AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KBC 13: ಫುಡ್ ಡೆಲಿವರಿ ಬಾಯ್ ಆದ ಅಮಿತಾಭ್ ಬಚ್ಚನ್; ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾಯ್ತು ಕೆಬಿಸಿ ವೇದಿಕೆ

Amitabh Bachchan: ಹಲವು ಅಪರೂಪದ ಸಂದರ್ಭಗಳಿಗೆ ಸಾಕ್ಷಿಯಾಗುತ್ತಿರುವ ಕೆಬಿಸಿ ವೇದಿಕೆಯಲ್ಲಿ ಇದೀಗ ಅಮಿತಾಭ್ ಬಚ್ಚನ್ ಫುಡ್ ಡೆಲಿವರಿ ಬಾಯ್ ಆಗಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

KBC 13: ಫುಡ್ ಡೆಲಿವರಿ ಬಾಯ್ ಆದ ಅಮಿತಾಭ್ ಬಚ್ಚನ್; ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾಯ್ತು ಕೆಬಿಸಿ ವೇದಿಕೆ
ಅಮಿತಾಭ್ ಬಚ್ಚನ್ ಹಾಗೂ ಆಕಾಶ್
TV9 Web
| Updated By: shivaprasad.hs|

Updated on:Sep 15, 2021 | 2:41 PM

Share

ಕೌನ್ ಬನೇಗಾ ಕರೋಡ್​ಪತಿಯ 13ನೇ ಸೀಸನ್ ಹಲವು ವಿಶೇಷಗಳಿಗೆ ಸಾಕ್ಷಿಯಾಗುತ್ತಿದೆ. ಖ್ಯಾತ ಸೆಲೆಬ್ರಿಟಿಗಳು ಸೇರಿದಂತೆ ಅನೇಕರು ಈಗಾಗಲೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದಲ್ಲದೇ ಸಾಮಾನ್ಯ ಜನರೂ ಕೂಡ ಶೋನಲ್ಲಿ ಭಾಗವಹಿಸುತ್ತಿದ್ದು, ಬಹುಮಾನ ಗೆಲ್ಲುತ್ತಿದ್ದಾರೆ. ಅಲ್ಲದೇ, ಹಲವು ಅಚ್ಚರಿಯ ಕತೆಗಳಿಗೆ ಕೆಬಿಸಿ ವೇದಿಕೆ ಕಿವಿಯಾಗಿದೆ. ಇಂಥದ್ದೇ ಒಂದು ಅಪರೂಪದ ಸಂದರ್ಭಕ್ಕೆ ಕೆಬಿಸಿ ವೇದಿಕೆ ಸಾಕ್ಷಿಯಾಗಿದ್ದು, ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಹೌದು. ನಿರೂಪಕ, ಅಮಿತಾಭ್ ಬಚ್ಚನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಫುಡ್ ಡೆಲಿವರಿ ಬಾಯ್ ಒಬ್ಬರಿಗೆ ತಾವೇ ಆಹಾರವನ್ನು ತಂದುಕೊಟ್ಟಿದ್ದಾರೆ. ಈ ಸಂದರ್ಭದ ವಿಡಿಯೊ ವೈರಲ್ ಆಗಿದ್ದು, ಬಿಗ್​ಬಿ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಅಮಿತಾಭ್ ಜೀವನದ ಸವಾಲಿನ ಕುರಿತು ಮಾತನಾಡುತ್ತಾ ವಿಡಿಯೊ ಆರಂಭವಾಗುತ್ತದೆ. ಛಲದಿಂದ ಮುನ್ನುಗ್ಗಿದರೆ ಸವಾಲುಗಳನ್ನು ಮೀರಿ ಯಶಸ್ಸನ್ನು ಗಳಿಸಬಹುದು. ಅದಕ್ಕೆ ಉದಾಹರಣೆ ವೃತ್ತಿಯಲ್ಲಿ ಆಹಾರವನ್ನು ತಲುಪಿಸುವ ಕಾರ್ಯವನ್ನು ಮಾಡುವ ಆಕಾಶ್ ವಾಘ್ಮಾರೆ  ಎಂದು ಅಮಿತಾಭ್ ನುಡಿಯುವುದರೊಂದಿಗೆ ವಿಡಿಯೊ ಆರಂಭವಾಗುತ್ತದೆ.  ನಂತರ ಆಕಾಶ್ ಅವರನ್ನು ವೀಕ್ಷಕರಿಗೆ ಪರಿಚಯಿಸುವ ಅಮಿತಾಭ್, ವಿದ್ಯಾಭ್ಯಾಸಕ್ಕಾಗಿ, ತಮ್ಮ ಕನಸುಗಳ ಸಾಕಾರಕ್ಕಾಗಿ ಪಾರ್ಟ್ ಟೈಮ್ ಜಾಬ್ ರೂಪದಲ್ಲಿ ಹೇಗೆ ಆಕಾಶ್ ಕೆಲಸ ಮಾಡಿದರು ಎಂಬುದನ್ನು ತಿಳಿಸಿದ್ಧಾರೆ. ನಂತರ ಆಕಾಶ್ ತಾವೇ ಸ್ವತಃ ತಮ್ಮ ಬದುಕಿನ ಕುರಿತು ಮಾತನಾಡಿದ್ದಾರೆ.

