AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷಿ ಹಾಗೂ ಸ್ಕ್ರಿಪ್ಟ್​ ಕೆಲಸಗಳಲ್ಲಿ ಬ್ಯುಸಿಯಾದ ‘ದಿಯಾ’ ಪೃಥ್ವಿ ಅಂಬರ್; ಇದು ಲಾಕ್​ಡೌನ್​ ದಿನಚರಿ

ಪೃಥ್ವಿ ಅಂಬರ್ ತಮ್ಮ ಹುಟ್ಟೂರಾದ ಕಾಸರಗೋಡಿಗೆ ತೆರಳಿದ್ದಾರೆ. ಅಲ್ಲಿ ಕೃಷಿ ಹಾಗೂ ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಪೃಥ್ವಿ ಮಾತನಾಡಿದ್ದಾರೆ.

ಕೃಷಿ ಹಾಗೂ ಸ್ಕ್ರಿಪ್ಟ್​ ಕೆಲಸಗಳಲ್ಲಿ ಬ್ಯುಸಿಯಾದ ‘ದಿಯಾ’ ಪೃಥ್ವಿ ಅಂಬರ್; ಇದು ಲಾಕ್​ಡೌನ್​ ದಿನಚರಿ
ಪೃಥ್ವಿ ಅಂಬರ್
ರಾಜೇಶ್ ದುಗ್ಗುಮನೆ
|

Updated on: May 19, 2021 | 3:31 PM

Share

ಕೊರೊನಾ ವೈರಸ್​ ಮಿತಿ ಮೀರುತ್ತಿರುವುದರಿಂದ ಸಾಕಷ್ಟು ಸೆಲೆಬ್ರಿಟಿಗಳು ತಮ್ಮ ಹುಟ್ಟೂರು ಸೇರಿದ್ದಾರೆ. ಕೆಲವರು ಕೃಷಿಯಲ್ಲಿ ತೊಡಗಿಕೊಂಡರೆ ಇನ್ನೂ ಕೆಲವರು ಸ್ಕ್ರಿಪ್ಟ್​ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ದಿಯಾ ಖ್ಯಾತಿಯ ನಟ ಪೃಥ್ವಿ ಅಂಬರ್​ ಈ ಎರಡೂ ಕೆಲಸವನ್ನು ಏಕಕಾಲಕ್ಕೆ ಮಾಡುತ್ತಿದ್ದಾರೆ. ಲಾಕ್​ಡೌನ್​ ಅವಧಿಯಲ್ಲಿ ತಮ್ಮೂರಾದ ಕಾಸರಗೋಡಿಗೆ ತೆರಳಿರುವ ಅವರು, ದಿನಚರಿ ಬದಲಿಸಿಕೊಂಡಿದ್ದಾರೆ. ಆ ಬಗ್ಗೆ ಟಿವಿ9 ಕನ್ನಡ ಡಿಜಿಟಲ್​ ಜತೆ ಮಾತನಾಡಿದ್ದಾರೆ. 

 ಲಾಕ್​ಡೌನ್​ ಸ್ಪೆಷಲ್​ ಏನು?

ನಾನು ಕಾಸರಗೋಡಲ್ಲಿದ್ದೇನೆ. ಗೆಳೆಯರ ಜತೆ ಸೇರಿ ಸ್ಕ್ರಿಪ್ಟ್​ ಮಾಡುತ್ತಿದ್ದೇನೆ. ಮಲ್ಲಿಗೆ ತೋಟ ಇದೆ ಅದರಲ್ಲಿ ಕೆಲಸ ಮಾಡುತ್ತಿದ್ದೇನೆ. ತರಕಾರಿ ಕೂಡ ಬೆಳೆಯುತ್ತಿದ್ದೇನೆ. ಚಿಕ್ಕವನಿದ್ದಾಗ ಕೃಷಿ ಮಾಡುತ್ತಿದೆ. ಹೀಗಾಗಿ, ಅದನ್ನು ಮರೆತಿಲ್ಲ. ಬಿಡುವ ಸಿಕ್ಕಾಗ ಸಿನಿಮಾ ನೋಡುತ್ತಿದ್ದೇನೆ. ಕೆಲವು ರಿಸರ್ಚ್​ ಮಾಡುತ್ತಾ ಇದೀನಿ.

 ಯಾವೆಲ್ಲಾ ಸಿನಿಮಾಗಳಲ್ಲಿ ಬ್ಯುಸಿ?

