AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ನಲ್ಲಿ ಲಿಂಗ ತಾರತಮ್ಯ; ಸ್ಟಾರ್​ ನಟರಿಂದ ವಿದ್ಯಾ ಬಾಲನ್​ಗೆ ಈ ಒಂದು ಕಷ್ಟ ತಪ್ಪಿರಲಿಲ್ಲ

Vidya Balan: ಲಿಂಗ ತಾರತಮ್ಯ ಎಂಬುದು ಮೊದಲಿಗಿಂತಲೂ ಈಗ ಕಡಿಮೆ ಆಗಿದೆ. ಆದರೆ ಇಂದಿಗೂ ನಾನು ಆ ಸಮಸ್ಯೆ ಎದುರಿಸುತ್ತಿರುವುದು ನಿಜ. ನನ್ನ ಸುತ್ತಮುತ್ತ ಇರುವ ಅನೇಕರಿಗೆ ಹಾಗೆ ಆಗಿದೆ ಎಂದು ವಿದ್ಯಾ ಬಾಲನ್​ ಹೇಳಿದ್ದಾರೆ.

ಬಾಲಿವುಡ್​ನಲ್ಲಿ ಲಿಂಗ ತಾರತಮ್ಯ; ಸ್ಟಾರ್​ ನಟರಿಂದ ವಿದ್ಯಾ ಬಾಲನ್​ಗೆ ಈ ಒಂದು ಕಷ್ಟ ತಪ್ಪಿರಲಿಲ್ಲ
ವಿದ್ಯಾ ಬಾಲನ್​
ಮದನ್​ ಕುಮಾರ್​
|

Updated on: Jun 19, 2021 | 8:12 AM

Share

ಎಲ್ಲ ಕ್ಷೇತ್ರಗಳ ರೀತಿ ಬಾಲಿವುಡ್​ನಲ್ಲಿಯೂ ಲಿಂಗ ತಾರತಮ್ಯ ಇದೆ. ಸಂಭಾವನೆ ವಿಚಾರದಲ್ಲಿ ನಟ-ನಟಿಯರ ನಡುವೆ ದೊಡ್ಡ ಅಂತರ ಇದೆ ಎಂಬುದು ಗೊತ್ತಿರುವ ವಿಚಾರ. ಕೆಲವು ನಟಿಯರು ಹಿಟ್​ ಸಿನಿಮಾಗಳನ್ನು ನೀಡಿದ್ದರು ಕೂಡ ಅವರನ್ನು ಸ್ಟಾರ್​ ನಟರಿಗೆ ಸರಿಸಮನಾಗಿ ಪರಿಗಣಿಸುವುದಿಲ್ಲ ಈ ಚಿತ್ರರಂಗ. ಈ ವಿಚಾರದ ಬಗ್ಗೆ ನಟಿ ವಿದ್ಯಾ ಬಾಲನ್​ ಬೇಸರ ವ್ಯಕ್ತಪಡಿಸಿದ್ದಾರೆ.

ಕಹಾನಿ, ದಿ ಡರ್ಟಿ ಪಿಕ್ಚರ್​, ಶಕುಂತಲಾ ದೇವಿ ಮುಂತಾದ ಸಿನಿಮಾಗಳ ಮೂಲಕ ಗಮನ ಸೆಳೆದವರು ನಟಿ ವಿದ್ಯಾ ಬಾಲನ್​. ‘ಚಿತ್ರರಂಗದಲ್ಲಿ ನಾವು ಲಿಂಗ ತಾರತಮ್ಯ ಎದುರಿಸುತ್ತಿದ್ದೇವೆ. ಪುರುಷರಿಂದ ಮಾತ್ರವಲ್ಲ, ಮಹಿಳೆಯರಿಂದಲೂ ಇದು ನಡೆಯುತ್ತದೆ. ಇಂದಿಗೂ ನಾನು ಅದನ್ನು ಅನುಭವಿಸುತ್ತಿದ್ದೇನೆ. ಅದು ನನಗೆ ತುಂಬ ಕಿರಿಕಿರಿ ಉಂಟು ಮಾಡುತ್ತದೆ’ ಎಂದು ವಿದ್ಯಾ ಬಾಲನ್​ ಹೇಳಿದ್ದಾರೆ.

