AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಮೌಳಿಗೆ ಅತ್ಯಂತ ಪ್ರಿಯವಾದ ವಿಲನ್ ಸುದೀಪ್: ಏಕೆ ಗೊತ್ತೆ?

SS Rajamouli movie: ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿದ್ದ ಮಹೇಶ್ ಬಾಬು, ರಾಜಮೌಳಿಗೆ ತಮ್ಮ ಹೀರೋಗಳಿಗಿಂತಲೂ ವಿಲನ್​​ಗಳೇ ಬಹಳ ಇಷ್ಟ ಎಂದಿದ್ದರು. ‘ವಾರಣಾಸಿ’ಯ ಪೃಥ್ವಿರಾಜ್ ಸುಕುಮಾರ್ ಪಾತ್ರವೇ ರಾಜಮೌಳಿಗೆ ಇಷ್ಟ ಎಂಬುದು ಅವರ ಮಾತಿನ ಉದ್ದೇಶವಾಗಿತ್ತು. ರಾಜಮೌಳಿಯ ಸಿನಿಮಾಗಳಲ್ಲಿ ನಾಯಕರಷ್ಟೆ ವಿಲನ್​​ಗಳು ಸಹ ಬಹಳ ಪವರ್​ಫುಲ್ ಆಗಿರುತ್ತಾರೆ. ಆದರೆ ರಾಜಮೌಳಿಗೆ ತಮ್ಮ ಸಿನಿಮಾಗಳ ವಿಲನ್​​ಗಳಲ್ಲಿ ಅತಿ ಹೆಚ್ಚು ಇಷ್ಟವಾದ ವಿಲನ್ ಸುದೀಪ್. ಏಕೆ ಗೊತ್ತೆ?

ರಾಜಮೌಳಿಗೆ ಅತ್ಯಂತ ಪ್ರಿಯವಾದ ವಿಲನ್ ಸುದೀಪ್: ಏಕೆ ಗೊತ್ತೆ?
Kichcha Sudeep
ಮಂಜುನಾಥ ಸಿ.
|

Updated on: Feb 11, 2026 | 12:52 PM

Share

ರಾಜಮೌಳಿ (Rajamouli) ನಿರ್ದೇಶನ ಮಾಡುತ್ತಿರುವ ‘ವಾರಣಾಸಿ’ ಸಿನಿಮಾದ ಬಿಡುಗಡೆಗೆ ಇನ್ನೂ ಒಂದು ವರ್ಷವಿದೆ. ಆದರೆ ಈಗಲೇ ಸಿನಿಮಾದ ಹೈಪ್ ಆಕಾಶಕ್ಕೇರಿದೆ. ಸಿನಿಮಾನಲ್ಲಿ ಮಹೇಶ್ ಬಾಬು ನಾಯಕ, ಪ್ರಿಯಾಂಕಾ ಚೋಪ್ರಾ ನಾಯಕಿ. ಪೃಥ್ವಿರಾಜ್ ಸುಕುಮಾರನ್ ವಿಲನ್. ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿದ್ದ ಮಹೇಶ್ ಬಾಬು, ರಾಜಮೌಳಿಗೆ ತಮ್ಮ ಹೀರೋಗಳಿಗಿಂತಲೂ ವಿಲನ್​​ಗಳೇ ಬಹಳ ಇಷ್ಟ ಎಂದಿದ್ದರು. ‘ವಾರಣಾಸಿ’ಯ ಪೃಥ್ವಿರಾಜ್ ಸುಕುಮಾರ್ ಪಾತ್ರವೇ ರಾಜಮೌಳಿಗೆ ಇಷ್ಟ ಎಂಬುದು ಅವರ ಮಾತಿನ ಉದ್ದೇಶವಾಗಿತ್ತು. ರಾಜಮೌಳಿಯ ಸಿನಿಮಾಗಳಲ್ಲಿ ನಾಯಕರಷ್ಟೆ ವಿಲನ್​​ಗಳು ಸಹ ಬಹಳ ಪವರ್​ಫುಲ್ ಆಗಿರುತ್ತಾರೆ. ಆದರೆ ರಾಜಮೌಳಿಗೆ ತಮ್ಮ ಸಿನಿಮಾಗಳ ವಿಲನ್​​ಗಳಲ್ಲಿ ಅತಿ ಹೆಚ್ಚು ಇಷ್ಟವಾದ ವಿಲನ್ ಸುದೀಪ್.

ಸ್ವತಃ ರಾಜಮೌಳಿ ಹಲವಾರು ಬಾರಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ತಮ್ಮ ಸಿನಿಮಾಗಳಲ್ಲಿಯೇ ತಮಗೆ ಸುದೀಪ್ ಅವರು ಬಹಳ ಇಷ್ಟವಾದ ವಿಲನ್ ಎಂದು. ಸುದೀಪ್ ಅವರೇ ತಮಗೆ ಏಕೆ ಇಷ್ಟವೆಂದು ಸಹ ರಾಜಮೌಳಿ ಹೇಳಿದ್ದಾರೆ. ‘ಆರ್​​ಆರ್​​ಆರ್’ ಸಿನಿಮಾ ಬಿಡುಗಡೆ ಬಳಿಕ ಹಾಲಿವುಡ್​ನಲ್ಲಿ ಕೆಲವರು ರಾಜಮೌಳಿಯ ಬೆಸ್ಟ್ ಸಿನಿಮಾಗಳ ವಿಶೇಷ ಪ್ರದರ್ಶವನ್ನು ಆಯೋಜಿಸಿ, ರಾಜಮೌಳಿ ಅವರನ್ನು ಅತಿಥಿಯಾಗಿ ಆಹ್ವಾನಿಸಿದ್ದರು. ಅಲ್ಲಿಯೂ ಸಹ ರಾಜಮೌಳಿ ಸುದೀಪ್ ಅವರನ್ನು ಕೊಂಡಾಡಿದರು.

