AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Salaga: ದುನಿಯಾ ವಿಜಯ್​ಗೆ ಹೊಸ ಲೈಫ್​ ಕೊಡುತ್ತಾ ‘ಸಲಗ’? ಒಂದು ಫಲಿತಾಂಶದ ಮೇಲೆ ನಿಂತಿದೆ ಭವಿಷ್ಯ

Duniya Vijay: ‘ಸಲಗ’ ಸೂಪರ್ ಹಿಟ್​ ಆದರೆ ದುನಿಯಾ ವಿಜಯ್​ ಅವರು ಗಾಂಧಿನಗರದಲ್ಲಿ ಬಹುಬೇಡಿಕೆಯ ನಿರ್ದೇಶಕನಾಗಿಯೂ ವೃತ್ತಿಜೀವನ ಭದ್ರ ಮಾಡಿಕೊಳ್ಳಲಿದ್ದಾರೆ. ಹಾಗಾಗಿ ಈ ಸಿನಿಮಾದ ಗೆಲುವು ವಿಜಯ್​ಗೆ​ ತುಂಬ ಮುಖ್ಯವಾಗಿದೆ.

Salaga: ದುನಿಯಾ ವಿಜಯ್​ಗೆ ಹೊಸ ಲೈಫ್​ ಕೊಡುತ್ತಾ ‘ಸಲಗ’? ಒಂದು ಫಲಿತಾಂಶದ ಮೇಲೆ ನಿಂತಿದೆ ಭವಿಷ್ಯ
‘ಸಲಗ’ ಚಿತ್ರದಲ್ಲಿ ದುನಿಯಾ ವಿಜಯ್
TV9 Web
| Edited By: |

Updated on:Oct 14, 2021 | 8:06 AM

Share

ನಟ ದುನಿಯಾ ವಿಜಯ್​ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಹಲವು ವರ್ಷಗಳಿಂದ ಸ್ಯಾಂಡಲ್​ವುಡ್​ನಲ್ಲಿ ಸಕ್ರಿಯವಾಗಿರುವ ಅವರಿಗೆ ದೊಡ್ಡ ಅಭಿಮಾನಿ ಬಳಗ ಕೂಡ ಇದೆ. ಈಗ ಅವರು ‘ಸಲಗ’ ಸಿನಿಮಾದ ಬಿಡುಗಡೆಯ ಸಂಭ್ರಮದಲ್ಲಿ ಇದ್ದಾರೆ. ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ರಿಲೀಸ್​ ಆಗುತ್ತಿದೆ. ದುನಿಯಾ ವಿಜಯ್​ ವೃತ್ತಿಜೀವನದಲ್ಲಿ ಈ ಸಿನಿಮಾ ಬಹಳ ಪ್ರಮುಖ ಎನಿಸಿಕೊಳ್ಳಲಿದೆ. ಅದಕ್ಕೆ ಕಾರಣಗಳು ಇಲ್ಲಿವೆ…

ನಿರ್ದೇಶಕನಾಗಿ ಸವಾಲು ಸ್ವೀಕರಿಸಿದ ವಿಜಯ್​:

