AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಲಗಿದ್ದವನಿಗೆ ಕರೆ ಮಾಡಿ ಹಾಡು ಹೇಳಿಸ್ತಾರೆ’: ಸುದೀಪ್ ಬಗ್ಗೆ ವಿಜಯ್ ಪ್ರಕಾಶ್ ಮಾತು

Vijay Prakash Birthday: ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಲವು ಭಾಷೆಗಳಲ್ಲಿ ಹಲವು ಹಾಡುಗಳನ್ನು ಹಾಡಿದ್ದಾರೆ. ವಿಜಯ್ ಪ್ರಕಾಶ್ ಮತ್ತು ಸುದೀಪ್ ನಡುವೆ ಆಪ್ತ ಗೆಳೆತನ ಇದೆ. ಸುದೀಪ್ ಮಧ್ಯ ರಾತ್ರಿ ಕರೆ ಮಾಡಿ ವಿಜಯ್ ಪ್ರಕಾಶ್​ಗೆ ಹಾಡುಗಳನ್ನು ಕೇಳಿಸುತ್ತಿದ್ದರಂತೆ. ಈ ಬಗ್ಗೆ ವಿಜಯ್ ಪ್ರಕಾಶ್ ಹಿಂದೊಮ್ಮೆ ಮಾತನಾಡಿದ್ದರು.

‘ಮಲಗಿದ್ದವನಿಗೆ ಕರೆ ಮಾಡಿ ಹಾಡು ಹೇಳಿಸ್ತಾರೆ’: ಸುದೀಪ್ ಬಗ್ಗೆ ವಿಜಯ್ ಪ್ರಕಾಶ್ ಮಾತು
Sudeep Vijay Prakash
 ಶ್ರೀಲಕ್ಷ್ಮೀ ಎಚ್
| Edited By: |

Updated on: Feb 20, 2025 | 4:33 PM

Share

ವಿಜಯ್ ಪ್ರಕಾಶ್ ಹಾಗೂ ಸುದೀಪ್ ಮಧ್ಯೆ ಒಳ್ಳೆಯ ಗೆಳೆತನ ಇದೆ. ಇಬ್ಬರೂ ಅನೇಕ ಸಂದರ್ಭಗಳಲ್ಲಿ ಭೇಟಿ ಆಗುತ್ತಾರೆ. ಇಂದು (ಫೆಬ್ರವರಿ 21) ವಿಜಯ್ ಪ್ರಕಾಶ್ ಜನ್ಮದಿನ. ಈ ಸಂದರ್ಭದಲ್ಲಿ ವಿಜಯ್ ಪ್ರಕಾಶ್ ಕುರಿತು ಅಪರೂಪದ ಮಾಹಿತಿಗಳ ಬಗ್ಗೆ ನೋಡೋಣ. ವಿಜಯ್ ಪ್ರಕಾಶ್ ಅವರಿಗೆ ಮಧ್ಯರಾತ್ರಿ ಸುದೀಪ್ ಕರೆ ಮಾಡಿದ ಉದಾಹರಣೆ ಇದೆಯಂತೆ. ಏಕೆ ಎಂಬುದನ್ನು ವಿಜಯ್ ಪ್ರಕಾಶ್ ಅವರು ಈ ಮೊದಲು ಹೇಳಿಕೊಂಡಿದ್ದರು.

ವಿಜಯ್ ಪ್ರಕಾಶ್ ಅವರು ‘ಸರಿಗಮಪ’ ರಿಯಾಲಿಟಿ ಶೋನ ಜಡ್ಜ್ ಆಗಿದ್ದಾರೆ. ಈ ವರ್ಷದ ಆರಂಭದ ಮೊದಲ ಎಪಿಸೋಡ್​ಗೆ ಕಿಚ್ಚ ಸುದೀಪ್ ಅವರು ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ವಿಜಯ್ ಪ್ರಕಾಶ್ ಅವರು ಸುದೀಪ್ ಬಗ್ಗೆ ಅಪರೂಪದ ವಿಚಾರ ಹೇಳಿಕೊಂಡಿದ್ದರು. ಇದನ್ನು ಕೇಳಿ ಅನೇಕರು ಅಚ್ಚರಿ ಹೊರಹಾಕಿದ್ದರು.

