AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಟ್​ಗೆ ಬಂದು ಸರ್​ಪ್ರೈಸ್ ಕೊಟ್ಟ ಸುಪ್ರಿಯಾ ಮೆನನ್; ‘ನೀನ್ಯಾಕೆ ಬಂದೆ’ ಎಂದ ಪೃಥ್ವಿರಾಜ್

ಪೃಥ್ವಿರಾಜ್ ಅವರು ನಿರ್ದೇಶನ ಮಾಡುತ್ತಿರುವ ‘ಎಂಪುರಾನ್’ ಸಿನಿಮಾದ ಶೂಟ್ ಪಾಲಕ್ಕಾಡ್​ನಲ್ಲಿ ನಡೆಯುತ್ತಿತ್ತು. ಸುಪ್ರಿಯಾ ಅವರು ಮುಂಬೈನಿಂದ ಫ್ಲೈಟ್​ನಲ್ಲಿ ಬಂದಿದ್ದಾರೆ. ಅವರು ಸೆಟ್​ಗೆ ಬಂದು, ‘ಸರ್​ಪ್ರೈಸ್’ ಎಂದಿದ್ದಾರೆ. ಆಗ ಪೃಥ್ವಿರಾಜ್ ಅವರ ‘ನೀನೇಕೆ ಬಂದೆ’ ಎಂದು ಕೇಳಿದ್ದಾರೆ.

ಸೆಟ್​ಗೆ ಬಂದು ಸರ್​ಪ್ರೈಸ್ ಕೊಟ್ಟ ಸುಪ್ರಿಯಾ ಮೆನನ್; ‘ನೀನ್ಯಾಕೆ ಬಂದೆ’ ಎಂದ ಪೃಥ್ವಿರಾಜ್
ಪೃಥ್ವಿರಾಜ್-ಸುಪ್ರಿಯಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: Dec 02, 2024 | 10:57 AM

Share

ಹೀರೋಗಳು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾಗ ಅವರ ಪತ್ನಿ ಸರ್​ಪ್ರೈಸ್​ ಕೊಟ್ಟ ಉದಾಹರಣೆ ಇದೆ. ಈ ಮೊದಲು ಅನೇಕ ಸೆಲೆಬ್ರಿಟಿಗಳು ಈ ರೀತಿ ಮಾಡಿದ್ದಾರೆ. ಈಗ ಪೃಥ್ವಿರಾಜ್​ ಸುಕುಮಾರನ್ ಅವರಿಗೆ ಪತ್ನಿ ಸುಪ್ರಿಯಾ ಅವರು ಇದೇ ರೀತಿಯ ಸರ್​ಪ್ರೈಸ್ ನೀಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಪತ್ನಿ ಸೆಟ್​ಗೆ ಆಗಮಿಸಿದ್ದಕ್ಕೆ ಸುಕುಮಾರ್ ಅವರು ಖುಷಿಪಟ್ಟಿಲ್ಲ. ಬದಲಿಗೆ ‘ನೀನೇಕೆ ಇಲ್ಲಿಗೆ ಬರೋಕೆ ಹೋದೆ’ ಎಂದು ಕೇಳಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.

ಪೃಥ್ವಿರಾಜ್ ಅವರು ನಿರ್ದೇಶನ ಮಾಡುತ್ತಿರುವ ‘ಎಂಪುರಾನ್’ ಸಿನಿಮಾದ ಶೂಟ್ ಪಾಲಕ್ಕಾಡ್​ನಲ್ಲಿ ನಡೆಯುತ್ತಿತ್ತು. ಸುಪ್ರಿಯಾ ಅವರು ಮುಂಬೈನಿಂದ ಫ್ಲೈಟ್​ನಲ್ಲಿ ಬಂದಿದ್ದಾರೆ. ಅವರು ಸೆಟ್​ಗೆ ಬಂದು, ‘ಸರ್​ಪ್ರೈಸ್’ ಎಂದಿದ್ದಾರೆ. ಆಗ ಪೃಥ್ವಿರಾಜ್ ಅವರ ‘ನೀನೇಕೆ ಬಂದೆ’ ಎಂದು ಕೇಳಿದ್ದಾರೆ. ಇದು ಸುಪ್ರಿಯಾ ಕೋಪಕ್ಕೆ ಕಾರಣ ಆಗಿದೆ.

