್ಟ್ 16) ನಾಳೆ ನಡೆಯಲಿವೆ. ಸ್ಪಂದನಾರ ತವರು ಮನೆಯಲ್ಲಿಯೂ ಕೆಲವು ಕಾರ್ಯಗಳು ನಡೆಯಲಿವೆ. ಸ್ಪಂದನಾರ ಆತ್ಮವನ್ನು ಕರೆಸಿ ಶಾಂತಿ ಕೋರುವ ಕ್ರಿಯೆಯ ಬಗ್ಗೆ ಅವರ ಸಂಬಂಧಿ ವಿವರಿಸಿದ್ದಾರೆ.

ಸ್ಪಂದನಾ ಆತ್ಮವನ್ನು ಒಳಗೆ ಕರೆಸುವ ಶಾಸ್ತ್ರ: ಸಂಬಂಧಿ ವಿವರಿಸಿದ್ದು ಹೀಗೆ
ಸ್ಪಂದನಾ-ವಿಜಯ್
ಮಂಜುನಾಥ ಸಿ.
|

Updated on: Aug 15, 2023 | 7:55 PM

Share

ನಟ ವಿಜಯ್ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ (Spandana) ನಿಧನ ಹೊಂದಿ 10 ದಿನಗಳಾಗಿದ್ದು ಅವರ ನಾಳೆ ಹನ್ನೊಂದನೇ ದಿನ (ಆಗಸ್ಟ್ 16) ಅವರ ಉತ್ತರ ಕ್ರಿಯೆಗಳು ನಡೆಯಲಿವೆ. ಬೆಂಗಳೂರಿನಲ್ಲಿ ವಿಜಯ್ ರಾಘವೇಂದ್ರ ಅವರ ಮನೆಯಲ್ಲಿ ಹಾಗೂ ಸ್ಪಂದನಾರ ತವರು ಮನೆಯಲ್ಲಿಯೂ ಕೆಲವು ಕಾರ್ಯಕ್ರಮಗಳು ಜರುಗಲಿವೆ. ಅದರಲ್ಲಿಯೂ ಸ್ಪಂದನಾ ತವರು ಮನೆಯಲ್ಲಿ ಮುಗ್ಗಗುತ್ತು ಕುಟುಂಬದವರು ತಮ್ಮ ಮನೆತನದ ಕೆಲವು ಕ್ರಿಯಾ ಕರ್ಮಗಳನ್ನು ನಡೆಸಲಿದ್ದು, ಆ ಬಗ್ಗೆ ಸ್ಪಂದನಾರ ಹತ್ತಿರದ ಸಂಬಂಧಿ ಮಾಹಿತಿ ಹಂಚಿಕೊಂಡಿದ್ದಾರೆ.

ಬುಧವಾರ ಹನ್ನೊಂದನೇ ದಿನವಾಗಿದ್ದು ಕಾಗೆಗೆ ಅನ್ನ ಇಡುವ ಕಾರ್ಯಕ್ರಮವನ್ನು ಕುಟುಂಬದವರು ಮಾಡಲಿದ್ದೇವೆ. ಸಸ್ಯಹಾರಿ ಖಾದ್ಯಗಳನ್ನು ಮಾಡಿ, ಸ್ಪಂದನಾರಿಗೆ ಪ್ರಿಯವಾದ ಅಡುಗೆಗಳನ್ನು ತಯಾರಿಸಿ ಪ್ರಾರ್ಥನೆ ಮಾಡಿ ಬೆಳಿಗ್ಗೆ ಕಾಗೆ ಇಡುತ್ತೇವೆ. ಮಧ್ಯಾಹ್ನದ ವೇಳೆಗೆ ಎಲ್ಲ ಬಂಧುಗಳಿಗೆ, ಸ್ನೇಹಿತರಿಗೆ ಅನ್ನಸಂತರ್ಪಣೆ ಮಾಡುತ್ತೇವೆ. ಜೊತೆಗೆ ಸ್ಪಂದನಾ ಅವರಿಗೆ ನುಡಿ ನಮನ ಕಾರ್ಯಕ್ರಮವೂ ಹಮ್ಮಿಕೊಂಡಿದ್ದೇವೆ ಎಂದರು ಸ್ಪಂದನಾರ ಹತ್ತಿರದ ಸಂಬಂಧಿ ಶೇಖರ್ ಬಂಗೇರ.