ದಿಯಾ ಸಿನಿಮಾ ತೆರೆಕಂಡ ನಂತರ ಸಾಕಷ್ಟು ಆಫರ್​ಗಳು ಬಂದವು. ಹೀಗಾಗಿ, ದಿಯಾ ಆದಮೇಲೆ ನಿರಂತರವಾಗಿ ಶೂಟ್​ನಲ್ಲಿ ಬ್ಯುಸಿಯಾದೆ. ಈಗ ಮನೆಯವರ ಜತೆ ಸಮಯ ಕಳೆಯೋಕೆ ಟೈಮ್​ ಸಿಕ್ಕಿದೆ. ಈ ಸಂದರ್ಭದಲ್ಲಿ ನಮ್ಮನ್ನು ನಾವು ಅವಲೋಕನ ಮಾಡಿಕೊಳ್ಳಬಹುದು. ಆಗ, ನಾವೆಲ್ಲಿ ತಪ್ಪು ಮಾಡುತ್ತಿದ್ದೇವೆ ಎಂಬುದು ಗೊತ್ತಾಗುತ್ತದೆ.

ನಾನು ಸ್ಕ್ರಿಪ್ಟ್​ ಕೆಲಸ ಮಾಡಿದ ಒಂದು ಪ್ರಾಜೆಕ್ಟ್​ ಶೂಟ್​ಗೆ ರೆಡಿ ಇದೆ. ಈ ಸಿನಿಮಾದಲ್ಲಿ ನಾನು ಮತ್ತು ಖುಷಿ ನಟಿಸುತ್ತಿದ್ದೇವೆ. ಇದೊಂದು ಲವ್​ ಸ್ಟೋರಿ. ದಿಯಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ದರ್ಶನ್​ ಅಪೂರ್ವ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಜೂನ್​ನಲ್ಲಿ ಸಿನಿಮಾ ಶೂಟಿಂಗ್​ ಪ್ಲ್ಯಾನ್​ ಮಾಡಿಕೊಂಡಿದ್ದೆವು. ಆದರೆ, ಕೊವಿಡ್​ ಕಾರಣದಿಂದ ಸಿನಿಮಾ ಶೂಟಿಂಗ್​ ಮುಂದೆ ಹೋಗಿದೆ.

ಫ್ರೆಂಡ್ಸ್​ ಜತೆ ಸೇರಿ ಹಾರರ್​ ಸಿನಿಮಾ ಮಾಡ್ತಾ ಇದೀನಿ. ಇದರ ಕೆಲಸ ಕೂಡ ಶುರುವಾಗಬೇಕಿದೆ.  ‘ಶುಗರ್​ಲೆಸ್’​, ‘ಲೈಫ್​ ಈಸ್​ ಬ್ಯೂಟಿಫುಲ್’ ಚಿತ್ರದ​ ಶೂಟಿಂಗ್​ ಪೂರ್ಣಗೊಂಡಿದ್ದು, ಪೋಸ್ಟ್​ ಪ್ರೊಡಕ್ಷನ್​ ನಡೆಯುತ್ತಿದೆ.

 ಈ ಪರಿಸ್ಥಿತಿ ಬಗ್ಗೆ ಏನು ಹೇಳ್ತೀರಾ?

ನಿಜಕ್ಕೂ ಇದು ಕಷ್ಟದ ಸಮಯ. ಹೀಗಾಗಿ, ಎಲ್ಲರೂ ಮಾಸ್ಕ್​ ಧರಿಸಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಇದರ ಜತೆಗೆ, ಸರ್ಕಾರ ಏನು ಮಾಡುತ್ತಿದೆಯೋ ಅದೇ ರೀತಿಯಲ್ಲಿ ನಾವು ಕೂಡ ಮಾಡಬೇಕು. ಈ ಸಂದರ್ಭದಲ್ಲಿ ಮನೆಯಲ್ಲೇ ಇರಬೇಕು. ಆದರೆ, ಕೆಲವರು ಅನಗತ್ಯ ತಿರುಗಾಡುತ್ತಿದ್ದಾರೆ. ಆ ರೀತಿ ಮಾಡಬಾರದು. ಪ್ರತೀ ಊರು ಹಾಗೂ ವಾರ್ಡ್​ನ ಮುಖ್ಯಸ್ಥರು ಇದರ ಮೇಲ್ವಿಚಾರಣೆ ಮಾಡಬೇಕು. ಊರಲ್ಲಿ ಒಂದು ಮನೆಗೆ ಕೊರೊನಾ ಬಂದಿದೆ ಎಂದರೆ, ಅವರಿಗೆ ಎಲ್ಲರೂ ಅಗತ್ಯ ಇರುವ ಸಹಾಯ ಮಾಡಬೇಕು. ಆಗ ಅವರಿಗೆ ಹೊರ ಬರುವ ಅವಶ್ಯಕತೆ ಇರುವುದಿಲ್ಲ.

 ಫಿಟ್​ ಆಗಿರೋಕೆ ಏನು ಮಾಡ್ತಾ ಇದೀರಾ?

