Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರ್ಫಾರ್ಮೆನ್ಸ್ ವೇಳೆ ಅಭಿಮಾನಿಯ ಮೊಬೈಲ್​ನ ಕಸಿದು ಎಸೆದ ಆದಿತ್ಯ ನಾರಾಯಣ್; ಗಾಯಕನಿಗೆ ಛೀಮಾರಿ

ಗಾಯಕ ಆದಿತ್ಯ ನಾರಾಯಣ್ ಚತ್ತೀಸಗಢದ ಕಾಲೇಜೊಂದರಲ್ಲಿ ಪ್ರೋಗ್ರಾಂ ಆಯೋಜನೆ ಮಾಡಿದ್ದರು. ಈ ವೇಳೆ ಸಂಗೀತ ಪ್ರೇಮಿಗಳು ನೆರೆದಿದ್ದರು. ಆದಿತ್ಯ ಅವರ ಧ್ವನಿಯಲ್ಲಿ ಸಾಂಗ್ ಕೇಳುತ್ತಾ ಫ್ಯಾನ್ಸ್ ಖುಷಿಯ ಅಲೆಯಲ್ಲಿ ತೇಲುತ್ತಿದ್ದರು. ಈ ವೇಳೆ ಓರ್ವ ಅಭಿಮಾನಿ ಆದಿತ್ಯ ಪರ್ಫಾರ್ಮೆನ್ಸ್​ನ ಮೊಬೈಲ್​​ನಲ್ಲಿ ಶೂಟ್ ಮಾಡುತ್ತಿದ್ದ. ಇದು ಆದಿತ್ಯ ಕೋಪಕ್ಕೆ ಕಾರಣ ಆಗಿದೆ.

ಪರ್ಫಾರ್ಮೆನ್ಸ್ ವೇಳೆ ಅಭಿಮಾನಿಯ ಮೊಬೈಲ್​ನ ಕಸಿದು ಎಸೆದ ಆದಿತ್ಯ ನಾರಾಯಣ್; ಗಾಯಕನಿಗೆ ಛೀಮಾರಿ
ಆದಿತ್ಯ ನಾರಾಯಣ್
Follow us
ರಾಜೇಶ್ ದುಗ್ಗುಮನೆ
|

Updated on: Feb 12, 2024 | 11:15 AM

ಗಾಯಕ ಆದಿತ್ಯ ನಾರಯಣ್ (Aditya Narayan) ಅವರು ಸದ್ಯ ಸುದ್ದಿಯಲ್ಲಿದ್ದಾರೆ. ಹಾಗಂತ ಅವರ ಹಾಡು ಸೆನ್ಸೇಷನ್ ಸೃಷ್ಟಿ ಮಾಡಿಲ್ಲ. ಸಂಗೀತ ಕಾರ್ಯಕ್ರಮದ ವೇಳೆ ಆದಿತ್ಯ ಅವರು ಅಭಿಮಾನಿಯ ಫೋನ್​ನ ಕಸಿದು ಎಸೆದಿದ್ದಾರೆ. ಅವರು ಈ ರೀತಿ ವರ್ತನೆ ತೋರಿಸಿರುವುದಕ್ಕೆ ಅನೇಕರು ಆದಿತ್ಯ ಅವರಿಗೆ ಛೀಮಾರಿ ಹಾಕುತ್ತಿದ್ದಾರೆ. ಈ ರೀತಿ ಅವರು ನಡೆದುಕೊಳ್ಳಬಾರದಿತ್ತು ಎಂದು ಅನೇಕರು ಹೇಳಿದ್ದಾರೆ. ಸದ್ಯ ಈ ವಿಡಿಯೋ ಸೆನ್ಸೇಷನ್ ಸೃಷ್ಟಿ ಮಾಡಿದೆ.

