AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಂಬರೀಷ್ ಅನ್ನೋದೇ ಒಂದು ಭಾವನೆ’; ಪ್ರೀತಿಯ ಗೆಳೆಯನ ಬಗ್ಗೆ ವಿಷ್ಣು ಹೇಳಿದ್ದ ಮಾತಿದು

ಫ್ರೆಂಡ್​ಶಿಪ್​ಡೇ ಬಂದೇ ಬಿಟ್ಟಿದೆ. ಸ್ಯಾಂಡಲ್​ವುಡ್​ನಲ್ಲೂ ಅನೇಕ ಗೆಳೆತನ ಮಾದರಿ. 1972ರಲ್ಲಿ ‘ನಾಗರಹಾವು’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದಲ್ಲಿ ವಿಷ್ಣುವರ್ಧನ್ ಹಾಗೂ ಅಂಬರೀಷ್ ಇಬ್ಬರೂ ನಟಿಸಿದ್ದರು. ಅಲ್ಲಿಂದ ಇವರ ಗೆಳೆತನ ಆರಂಭ ಆಯಿತು. ಆ ಬಳಿಕ ಅನೇಕ ಸಿನಿಮಾಗಳಲ್ಲಿ ಇವರು ಒಟ್ಟಾಗಿ ನಟಿಸಿದರು.

‘ಅಂಬರೀಷ್ ಅನ್ನೋದೇ ಒಂದು ಭಾವನೆ’; ಪ್ರೀತಿಯ ಗೆಳೆಯನ ಬಗ್ಗೆ ವಿಷ್ಣು ಹೇಳಿದ್ದ ಮಾತಿದು
ವಿಷ್ಣು-ಅಂಬರೀಷ್
 ಶ್ರೀಲಕ್ಷ್ಮೀ ಎಚ್
| Updated By: Digi Tech Desk|

Updated on:Aug 02, 2024 | 3:10 PM

Share

ಫ್ರೆಂಡಿಶಪ್​ ಡೇಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಸ್ಯಾಂಡಲ್​ವುಡ್​ನಲ್ಲೂ ಸ್ಟಾರ್ ಹೀರೋಗಳ ಮಧ್ಯೆ ಒಳ್ಳೆಯ ಗೆಳೆತನ ಇತ್ತು. ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ ಅಂಬರೀಷ್ ಹಾಗೂ ವಿಷ್ಣುವರ್ಧನ್ ಆಗಿದ್ದರು. ಇಬ್ಬರೂ ಒಂದೇ ತಾಯಿಯ ಮಕ್ಕಳು ಎಂಬ ರೀತಿಯಲ್ಲಿ ಇದ್ದರು. ಈಗ ಇಬ್ಬರೂ ನಮ್ಮ ಜೊತೆಯಲ್ಲಿ ಇಲ್ಲ ಎಂಬುದು ನೋವಿನ ಸಂಗತಿ. ಆದರೆ, ಅವರ ಗೆಳೆತನ ಮಾತ್ರ ಎಲ್ಲರಿಗೂ ಮಾದರಿ. ಅಂಬರೀಷ್ ಗೆಳೆತನದ ಬಗ್ಗೆ ವಿಷ್ಣುವರ್ಧನ್ ಅವರು ಈ ಮೊದಲು ಮಾತನಾಡಿದ್ದರು. ಅಂದಿನ ಈಟಿವಿ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದರು.

1972ರಲ್ಲಿ ‘ನಾಗರಹಾವು’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದಲ್ಲಿ ವಿಷ್ಣುವರ್ಧನ್ ಹಾಗೂ ಅಂಬರೀಷ್ ಇಬ್ಬರೂ ನಟಿಸಿದ್ದರು. ಅಲ್ಲಿಂದ ಇವರ ಗೆಳೆತನ ಆರಂಭ ಆಯಿತು. ಆ ಬಳಿಕ ‘ಹಬ್ಬ’, ‘ಅವಳ ಹೆಜ್ಜೆ’, ‘ಒಂದೇ ರೂಪ ಎರಡು ಗುಣ’, ‘ನಾಗಕನ್ಯೆ’ ಸೇರಿ ಅನೇಕ ಸಿನಿಮಾಗಳಲ್ಲಿ ಇವರು ಒಟ್ಟಾಗಿ ನಟಿಸಿದರು. ಇವರ ಗೆಳೆತನ ನೋಡಿ ಅನೇಕರು ಹೊಟ್ಟೆ ಉರಿದುಕೊಂಡಿದ್ದೂ ಇದೆ. ಆದರೆ, ಯಾವ ಕೆಟ್ಟ ದೃಷ್ಟಿಯೂ ಇವರ ಗೆಳೆತನ ತಾಗಲಿಲ್ಲ. ಕೊನೆಯವರೆಗೂ ಇವರು ಗೆಳೆಯರಾಗಿಯೇ ಇದ್ದರು.

