ಪರ್ಫಾರ್ಮೆನ್ಸ್ ವೇಳೆ ಅಭಿಮಾನಿಯ ಮೊಬೈಲ್ನ ಕಸಿದು ಎಸೆದ ಆದಿತ್ಯ ನಾರಾಯಣ್; ಗಾಯಕನಿಗೆ ಛೀಮಾರಿ
ಗಾಯಕ ಆದಿತ್ಯ ನಾರಾಯಣ್ ಚತ್ತೀಸಗಢದ ಕಾಲೇಜೊಂದರಲ್ಲಿ ಪ್ರೋಗ್ರಾಂ ಆಯೋಜನೆ ಮಾಡಿದ್ದರು. ಈ ವೇಳೆ ಸಂಗೀತ ಪ್ರೇಮಿಗಳು ನೆರೆದಿದ್ದರು. ಆದಿತ್ಯ ಅವರ ಧ್ವನಿಯಲ್ಲಿ ಸಾಂಗ್ ಕೇಳುತ್ತಾ ಫ್ಯಾನ್ಸ್ ಖುಷಿಯ ಅಲೆಯಲ್ಲಿ ತೇಲುತ್ತಿದ್ದರು. ಈ ವೇಳೆ ಓರ್ವ ಅಭಿಮಾನಿ ಆದಿತ್ಯ ಪರ್ಫಾರ್ಮೆನ್ಸ್ನ ಮೊಬೈಲ್ನಲ್ಲಿ ಶೂಟ್ ಮಾಡುತ್ತಿದ್ದ. ಇದು ಆದಿತ್ಯ ಕೋಪಕ್ಕೆ ಕಾರಣ ಆಗಿದೆ.

ಗಾಯಕ ಆದಿತ್ಯ ನಾರಯಣ್ (Aditya Narayan) ಅವರು ಸದ್ಯ ಸುದ್ದಿಯಲ್ಲಿದ್ದಾರೆ. ಹಾಗಂತ ಅವರ ಹಾಡು ಸೆನ್ಸೇಷನ್ ಸೃಷ್ಟಿ ಮಾಡಿಲ್ಲ. ಸಂಗೀತ ಕಾರ್ಯಕ್ರಮದ ವೇಳೆ ಆದಿತ್ಯ ಅವರು ಅಭಿಮಾನಿಯ ಫೋನ್ನ ಕಸಿದು ಎಸೆದಿದ್ದಾರೆ. ಅವರು ಈ ರೀತಿ ವರ್ತನೆ ತೋರಿಸಿರುವುದಕ್ಕೆ ಅನೇಕರು ಆದಿತ್ಯ ಅವರಿಗೆ ಛೀಮಾರಿ ಹಾಕುತ್ತಿದ್ದಾರೆ. ಈ ರೀತಿ ಅವರು ನಡೆದುಕೊಳ್ಳಬಾರದಿತ್ತು ಎಂದು ಅನೇಕರು ಹೇಳಿದ್ದಾರೆ. ಸದ್ಯ ಈ ವಿಡಿಯೋ ಸೆನ್ಸೇಷನ್ ಸೃಷ್ಟಿ ಮಾಡಿದೆ.
ಖ್ಯಾತ ಗಾಯಕರು ಸ್ಟೇಜ್ ಪರ್ಫಾರ್ಮೆನ್ಸ್ ನೀಡುತ್ತಾರೆ. ಇದಕ್ಕಾಗಿ ಅವರು ಸಾಕಷ್ಟು ಹಣ ಪಡೆಯುತ್ತಾರೆ. ಚತ್ತೀಸಗಢದ ಕಾಲೇಜೊಂದರಲ್ಲಿ ಆದಿತ್ಯ ನಾರಾಯಣ್ ಅವರು ಪ್ರೋಗ್ರಾಂ ಆಯೋಜನೆ ಮಾಡಿದ್ದರು. ಈ ವೇಳೆ ಸಂಗೀತ ಪ್ರೇಮಿಗಳು ನೆರೆದಿದ್ದರು. ಆದಿತ್ಯ ಅವರ ಧ್ವನಿಯಲ್ಲಿ ಸಾಂಗ್ ಕೇಳುತ್ತಾ ಫ್ಯಾನ್ಸ್ ಖುಷಿಯ ಅಲೆಯಲ್ಲಿ ತೇಲುತ್ತಿದ್ದರು. ಈ ವೇಳೆ ಓರ್ವ ಅಭಿಮಾನಿ ಆದಿತ್ಯ ಅವರ ಪರ್ಫಾರ್ಮೆನ್ಸ್ನ ಮೊಬೈಲ್ನಲ್ಲಿ ಶೂಟ್ ಮಾಡುತ್ತಿದ್ದ. ಇದು ಆದಿತ್ಯ ಕೋಪಕ್ಕೆ ಕಾರಣ ಆಗಿದೆ.
