AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾವನೆಗಳ ಜತೆ ಆಡಬೇಡಿ; ಶುಭಾ ಮಾಡಿದ ಕಳ್ಳ ಕೆಲಸಕ್ಕೆ ಪುರುಷ ಸ್ಪರ್ಧಿಗಳು ಕಂಗಾಲು

ನೀವು ಸಿಗರೇಟ್​ ಜತೆ ಆಡ್ತಿಲ್ಲ. ನಮ್ಮ ಭಾವನೆಗಳ ಜತೆ ಆಟ ಆಡ್ತಾ ಇದೀರಾ. ಭಾವನೆಗಳ ಜತೆ ಆಟ ಆಡಬೇಡಿ ಎಂದು ನಗುತ್ತಲೇ ಶುಭಾ ಪೂಂಜಾಗೆ ರಘು ಎಚ್ಚರಿಕೆ ನೀಡಿದರು.

ಭಾವನೆಗಳ ಜತೆ ಆಡಬೇಡಿ; ಶುಭಾ ಮಾಡಿದ ಕಳ್ಳ ಕೆಲಸಕ್ಕೆ ಪುರುಷ ಸ್ಪರ್ಧಿಗಳು ಕಂಗಾಲು
ಶುಭಾ ಪೂಂಜಾ - ನಿಧಿ ಸುಬ್ಬಯ್ಯ
ರಾಜೇಶ್ ದುಗ್ಗುಮನೆ
| Edited By: |

Updated on: Apr 25, 2021 | 2:44 PM

Share

ಬಿಗ್​ ಬಾಸ್​ ಮನೆಯಲ್ಲಿ ಶುಭಾ ಪೂಂಜಾ ತುಂಬಾನೇ ಚೈಲ್ಡಿಶ್​ ಆಗಿ ನಡೆದುಕೊಳ್ಳುತ್ತಾರೆ. ಮನೆಯಲ್ಲಿ ಅವರು ಮಾಡುವ ಕೀಟಲೆಗಳು ಒಂದೆರಡಲ್ಲ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟವಾಗುತ್ತಾರೆ. ಈಗ ಶುಭಾ ಮಾಡಿದ ಕಳ್ಳ ಕೆಲಸಕ್ಕೆ ಬಿಗ್​ ಬಾಸ್​ ಮನೆಯ ಪುರುಷ ಸ್ಪರ್ಧಿಗಳು ಒಂದು ಕ್ಷಣ ಕಂಗಾಲಾಗಿದ್ದಾರೆ. ಎಲ್ಲರೂ ಒಬ್ಬರ ಮೆಲೆ ಮತ್ತೊಬ್ಬರು ಆರೋಪ ಮಾಡಿಕೊಳ್ಳುತ್ತಿದ್ದಾರೆ.

ಶನಿವಾರದ (ಎಪ್ರಿಲ್​ 24) ಎಪಿಸೋಡ್​ನಲ್ಲಿ  ಮುಂಜಾನೆ ಬಿಗ್​ ಬಾಸ್​ ಸಿಗರೇಟ್​ ಕಳುಹಿಸಿದ್ದರು. ಇದನ್ನು ಸ್ಟೋರ್​​ ರೂಂನಲ್ಲಿ ಇಡಲಾಗಿತ್ತು. ಅರವಿಂದ್ ಅವರ ಸಿಗರೇಟ್​ ಪ್ಯಾಕ್​ ಒಂದನ್ನು ಹೊರತುಪಡಿಸಿ ಉಳಿದೆಲ್ಲ ಸಿಗರೇಟ್​ ಪ್ಯಾಕ್​ಗಳನ್ನು ಶುಭಾ ಅಡಗಿಸಿಟ್ಟರು. ಅರವಿಂದ್​ ತಮ್ಮ ಪಾಲಿಗೆ ಬಂದ ಸಿಗರೇಟ್​ ಅನ್ನು ತೆಗೆದುಕೊಂಡು ಬಂದರು.