ರಾತ್ರಿ ಮಡಪ್ಪಾಜೆ ಹಾಕುವ ಕಾರ್ಯಕ್ರಮವಿದೆ. ನಮ್ಮ ನಂಬಿಕೆಯ ಪ್ರಕಾರ, ಆತ್ಮ ಹೊರಗೆ ಓಡಾಡಿಕೊಂಡಿರುತ್ತದೆ. ಅದನ್ನು ಕೆಲವು ಕ್ರಿಯೆಗಳನ್ನು ಮಾಡುವ ಮೂಲಕ ಮನೆಯ ಒಳಗೆ ಕರೆಸುತ್ತೇವೆ. ಕೋಳಿಯಿಂದ ಮಾಡಿದ ಪದಾರ್ಥವನ್ನು ಕುಟುಂಬದವರೆಲ್ಲ ಸೇರಿ ಇಟ್ಟು ಪ್ರಾರ್ಥಿಸಿ ಆತ್ಮವನ್ನು ಒಳಗೆ ಕರೆಯುತ್ತೇವೆ. ಯಾರೆಲ್ಲ ಆ ಕಾರ್ಯದಲ್ಲಿ ಭಾಗಿಯಾಗಿ ಪದಾರ್ಥ ಇಟ್ಟು ಪ್ರಾರ್ಥಿಸಿರುತ್ತಾರೊ ಅವರಿಗಷ್ಟೆ ಅದನ್ನು ನೀಡಲಾಗುತ್ತದೆ. ಈ ವಿಧಿ ವಿಧಾನವನ್ನು ಕುಟುಂಬದವರಷ್ಟೆ ಮಾಡುತ್ತಾರೆ” ಎಂದರು.

ಇದನ್ನೂ ಓದಿ:ಸ್ಪಂದನಾ ಸಾವಿಗೆ ಮರುಗಿದ ರಾಧಿಕಾ ಕುಮಾರಸ್ವಾಮಿ, ವಿಜಯ್ ರಾಘವೇಂದ್ರರ ಸಂತೈಸಿದ್ದು ಹೀಗೆ

”ಸ್ಪಂದನಾ ಮುಗ್ಗ ಗುತ್ತಿನ ಕುಟುಂಬದ ಕುಡಿ. ಆಕೆಯ ಆತ್ಮವನ್ನು ಕುಟುಂಬದ ಹಿರಿಯರೊಟ್ಟಿಗೆ ಸೇರಿಸುವ ಕಾರ್ಯಕ್ರಮವೂ ಇದೆ. ಈ ಕಾರ್ಯವನ್ನು ಸಾಮಾನ್ಯವಾಗಿ ಆಟಿ ಅಮವಾಸ್ಯೆಗೆ ಮಾಡಲಾಗುತ್ತದೆ. ಆದರೆ ಸ್ಪಂದನಾ ಸಣ್ಣ ವಯಸ್ಸಿಗೆ ತೀರಿಕೊಂಡ ಕಾರಣ ಮೂರು ತಿಂಗಳ ಒಳಗಾಗಿ ಮಾಡಬೇಕು ಎಂಬ ನಿಯಮ ಇದೆ. ಹಾಗಾಗಿ ಬೇಗನೇ ಈ ಕಾರ್ಯವನ್ನು ಮಾಡುತ್ತೇವೆ, ವಿಜಯ್ ರಾಘವೇಂದ್ರ, ಅವರ ತಂದೆ-ತಾಯಿಗಳನ್ನೂ ಕರೆಸಿ ಕಾರ್ಯ ಮಾಡುತ್ತೇವೆ” ಎಂದು ಶೇಖರ್ ಬಂಗೇರ ಮಾಹಿತಿ ನೀಡಿದ್ದಾರೆ.

ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಆಗಸ್ಟ್ 6 ರಂದು ಬ್ಯಾಂಕಾಕ್​ನಲ್ಲಿ ನಿಧನ ಹೊಂದಿದರು. ತಮ್ಮ ಕಸಿನ್​ಗಳ ಜೊತೆಗೆ ಬ್ಯಾಂಕಾಕ್​ಗೆ ಸ್ಪಂದನಾ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿ ಕಡಿಮೆ ರಕ್ತದೊತ್ತಡದಿಂದಾಗಿ ಆದ ಹೃದಯಾಘಾತದಿಂದ ನಿಧನ ಹೊಂದಿದರು. ಪತಿ ವಿಜಯ್ ರಾಘವೇಂದ್ರ ಜೊತೆಗೆ ಶೌರ್ಯ ಹೆಸರಿನ ಮಗನೊಬ್ಬ ಇದ್ದಾನೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಿಲ್ಲಿ ಅವತಾರವನ್ನೇ ಬದಲಿಸಿದ ಮನೆ ಮಂದಿ; ನೀವು ನಗೋದು ಗ್ಯಾರಂಟಿ
ಗಿಲ್ಲಿ ಅವತಾರವನ್ನೇ ಬದಲಿಸಿದ ಮನೆ ಮಂದಿ; ನೀವು ನಗೋದು ಗ್ಯಾರಂಟಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