AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾವನೆಗಳ ಜತೆ ಆಡಬೇಡಿ; ಶುಭಾ ಮಾಡಿದ ಕಳ್ಳ ಕೆಲಸಕ್ಕೆ ಪುರುಷ ಸ್ಪರ್ಧಿಗಳು ಕಂಗಾಲು

ನೀವು ಸಿಗರೇಟ್​ ಜತೆ ಆಡ್ತಿಲ್ಲ. ನಮ್ಮ ಭಾವನೆಗಳ ಜತೆ ಆಟ ಆಡ್ತಾ ಇದೀರಾ. ಭಾವನೆಗಳ ಜತೆ ಆಟ ಆಡಬೇಡಿ ಎಂದು ನಗುತ್ತಲೇ ಶುಭಾ ಪೂಂಜಾಗೆ ರಘು ಎಚ್ಚರಿಕೆ ನೀಡಿದರು.

ಭಾವನೆಗಳ ಜತೆ ಆಡಬೇಡಿ; ಶುಭಾ ಮಾಡಿದ ಕಳ್ಳ ಕೆಲಸಕ್ಕೆ ಪುರುಷ ಸ್ಪರ್ಧಿಗಳು ಕಂಗಾಲು
ಶುಭಾ ಪೂಂಜಾ - ನಿಧಿ ಸುಬ್ಬಯ್ಯ
ರಾಜೇಶ್ ದುಗ್ಗುಮನೆ
| Edited By: |

Updated on: Apr 25, 2021 | 2:44 PM

Share

ಬಿಗ್​ ಬಾಸ್​ ಮನೆಯಲ್ಲಿ ಶುಭಾ ಪೂಂಜಾ ತುಂಬಾನೇ ಚೈಲ್ಡಿಶ್​ ಆಗಿ ನಡೆದುಕೊಳ್ಳುತ್ತಾರೆ. ಮನೆಯಲ್ಲಿ ಅವರು ಮಾಡುವ ಕೀಟಲೆಗಳು ಒಂದೆರಡಲ್ಲ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟವಾಗುತ್ತಾರೆ. ಈಗ ಶುಭಾ ಮಾಡಿದ ಕಳ್ಳ ಕೆಲಸಕ್ಕೆ ಬಿಗ್​ ಬಾಸ್​ ಮನೆಯ ಪುರುಷ ಸ್ಪರ್ಧಿಗಳು ಒಂದು ಕ್ಷಣ ಕಂಗಾಲಾಗಿದ್ದಾರೆ. ಎಲ್ಲರೂ ಒಬ್ಬರ ಮೆಲೆ ಮತ್ತೊಬ್ಬರು ಆರೋಪ ಮಾಡಿಕೊಳ್ಳುತ್ತಿದ್ದಾರೆ.

ಶನಿವಾರದ (ಎಪ್ರಿಲ್​ 24) ಎಪಿಸೋಡ್​ನಲ್ಲಿ  ಮುಂಜಾನೆ ಬಿಗ್​ ಬಾಸ್​ ಸಿಗರೇಟ್​ ಕಳುಹಿಸಿದ್ದರು. ಇದನ್ನು ಸ್ಟೋರ್​​ ರೂಂನಲ್ಲಿ ಇಡಲಾಗಿತ್ತು. ಅರವಿಂದ್ ಅವರ ಸಿಗರೇಟ್​ ಪ್ಯಾಕ್​ ಒಂದನ್ನು ಹೊರತುಪಡಿಸಿ ಉಳಿದೆಲ್ಲ ಸಿಗರೇಟ್​ ಪ್ಯಾಕ್​ಗಳನ್ನು ಶುಭಾ ಅಡಗಿಸಿಟ್ಟರು. ಅರವಿಂದ್​ ತಮ್ಮ ಪಾಲಿಗೆ ಬಂದ ಸಿಗರೇಟ್​ ಅನ್ನು ತೆಗೆದುಕೊಂಡು ಬಂದರು.