ರಘು ಗೌಡ, ಶಮಂತ್​ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್​, ಪ್ರಶಾಂತ್​ ಸಂಬರಗಿ ಸ್ಟೋರ್​​ ರೂಂಗೆ ಹೋಗಿ ನೋಡಿದರೆ ಅಲ್ಲಿ ಸಿಗರೇಟ್​ ಇರಲಿಲ್ಲ. ಇದನ್ನು ಕಂಡು ಎಲ್ಲರೂ ಕಂಗಾಲಾಗಿದ್ದಾರೆ. ಅಲ್ಲದೆ, ನಮ್ಮ ಸಿಗರೇಟ್​ ಎಲ್ಲೋಯ್ತು ಎಂದು ಪ್ರಶ್ನೆ ಮಾಡಿದ್ದಾರೆ.

ಅರವಿಂದ್​ ಒಬ್ಬರಿಗೆ ಮಾತ್ರ ಸಿಗರೇಟ್​ ಕಳುಹಿಸಿ ನಮಗೆ ಸಿಗರೇಟ್​ ಕಳುಹಿಸಿಲ್ಲ ಅಂದರೆ ಏನರ್ಥ? ನಮಗೆ ಕೊಟ್ಟಿದ್ದ ಸಿಗರೇಟ್​ ಪ್ಯಾಕ್​ಅನ್ನು ಬೇರೆಯಾರೋ ಕದ್ದಿದ್ದಾರೆ ಎನಿಸುತ್ತದೆ ಎಂದು ಮಂಜು ಎಲ್ಲರ ಮೇಲೂ ಅನುಮಾನಪಟ್ಟರು. ಬಿಗ್​ ಬಾಸ್​ ನಮಗೆ ಇನ್ನೂ ಸಿಗರೇಟ್​ ಕಳಿಸಿರದೇ ಇರಬಹುದು. ಕಾಯೋಣ ಎನ್ನುವ ಉತ್ತರ ಕೆಲವರಿಂದ ಬಂತು.

ಈ ವೇಳೆ ರಘು, ನೀವು ಸಿಗರೇಟ್​ ಜತೆ ಆಡ್ತಿಲ್ಲ. ನಮ್ಮ ಭಾವನೆಗಳ ಜತೆ ಆಟ ಆಡ್ತಾ ಇದೀರಾ. ಭಾವನೆಗಳ ಜತೆ ಆಟ ಆಡಬೇಡಿ ಎಂದು ನಗುತ್ತಲೇ ಎಚ್ಚರಿಕೆ ನೀಡಿದರು. ಕೆಲ ಹೊತ್ತು ಒಬ್ಬರ ಮೇಲೆ ಒಬ್ಬರು ಆರೋಪ ಮಾಡಿಕೊಳ್ಳುವುದು ನಡೆದೇ ಇತ್ತು. ಕೊನೆಗೆ ಶುಭಾ ಪೂಂಜಾ ಅಡಗಿಸಿಟ್ಟ ಸಿಗರೇಟ್​ಗಳನ್ನು ನೀಡಿದರು. ಈ ವೇಳೆ ಪ್ರಶಾಂತ್​, ಇದೇ ಕೆಲಸ ನಾನು ಮಾಡಿದ್ದರೆ ಇಷ್ಟು ಹೊತ್ತಿಗೆ ಮುಗಿದೇ ಹೋಗಿರುತ್ತಿತ್ತು ಎಂದು ನಕ್ಕರು.

ಇದನ್ನೂ ಓದಿ:  Shubha Poonja: ಶುಭಾ ಪೂಂಜಾ ಇಲ್ಲದಿರುವ ಜೀವನ ನನಗೂ ಬೇಡ; ರಘು ಗೌಡ ಹೀಗ್ಯಾಕಾದ್ರು?

Bigg Boss Kannada Elimination: ಎಂಟನೇ ವಾರ ಈ ಸ್ಪರ್ಧಿಯ ಬಿಗ್​ ಬಾಸ್​ ಪಯಣ ಅಂತ್ಯ?

Follow Us
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