AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರಮಂದಿರದ ಬಳಿಕ ಯೂಟ್ಯೂಬ್​ನಲ್ಲೂ ಹಿಟ್​ ಆಯ್ತು ‘ನೈಂಟಿ ಬಿಡಿ ಮನೀಗ್ ನಡಿ’ ಸಿನಿಮಾ

‘ನೈಂಟಿ ಬಿಡಿ ಮನೀಗ್ ನಡಿ’ ಸಿನಿಮಾ ಕಳೆದ ವರ್ಷ ತೆರೆಕಂಡು ಚಿತ್ರಮಂದಿರದಲ್ಲಿ 50 ದಿನ ಪ್ರದರ್ಶನ ಕಂಡಿತ್ತು. ಈಗ ಇದೇ ಸಿನಿಮಾ ಮತ್ತೆ ಸದ್ದು ಮಾಡುತ್ತಿದೆ. ಹೌದು, ಯೂಟ್ಯೂಬ್ ಮೂಲಕ ವೀಕ್ಷಣೆಗೆ ಲಭ್ಯವಾಗಿದ್ದು, ವಿಶೇಷವಾಗಿ ಉತ್ತರ ಕರ್ನಾಟಕದ ಪ್ರೇಕ್ಷಕರನ್ನು ರಂಜಿಸುತ್ತಿದೆ. ಈ ಸಿನಿಮಾದಲ್ಲಿ ವೈಜನಾಥ ಬಿರಾದಾರ ಅವರು ಹೀರೋ ಆಗಿ ನಟಿಸಿದ್ದಾರೆ.

ಚಿತ್ರಮಂದಿರದ ಬಳಿಕ ಯೂಟ್ಯೂಬ್​ನಲ್ಲೂ ಹಿಟ್​ ಆಯ್ತು ‘ನೈಂಟಿ ಬಿಡಿ ಮನೀಗ್ ನಡಿ’ ಸಿನಿಮಾ
ವೈಜನಾಥ ಬಿರಾದಾರ
ಮದನ್​ ಕುಮಾರ್​
|

Updated on: May 12, 2024 | 10:11 PM

Share

2023ರ ಜೂನ್​ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ‘ನೈಂಟಿ ಬಿಡಿ ಮನೀಗ್ ನಡಿ’ (90 Bidi Manig Nadi) ಸಿನಿಮಾ ಈಗ ಮತ್ತೆ ಸದ್ದು ಮಾಡುತ್ತಿದೆ ಎಂಬುದು ವಿಶೇಷ. ಕಳೆದ ವರ್ಷ ಉತ್ತರ ಕರ್ನಾಟಕದಲ್ಲಿ ಈ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿತ್ತು. ಈಗ ಪನೋರಮಾ ಸಿನಿಟೈಮ್ಸ್​ ಯೂಟ್ಯೂಬ್ (YouTube) ಚಾನೆಲ್​ನಲ್ಲಿ ಇದು ವೀಕ್ಷಣೆಗೆ ಲಭ್ಯವಾಗಿದೆ. ಆ ಮೂಲಕ ಡಿಜಿಟಲ್​ನಲ್ಲೂ ಈ ಸಿನಿಮಾ ಟ್ರೆಂಡಿಂಗ್​ನಲ್ಲಿದೆ. ದಿನ ಕಳೆದಂತೆ ಇದಕ್ಕೆ ವೀವ್ಸ್​ ಹೆಚ್ಚುತ್ತಿದೆ. ಇದರ ಆರ್ಗ್ಯಾನಿಕ್ ವೀವ್ಸ್ ಈಗಾಗಲೇ ಒಂದು ಲಕ್ಷ ದಾಟಿದೆ ಎಂಬುದು ಗಮನಾರ್ಹ. ಈ ಸಿನಿಮಾದಲ್ಲಿ ಹಿರಿಯ ನಟ ವೈಜನಾಥ ಬಿರಾದಾರ (Vaijanath Biradar) ಅವರು ಪ್ರಮುಖ ಪಾತ್ರ ಮಾಡಿದ್ದಾರೆ.

ವೈಜನಾಥ ಬಿರಾದಾರ ಅವರು ತಮ್ಮ 70ರ ಪ್ರಾಯದಲ್ಲಿ ಕಮರ್ಷಿಯಲ್​ ಹೀರೋ ಆಗಿ ಕಾಣಿಸಿಕೊಂಡ ಸಿನಿಮಾ ‘ನೈಂಟಿ ಬಿಡಿ ಮನೀಗ್ ನಡಿ’. ‘ಅಮ್ಮಾ ಟಾಕೀಸ್ ಬಾಗಲಕೋಟ’ ಬ್ಯಾನರಿ ಮೂಲಕ ರತ್ನಮಾಲಾ ಬಾದರದಿನ್ನಿ ಅವರು ಇದನ್ನು ನಿರ್ಮಿಸಿದ್ದಾರೆ. ಈ ಸಿನಿಮಾದಲ್ಲಿನ ‘ಸಿಂಗಲ್ ಕಣ್ಣಾ ಹಾರಸ್ತಿ, ಡಬ್ಬಲ್ ಹಾರನ್ ಬಾರಸ್ತೀ..’ ಎಂಬ ಉತ್ತರ ಕರ್ನಾಟಕದ ಜವಾರಿ ಶೈಲಿಯ ಹಾಡು ಇದೆ. ಇದರಲ್ಲಿ ಹದಿಹರೆಯದವರೂ ನಾಚುವಂತೆ ಬಿರಾದಾರ ಅವರು ಭರ್ಜರಿ ಸ್ಟೆಪ್ ಹಾಕಿದ್ದಾರೆ. ಆ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಬಿರಾದಾರ ಅವರು ಈ ಸಿನಿಮಾದಲ್ಲಿ ನಗುತ್ತಾ, ನಗಿಸುತ್ತಾ, ಅಳುತ್ತಾ, ಅಳಿಸುತ್ತಾ ಸಂದೇಶ ಹೇಳಿದ್ದಾರೆ. ಅವರ ನಟನೆ ಕಂಡು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಅವರ ಉತ್ಸಾಹ ನೋಡಿ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್, ‘ಹ್ಯಾಟ್ರಿಕ್ ಹೀರೋ’ ಶಿವರಾಜ್ ಕುಮಾರ್, ಶರಣ್, ನವರಸ ನಾಯಕ ಜಗ್ಗೇಶ್ ಮುಂತಾದ ಹೀರೋಗಳು ಭೇಷ್​ ಎಂದಿದ್ದಾರೆ. ಬೆಂಗಳೂರಿನ ಗಾಂಧಿನಗರದಲ್ಲಿ ಇರುವ ‘ಅನುಪಮ’ ಚಿತ್ರಮಂದಿರದ ಎದುರು 40 ಅಡಿ ಎತ್ತರದ ಕಟೌಟ್ ಹಾಕಿಸುವ ಮೂಲಕ ವೈಜನಾಥ ಬಿರಾದಾರ ಅವರ ವೃತ್ತಿಜೀವನಕ್ಕೆ ಗೌರವ ಸಲ್ಲಿಸಿತ್ತು ಎಂಬುದು ವಿಶೇಷ.

ಇದನ್ನೂ ಓದಿ: ‘ಶೆಫ್​ ಚಿದಂಬರ’ ಸಿನಿಮಾದ ಮೊದಲ ಹಾಡಿಗಾಗಿ ಮೈಕ್​ ಹಿಡಿದ ಅನಿರುದ್ಧ್​

ಈ ಸಿನಿಮಾವನ್ನು ಉಮೇಶ್ ಬಾದರದಿನ್ನಿ ಹಾಗೂ ನಾಗರಾಜ್ ಅರೆಹೊಳೆ ಅವರು ಜಂಟಿಯಾಗಿ ನಿರ್ದೇಶಿಸಿದ್ದಾರೆ. ಕುಡಿತ, ಡ್ರಗ್ಸ್​, ಜೂಜು, ಧೂಮಪಾನಗಳ ಭಯಾನಕ ಲೋಕವನ್ನು ತೆರೆದಿಟ್ಟಿದೆ. ಮನರಂಜನೆ ನೀಡುವುದರ ಜೊತೆಗೆ ಜನರಿಗೆ ಬೇಕಾದ ಸಂದೇಶವನ್ನು ಕೊಟ್ಟಿದೆ. ಬಿರಾದಾರ ಅವರ ಜೊತೆಯಲ್ಲಿ ಕರಿಸುಬ್ಬು, ನೀತಾ ಮೈಂದರ್ಗಿ, ಧರ್ಮ, ಆರ್.ಡಿ. ಬಾಬು, ಪ್ರೀತು ಪೂಜಾ, ಪ್ರಶಾಂತ್ ಸಿದ್ಧಿ, ವಿವೇಕ್ ಜಂಬಗಿ, ಅಭಯ್ ವೀರ್, ಮುರಳಿ ಹೊಸಕೋಟೆ, ರಿಷಬ್ ಬಾದರದಿನ್ನಿ, ರಕ್ಷಿತ್ ಗೌಡ, ಲೋಕೇಶ್ ಮಾಲೂರು, ರವಿದೀಪ್ ದಳವಾಯಿ ಅವರು ನಟಿಸಿದ್ದಾರೆ.

‘ನೈಂಟಿ ಬಿಡಿ ಮನೀಗ್ ನಡಿ’ ಸಿನಿಮಾ:

ಕೃಷ್ಣ ನಾಯ್ಕರ್ ಅವರ ಛಾಯಾಗ್ರಹಣ, ಕಿರಣ್ ಶಂಕರ್ ಹಾಗೂ ಶಿವು ಭೇರಗಿ ಅವರ ಸಂಗೀತ ನಿರ್ದೇಶನ, ಭೂಷಣ್ ಅವರ ಕೊರಿಯೋಗ್ರಫಿ, ಯುಡಿವಿ ವೆಂಕಟೇಶ್ ಅವರ ಸಂಕಲನ ಈ ಸಿನಿಮಾಗೆ ಇದೆ. ರಾಕಿ ರಮೇಶ್ ಸಾಹಸ ನಿರ್ದೇಶನ ಮಾಡಿದ್ದಾರೆ. ವೀರ್ ಸಮರ್ಥ್ ಹಿನ್ನೆಲೆ ಸಂಗೀತ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್