AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹೇಶ್​ ಬಾಬು ಮನೆಯಲ್ಲಿರುವ ಐಷಾರಾಮಿ ಹೋಮ್​ ಥಿಯೇಟರ್ ಹೇಗಿದೆ ಗೊತ್ತಾ?; ಇಲ್ಲಿದೆ ಫೋಟೋ

ಮಹೇಶ್​ ಬಾಬು ಹೈದರಾಬಾದ್​ನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಕುಟುಂಬದ ಜತೆ ಹಾಯಾಗಿ ಸಮಯ ಕಳೆಯೋಕೆ ಏನೆಲ್ಲ ವ್ಯವಸ್ಥೆ ಬೇಕೋ ಅದನ್ನು ಮನೆಯಲ್ಲೇ ಮಾಡಿಕೊಂಡಿದ್ದಾರೆ.

ಮಹೇಶ್​ ಬಾಬು ಮನೆಯಲ್ಲಿರುವ ಐಷಾರಾಮಿ ಹೋಮ್​ ಥಿಯೇಟರ್ ಹೇಗಿದೆ ಗೊತ್ತಾ?; ಇಲ್ಲಿದೆ ಫೋಟೋ
ಮಹೇಶ್​ ಬಾಬು ಮನೆಯಲ್ಲಿರುವ ಐಷಾರಾಮಿ ಹೋಮ್​ ಥೀಯೇಟರ್ ಹೇಗಿದೆ ಗೊತ್ತಾ?; ಇಲ್ಲಿದೆ ಫೋಟೋ
TV9 Web
| Edited By: |

Updated on: Aug 28, 2021 | 2:58 PM

Share

ದೊಡ್ಡದೊಡ್ಡ ಸೆಲೆಬ್ರಿಟಿಗಳು ತಾವು ಕಟ್ಟಿಸುವ ಮನೆಯ ಬಗ್ಗೆ ಸಾಕಷ್ಟು ಕನಸು ಕಂಡಿರುತ್ತಾರೆ. ಫಿಟ್​ನೆಸ್ ಕಾಯ್ದುಕೊಳ್ಳೋಕೆ ಜಿಮ್​, ರೆಕಾರ್ಡಿಂಗ್​ ಸ್ಟುಡಿಯೋ, ಸಿನಿಮಾ ವೀಕ್ಷಣೆಗೆ ಹೋಮ್​ ಥಿಯೇಟರ್​ ಅನ್ನು ಮನೆಯಲ್ಲೇ ಹೊಂದಿರುತ್ತಾರೆ. ಇದಕ್ಕೆ ಟಾಲಿವುಡ್​ ನಟ ಮಹೇಶ್​ ಬಾಬು ಕೂಡ ಹೊರತಾಗಿಲ್ಲ. ಅವರು ತಮ್ಮ ಮನೆಯಲ್ಲೇ ಐಷಾರಾಮಿ ಹೋಮ್​ ಥಿಯೇಟರ್​ ಹೊಂದಿದ್ದಾರೆ. ಈ ಫೋಟೋ ಈಗ ವೈರಲ್​ ಆಗಿದೆ.

ಮಹೇಶ್​ ಬಾಬು ಹೈದರಾಬಾದ್​ನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಕುಟುಂಬದ ಜತೆ ಹಾಯಾಗಿ ಸಮಯ ಕಳೆಯೋಕೆ ಏನೆಲ್ಲ ವ್ಯವಸ್ಥೆ ಬೇಕೋ ಅದನ್ನು ಮನೆಯಲ್ಲೇ ಮಾಡಿಕೊಂಡಿದ್ದಾರೆ. ಕುಟುಂಬದ ಜತೆ ಸಿನಿಮಾ ವೀಕ್ಷಿಸೋಕೆ ಮನೆಯಲ್ಲಿ ವಿಶೇಷ ಥಿಯೇಟರ್​ ವ್ಯವಸ್ಥೆ ಕೂಡ ಇದೆ. ಈ ಫೋಟೋವನ್ನು ನಟ ಸುಧೀರ್ ಬಾಬು ಹಂಚಿಕೊಂಡಿದ್ದಾರೆ.