ಬೆಂಗಳೂರಿನಲ್ಲಿದ್ದಾಗ ಜಿಮ್​ ಮಾಡುತ್ತಿದ್ದೆ. ಆದರೆ, ಇಲ್ಲಿ ಅದು ಸಾಧ್ಯವಿಲ್ಲ. ಹೀಗಾಗಿ, ಯೋಗಾಸನ ಮಾಡ್ತೀನಿ. ಮನೆಯವರೆಲ್ಲಿ ಹಿರಿಯರಿದ್ದಾರೆ. ಹೀಗಾಗಿ, ವಾಕಿಂಗ್​ಗೆ ಬ್ರೇಕ್​ ಹಾಕಿದ್ದೆನೆ. ​ಸಣ್ಣ-ಪುಟ್ಟ ವರ್ಕೌಟ್ ಮಾಡೋಕೆ ಏನು ಬೇಕೋ ಅದೆಲ್ಲವೂ ಇದೆ. ಹೀಗಾಗಿ, ಸಣ್ಣಪುಟ್ಟ ವರ್ಕೌಟ್​ ಮಾಡುತ್ತಿದ್ದೇನೆ.

ಇದನ್ನೂ ಓದಿ:  Adhvithi Shetty: ಮಾನಸಿಕ ಆರೋಗ್ಯ​ ಕಾಪಾಡಿಕೊಳ್ಳೋಕೆ ನಟಿ ಅದ್ವಿತಿ ಶೆಟ್ಟಿ ಕೊಟ್ರು ಟಿಪ್ಸ್​

Follow Us
ವಿವಾದಿತ ‘ದಿ ಕೇರಳ ಸ್ಟೋರಿ 2’ ಸಿನಿಮಾ ವೀಕ್ಷಿಸಿದ ಬಿಜೆಪಿ ಶಾಸಕರು
ವಿವಾದಿತ ‘ದಿ ಕೇರಳ ಸ್ಟೋರಿ 2’ ಸಿನಿಮಾ ವೀಕ್ಷಿಸಿದ ಬಿಜೆಪಿ ಶಾಸಕರು
ಕೊಪ್ಪಳದ ಗ್ರಾಮವೊಂದರಲ್ಲಿ ಹಾಡಹಗಲೇ ಚಿರತೆ ಓಡಾಟ: ವಿಡಿಯೋ ನೋಡಿ
ಕೊಪ್ಪಳದ ಗ್ರಾಮವೊಂದರಲ್ಲಿ ಹಾಡಹಗಲೇ ಚಿರತೆ ಓಡಾಟ: ವಿಡಿಯೋ ನೋಡಿ
ಉದ್ಘಾಟನೆಯಾದ 6 ತಿಂಗಳೊಳಗೆ ಬಂಗಾಳದ ಫ್ಲೈಓವರ್ ಗೋಡೆ ಕುಸಿತ
ಉದ್ಘಾಟನೆಯಾದ 6 ತಿಂಗಳೊಳಗೆ ಬಂಗಾಳದ ಫ್ಲೈಓವರ್ ಗೋಡೆ ಕುಸಿತ
ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಗ್ಯಾಸ್ ಸಮಸ್ಯೆ
ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಗ್ಯಾಸ್ ಸಮಸ್ಯೆ
ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ
ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ
ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ವಿವಾಹ ಯೋಗ ಹಾಗೂ ಹೊಸ ಉದ್ಯೋಗಾವಕಾಶ
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ವಿವಾಹ ಯೋಗ ಹಾಗೂ ಹೊಸ ಉದ್ಯೋಗಾವಕಾಶ
ಏರ್ ಇಂಡಿಯಾ ವಿಮಾನ ಹಾರ್ಡ್​ ಲ್ಯಾಂಡಿಂಗ್, ಪುಡಿ ಪುಡಿಯಾದ ಚಕ್ರ
ಏರ್ ಇಂಡಿಯಾ ವಿಮಾನ ಹಾರ್ಡ್​ ಲ್ಯಾಂಡಿಂಗ್, ಪುಡಿ ಪುಡಿಯಾದ ಚಕ್ರ
ಗ್ಯಾಸ್ ನೋ ಸ್ಟಾಕ್: ಬೆಂಗಳೂರಿನಲ್ಲಿ ಬಂಕ್ ಬಂದ್, ಆಟೋದವರ ದುಡಿಮೆಗೂ ಕುತ್ತು
ಗ್ಯಾಸ್ ನೋ ಸ್ಟಾಕ್: ಬೆಂಗಳೂರಿನಲ್ಲಿ ಬಂಕ್ ಬಂದ್, ಆಟೋದವರ ದುಡಿಮೆಗೂ ಕುತ್ತು
ಯುಗಾದಿ ವರ್ಷ ಭವಿಷ್ಯ; ಈ ರಾಶಿಯವರು ಆರೋಗ್ಯದ ಬಗ್ಗೆ ಅತ್ಯಂತ ಜಾಗರೂಕರಾಗಿರಿ
ಯುಗಾದಿ ವರ್ಷ ಭವಿಷ್ಯ; ಈ ರಾಶಿಯವರು ಆರೋಗ್ಯದ ಬಗ್ಗೆ ಅತ್ಯಂತ ಜಾಗರೂಕರಾಗಿರಿ