ಖ್ಯಾತ ಗಾಯಕರು ಸ್ಟೇಜ್ ಪರ್ಫಾರ್ಮೆನ್ಸ್ ನೀಡುತ್ತಾರೆ. ಇದಕ್ಕಾಗಿ ಅವರು ಸಾಕಷ್ಟು ಹಣ ಪಡೆಯುತ್ತಾರೆ. ಚತ್ತೀಸಗಢದ ಕಾಲೇಜೊಂದರಲ್ಲಿ ಆದಿತ್ಯ ನಾರಾಯಣ್ ಅವರು ಪ್ರೋಗ್ರಾಂ ಆಯೋಜನೆ ಮಾಡಿದ್ದರು. ಈ ವೇಳೆ ಸಂಗೀತ ಪ್ರೇಮಿಗಳು ನೆರೆದಿದ್ದರು. ಆದಿತ್ಯ ಅವರ ಧ್ವನಿಯಲ್ಲಿ ಸಾಂಗ್ ಕೇಳುತ್ತಾ ಫ್ಯಾನ್ಸ್ ಖುಷಿಯ ಅಲೆಯಲ್ಲಿ ತೇಲುತ್ತಿದ್ದರು. ಈ ವೇಳೆ ಓರ್ವ ಅಭಿಮಾನಿ ಆದಿತ್ಯ ಅವರ ಪರ್ಫಾರ್ಮೆನ್ಸ್​ನ ಮೊಬೈಲ್​​ನಲ್ಲಿ ಶೂಟ್ ಮಾಡುತ್ತಿದ್ದ. ಇದು ಆದಿತ್ಯ ಕೋಪಕ್ಕೆ ಕಾರಣ ಆಗಿದೆ.

ಶಾರುಖ್ ಖಾನ್ ನಟನೆಯ ‘ಡಾನ್’ ಚಿತ್ರದ ‘ಆಜ್ ಕಿ ರಾತ್..’ ಹಾಡನ್ನು ಆದಿತ್ಯ ಹಾಡುತ್ತಿದ್ದರು. ಏಕಾಏಕಿ ಸಿಟ್ಟಾದ ಅವರು ಅಭಿಮಾನಿಯ ಮೊಬೈಲ್​ನ ಕಸಿದು ಜನರತ್ತ ಎಸೆದಿದ್ದಾರೆ. ಅವರ ವರ್ತನೆ ಅನೇಕರಿಗೆ ಸಿಟ್ಟು ಥರಿಸಿದೆ. ಅವರು ಈ ರೀತಿ ಮಾಡಬಾರದಿತ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಹೇಳಿದ್ದಾರೆ.

‘ಆದಿತ್ಯ ಅವರೇ ಅಷ್ಟೊಂದು ಸಿಟ್ಟು ಏಕೆ? ಈ ರೀತಿ ಅಗೌರಯುತವಾಗಿ ನಡೆದುಕೊಳ್ಳೋದು ಎಷ್ಟು ಸರಿ? ಅವರು ನಿಮ್ಮ ಅಭಿಮಾನಿ. ಅವರಿಗೆ ಗೌರವ ನೀಡಿ’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಅಭಿಮಾನಿಗಳು ಬರದೇ ಇದ್ದರೆ ನೀವು ವೇದಿಕೆ ಕಾರ್ಯಕ್ರಮ ಹೇಗೆ ನೀಡುತ್ತೀರಿ? ನಿಮ್ಮಿಂದಲೇ ನಾವು’ ಎಂದು ಕೆಲವರು ಹೇಳಿದ್ದಾರೆ.