ರಘು ಗೌಡ, ಶಮಂತ್​ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್​, ಪ್ರಶಾಂತ್​ ಸಂಬರಗಿ ಸ್ಟೋರ್​​ ರೂಂಗೆ ಹೋಗಿ ನೋಡಿದರೆ ಅಲ್ಲಿ ಸಿಗರೇಟ್​ ಇರಲಿಲ್ಲ. ಇದನ್ನು ಕಂಡು ಎಲ್ಲರೂ ಕಂಗಾಲಾಗಿದ್ದಾರೆ. ಅಲ್ಲದೆ, ನಮ್ಮ ಸಿಗರೇಟ್​ ಎಲ್ಲೋಯ್ತು ಎಂದು ಪ್ರಶ್ನೆ ಮಾಡಿದ್ದಾರೆ.

ಅರವಿಂದ್​ ಒಬ್ಬರಿಗೆ ಮಾತ್ರ ಸಿಗರೇಟ್​ ಕಳುಹಿಸಿ ನಮಗೆ ಸಿಗರೇಟ್​ ಕಳುಹಿಸಿಲ್ಲ ಅಂದರೆ ಏನರ್ಥ? ನಮಗೆ ಕೊಟ್ಟಿದ್ದ ಸಿಗರೇಟ್​ ಪ್ಯಾಕ್​ಅನ್ನು ಬೇರೆಯಾರೋ ಕದ್ದಿದ್ದಾರೆ ಎನಿಸುತ್ತದೆ ಎಂದು ಮಂಜು ಎಲ್ಲರ ಮೇಲೂ ಅನುಮಾನಪಟ್ಟರು. ಬಿಗ್​ ಬಾಸ್​ ನಮಗೆ ಇನ್ನೂ ಸಿಗರೇಟ್​ ಕಳಿಸಿರದೇ ಇರಬಹುದು. ಕಾಯೋಣ ಎನ್ನುವ ಉತ್ತರ ಕೆಲವರಿಂದ ಬಂತು.

ಈ ವೇಳೆ ರಘು, ನೀವು ಸಿಗರೇಟ್​ ಜತೆ ಆಡ್ತಿಲ್ಲ. ನಮ್ಮ ಭಾವನೆಗಳ ಜತೆ ಆಟ ಆಡ್ತಾ ಇದೀರಾ. ಭಾವನೆಗಳ ಜತೆ ಆಟ ಆಡಬೇಡಿ ಎಂದು ನಗುತ್ತಲೇ ಎಚ್ಚರಿಕೆ ನೀಡಿದರು. ಕೆಲ ಹೊತ್ತು ಒಬ್ಬರ ಮೇಲೆ ಒಬ್ಬರು ಆರೋಪ ಮಾಡಿಕೊಳ್ಳುವುದು ನಡೆದೇ ಇತ್ತು. ಕೊನೆಗೆ ಶುಭಾ ಪೂಂಜಾ ಅಡಗಿಸಿಟ್ಟ ಸಿಗರೇಟ್​ಗಳನ್ನು ನೀಡಿದರು. ಈ ವೇಳೆ ಪ್ರಶಾಂತ್​, ಇದೇ ಕೆಲಸ ನಾನು ಮಾಡಿದ್ದರೆ ಇಷ್ಟು ಹೊತ್ತಿಗೆ ಮುಗಿದೇ ಹೋಗಿರುತ್ತಿತ್ತು ಎಂದು ನಕ್ಕರು.

ಇದನ್ನೂ ಓದಿ:  Shubha Poonja: ಶುಭಾ ಪೂಂಜಾ ಇಲ್ಲದಿರುವ ಜೀವನ ನನಗೂ ಬೇಡ; ರಘು ಗೌಡ ಹೀಗ್ಯಾಕಾದ್ರು?

Bigg Boss Kannada Elimination: ಎಂಟನೇ ವಾರ ಈ ಸ್ಪರ್ಧಿಯ ಬಿಗ್​ ಬಾಸ್​ ಪಯಣ ಅಂತ್ಯ?

ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?