ಸುಧೀರ್ ಬಾಬು ನಟನೆಯ ‘ಶ್ರೀದೇವಿ ಸೋಡಾ ಸೆಂಟರ್​’ ಸಿನಿಮಾ ತೆರೆಗೆ ಬಂದಿದೆ. ಈ ಸಿನಿಮಾವನ್ನು ಮಹೇಶ್​ ಬಾಬು ರಿಲೀಸ್​ಗೂ ಮೊದಲೇ ಹೋಮ್​ ಥಿಯೇಟರ್​ನಲ್ಲಿ ವೀಕ್ಷಣೆ ಮಾಡಿದ್ದಾರೆ. ಈ ಸಿನಿಮಾ ವಿಮರ್ಶೆ ಮಾಡಿರುವ ಅವರು ಅಭಿಮಾನಿಗಳ ಬಳಿ ಸಿನಿಮಾ ನೋಡುವಂತೆ ಮನವಿ ಮಾಡಿದ್ದಾರೆ. ಮಹೇಶ್​ ಬಾಬು ಸಿನಿಮಾ ವೀಕ್ಷಿಸುತ್ತಿರುವ ಫೋಟೋವನ್ನು ಸುಧೀರ್ ಬಾಬು ಹಂಚಿಕೊಂಡಿದ್ದಾರೆ.

‘ಮಹೇಶ್​ ಬಾಬು ಅವರು ನಮ್ಮ ಸಿನಿಮಾ ವೀಕ್ಷಣೆ ಮಾಡುತ್ತಿದ್ದಾರೆ’ ಎಂದು ಸುಧೀರ್​ ಬಾಬು ಬರೆದುಕೊಂಡಿದ್ದಾರೆ. ಇದರಲ್ಲಿ ಮಹೇಶ್​ ಅವರ ಮನೆಯ ಹೋಮ್​ ಥಿಯೇಟರ್​ ಎಲ್ಲರ ಗಮನ ಸೆಳೆಯುತ್ತಿದೆ. ‘ಶ್ರೀದೇವಿ ಸೋಡಾ ಸೆಂಟರ್ ವೀಕ್ಷಣೆ ಮಾಡಿದ ನಂತರದಲ್ಲಿ ಸಿನಿಮಾ ಬಗ್ಗೆ ಮಹೇಶ್​ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸುಧೀರ್ ಬಾಬು ಅದ್ಭುತವಾಗಿ ನಟಿಸಿದ್ದಾರೆ ಎಂದಿದ್ದಾರೆ ಮಹೇಶ್​.

‘ಶ್ರೀದೇವಿ ಸೋಡಾ ಸೆಂಟರ್’​ ಸಿನಿಮಾ ಆಗಸ್ಟ್ 27ರಂದು ರಿಲೀಸ್​ ಆಗಿದೆ. ಕೊವಿಡ್​ ಕಾರಣದಿಂದ ಕೆಲ ರಾಜ್ಯಗಳ ಚಿತ್ರಮಂದಿರದಲ್ಲಿ ಶೇ.50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ನೀಡಲಾಗಿದೆ. ಇದರ ಮಧ್ಯೆಯೂ ಸಿನಿಮಾ ರಿಲೀಸ್​ ಮಾಡುವ ಸಾಹಸ ಮಾಡಿದ್ದಾರೆ. ಅಕ್ಷಯ್​ ಕುಮಾರ್​ ನಟನೆಯ ಬೆಲ್​ ಬಾಟಮ್​ ಸಿನಿಮಾ ಇತ್ತೀಚೆಗೆ ತೆರೆಗೆ ಬಂದಿತ್ತು. ಕೊವಿಡ್​ ಕಾರಣದಿಂದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮೇಲೆ ಹೊಡೆತ ಬಿದ್ದಿತ್ತು.

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು