AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಗುವಿನ ಕಿಕ್ ಕೊಡುತ್ತಿದೆ ರಾಮನ ಸಂಕಷ್ಟ; ಸೀತಾ ಮುಗ್ಧತೆಗೆ ಕರಗಿದ ನಾಯಕ

ಸೂರಿ ಹಾಗೂ ಅಶೋಕ್ ಮಾಡುತ್ತಿರುವ ಕೀಟಲೆಯಿಂದ ರಾಮ್​ಗೆ ಫಜೀತಿ ಆಗುತ್ತಿದೆ. ಇದನ್ನು ನೋಡಿ ಸೂರಿ-ಅಶೋಕ್ ಮಜಾ ತೆಗೆದುಕೊಳ್ಳುತ್ತಿದ್ದಾರೆ.  

ನಗುವಿನ ಕಿಕ್ ಕೊಡುತ್ತಿದೆ ರಾಮನ ಸಂಕಷ್ಟ; ಸೀತಾ ಮುಗ್ಧತೆಗೆ ಕರಗಿದ ನಾಯಕ
ಸೀತಾ-ರಾಮ ಧಾರಾವಾಹಿ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Aug 03, 2023 | 8:51 AM

Share

ಮಗಳನ್ನು ಮಲಗಿಸಲು ಸೀತಾ (Seetha) ಕಥೆ ಹೇಳುವ ಮೂಲಕ ಸುಳ್ಳು ಹೇಳಬಾರದು ಎಂದು ಹೇಳಿಕೊಡುತ್ತಿದ್ದಾಳೆ. ಆದರೆ ತಾನು ಇವತ್ತು ಸುಳ್ಳು ಹೇಳಿರುವುದು ನೆನಪಾಗಿ ‘ನಾನು ನಿನ್ನ ಫ್ರೆಂಡ್​ಗಾಗಿ ಇವತ್ತು ಸುಳ್ಳು ಹೇಳಿಬಿಟ್ಟೆ. ಪಾಪ ಏನ್ ಕಷ್ಟನೋ ಏನೋ? ಒಂಟಿಯಾಗಿರುವವರ ನೋವು ಅವರಿಗೆ ಮಾತ್ರ ಗೊತ್ತು’ ಎಂದು ಮಗಳಿಗೆ ಹೇಳುವಷ್ಟರಲ್ಲಿ, ಅವಳು ನಿದ್ದೆಗೆ ಜಾರಿದ್ದಳು. ಇನ್ನು ಮನೆಯಲ್ಲಿ ಒಬ್ಬನೇ ಆಫೀಸ್ ಕೆಲಸ ಮಾಡುತ್ತಾ ಕುಳಿತಿರುವ ಮೊಮ್ಮಗನ ಬಳಿ, ತಾತ ಬಂದು ಸೀತಾ ಬಗ್ಗೆ ಮಾತನಾಡುತ್ತಿದ್ದಾನೆ. ಆದರೆ ರಾಮ್ ಅದಾವುದನ್ನು ತಲೆಗೆ ಹಾಕಿಕೊಳ್ಳದವನಂತೆ ಕೆಲಸ ಮಾಡಿದ್ದಾನೆ. ಇನ್ನು ಯಾವಾಗ ಅವನಿಗೆ ಮದುವೆ ಆಗುವ ಮನಸ್ಸು ಬರತ್ತೋ ಆ ಸಮಯಕ್ಕಾಗಿ ನಾವು ಕಾಯಬೇಕಾಗಿದೆ.

ಸೀತಾಳಿಗೆ ಯಾರಾದರೂ ಬಾಳ ಸಂಗಾತಿ ಸಿಕ್ಕಿದ್ದರೇ ಅವಳು ಚೆನ್ನಾಗಿ ಇರಬಹುದಿತ್ತು ಎಂಬ ಆಸೆ ಸಿಹಿಯ ತಾತ, ಅಜ್ಜಿಯದ್ದು. ಮದುವೆಯಾಗಲು ಲಾಯರ್ ತಯಾರಿದ್ದಾನೆ. ಒಂದು ನೆಪ ಹೇಳಿ ಸೀತಾಳನ್ನು ಭೇಟಿಯಾಗಲು ಆತ ಬಂದಿದ್ದಾನೆ. ಅವನ ಮಾತನ್ನು ತಿರಸ್ಕರಿಸಿ ಸೀತಾ ಮುಂದೆ ನಡೆದಿದ್ದಾಳೆ.

