ಸಿನಿಮಾದಿಂದ ಬಂದ ಲಾಭವನ್ನು ದುಪ್ಪಟ್ಟು ಹೇಗೆ ಮಾಡುತ್ತಾರೆ ಉಮಾಪತಿ ಶ್ರೀನಿವಾಸ್?

Umapathy Shrinivas: ಉಮಾಪತಿ ಶ್ರೀನಿವಾಸ್ ಕನ್ನಡ ಚಿತ್ರರಂಗದ ಯಶಸ್ವಿ ಸಿನಿಮಾ ನಿರ್ಮಾಪಕ. ಸಿನಿಮಾದಿಂದ ಬಂದ ಲಾಭದ ಹಣವನ್ನು ಎಲ್ಲಿ ಹೂಡಿಕೆ ಮಾಡುತ್ತಾರೆ ಉಮಾಪತಿ.

ಸಿನಿಮಾದಿಂದ ಬಂದ ಲಾಭವನ್ನು ದುಪ್ಪಟ್ಟು ಹೇಗೆ ಮಾಡುತ್ತಾರೆ ಉಮಾಪತಿ ಶ್ರೀನಿವಾಸ್?
Follow us
|

Updated on: Jan 23, 2024 | 5:12 PM

ಕನ್ನಡ ಚಿತ್ರರಂಗದಲ್ಲಿ (Sandalwood) ವರ್ಷಕ್ಕೆ 200ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆ ಆಗುತ್ತವೆ. ಕನ್ನಡ ಚಿತ್ರರಂಗದ ವಾರ್ಷಿಕ ಅಂದಾಜು ವ್ಯವಹಾರ 1000 ಕೋಟಿಯನ್ನು ದಾಟುತ್ತದೆ. ಚಿತ್ರರಂಗದಲ್ಲಿ ಹಲವು ನಿರ್ಮಾಪಕರಿದ್ದಾರೆ. ಅವರಿಂದಾಗಿಯೇ ಕನ್ನಡ ಚಿತ್ರರಂಗ ವರ್ಷಕ್ಕೆ ನೂರಾರು ಸಿನಿಮಾಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿರುವುದು. ಆದರೆ ಆ ನಿರ್ಮಾಪಕರಲ್ಲಿ ವೃತ್ತಿಪರ (ಪ್ರೊಫೆಷನಲ್) ಎಂದು ಕರೆಯಬಹುದಾದ ನಿರ್ಮಾಪಕರು ಬೆರಳೆಣಿಕೆಯಷ್ಟು ಮಾತ್ರ. ಅಂಥಹವರಲ್ಲಿ ಒಬ್ಬರು ಉಮಾಪತಿ ಶ್ರೀನಿವಾಸ್ (Umapathy Srinivas).

ಉಮಾಪತಿ ಶ್ರೀನಿವಾಸ್ ಬಹಳ ಹಳೆಯ ನಿರ್ಮಾಪಕರಲ್ಲದಿದ್ದರೂ ವ್ಯವಹಾರ ಅರಿತಿರುವ, ಜಾಣತನದಿಂದ, ನಷ್ಟವಾಗದ ರೀತಿಯಲ್ಲಿ ಸಿನಿಮಾ ಮಾಡಿಕೊಂಡು ಹೋಗುತ್ತಿರುವ ನಿರ್ಮಾಪಕ. ಆರಂಭದಲ್ಲಿ ದೊಡ್ಡ ಸ್ಟಾರ್ ನಟರ ಸಿನಿಮಾಗಳನ್ನು ಮಾಡಿದ ಉಮಾಪತಿ ಶ್ರೀನಿವಾಸ್, ಅನುಭವ ಹೆಚ್ಚಾದಂತೆ ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ಗಳಿಸುವ ಸಿನಿಮಾಗಳನ್ನೂ ಮಾಡುವತ್ತ ಗಮನ ಹರಿಸಿದ್ದಾರೆ. ಮಾತ್ರವಲ್ಲದೆ, ಚಿತ್ರರಂಗದ ಏರಿಳಿತಗಳ ಬಗ್ಗೆ ಅರಿವಿರುವ ಅವರು, ಸಿನಿಮಾದಿಂದ ಬಂದ ಹಣವನ್ನು ಹೂಡಿಕೆ ಮಾಡಿ ಡಬಲ್ ಮಾಡುವ ದಾರಿ ಕಂಡು ಕೊಂಡಿದ್ದಾರೆ. ಇದರಿಂದಾಗಿಯೇ ಉಮಾಪತಿ, ಹೆಚ್ಚು ಒತ್ತಡಕ್ಕೆ ಒಳಗಾಗದೆ ವರ್ಷಕ್ಕೆ ಎರಡು ಸಿನಿಮಾಗಳನ್ನು ನೀಡುತ್ತಾ ಸಾಗುತ್ತಿದ್ದಾರೆ.

