AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಇಲ್ಲ ಅನ್ನೋವ್ರಿಗೆ ಕಪಾಳಕ್ಕೆ ಹೊಡೆಯಿರಿ; ಅಕ್ಕನ ಕಳೆದುಕೊಂಡು ಕಣ್ಣೀರಿಟ್ಟ ನಟಿ ಸುನೇತ್ರಾ ಪಂಡಿತ್

ಸುನೇತ್ರಾ ಪಂಡಿತ್ ಅಕ್ಕ ಇಂದು (ಏ.17) ಕೊರೊನಾ ವೈರಸ್​ಗೆ ಬಲಿಯಾಗಿದ್ದಾರೆ. ಈ ದುಃಖದ ನಡುವೆಯೂ ಸುನೇತ್ರಾ ಪಂಡಿತ್ ಹಾಗೂ ಅವರ ಪತಿ ರಮೇಶ್ ಪಂಡಿತ್ ಮಾಧ್ಯಮದ ಎದುರು ಬಂದು ಮಾತನಾಡಿದ್ದಾರೆ.

ಕೊರೊನಾ ಇಲ್ಲ ಅನ್ನೋವ್ರಿಗೆ ಕಪಾಳಕ್ಕೆ ಹೊಡೆಯಿರಿ; ಅಕ್ಕನ ಕಳೆದುಕೊಂಡು ಕಣ್ಣೀರಿಟ್ಟ ನಟಿ ಸುನೇತ್ರಾ ಪಂಡಿತ್
ಸುನೇತ್ರ ಪಂಡಿತ್​
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​|

Updated on: Apr 17, 2021 | 5:37 PM

Share

ಕೊರೊನಾ ವೈರಸ್​ ಎರಡನೇ ಅಲೆ ದೊಡ್ಡ ಮಟ್ಟದಲ್ಲಿ ಹಬ್ಬುತ್ತಿದೆ. ಸಾಕಷ್ಟು ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. ಆದರೆ, ಕೆಲವರು ಇದನ್ನು ನಂಬಲು ಸಿದ್ಧರಿಲ್ಲ. ಕೊರೊನಾ ಎನ್ನುವುದೇ ಸುಳ್ಳು ಎನ್ನುವ ಮನಸ್ಥಿತಿ ಹೊಂದಿದ ಅನೇಕ ಮಂದಿ ಇದ್ದಾರೆ. ಕೊರೊನಾ ಇಲ್ಲ ಎಂದು ಹೇಳುವವರಿಗೆ ಕಪಾಳಕ್ಕೆ ಹೊಡೆಯಿರಿ ಎಂದು ನಟಿ ಸುನೇತ್ರಾ ಪಂಡಿತ್​ ಹೇಳಿದ್ದಾರೆ. ಸುನೇತ್ರಾ ಪಂಡಿತ್ ಅವರ ಅಕ್ಕ ಇಂದು (ಏ.17) ಕೊರೊನಾ ವೈರಸ್​ಗೆ ಬಲಿಯಾಗಿದ್ದಾರೆ. ಈ ದುಃಖದ ನಡುವೆಯೂ ಸುನೇತ್ರಾ ಪಂಡಿತ್ ಹಾಗೂ ಅವರ ಪತಿ ರಮೇಶ್ ಪಂಡಿತ್ ಮಾಧ್ಯಮದ ಎದುರು ಬಂದು ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಸಾರ್ವಜನಿಕರನ್ನು ಎಚ್ಚರಿಸುವ ಕೆಲಸ ಕೂಡ ಮಾಡಿದ್ದಾರೆ.

ಕೋವಿಡ್​ನಿಂದ ನಮ್ಮ ಅಕ್ಕ ತೀರಿಕೊಂಡಳು. ಬಿಬಿಎಂಪಿ ಬೆಡ್ ಅಲಾಟ್​ ಮಾಡುವಾಗ ಐಸಿಯು ಇರೋ ಆಸ್ಪತ್ರೆಗೆ ಅಲಾಟ್​ ಮಾಡಿಲ್ಲ. ಎಲ್ಲರಿಗೂ ಒತ್ತಡ ಇದೆ ಎಂಬುದು ನಮಗೆ ಗೊತ್ತು ಎಂದು ಅಳಲು ತೋಡಿಕೊಂಡಿದ್ದಾರೆ.

ಕೊರೊನಾ ಇಲ್ಲವೇ ಇಲ್ಲ ಎನ್ನುವ ಬಗ್ಗೆ ಸಿಟ್ಟಾಗಿರುವ ಸುನೇತ್ರಾ, ಕೊರೊನಾ ಇಲ್ಲಾ ಅಂದೋರಿಗೆ ಕಪಾಳಕ್ಕೆ ಬಾರಿಸಬೇಕು. ಅದರ ನೋವು ಅನುಭವಿಸ್ತಿರೋರಿಗೆ ಇದರ ಬಗ್ಗೆ ಗೊತ್ತು. ಮಾಧ್ಯಮಗಳಲ್ಲಿ ತೋರಿಸೋದು ಸುಳ್ಳಲ್ಲ. ಇಲ್ಲದಿರೋದನ್ನು ತೋರಿಸಿದರೆ ಮಾಧ್ಯಮದವರಿಗೆ ಏನಾದರೂ ಕೊಂಬು ಬರುತ್ತಾ? ಯಾರಾದರೂ ಹೋಗಿ ಸನ್ಮಾನ ಮಾಡ್ತಾರಾ? ಅದು ಅನುಭವಿಸಿದವರಿಗೆ ಗೊತ್ತು. ದಯವಿಟ್ಟು ಜನರು ಎಚ್ಚರಿಕೆಯಿಂದಿರಿ ಎಂದು ಕೈ ಮುಗಿದು ಮನವಿ ಮಾಡಿಕೊಂಡರು.

ಈಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸಿಲ್ಲಿ ಲಲ್ಲಿ ಧಾರಾವಾಹಿ ಮೂಲಕ ಸುನೇತ್ರಾ ಗುರುತಿಸಿಕೊಂಡಿದ್ದಾರೆ. ನಂತರ ಅವರು ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರ ಕೂಡ ಮಾಡಿದ್ದಾರೆ.

ಇದನ್ನೂ ಓದಿ: Nikhil Kumaraswamy: ನಿಖಿಲ್​ ಕುಮಾರಸ್ವಾಮಿಗೆ ಕೊರೊನಾ ಸೋಂಕು ದೃಢ

Sonu Sood Corona Positive: ಸೋನು ಸೂದ್​ಗೆ ಕೊರೊನಾ ಪಾಸಿಟಿವ್​; ಬಡವರ ಪಾಲಿನ ರಿಯಲ್​ ಹೀರೋಗೆ ಈಗ ಕಷ್ಟಕಾಲ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