‘ಲಿಂಗ ತಾರತಮ್ಯ ಎಂಬುದು ಮೊದಲಿಗಿಂತಲೂ ಈಗ ಕಡಿಮೆ ಆಗಿದೆ. ಆದರೆ ಇಂದಿಗೂ ನಾನು ಆ ಸಮಸ್ಯೆ ಎದುರಿಸುತ್ತಿರುವುದು ನಿಜ. ನನ್ನ ಸುತ್ತಮುತ್ತ ಇರುವ ಅನೇಕರಿಗೆ ಹಾಗೆ ಆಗಿದೆ. ಆರಂಭದ ದಿನಗಳಲ್ಲಿ ನಟರ ಡೇಟ್ಸ್​ಗೆ​ ಅನುಗುಣವಾಗಿ ನನ್ನ ಡೇಟ್ಸ್​ ಹೊಂದಿಸಿಕೊಳ್ಳುವಂತೆ ನಿರ್ದೇಶಕರು ಹೇಳುತ್ತಿದ್ದರು. ಆ ನಟರಿಗಿಂತಲೂ ಹೆಚ್ಚು ಪ್ರಾಮುಖ್ಯತೆ ಇರುವ ಪಾತ್ರವನ್ನು ನಾನು ಮಾಡುತ್ತಿದ್ದರೂ ಕೂಡ ನಾನು ಅವರ ಡೇಟ್ಸ್​ಗೆ ಹೊಂದಿಕೊಳ್ಳಬೇಕಿತ್ತು’ ಎಂದು ವಿದ್ಯಾ ಬೇಸರ ಹೊರಹಾಕಿದ್ದಾರೆ.

2005ರಲ್ಲಿ ತೆರೆಕಂಡ ‘ಪರಿಣೀತಾ’ ಸಿನಿಮಾದಿಂದ ವಿದ್ಯಾ ಬಾಲನ್​ ಅವರು ಬಾಲಿವುಡ್​ಗೆ ಕಾಲಿಟ್ಟರು. ಆ ಚಿತ್ರದಲ್ಲಿ ಅವರು ಸೈಫ್​ ಅಲಿ ಖಾನ್​ ಮತ್ತು ಸಂಜಯ್​ ದತ್​ ಜೊತೆ ತೆರೆ ಹಂಚಿಕೊಂಡರು. ಅಂಥ ಸ್ಟಾರ್​ ನಟರ ನಡುವೆಯೂ ವಿದ್ಯಾ ಮಿಂಚಿದರು. ಮೊದಲ ಚಿತ್ರದಲ್ಲೇ ಅವರಿಗೆ ಫಿಲ್ಮ್​ ಫೇರ್ ಪ್ರಶಸ್ತಿ ಸಿಕ್ಕಿತು. ಬಳಿಕ ಅನೇಕ ಮಹಿಳಾಪ್ರಧಾನ ಸಿನಿಮಾ ಮಾಡಿ ಗುರುತಿಸಿಕೊಂಡರು. ಯಾವುದೇ ಸ್ಟಾರ್​ ನಟನ ಅನಿವಾರ್ಯತೆ ಇಲ್ಲದೆಯೋ ತಮ್ಮ ಸಿನಿಮಾವನ್ನು ಗೆಲ್ಲಿಸಬಲ್ಲ ನಟಿಯಾಗಿ ಅವರು ಬೆಳೆದುನಿಂತರು. ಅವರು ನಟಿಸಿರುವ ಹೊಸ ಸಿನಿಮಾ ‘ಶೇರ್ನಿ’ ಅಮೇಜಾನ್ ಪ್ರೈಂ ವಿಡಿಯೋದಲ್ಲಿ ಜೂ.18ರಂದು ಬಿಡುಗಡೆ ಆಗಿದೆ.

ಇದನ್ನೂ ಓದಿ:

‘ನೀನು ನನ್ನೊಂದಿಗೆ ರಾತ್ರಿ ಕಳೆಯುವುದಿಲ್ಲವೇ?’ ದಕ್ಷಿಣ ಭಾರತದ ನಿರ್ಮಾಪಕನ ನಿಜಮುಖ ಬಯಲು ಮಾಡಿದ ಬಾಲಿವುಡ್​ ನಟಿ

ಯಾಮಿ ಗೌತಮ್​ ಪೋಸ್ಟ್​ನಲ್ಲಿ ಕಂಗನಾ ಕಿರಿಕ್​; ಬಾಲಿವುಡ್​ ನಟನಿಗೆ ಚಪ್ಪಲಿ ತೋರಿಸುವ ಬಗ್ಗೆ ಮಾತನಾಡಿದ ನಟಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್