ಇದನ್ನೂ ಓದಿ:‘ಕಾಟೇರ’ ಕತೆ ನಾನು ಮಾಡಿಸಿದ್ದೆ, ಯಾರಿಗೆ ಏನು ಧಕ್ಕಬೇಕೆಂಬುದು ನಿರ್ಧರಿತ: ಉಮಾಪತಿ ಶ್ರೀನಿವಾಸ್

ಉಮಾಪತಿ ನಿರ್ಮಾಣ ಮಾಡಿರುವ ‘ಉಪಾಧ್ಯಕ್ಷ’ ಸಿನಿಮಾ ಇದೀಗ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ಚಿಕ್ಕಣ್ಣ ನಾಯಕ. ಇದು ನಾಯಕನಾಗಿ ಅವರಿಗೆ ಮೊದಲ ಸಿನಿಮಾ. ಸುದೀಪ್, ದರ್ಶನ್, ಶ್ರೀಮುರಳಿ ಅವರುಗಳ ಸಿನಿಮಾಕ್ಕೆ ಬಂಡವಾಳ ಹೂಡಿದ್ದ ಉಮಾಪತಿ ಈಗ ಚಿಕ್ಕಣ್ಣನನ್ನು ಹಾಕಿಕೊಂಡು ಸಿನಿಮಾ ಮಾಡಿದ್ದಾರೆ. ಇದು ಅವರಿಗೂ ಸಹ ಒಂದು ರೀತಿ ಹೊಸ ಪ್ರಯೋಗ. ಆದರೆ ಲೆಕ್ಕಾಚಾರ ಹಾಕಿಕೊಂಡೇ ಪ್ರಯೋಗಕ್ಕೆ ಮುಂದಾಗಿದ್ದಾರೆ ಉಮಾಪತಿ.

ಸಿನಿಮಾದ ಪ್ರಚಾರ ಸಂಬಂಧ ಸಂದರ್ಶನವೊಂದರಲ್ಲಿ ಮಾತನಾಡಿರುವ ಉಮಾಪತಿ ಶ್ರೀನಿವಾಸ್, ಸಿನಿಮಾದ ಬಾಕ್ಸ್ ಆಫೀಸ್​ ಕಲೆಕ್ಷನ್ ಬಗ್ಗೆ ಹಲವರು ಸುಳ್ಳು ಹೇಳುತ್ತಾರೆ. 200-300 ಕೋಟಿ ಎಲ್ಲ ಕಲೆಕ್ಷನ್ ಆಗುವುದೇ ಇಲ್ಲ. ಅದರಲ್ಲಿ ಅರ್ಧ ಆದರೂ ಸಹ ನಿರ್ಮಾಪಕನ ಅದೃಷ್ಟ. ಸ್ಟಾರ್ ನಟರ ಅಭಿಮಾನಿಗಳು ಬೇಸರ ಮಾಡಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ನಾನು ಸಹ ನಿಜವಾದ ಕಲೆಕ್ಷನ್ ಹೇಳಿಕೊಳ್ಳುವುದಿಲ್ಲ. ಮಾರ್ಕೆಟ್​ನಿಂದ ಲಾಭ ವಾಪಸ್ ಪಡೆದುಕೊಳ್ಳುವುದು ಬಹಳ ಕಷ್ಟದ ಕೆಲಸ ಎಂದಿದ್ದಾರೆ.