ಇಷ್ಟು ದಿನ ನಟನಾಗಿದ್ದ ದುನಿಯಾ ವಿಜಯ್​ ಅವರು ಇದೇ ಮೊದಲ ಬಾರಿಗೆ ನಿರ್ದೇಶಕರಾಗಿದ್ದಾರೆ. ನಿರ್ದೇಶನ ಮಾಡುವುದು ನಿಜಕ್ಕೂ ದೊಡ್ಡ ಜವಾಬ್ದಾರಿ. ಇಷ್ಟು ವರ್ಷಗಳ ತಮ್ಮ ಅನುಭವವನ್ನು ಇಟ್ಟುಕೊಂಡು ಅವರು ಈಗ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಹಾಗಾಗಿ ಅವರ ಮೇಲೆ ನಿರೀಕ್ಷೆ ಹೆಚ್ಚಿದೆ. ನಟನಾಗಿ ಉತ್ತಮ ಅಂಕ ಗಳಿಸಿರುವ ಅವರು ನಿರ್ದೇಶನದಲ್ಲಿ ಪಾಸ್​ ಆಗುತ್ತಾರೋ ಇಲ್ಲವೋ ಎಂಬುದು ಈಗ ಅಭಿಮಾನಿಗಳು ನೀಡುವ ಫಲಿತಾಂಶದ ಮೇಲೆ ನಿಂತಿದೆ. ಹಾಗಾಗಿ ಈ ಸಿನಿಮಾ ದುನಿಯಾ ವಿಜಯ್​ ಕರಿಯರ್​ಗೆ ಬಹಳ ಮುಖ್ಯವಾಗಲಿದೆ.

ಒಳ್ಳೆಯ ನಿರ್ದೇಶಕರಿಗೆ ಡಿಮ್ಯಾಂಡ್​:

ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ನಿರ್ದೇಶಕರಿಗೆ ಬೇಡಿಕೆ ಇದೆ. ಅನೇಕ ನಟರು ತಾವೇ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅಂಥ ಯಶಸ್ವಿ ನಿರ್ದೇಶಕರ ಸಾಲಿಗೆ ವಿಜಯ್​ ಕೂಡ ಸೇರ್ಪಡೆ ಆಗುತ್ತಾರೋ ಇಲ್ಲವೋ ಎಂಬ ಕೌತುಕ ಮನೆ ಮನೆಮಾಡಿದೆ. ಒಂದು ವೇಳೆ ‘ಸಲಗ’ ಸೂಪರ್ ಹಿಟ್​ ಆದರೆ ದುನಿಯಾ ವಿಜಯ್​ ಅವರು ಗಾಂಧಿನಗರದಲ್ಲಿ ಬಹುಬೇಡಿಕೆಯ ನಿರ್ದೇಶಕನಾಗಿಯೂ ವೃತ್ತಿಜೀವನ ಭದ್ರ ಮಾಡಿಕೊಳ್ಳಲಿದ್ದಾರೆ. ಹಾಗಾಗಿ ಈ ಸಿನಿಮಾದ ಗೆಲುವು ವಿಜಯ್​ಗೆ​ ತುಂಬ ಮುಖ್ಯವಾಗಿದೆ.

ನಿರ್ಮಾಪಕರಿಂದ ವಿಜಯ್​ಗೆ ಸಿಕ್ಕಿದೆ ದೊಡ್ಡ ಬೆಂಬಲ:

‘ಸಲಗ’ ಸಿನಿಮಾ ದೊಡ್ಡಮಟ್ಟದಲ್ಲಿ ಹೈಪ್​ ಸೃಷ್ಟಿ ಮಾಡಿದೆ. ಈ ಮಟ್ಟಕ್ಕೆ ಕ್ರೇಜ್​ ಶುರುವಾಗಲು ಪ್ರಮುಖ ಕಾರಣವೇ ಪ್ರಚಾರ. ನಿರ್ಮಾಪಕ ಕೆಪಿ ಶ್ರೀಕಾಂತ್​ ಅವರು ಪ್ರಚಾರದ ವಿಚಾರದಲ್ಲಿ ಕಿಂಚಿತ್ತೂ ರಾಜಿ ಆಗಿಲ್ಲ. ಎಲ್ಲಿ ಸಾಧ್ಯವೋ ಆ ಎಲ್ಲಾ ಕಡೆಗಳಲ್ಲಿ ಈ ಸಿನಿಮಾವನ್ನು ಅವರು ಪ್ರಮೋಟ್​ ಮಾಡಿದ್ದಾರೆ. ಈಗಲೂ ಭರ್ಜರಿಯಾಗಿಯೇ ಪ್ರಚಾರ ಕಾರ್ಯ ನಡೆಯುತ್ತಿದೆ. ಇದರ ಬಲದಿಂದ ಜನರನ್ನು ಥಿಯೇಟರ್​ನತ್ತ ಕರೆಸುವಲ್ಲಿ ಕೆಪಿ ಶ್ರೀಕಾಂತ್​ ಯಶಸ್ವಿ ಆಗಿದ್ದಾರೆ. ಇನ್ನೇನಿದ್ದರೂ ದುನಿಯಾ ವಿಜಯ್​ ಕೆಲಸ ನೋಡಿದ ಮೇಲೆ ಚಿತ್ರದ ಭವಿಷ್ಯವನ್ನು ಪ್ರೇಕ್ಷಕರು ನಿರ್ಧರಿಸಲಿದ್ದಾರೆ.