ಆಫೀಸ್​​ನಲ್ಲಿ ಬೋನಸ್ ವಿಷಯವಾಗಿ ನಡೆದಿದ್ದ ಮಾತುಕತೆ ಮುಕ್ತಾಯವಾಗಿ, ಎಲ್ಲರಿಗೂ ಬೋನಸ್ ಸಿಗುವಂತಾಗಿದೆ. ಆದರೆ ರಾಮ್ ಬಾಸ್ ಅನ್ನೋದು ಗೊತ್ತಿಲ್ಲದಿರುವ ಸೀತಾ, ತಮಗೆಲ್ಲಾ ಸಿಕ್ಕ ಬೋನಸ್ ಅವರಿಗೂ ಸಿಗಬೇಕೆಂಬ ಆಸೆಯಿಂದ, ಸೂರ್ಯ ಪ್ರಕಾಶ್ ಅವರಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದಾಳೆ. ಅವಳ ಬೇಡಿಕೆಗೆ ಬಾಸ್ ಕೂಡ ಅಸ್ತು ಎಂದಿದ್ದಾರೆ.

ಇದನ್ನೂ ಓದಿ: ಸೀತಾ ರಾಮ ಧಾರಾವಾಹಿಯ ಬಾಲನಟಿ ಸಿಹಿ ಕುರಿತ ಇಂಟರೆಸ್ಟಿಂಗ್​​ ಸಂಗತಿ ಇಲ್ಲಿದೆ

ಮನೆಯಲ್ಲಿ ರಾಮ್ ಚಿಕ್ಕಪ್ಪನಿಗೆ ಭಾರ್ಗವಿ ನನ್ನ ಹತ್ತಿರ ಮಾತನಾಡಲು ಭಯವಾ ಎಂಬ ಪ್ರಶ್ನೆ ಮುಂದಿಟ್ಟಿದ್ದು ಇದಕ್ಕೆ ಸತ್ಯನ ಉತ್ತರ ಕೇಳಿ, ಪ್ರೇಕ್ಷಕನಿಗೆ ಭಾರ್ಗವಿಯ ರಹಸ್ಯ ಖಜಾನೆಯ ಮೊದಲ ಕೀ ಸಿಕ್ಕಂತಾಗಿದೆ. ‘ನಿಜ ನನಗೆ ಗೊತ್ತಿದೆ. ಸತ್ಯ ಹೇಳಿದರೆ ತಂದೆ ನೊಂದುಕೊಳ್ಳುತ್ತಾರೆಂಬ ಭಯದಿಂದ, ರಾಮ್​ಗೆ ನೋವಾಗುತ್ತದೆ ಎಂಬ ಆತಂಕ ಇದೆ’ ಎಂಬುದು ಸತ್ಯನ ಮಾತು. ಆದರೆ ಅದನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ರಾಮ್ ಚಿಕ್ಕಮ್ಮ ಭಾರ್ಗವಿ, ತನ್ನ ಆಟಕ್ಕೆ ತಕ್ಕಂತೆ ಮನೆಯವರನ್ನೆಲ್ಲಾ ಕುಣಿಸುತ್ತಿದ್ದಾಳೆ. ಆಕೆ ಸತ್ಯನಿಗೆ ಅತ್ತೆ ಮಗಳು ಹೌದು, ಅಣ್ಣನ ಹೆಂಡತಿಯೂ ಹೌದು. ಹಾಗಾದರೆ ಭಾರ್ಗವಿ ಆಸ್ತಿಗೋಸಕ್ಕರ ರಾಮ್ ತಂದೆ ತಾಯಿಯನ್ನು ಕೊಂದಿದ್ದಾಳಾ? ಸತ್ಯನಿಗೆ ಈ ವಿಷಯ ಗೊತ್ತಿದೆಯಾ? ಕಾದು ನೋಡಬೇಕಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು