AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಟ್​ಗೆ ಬಂದು ಸರ್​ಪ್ರೈಸ್ ಕೊಟ್ಟ ಸುಪ್ರಿಯಾ ಮೆನನ್; ‘ನೀನ್ಯಾಕೆ ಬಂದೆ’ ಎಂದ ಪೃಥ್ವಿರಾಜ್

ಪೃಥ್ವಿರಾಜ್ ಅವರು ನಿರ್ದೇಶನ ಮಾಡುತ್ತಿರುವ ‘ಎಂಪುರಾನ್’ ಸಿನಿಮಾದ ಶೂಟ್ ಪಾಲಕ್ಕಾಡ್​ನಲ್ಲಿ ನಡೆಯುತ್ತಿತ್ತು. ಸುಪ್ರಿಯಾ ಅವರು ಮುಂಬೈನಿಂದ ಫ್ಲೈಟ್​ನಲ್ಲಿ ಬಂದಿದ್ದಾರೆ. ಅವರು ಸೆಟ್​ಗೆ ಬಂದು, ‘ಸರ್​ಪ್ರೈಸ್’ ಎಂದಿದ್ದಾರೆ. ಆಗ ಪೃಥ್ವಿರಾಜ್ ಅವರ ‘ನೀನೇಕೆ ಬಂದೆ’ ಎಂದು ಕೇಳಿದ್ದಾರೆ.

ಸೆಟ್​ಗೆ ಬಂದು ಸರ್​ಪ್ರೈಸ್ ಕೊಟ್ಟ ಸುಪ್ರಿಯಾ ಮೆನನ್; ‘ನೀನ್ಯಾಕೆ ಬಂದೆ’ ಎಂದ ಪೃಥ್ವಿರಾಜ್
ಪೃಥ್ವಿರಾಜ್-ಸುಪ್ರಿಯಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: Dec 02, 2024 | 10:57 AM

Share

ಹೀರೋಗಳು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾಗ ಅವರ ಪತ್ನಿ ಸರ್​ಪ್ರೈಸ್​ ಕೊಟ್ಟ ಉದಾಹರಣೆ ಇದೆ. ಈ ಮೊದಲು ಅನೇಕ ಸೆಲೆಬ್ರಿಟಿಗಳು ಈ ರೀತಿ ಮಾಡಿದ್ದಾರೆ. ಈಗ ಪೃಥ್ವಿರಾಜ್​ ಸುಕುಮಾರನ್ ಅವರಿಗೆ ಪತ್ನಿ ಸುಪ್ರಿಯಾ ಅವರು ಇದೇ ರೀತಿಯ ಸರ್​ಪ್ರೈಸ್ ನೀಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಪತ್ನಿ ಸೆಟ್​ಗೆ ಆಗಮಿಸಿದ್ದಕ್ಕೆ ಸುಕುಮಾರ್ ಅವರು ಖುಷಿಪಟ್ಟಿಲ್ಲ. ಬದಲಿಗೆ ‘ನೀನೇಕೆ ಇಲ್ಲಿಗೆ ಬರೋಕೆ ಹೋದೆ’ ಎಂದು ಕೇಳಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.

ಪೃಥ್ವಿರಾಜ್ ಅವರು ನಿರ್ದೇಶನ ಮಾಡುತ್ತಿರುವ ‘ಎಂಪುರಾನ್’ ಸಿನಿಮಾದ ಶೂಟ್ ಪಾಲಕ್ಕಾಡ್​ನಲ್ಲಿ ನಡೆಯುತ್ತಿತ್ತು. ಸುಪ್ರಿಯಾ ಅವರು ಮುಂಬೈನಿಂದ ಫ್ಲೈಟ್​ನಲ್ಲಿ ಬಂದಿದ್ದಾರೆ. ಅವರು ಸೆಟ್​ಗೆ ಬಂದು, ‘ಸರ್​ಪ್ರೈಸ್’ ಎಂದಿದ್ದಾರೆ. ಆಗ ಪೃಥ್ವಿರಾಜ್ ಅವರ ‘ನೀನೇಕೆ ಬಂದೆ’ ಎಂದು ಕೇಳಿದ್ದಾರೆ. ಇದು ಸುಪ್ರಿಯಾ ಕೋಪಕ್ಕೆ ಕಾರಣ ಆಗಿದೆ.

‘ನೀವು ಫ್ಲೈಟ್ ಹಿಡಿದು ಬಂದು, ಮೂರು ಗಂಟೆ ಕಾರಿನಲ್ಲಿ ಪ್ರಯಾಣ ಮಾಡಿ, ಪೃಥ್ವಿರಾಜ್ ಅವರಿಗೆ ಸರ್​ಪ್ರೈಸ್ ನೀಡಿದರೆ ಅವರು ನೀನೇಕೆ ಬಂದೆ ಎಂದು ಕೇಳುತ್ತಾರೆ’ ಎಂದು ಅವರು ಬರೆದುಕೊಂಡಿದ್ದಾರೆ. ಈ ವಿಡಿಯೋ ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಾ ಇದ್ದಾರೆ.

‘ಎಂಪುರಾನ್’ ಸಿನಿಮಾದ ಶೂಟ್ ಡಿಸೆಂಬರ್ 1ರಂದು ಕೊನೆ ಆಗಿದೆ. ಸಂಜೆ ಮಲಂಪುಳಾ ಡ್ಯಾಮ್​ ಸಮೀಪ ಕೊನೆಯ ಶಾಟ್ ತೆಗೆಯಲಾಗಿದೆ. ಈ ಚಿತ್ರಕ್ಕೆ ಕಳೆದ 14 ತಿಂಗಳಿಂದ ಶೂಟಿಂಗ್ ನಡೆಯುತ್ತಿದೆ. ಎಂಟು ರಾಜ್ಯಗಳಲ್ಲಿ ಇದರ ಶೂಟ್ ಮಾಡಲಾಗಿದೆ. ಅವರು ನಿರ್ದೇಶನಕ್ಕೆ ಮರಳಿರೋದು ಫ್ಯಾನ್ಸ್ ಖುಷಿ ಹೆಚ್ಚಿಸಿದೆ.

ಇದನ್ನೂ ಓದಿ: ಸ್ಟಾರ್ ಹೀರೋನ ಜಾಗಕ್ಕೆ ಪೃಥ್ವಿರಾಜ್ ಸುಕುಮಾರನ್ ಎಂಟ್ರಿ: ಇಲ್ಲಿದೆ ವಿವರ

‘ಎಂಪುರಾನ್’ ಚಿತ್ರ ‘ಲುಸಿಫರ್’ ಸಿನಿಮಾದ ಮುಂದುವರಿದ ಭಾಗ. 2019ರಲ್ಲಿ ರಿಲೀಸ್ ಆದ ‘ಲುಸಿಫರ್’ ಸಿನಿಮಾದಲ್ಲಿ ಮೋಹನ್​ಲಾಲ್ ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಸಿನಿಮಾದಲ್ಲಿ ಪೃಥ್ವಿರಾಜ್ ಅತಿಥಿ ಪಾತ್ರ ಮಾಡಿದ್ದರು. ಈಗ ‘ಎಲ್2’ ಸಿದ್ಧವಾಗುತ್ತಿದೆ. ಈ ಚಿತ್ರದಲ್ಲೂ ಮೋಹನ್​ಲಾಲ್ ನಟಿಸಿದ್ದಾರೆ. ಪೃಥ್ವಿರಾಜ್ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ. ಮುಂದಿನ ವರ್ಷ ಮಾರ್ಚ್​​ನಲ್ಲಿ ಸಿನಿಮಾ ರಿಲೀಸ್ ಮಾಡುವ ಉದ್ದೇಶ ತಂಡಕ್ಕೆ ಇದೆ. ಲೈಕಾ ಪ್ರೊಡಕ್ಷನ್ಸ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​