‘ಮಧ್ಯರಾತ್ರಿ ಆಗಿರುತ್ತದೆ. ಆಗ ಸುದೀಪ್ ಅವರು ಕರೆ ಮಾಡಿ ನನಗೆ ಈ ಹಾಡಿನ ಎರಡು ಸಾಲುಗಳನ್ನು ಹೇಳುವಂತೆ ಕೇಳುತ್ತಾರೆ. ನಾನು ಬೇಸರ ಮಾಡಿಕೊಳ್ಳುವುದಿಲ್ಲ. ಎದ್ದು ಕುಳಿತು ನಾನು ರಾಗಬದ್ಧವಾಗಿ ಹಾಡನ್ನು ಹೇಳುತ್ತೇನೆ. ಅದನ್ನು ನಾನು ಜವಾಬ್ದಾರಿ ಎಂದು ಪರಿಗಣಿಸಿದ್ದೇನೆ’ ಎಂಬುದು ವಿಜಯ್ ಪ್ರಕಾಶ್ ಮಾತು.

ಸುದೀಪ್ ನಟನೆಯ ಸಿನಿಮಾಗಳಲ್ಲಿ ಯಾವುದಾದರೂ ಹಾಡು ಸೂಕ್ತ ಎಂದು ಅನಿಸಿದರೆ ಅದನ್ನು ವಿಜಯ್ ಪ್ರಕಾಶ್ ಬಳಿಯೇ ಹಾಡಿಸುತ್ತಾರಂತೆ ಸುದೀಪ್. ಈ ಮೊದಲು ರಿಲೀಸ್ ಆದ ‘ಮ್ಯಾಕ್ಸ್’ ಚಿತ್ರದ ಹಾಡನ್ನು ವಿಜಯ್ ಪ್ರಕಾಶ್ ಬಳಿ ಹಾಡಿಸಿದ್ದರು ಸುದೀಪ್. ಹೀಗಾಗಿ, ಈ ಗೆಳೆತನ ಈಗಲೂ ಮುಂದುವರಿದಿದೆ.

ಇದನ್ನೂ ಓದಿ:‘ಪಾರ್ಟಿ ಅನ್ನೋದು ವೈಯಕ್ತಿಕ’; ಕಿಚ್ಚ ಸುದೀಪ್ ಅವರ ಆಲೋಚೆನೆಯೇ ಬೇರೆ

ಸುದೀಪ್ ಅವರು ಸಾಕಷ್ಟು ಕಷ್ಟದಿಂದ ಚಿತ್ರರಂಗದಲ್ಲಿ ನೆಲೆಕಂಡುಕೊಂಡಿದ್ದಾರೆ. ಅವರು ಎಲ್ಲಿಯೂ ತಂದೆ-ತಾಯಿ ಹೆಸರು ಬಳಸಿಕೊಂಡಿಲ್ಲ. ಅದೇ ರೀತಿ ವಿಜಯ್ ಪ್ರಕಾಶ್ ಅವರು ಮುಂಬೈನಲ್ಲಿ ಇದ್ದು ಅಲ್ಲಿ ಜಿಂಗಲ್ಸ್ನ ಹಾಡಿ ಆ ಬಳಿಕ ಕನ್ನಡದ ಹಾಡುಗಳನ್ನು ಹಾಡಲು ಪ್ರಾರಂಭಿಸಿದರು. ಅವರ ಬೇಡಿಕೆ ದಿನ ಕಳೆದಂತೆ ಹೆಚ್ಚುತ್ತಿದೆ. ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲೂ ಅವರು ಹಲವು ಹಾಡುಗಳನ್ನು ಹಾಡಿದ್ದಾರೆ. ಈ ಮೂಲಕ ಅವರು ಗಮನ ಸೆಳೆದಿದ್ದಾರೆ. ಪರಭಾಷೆಯವರಿಗೂ ಅವರ ಧ್ವನಿ ಇಷ್ಟ ಆಗಿದೆ ಅನ್ನೋದು ವಿಶೇಷ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?