ಇದನ್ನೂ ಓದಿ:ಜಪನೀಸ್​ ಸ್ಟುಡಿಯೋಗಳ ಜೊತೆ ದೊಡ್ಡ ಡೀಲ್​​​ಗೆ ಮುಂದಾದ ರಾಜಮೌಳಿ

‘ನಾನು ಸೃಷ್ಟಿಸಿದ ವಿಲನ್​​ಗಳ ಪೈಕಿ ಸುದೀಪ್ ಅವರ ಪಾತ್ರ ನನಗೆ ಬಹಳ ಇಷ್ಟ. ಸುದೀಪ್ ನನ್ನ ಮೆಚ್ಚಿನ ವಿಲನ್. ಅವರು ನಟಿಸಿದ ರೀತಿ ಅತ್ಯದ್ಭುತ’ ಎಂದ ರಾಜಮೌಳಿ, ಸುದೀಪ್ ಅವರ ನಟನಾ ಪ್ರತಿಭೆಯನ್ನು ತಮ್ಮದೇ ರೀತಿಯಲ್ಲಿ ವರ್ಣಿಸಿದ್ದರು. ‘ನಟರಿಗೆ ಎದುರಿಗೆ ಒಬ್ಬ ನಟನಿದ್ದರೆ ನಟಿಸುವುದು ಸುಲಭ. ಎದುರಿಗೆ ಕ್ಯಾಮೆರಾ ಇದ್ದು, ಆ ಕ್ಯಾಮೆರಾ ನಟನೆಂದು ಊಹಿಸುವುದು ಸಹ ಸುಲಭ, ಆದರೆ ‘ಈಗ’ ಸಿನಿಮಾನಲ್ಲಿ ಸುದೀಪ್ ಅವರು ನೊಣದ ಎದುರು ನಟಿಸಬೇಕಿತ್ತು. ಅಲ್ಲದೆ, ನೊಣ, ನಟರ ರೀತಿ ಒಂದು ಕಡೆ ನಿಲ್ಲುವ ಜೀವಿ ಅಲ್ಲ, ಅದು ಅತ್ತಿಂದಿತ್ತ, ಇತ್ತಿಂದತ್ತ ಹಾರಾಡುತ್ತಿರುತ್ತದೆ, ಅದು ಹೇಗೆ ಹಾರಾಡುತ್ತದೆ, ಅದನ್ನು ಹೇಗೆ ಹಾರಾಡಿಸಬೇಕು ಎಂಬುದು ನನ್ನ ಕಲ್ಪನೆಯಲ್ಲಿರುತ್ತಿತ್ತು, ನನ್ನ ಕಲ್ಪನೆಯಲ್ಲಿ ನೊಣ ಹೇಗೆ ಹಾರುತ್ತಿದೆ ಎಂಬುದನ್ನು ಗ್ರಹಿಸಿ ಅದಕ್ಕೆ ಅನುಗುಣವಾಗಿ ಸುದೀಪ್ ನಟಿಸಬೇಕಿತ್ತು, ಸುದೀಪ್ ಅವರ ಆ ಕೆಲಸವನ್ನು ಅತ್ಯದ್ಭುತವಾಗಿ ಮಾಡಿದ್ದಾರೆ’ ಎಂದಿದ್ದಾರೆ ರಾಜಮೌಳಿ.

‘ಈಗ’ ಸಿನಿಮಾನಲ್ಲಿ ಸುದೀಪ್ ಅವರಿಗೆ ಬಹಳ ಸವಾಲುಗಳಿದ್ದವು. ನನ್ನ ಗ್ರಹಿಕೆಯಲ್ಲಿರುವ ನೊಣವನ್ನು ಊಹಿಸಿ ಅವರು ನಟಿಸಬೇಕಿತ್ತು, ಅಲ್ಲದೆ, ಅವರು ನಟಿಸುವಾಗ ನೊಣದ ಮಾಡೆಲ್ ಸಹ ಇಡುವಂತಿರಲಿಲ್ಲ. ಎದುರಿಗೆ ಇಲ್ಲದೇ ಇರುವ ಜೀವಿಗೆ, ಅದೂ ಅವರ ಕಲ್ಪನೆಗೂ ಗೊತ್ತಿರದ ರೀತಿ ವರ್ತಿಸುವ ಜೀವಿಗೆ ಪ್ರತಿಯಾಗಿ ಅವರು ನಟಿಸಬೇಕಿತ್ತು. ಸುದೀಪ್ ಆ ಸಿನಿಮಾನಲ್ಲಿ ಅತ್ಯದ್ಭುತವಾಗಿ ನಟಿಸಿದರು. ಹಾಗಾಗಿ ಸುದೀಪ್ ಅವರು ನನ್ನ ಅಚ್ಚುಮೆಚ್ಚಿನ ವಿಲನ್’ ಎಂದಿದ್ದಾರೆ ರಾಜಮೌಳಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