ಕೊನೆಯಲ್ಲಿ ಅಮಿತಾಭ್, ಆಕಾಶ್ ಕನಸುಗಳ ಕುರಿತು ಮಾತನಾಡಿದ್ದಾರೆ. ‘‘ಒಂದು ದಿನ ಒಬ್ಬ ಡೆಲಿವರಿ ವ್ಯಕ್ತಿ ಬಂದು ಆತನ ಹೆಸರು ಹಿಡಿದು ಕರೆದು, ಆಹಾರವನ್ನು ಡೆಲಿವರಿ ಮಾಡಬೇಕು ಎಂದು ಆಕಾಶ್ ಬಯಸುತ್ತಾರೆ. ಇಂದೇ ಆ ಕನಸು ಸಾಕಾರಗೊಳ್ಳಲಿದೆ. ನಾನು ಆಕಾಶ್ ಅವರಿಗೆ ಆಹಾರವನ್ನು ನೀಡುತ್ತಿದ್ದೇನೆ’’ ಎಂದು ನುಡಿದು ಅಮಿತಾಭ್ ಆಹಾರವನ್ನು ವಿತರಿಸಿದ್ದಾರೆ. ಇದಕ್ಕೆ ಭಾವುಕರಾದ ಆಕಾಶ್, ‘‘ನಾನು ಇದಕ್ಕಾಗಿ ನಿಮಗೆ ಕೃತಜ್ಞನಾಗಿದ್ದೇನೆ’’ ಎಂದು ನುಡಿದಿದ್ದಾರೆ. ಅಮಿತಾಭ್ ಬಚ್ಚನ್ ₹ 2,50,000 ಮೊತ್ತಕ್ಕೆ ಕೇಳಲಾಗುವ 13ನೇ ಪ್ರಶ್ನೆ ಎಂದು ಕೇಳುತ್ತಾ ಪ್ರೋಮೋ ಮುಕ್ತಾಯವಾಗಿದೆ.

ಹೀಗೆ ಕೆಬಿಸಿ ಅನೇಕ ಹೊಸತನಗಳಿಗೆ ಸಾಕ್ಷಿಯಾಗುತ್ತಿದೆ. ಪ್ರತಿ ಶುಕ್ರವಾರ ಕಾರ್ಯಕ್ರಮಕ್ಕೆ ಸೆಲೆಬ್ರಿಟಿಗಳು ಆಗಮಿಸುತ್ತಾರೆ. ‘ಶಾನ್ದಾರ್ ಶುಕ್ರವಾರ್’ ಎಂಬ ಹೆಸರಿನಿಂದ ನಡೆಯುವ ಈ ಕಾರ್ಯಕ್ರಮದಲ್ಲಿ ಈ ವಾರ ಭಾರತದ ಒಲಂಪಿಕ್ಸ್ ಪದಕ ವಿಜೇತರಾದ ನೀರಜ್ ಚೋಪ್ರಾ ಹಾಗೂ ಪಿ.ಶ್ರೀಜಿತ್ ಭಾಗವಹಿಸಲಿದ್ದಾರೆ. ಕಳೆದ ವಾರ ದೀಪಿಕಾ ಪಡುಕೋಣೆ ಹಾಗೂ ಫರಾ ಖಾನ್ ಭಾಗವಹಿಸಿದ್ದರು. ಮೊದಲ ವಾರದಲ್ಲಿ ಖ್ಯಾತ ಕ್ರಿಕೆಟ್ ತಾರೆಯರಾದ ವೀರೇಂದ್ರ ಸೆಹ್ವಾಗ್ ಹಾಗೂ ಸೌರವ್ ಗಂಗೂಲಿ ಭಾಗವಹಿಸಿದ್ದರು.

ಇದನ್ನೂ ಓದಿ:

ಸಮಂತಾ ಬಗ್ಗೆ ಏನೂ ಪ್ರಶ್ನಿಸಬೇಡಿ; ಮಾಧ್ಯಮಗಳಿಗೆ ನಾಗ ಚೈತನ್ಯ ಖಡಕ್​ ಎಚ್ಚರಿಕೆ?

Salaar: ಪ್ರಶಾಂತ್ ನೀಲ್‌ರನ್ನು ಗೋಳು ಹೊಯ್ದುಕೊಂಡ ಶ್ರುತಿ ಹಾಸನ್; ಕಾರಣವೇನು?

(Amitabh Bachchan becomes food delivery boy in KBC 13 watch the video)

Published On - 2:39 pm, Wed, 15 September 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