AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kabzaa: ಕಬ್ಜ ಸಿನಿಮಾ ಚಿತ್ರೀಕರಣದಲ್ಲಿ ಉಪೇಂದ್ರ ಎದುರಿಸಿದ್ದ ಸವಾಲುಗಳು ಒಂದೆರಡಲ್ಲ

ಕಬ್ಜ ಸಿನಿಮಾ ಚಿತ್ರೀಕರಣದಲ್ಲಿ ತಾವು ಎದುರಿಸಿದ ಸವಾಲು, ಸಮಸ್ಯೆಗಳ ಬಗ್ಗೆ ನಟ ಉಪೇಂದ್ರ ಮಾತನಾಡಿದ್ದಾರೆ.

Kabzaa: ಕಬ್ಜ ಸಿನಿಮಾ ಚಿತ್ರೀಕರಣದಲ್ಲಿ ಉಪೇಂದ್ರ ಎದುರಿಸಿದ್ದ ಸವಾಲುಗಳು ಒಂದೆರಡಲ್ಲ
ಉಪೇಂದ್ರ
ಮಂಜುನಾಥ ಸಿ.
|

Updated on:Mar 10, 2023 | 8:14 PM

Share

ಉಪೇಂದ್ರ (Upendra) ನಟನೆಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಆರ್ ಚಂದ್ರು (R Chandru) ಮೊದಲ ಬಾರಿಗೆ ತಮ್ಮ ಮಿತಿ ದಾಟಿ ಬೃಹತ್ ಸಿನಿಮಾ ಒಂದನ್ನು ಕಟ್ಟಿರುವುದು ಟ್ರೈಲರ್, ಟೀಸರ್​ಗಳಿಂದ ತಿಳಿದು ಬರುತ್ತಿದೆ. ಸುಮಾರು ಒಂದು ವರ್ಷದ ಕಾಲ ಈ ಸಿನಿಮಾದ ಚಿತ್ರೀಕರಣದಲ್ಲಿ ಉಪೇಂದ್ರ ತಮ್ಮನ್ನು ತೊಡಗಿಸಿಕೊಂಡಿದ್ದರು, ಈ ಸಂದರ್ಭದಲ್ಲಿ ಅವರು ಎದುರಿಸಿದ ಸಮಸ್ಯೆಗಳ ಬಗ್ಗೆ ಅವರೇ ಮಾತನಾಡಿದ್ದಾರೆ.

ಟಿವಿ9 ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ‘ಕಬ್ಜ’ ಚಿತ್ರೀಕರಣದ ಸಮಯದಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ಮಾತನಾಡಿರುವ ಉಪೇಂದ್ರ, ‘ಬೃಹತ್ ಮೇಕಿಂಗ್ ಅನ್ನು ಒಳಗೊಂಡಂಥಹಾ ಇಂಥಹಾ ಸಿನಿಮಾಗಳಲ್ಲಿ ನಟಿಸಲು ಬಹಳ ದೊಡ್ಡ ತಾಳ್ಮೆ ಬೇಕು. ತಾಳ್ಮೆ ಇಲ್ಲದೆ ಇಂಥಹಾ ಉತ್ಪನ್ನವೊಂದನ್ನು ತೆರೆಗೆ ತರಲು ಸಾಧ್ಯವಿಲ್ಲ’ ಎಂದಿದ್ದಾರೆ.

ಮುಂದುವರೆದು, ”ಸತತವಾಗಿ 150-200 ದಿನ ಚಿತ್ರೀಕರಣ ಮಾಡುವುದು ತ್ರಾಸದಾಯಕ ಕೆಲಸ ಅದೂ ಯಾವಾಗೆಂದರೆ ಆವಾಗ ಚಿತ್ರೀಕರಣಕ್ಕೆ ಹೋಗಬೇಕಿತ್ತು. ಡೇಟ್​ಗಳನ್ನು ಹೊಂದಿಸಿಕೊಳ್ಳುವುದು ದೊಡ್ಡ ಸಮಸ್ಯೆಯಾಗಿತ್ತು. ಕೊಟ್ಟಿರುವ ಡೇಟ್ಸ್​ಗೆ ಅನುಗುಣವಾಗಿ ಮಾತ್ರವೇ ಕೆಲಸ ಮಾಡುತ್ತೇನೆ ಎಂದರೆ ಇಂಥಹಾ ಸಿನಿಮಾಗಳನ್ನು ಮಾಡಲಾಗುವುದಿಲ್ಲ. ಸಂಪೂರ್ಣವಾಗಿ ಅದರೊಳಗೆ ತೊಡಗಬೇಕಾಗುತ್ತದೆ, ನಮ್ಮ ಸಂಪೂರ್ಣವನ್ನು ನೀಡಬೇಕಾಗುತ್ತದೆ” ಎಂದಿದ್ದಾರೆ ಉಪ್ಪಿ.