ಚರಣ್​ ರಾಜ್​ ಈಗಾಗಲೇ ಗೆದ್ದಾಯ್ತು..

ಸಂಗೀತ ನಿರ್ದೇಶಕ ಚರಣ್​ ರಾಜ್​ ಅವರು ‘ಸಲಗ’ ಸಿನಿಮಾದ ದೊಡ್ಡ ಶಕ್ತಿ ಎಂದರೂ ತಪ್ಪಿಲ್ಲ. ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಎಲ್ಲ ಹಾಡುಗಳು ಈಗಾಗಲೇ ಧೂಳೆಬ್ಬಿಸಿವೆ. ‘ಸೂರಿಯಣ್ಣ..’, ‘ಟಿಣಿಂಗ್​ ಮಿಣಿಂಗ್​ ಟಿಶ್ಯಾ..’ ಗೀತೆಗಳಂತೂ ಸಿಕ್ಕಾಪಟ್ಟೆ ಜನಮೆಚ್ಚುಗೆ ಗಳಿಸಿವೆ. ಅವುಗಳನ್ನು ಮೆಚ್ಚಿಕೊಂಡ ಅನೇಕ ಪ್ರೇಕ್ಷಕರು ಚಿತ್ರಮಂದಿರಕ್ಕೆ ಕಾಲಿಡಲಿದ್ದಾರೆ. ಆ ನಿರೀಕ್ಷೆಗೆ ತಕ್ಕಂತೆ ದುನಿಯಾ ವಿಜಯ್​ ‘ಸಲಗ’ ಚಿತ್ರವನ್ನು ಕಟ್ಟಿಕೊಟ್ಟಿದ್ದಾರಾ? ಚಿತ್ರ ನೋಡಿದ ಪ್ರೇಕ್ಷಕರೇ ಈ ಪ್ರಶ್ನೆಗೆ ಉತ್ತರಿಸಲಿದ್ದಾರೆ. ಆ ಉತ್ತರದ ಮೇಲೆ ‘ನಿರ್ದೇಶಕ ದುನಿಯಾ ವಿಜಯ್​’ ಭವಿಷ್ಯ ಗೊತ್ತಾಗಲಿದೆ.

ಇದನ್ನೂ ಓದಿ:

‘ಶಿವಣ್ಣನಿಗೆ ನಾನು ಡೈರೆಕ್ಷನ್​ ಮಾಡ್ತೀನಿ’; ಸಲಗ ರಿಲೀಸ್​ಗೂ ಮೊದಲು ದುನಿಯಾ ವಿಜಯ್​ ಘೋಷಣೆ

‘ಚರಂಡಿ ಕ್ಲೀನ್​ ಮಾಡುವವನ ಪಾತ್ರ ಮಾಡ್ತೀನಿ’: ದುನಿಯಾ ವಿಜಯ್​ ನಿರ್ದೇಶನದಲ್ಲಿ ಶಿವಣ್ಣನಿಗೆ ನಟಿಸುವ ಆಸೆ

Published On - 8:06 am, Thu, 14 October 21

40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