ಶಾರುಖ್ ಖಾನ್ ನಟನೆಯ ‘ಡಾನ್’ ಚಿತ್ರದ ‘ಆಜ್ ಕಿ ರಾತ್..’ ಹಾಡನ್ನು ಆದಿತ್ಯ ಹಾಡುತ್ತಿದ್ದರು. ಏಕಾಏಕಿ ಸಿಟ್ಟಾದ ಅವರು ಅಭಿಮಾನಿಯ ಮೊಬೈಲ್ನ ಕಸಿದು ಜನರತ್ತ ಎಸೆದಿದ್ದಾರೆ. ಅವರ ವರ್ತನೆ ಅನೇಕರಿಗೆ ಸಿಟ್ಟು ಥರಿಸಿದೆ. ಅವರು ಈ ರೀತಿ ಮಾಡಬಾರದಿತ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಹೇಳಿದ್ದಾರೆ.
What the f is wrong with Aditya Narayan🙄? So arrogant and for what? 👀 Disrespectful towards his own fans💀? pic.twitter.com/BE1817boQ0
— A̴.̴ (@andjustsmile_) February 12, 2024
अपने कॉन्सर्ट के दौरान #adityanaran ने फैन से फोन छीनकर फेका… देखें वीडियो . . .#livemusic #liveshow #adityanarayan #uditnarayan #chhattisgarh #raipur #durg #bhilai #inhnews pic.twitter.com/ffgJXg7nO0
— Inh 24X7 (@24x7Inh) February 11, 2024
‘ಆದಿತ್ಯ ಅವರೇ ಅಷ್ಟೊಂದು ಸಿಟ್ಟು ಏಕೆ? ಈ ರೀತಿ ಅಗೌರಯುತವಾಗಿ ನಡೆದುಕೊಳ್ಳೋದು ಎಷ್ಟು ಸರಿ? ಅವರು ನಿಮ್ಮ ಅಭಿಮಾನಿ. ಅವರಿಗೆ ಗೌರವ ನೀಡಿ’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಅಭಿಮಾನಿಗಳು ಬರದೇ ಇದ್ದರೆ ನೀವು ವೇದಿಕೆ ಕಾರ್ಯಕ್ರಮ ಹೇಗೆ ನೀಡುತ್ತೀರಿ? ನಿಮ್ಮಿಂದಲೇ ನಾವು’ ಎಂದು ಕೆಲವರು ಹೇಳಿದ್ದಾರೆ.
ಇದನ್ನೂ ಓದಿ: ಸಂಗೀತಾ ಶೃಂಗೇರಿ ಮೇಲಿರೋ ಅಭಿಮಾನ ಎಂಥದ್ದು? ಅದಕ್ಕೆ ಈ ವಿಡಿಯೋನೆ ಸಾಕ್ಷಿ
ಅಸಲಿಗೆ ಆದಿತ್ಯ ನಾರಾಯಣ್ ಅವರಿಗೆ ಸಿಟ್ಟು ತರಿಸಿದ ವಿಚಾರ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಆದಿತ್ಯ ಅವರು ಈ ರೀತಿ ವಿವಾದ ಮಾಡಿಕೊಳ್ಳುತ್ತಿರುವುದು ಇದೇ ಮೊದಲೇನು ಅಲ್ಲ. 2017ರಲ್ಲಿ ರಾಯಪುರ ವಿಮಾನ ನಿಲ್ದಾಣದಲ್ಲಿ ಅವರು ಸ್ಟಾಪ್ಗಳ ಜೊತೆ ಫೈಟ್ಗೆ ಇಳಿದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