”ಡೇಟ್ ಕೊಟ್ಟು ಚಿತ್ರೀಕರಣಕ್ಕೆ ಹೋದಾಗಲು ಎಷ್ಟೋ ದಿನ ಒಂದೂ ಶಾಟ್ ನೀಡದೆ ಅಥವಾ ಕೇವಲ ಒಂದು ಶಾಟ್ ನೀಡಿ ವಾಪಸ್ ಬಂದಿದ್ದೂ ಇದೆ. ಕೇವಲ ಒಂದು ಶಾಟ್​ ನೀಡಲು ಗಂಟೆಗಟ್ಟಲೆ ಕಾದಿದ್ದೂ ಇದೆ. ಇದೆಲ್ಲ ಒಂದು ರೀತಿಯ ಪರೀಕ್ಷೆ. ನಾನು ಡೇಟ್ ಪ್ರಕಾರ ನಡೆದುಕೊಳ್ಳಿ, ಸರಿಯಾದ ಸಮಯಕ್ಕೆ ಶಾಟ್ ಕೊಡಿ ಎಂದೆಲ್ಲ ಒತ್ತಡ ಹೇರಿದಿದ್ದರೆ ಅವರಿಗೆ ಈ ಸಿನಿಮಾವನ್ನೇ ಮಾಡಲಾಗುತ್ತಿರಲಿಲ್ಲ. ಆದರೆ ಅದು ಸರಿಯಲ್ಲ, ಕಷ್ಟಪಟ್ಟು ಒಂದೊಳ್ಳೆ ಸಿನಿಮಾ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ನಾನು ಅವರಿಗೆ ಬೆಂಬಲಿಸಬೇಕು ಎನಿಸಿ, ಆ ತಂಡದಲ್ಲಿ ಒಬ್ಬವನಾಗಿ, ಸಮಯ ತೆಗೆದುಕೊಂಡರೆ ತೆಗೆದುಕೊಳ್ಳಲಿ ಎಂದು ಅವರಿಗೆ ತಕ್ಕಂತೆ ಕೆಲಸ ಮಾಡಿದೆ” ಎಂದು ವಿವರಿಸಿದ್ದಾರೆ ಉಪ್ಪಿ.

”ದೃಶ್ಯಗಳ ಚಿತ್ರೀಕರಣದ ಸಮಯದಲ್ಲಿ ಸಾಕಷ್ಟು ಅಡಚಣೆಗಳು ಆಗುತ್ತಿದ್ದವು, ಫೈಟ್​ಗಳ ಸಂದರ್ಭದಲ್ಲಿ, ಆ ದೂಳು, ಚಿತ್ರೀಕರಣಕ್ಕೆ ಬಳಸುತ್ತಿದ್ದ ಆ ಕಪ್ಪು ಪೌಡರ್ ಇವನ್ನೆಲ್ಲ ಸಹಿಸಿಕೊಂಡು ನಟಿಸಬೇಕಿತ್ತು. ಇವೆಲ್ಲ ಆರೋಗ್ಯದ ಮೇಲೆ ಪರಿಣಾಮ ಬೀರುವ ವಿಷಯಗಳು. ಒಮ್ಮೊಮ್ಮೆಯಂತೂ ಶೂಟಿಂಗ್ ಮುಗಿಸಿ ಮನೆಗೆ ಹೋಗಿ ಸೀನಿದರೆ ಕಪ್ಪನೆಯ ದ್ರವ ಹೊರಗೆ ಬರುತ್ತಿತ್ತು” ಎಂದು ಶೂಟಿಂಗ್ ಅನುಭವ ಬಿಚ್ಚಿಟ್ಟಿದ್ದಾರೆ ಉಪೇಂದ್ರ.

‘ಕಬ್ಜ’ ಸಿನಿಮಾವು ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯನಂತರದ ಕತೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ಅರಕೇಶ್ವರ ಎಂಬ ಪಾತ್ರದಲ್ಲಿ ಉಪೇಂದ್ರ ನಟಿಸಿದ್ದು ಮೇಕಿಂಗ್ ಅದ್ಭುತವಾಗಿ ಮೂಡಿ ಬಂದಿರುವುದು ಟೀಸರ್-ಟ್ರೈಲರ್​ನಲ್ಲಿ ಕಂಡು ಬರುತ್ತಿದೆ. ಸಿನಿಮಾದಲ್ಲಿ ಉಪೇಂದ್ರ ಎದುರು ನಾಯಕಿಯಾಗಿ ಶ್ರೀಯಾ ಶರಣ್ ನಟಿಸಿದ್ದಾರೆ. ನಟ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಮಾರ್ಚ್ 17 ರಂದು ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 8:13 pm, Fri, 10 March 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್