‘ಅಂಬರೀಷ್ ಬಗ್ಗೆ ಬರೀ ಮಾತಲ್ಲಿ ಹೇಳಿಕೆ ಸಾಧ್ಯವಿಲ್ಲ. ಅಂಬರೀಷ್ ಅನ್ನೋದು ಒಂದು ಭಾವನೆ. ಆ ಭಾವನೆಯನ್ನು ಹೇಳೋದಲ್ಲ, ಎಂಜಾಯ್ ಮಾಡೋಕೆ ಚೆನ್ನಾಗಿರುತ್ತದೆ. ನಾನು ಅವನು ಒಂದೇ ತಾಯಿಗೆ ಹುಟ್ಟಿಲ್ಲ ಅನ್ನೋದು ಬಿಟ್ಟರೆ, ಇಡೀ ಜೀವನದಲ್ಲಿ ಒಟ್ಟಿಗೆ ಇದ್ವಿ. ನಾನು ಯಾವಾಗಲೂ ಆತನನ್ನು ರಾಯಲ್ ಆ್ಯಂಡ್ ಲಾಯಲ್ ಫ್ರೆಂಡ್ ಎಂದು ಕರೆಯುತ್ತೇನೆ. ಒಬ್ಬರಿಗೊಬ್ಬರು ಸ್ಪಂದಿಸುತ್ತೇವೆ. ನಾವಿಬ್ಬರೂ ಪರಸ್ಪರ ಭೇಟಿ ಆಗುತ್ತೇವೆ. ಅಂಬರೀಷ್ ಎಂದರೆ ಹೆಮ್ಮೆ. ಅಂಥ ವ್ಯಕ್ತಿ ನಮ್ಮ ಜೊತೆ ಇರೋದು ಎಲ್ಲರಿಗೂ ಹೆಮ್ಮೆ. ನನಗೆ ಇನ್ನೂ ಹೆಮ್ಮೆ’ ಎಂದಿದ್ದರು ವಿಷ್ಣು ವರ್ಧನ್.

ಇದನ್ನೂ ಓದಿ: ವಿಷ್ಣುವರ್ಧನ್ ಧ್ವನಿಯಲ್ಲೇ ‘ಹಾವಿನ ದ್ವೇಷ..’ ಸಾಂಗ್ ಕೇಳಿದ್ದೀರಾ? ಇಲ್ಲಿದೆ ಹಳೆಯ ವಿಡಿಯೋ

ವಿಷ್ಣುವರ್ಧನ್ ಹಾಗೂ ಅಂಬರೀಷ್ ನಡುವೆ ಇರುವ ಗೆಳೆತನ ಚಿತ್ರರಂಗದಲ್ಲಿ ಈಗಲೂ ಅನೇಕರಿಗೆ ಮಾದರಿ. ಇವರು ಸಾಕಷ್ಟು ಬಾರಿ ಭೇಟಿ ಆಗಿ ಒಟ್ಟಾಗಿ ಸಮಯ ಕಳೆದಿದ್ದಾರೆ. 2009ರ ಡಿಸೆಂಬರ್ 30ರಂದು ವಿಷ್ಣುವರ್ಧನ್ ನಿಧನ ಹೊಂದಿದರು. ಆ ಸಮಯದಲ್ಲಿ ವಿಷ್ಣುವರ್ಧನ್ ಅವರು ತುಂಬಾನೇ ದುಃಖಕ್ಕೆ ಒಳಗಾಗಿದ್ದರು. ಅವರನ್ನು ಕಳೆದುಕೊಂಡ ನೋವು ಅವರನ್ನು ಅತಿಯಾಗಿ ಕಾಡಿತ್ತು. ವಿಷ್ಣು ಸಾವಿನ ಒಂಭತ್ತು ವರ್ಷಗಳ ಬಳಿಕ ಅಂಬರೀಷ್ ನಿಧನ ಹೊಂದಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:49 am, Fri, 2 August 24

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