ಇದನ್ನೂ ಓದಿ: ಸಂಗೀತಾ ಶೃಂಗೇರಿ ಮೇಲಿರೋ ಅಭಿಮಾನ ಎಂಥದ್ದು? ಅದಕ್ಕೆ ಈ ವಿಡಿಯೋನೆ ಸಾಕ್ಷಿ 

ಅಸಲಿಗೆ ಆದಿತ್ಯ ನಾರಾಯಣ್ ಅವರಿಗೆ ಸಿಟ್ಟು ತರಿಸಿದ ವಿಚಾರ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಆದಿತ್ಯ ಅವರು ಈ ರೀತಿ ವಿವಾದ ಮಾಡಿಕೊಳ್ಳುತ್ತಿರುವುದು ಇದೇ ಮೊದಲೇನು ಅಲ್ಲ. 2017ರಲ್ಲಿ ರಾಯಪುರ ವಿಮಾನ ನಿಲ್ದಾಣದಲ್ಲಿ ಅವರು ಸ್ಟಾಪ್​ಗಳ ಜೊತೆ ಫೈಟ್​ಗೆ ಇಳಿದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರನ್ಯಾಗೆ ಯಾಕೆ ಪ್ರೊಟೋಕಾಲ್ ವಿಸ್ತರಿಸಲಾಗುತ್ತಿದೆ: ಸುನೀಲ ಕುಮಾರ
ರನ್ಯಾಗೆ ಯಾಕೆ ಪ್ರೊಟೋಕಾಲ್ ವಿಸ್ತರಿಸಲಾಗುತ್ತಿದೆ: ಸುನೀಲ ಕುಮಾರ
ಬ್ಯಾರಿ ಸಮುದಾಯದ ಬಗ್ಗೆ ಸ್ಪೀಕರ್ ಕೇಳಿದ ಪ್ರಶ್ನೆಗೆ ನಿರುತ್ತರನಾದ ಜಮೀರ್
ಬ್ಯಾರಿ ಸಮುದಾಯದ ಬಗ್ಗೆ ಸ್ಪೀಕರ್ ಕೇಳಿದ ಪ್ರಶ್ನೆಗೆ ನಿರುತ್ತರನಾದ ಜಮೀರ್
VIDEO: ಚಾಂಪಿಯನ್ಸ್ ಟ್ರೋಫಿಯನ್ನೇ ಮರೆತು ತೆರಳಿದ ರೋಹಿತ್ ಶರ್ಮಾ
VIDEO: ಚಾಂಪಿಯನ್ಸ್ ಟ್ರೋಫಿಯನ್ನೇ ಮರೆತು ತೆರಳಿದ ರೋಹಿತ್ ಶರ್ಮಾ
ವಿಧಾನಮಂಡಲದ ಕಲಾಪದಲ್ಲಿ ನಾಯಕರು ಬಳಸುವ ಭಾಷೆ ಶಾಲಾಮಕ್ಕಳಿಗೆ ಮಾದರಿಯಾಗಬೇಕು!
ವಿಧಾನಮಂಡಲದ ಕಲಾಪದಲ್ಲಿ ನಾಯಕರು ಬಳಸುವ ಭಾಷೆ ಶಾಲಾಮಕ್ಕಳಿಗೆ ಮಾದರಿಯಾಗಬೇಕು!
ಟೀಮ್ ಇಂಡಿಯಾ ಗೆಲುವಿಗೆ ಕುಣಿದು ಕುಪ್ಪಳಿಸಿದ ಸುನಿಲ್ ಗವಾಸ್ಕರ್
ಟೀಮ್ ಇಂಡಿಯಾ ಗೆಲುವಿಗೆ ಕುಣಿದು ಕುಪ್ಪಳಿಸಿದ ಸುನಿಲ್ ಗವಾಸ್ಕರ್
ತಮ್ಮಟೆ ಬಾರಿಸುತ್ತ ಕುಣಿದು ಕುಪ್ಪಳಿಸಿದ ಹುಬ್ಬಳ್ಳಿ ಜನ
ತಮ್ಮಟೆ ಬಾರಿಸುತ್ತ ಕುಣಿದು ಕುಪ್ಪಳಿಸಿದ ಹುಬ್ಬಳ್ಳಿ ಜನ
‘ರಶ್ಮಿಕಾಗೆ ಭದ್ರತೆ ನೀಡಿ’; ಕೇಂದ್ರಕ್ಕೆ ಮನವಿ ಮಾಡಿದ ಕೊಡವ ಸಮುದಾಯ
‘ರಶ್ಮಿಕಾಗೆ ಭದ್ರತೆ ನೀಡಿ’; ಕೇಂದ್ರಕ್ಕೆ ಮನವಿ ಮಾಡಿದ ಕೊಡವ ಸಮುದಾಯ
VIDEO: ಗೆದ್ದ ಖುಷಿಯಲ್ಲಿ ಹಾರ್ದಿಕ್ ಪಾಂಡ್ಯ ಅಪ್ಪಿಕೋ ಬಿಗಿದಪ್ಪಿಕೋ ಸಂಭ್ರಮ
VIDEO: ಗೆದ್ದ ಖುಷಿಯಲ್ಲಿ ಹಾರ್ದಿಕ್ ಪಾಂಡ್ಯ ಅಪ್ಪಿಕೋ ಬಿಗಿದಪ್ಪಿಕೋ ಸಂಭ್ರಮ
ಬೆಳ್ಳಂಬೆಳಗ್ಗೆ ಉಪ ಲೋಕಾಯುಕ್ತರ ನೇತೃತ್ವದಲ್ಲಿ ಎಪಿಎಂಸಿ ಮಾರುಕಟ್ಟೆಗೆ ದಾಳಿ
ಬೆಳ್ಳಂಬೆಳಗ್ಗೆ ಉಪ ಲೋಕಾಯುಕ್ತರ ನೇತೃತ್ವದಲ್ಲಿ ಎಪಿಎಂಸಿ ಮಾರುಕಟ್ಟೆಗೆ ದಾಳಿ
ವಿನಯಾ ಪ್ರಸಾದ್ ರೌದ್ರಾವತಾರ ನೋಡಿ ಸೃಜನ್ ಲೋಕೇಶ್ ಶಾಕ್ 
ವಿನಯಾ ಪ್ರಸಾದ್ ರೌದ್ರಾವತಾರ ನೋಡಿ ಸೃಜನ್ ಲೋಕೇಶ್ ಶಾಕ್