ಇದನ್ನೂ ಓದಿ:ಶಿವಣ್ಣನ ಜೊತೆ ಸಿನಿಮಾ ಘೋಷಿಸಿದ ಉಮಾಪತಿ, ಆ ಹೆಸರು ಬೇಡವೆಂದ ಶಿವಣ್ಣ

ತಾವು ಈ ವರೆಗೆ ಮಾಡಿರುವ ಯಾವ ಸಿನಿಮಾದಲ್ಲಿಯೂ ನಷ್ಟ ಮಾಡಿಕೊಂಡಿಲ್ಲ ಎಂದ ಉಮಾಪತಿ, ‘ಹೆಬ್ಬುಲಿ’ ಸಿನಿಮಾ ಮಾಡಿದಾಗ ಒಂದು 6.50 ಕೋಟಿ ಕೊಟ್ಟು ಒಂದು ಬಿಲ್ಡಿಂಗ್ ಖರೀದಿಸಿದೆ. ಅದರ ಮೌಲ್ಯ ಈಗ 15 ಕೋಟಿ ಇದೆ. ‘ರಾಬರ್ಟ್’ ಸಿನಿಮಾ ಮಾಡಿದಾಗ ಅದರ ನೆನಪಿಗೆ ಸ್ಥಳ ಖರೀದಿ ಮಾಡಿದೆ. ಆಗ ಅದಕ್ಕೆ ಸುಮಾರು 17-18 ಕೋಟಿ ಖರ್ಚು ಮಾಡಿದ್ದೆ. ಅದರ ಮೌಲ್ಯ ಈಗ ಸುಮಾರು 50-60 ಕೋಟಿ ಆಗಿದೆ. ‘ಮದಗಜ’ ಸಿನಿಮಾದ ಬಳಿಕ ಎರಡು ಪ್ರಾಪರ್ಟಿ ಖರೀದಿ ಮಾಡಿದೆ ಅದಕ್ಕೆ ಸುಮಾರು 10 ಕೋಟಿ ಖರ್ಚು ಮಾಡಿದೆ. ಅದರ ಮೌಲ್ಯ ಈಗ 20 ಕೋಟಿ ಇದೆ’ ಎಂದಿದ್ದಾರೆ ಉಮಾಪತಿ.

ಸಿನಿಮಾ ರಂಗದಲ್ಲಿ ಬುದ್ಧಿವಂತಿಕೆ ಹಾಗು ಶಿಸ್ತು ಇಲ್ಲದೇ ಇದ್ದರೆ ಬದುಕುವುದು ಕಷ್ಟ ಎಂಬುದನ್ನು ಮೊದಲೇ ಅರಿತುಕೊಂಡೆ. ಇಲ್ಲಿ ಹಣ ಹೂಡಬೇಕು, ಹಣ ಎತ್ತಿಕೊಳ್ಳಬೇಕು. ಯಾವುದೇ ಇತರೆ ವಿಷಯಗಳ ಕಡೆಗೆ ಗಮನ ಹರಿಸಿದರೆ ಪತನ ಆರಂಭವಾಗುತ್ತದೆ. ಗ್ಲಾಮರ್ ಲೋಕದ ಗ್ಲಾಮರ್​ಗೆ ನಾವು ಸೋತೆವೆಂದರೆ ನಮ್ಮ ಪತನ ಶುರುವಾದಂತೆಯೇ. ಹಾಗಾಗಿ ಶಿಸ್ತಿನಿಂದ ವ್ಯವಹಾರ ಮಾಡಬೇಕು, ಯೋಜನೆಗಳನ್ನು ಹಾಕಿಕೊಂಡು ಅದಕ್ಕೆ ತಕ್ಕಂತೆ ಕೆಲಸಗಳನ್ನು ಮಾಡಬೇಕು’ ಎಂದು ಅನುಭವ ಹಂಚಿಕೊಂಡಿದ್ದಾರೆ ಉಮಾಪತಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