‘ನೀವು ಫ್ಲೈಟ್ ಹಿಡಿದು ಬಂದು, ಮೂರು ಗಂಟೆ ಕಾರಿನಲ್ಲಿ ಪ್ರಯಾಣ ಮಾಡಿ, ಪೃಥ್ವಿರಾಜ್ ಅವರಿಗೆ ಸರ್​ಪ್ರೈಸ್ ನೀಡಿದರೆ ಅವರು ನೀನೇಕೆ ಬಂದೆ ಎಂದು ಕೇಳುತ್ತಾರೆ’ ಎಂದು ಅವರು ಬರೆದುಕೊಂಡಿದ್ದಾರೆ. ಈ ವಿಡಿಯೋ ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಾ ಇದ್ದಾರೆ.

‘ಎಂಪುರಾನ್’ ಸಿನಿಮಾದ ಶೂಟ್ ಡಿಸೆಂಬರ್ 1ರಂದು ಕೊನೆ ಆಗಿದೆ. ಸಂಜೆ ಮಲಂಪುಳಾ ಡ್ಯಾಮ್​ ಸಮೀಪ ಕೊನೆಯ ಶಾಟ್ ತೆಗೆಯಲಾಗಿದೆ. ಈ ಚಿತ್ರಕ್ಕೆ ಕಳೆದ 14 ತಿಂಗಳಿಂದ ಶೂಟಿಂಗ್ ನಡೆಯುತ್ತಿದೆ. ಎಂಟು ರಾಜ್ಯಗಳಲ್ಲಿ ಇದರ ಶೂಟ್ ಮಾಡಲಾಗಿದೆ. ಅವರು ನಿರ್ದೇಶನಕ್ಕೆ ಮರಳಿರೋದು ಫ್ಯಾನ್ಸ್ ಖುಷಿ ಹೆಚ್ಚಿಸಿದೆ.

ಇದನ್ನೂ ಓದಿ: ಸ್ಟಾರ್ ಹೀರೋನ ಜಾಗಕ್ಕೆ ಪೃಥ್ವಿರಾಜ್ ಸುಕುಮಾರನ್ ಎಂಟ್ರಿ: ಇಲ್ಲಿದೆ ವಿವರ

‘ಎಂಪುರಾನ್’ ಚಿತ್ರ ‘ಲುಸಿಫರ್’ ಸಿನಿಮಾದ ಮುಂದುವರಿದ ಭಾಗ. 2019ರಲ್ಲಿ ರಿಲೀಸ್ ಆದ ‘ಲುಸಿಫರ್’ ಸಿನಿಮಾದಲ್ಲಿ ಮೋಹನ್​ಲಾಲ್ ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಸಿನಿಮಾದಲ್ಲಿ ಪೃಥ್ವಿರಾಜ್ ಅತಿಥಿ ಪಾತ್ರ ಮಾಡಿದ್ದರು. ಈಗ ‘ಎಲ್2’ ಸಿದ್ಧವಾಗುತ್ತಿದೆ. ಈ ಚಿತ್ರದಲ್ಲೂ ಮೋಹನ್​ಲಾಲ್ ನಟಿಸಿದ್ದಾರೆ. ಪೃಥ್ವಿರಾಜ್ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ. ಮುಂದಿನ ವರ್ಷ ಮಾರ್ಚ್​​ನಲ್ಲಿ ಸಿನಿಮಾ ರಿಲೀಸ್ ಮಾಡುವ ಉದ್ದೇಶ ತಂಡಕ್ಕೆ ಇದೆ. ಲೈಕಾ ಪ್ರೊಡಕ್ಷನ್ಸ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್