AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮ್ಮ ಕಥೆ ಕೇಳ್ತಾ ನನ್ನ ಕಥೆ ಮರೆಯಬಹುದು’; ಸಂಜುಗೆ ಅನುವಿನ ಮಾತು

ಆರ್ಯವರ್ಧನ್ ಈಗ ಸಂಜು ಆಗಿ ಎಂಟ್ರಿ ಕೊಟ್ಟಿದ್ದಾನೆ. ಆತನಿಗೆ ನಿಧಾನವಾಗಿ ನೆನಪು ಮರಳುತ್ತಿದೆ. ಈ ಮಧ್ಯೆ ಅನು ಜತೆ ಆತನಿಗೆ ಆಪ್ತತೆ ಹೆಚ್ಚುತ್ತಿದೆ. ಈ ಬಗ್ಗೆ ಅನು ಬಳಿ ಆತ ಹೇಳಿಕೊಂಡಿದ್ದ. ಇದರಿಂದ ಅನು ಸಿಟ್ಟಾಗಿದ್ದಳು.

‘ನಿಮ್ಮ ಕಥೆ ಕೇಳ್ತಾ ನನ್ನ ಕಥೆ ಮರೆಯಬಹುದು’; ಸಂಜುಗೆ ಅನುವಿನ ಮಾತು
ಅನು-ಆರ್ಯವರ್ಧನ್
TV9 Web
| Edited By: |

Updated on: Oct 27, 2022 | 9:55 AM

Share

ಧಾರಾವಾಹಿ: ಜೊತೆ ಜೊತೆಯಲಿ

ವಾಹಿನಿ: ಜೀ ಕನ್ನಡ

ಸಮಯ: ರಾತ್ರಿ 8.30

ಇದನ್ನೂ ಓದಿ
Image
‘ಅವರನ್ನು ಸುಮ್ಮನೆ ಬಿಡಲ್ಲ’; ಶಪಥ ಮಾಡಿ ಮನೆ ಒಳಗೆ ಬಂದ ಅನು ಸಿರಿಮನೆ
Image
Megha Shetty: ಮಹೇಶ್ ಬಾಬು ಭೇಟಿ ಹಿಂದಿನ ಉದ್ದೇಶ ತಿಳಿಸಿದ ನಟಿ ಮೇಘಾ ಶೆಟ್ಟಿ
Image
Megha Shetty: ಕಲರ್ಸ್​ ಕನ್ನಡದಲ್ಲಿ ಹೊಸ ಪ್ರಯತ್ನಕ್ಕೆ ಮುಂದಾದ ನಟಿ ಮೇಘಾ ಶೆಟ್ಟಿ
Image
ಮೇಘಾ ಶೆಟ್ಟಿ ಮನೆಗೆ ಬಂತು ಎರಡು ಐಷಾರಾಮಿ ಕಾರು; ಖುಷಿ ಹಂಚಿಕೊಂಡ ನಟಿ

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಆರ್ಯವರ್ಧನ್ ಈಗ ಸಂಜು ಆಗಿ ಎಂಟ್ರಿ ಕೊಟ್ಟಿದ್ದಾನೆ. ಆತನಿಗೆ ನಿಧಾನವಾಗಿ ನೆನಪು ಮರಳುತ್ತಿದೆ. ಈ ಮಧ್ಯೆ ಅನು ಜತೆ ಆತನಿಗೆ ಆಪ್ತತೆ ಹೆಚ್ಚುತ್ತಿದೆ. ಈ ಬಗ್ಗೆ ಅನು ಬಳಿ ಆತ ಹೇಳಿಕೊಂಡಿದ್ದ. ಇದರಿಂದ ಅನು ಸಿಟ್ಟಾಗಿದ್ದಳು.

‘ಜೊತೆ ಜೊತೆಯಲಿ’ ಧಾರಾವಾಹಿ ಹೊಸ ಹೊಸ ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದೆ. ಈ ಧಾರಾವಾಹಿಯ ಲೀಡ್​ರೋಲ್ ಆರ್ಯವರ್ಧನ್​ ಈಗ ಸಂಜು ಆಗಿ ಧಾರಾವಾಹಿಗೆ ಪ್ರವೇಶ ಪಡೆದಿದ್ದಾನೆ. ಅಪಘಾತ ಆಗಿರುವುದರಿಂದ ಆತನಿಗೆ ನೆನಪು ಮಾಸಿದೆ. ಅಷ್ಟೇ ಅಲ್ಲ, ಪ್ಲಾಸ್ಟಿಕ್ ಸರ್ಜರಿ ಮಾಡಿಸಲಾಗಿದೆ. ಈ ಎಲ್ಲಾ ಕಾರಣದಿಂದ ಆತ ಸಂಪೂರ್ಣ ಬದಲಾಗಿದ್ದಾನೆ. ಹೀಗಾಗಿ, ಸಂಜುನ ಗುರುತು ಯಾರಿಗೂ ಸಿಗುತ್ತಿಲ್ಲ. ಈ ಮಧ್ಯೆ ಸಂಜುಗೆ ನೆನಪು ಮರಳಿಸಲು ಅನು ಹರಸಾಹಸ ಪಡುತ್ತಿದ್ದಾಳೆ. ಇಬ್ಬರ ಮಧ್ಯೆ ಆಪ್ತತೆ ಹೆಚ್ಚುತ್ತಿದೆ.

ಸಂಜು ಹಾಗೂ ಅನು ಫ್ಯಾಕ್ಟರಿಗೆ ತೆರಳಿದ್ದರು. ಅನು ಬಗ್ಗೆ ಸಂಜುಗೆ ವಿಶೇಷ ಕಾಳಜಿ ಇದೆ. ಇದನ್ನು ಆತ ಅನೇಕ ಬಾರಿ ವ್ಯಕ್ತಪಡಿಸಲು ಪ್ರಯತ್ನಿಸಿದ್ದಾನೆ. ಈ ಬಾರಿ ಫ್ಯಾಕ್ಟರಿಗೆ ತೆರಳುವಾಗ ಇಬ್ಬರೂ ಒಂದೇ ಕಾರಿನಲ್ಲಿದ್ದರು. ಇದೇ ಸರಿಯಾದ ಅವಕಾಶ ಎಂದು ಆತನು ಅವಳ ಮುಂದೆ ತಾನು ಕ್ಲೋಸ್ ಆಗುತ್ತಿರುವ ಬಗ್ಗೆ ಹೇಳಿಕೊಂಡಿದ್ದ. ಇದನ್ನು ಕೇಳಿ ಅನು ಸಿಟ್ಟಾದಳು. ‘ನಿಮ್ಮನ್ನು ಪ್ರೀತಿಸಿದವಳ ಬಗ್ಗೆ ಹೇಳಿ. ಅದನ್ನು ನಾನು ಕೇಳುತ್ತೇನೆ. ಆದರೆ, ನನ್ನ ಜತೆ ಕ್ಲೋಸ್ ಆಗೋಕೆ ಪ್ರಯತ್ನಿಸಬೇಡಿ. ನೀವು ನಮ್ಮ ಕಚೇರಿಯ ಸಿಬ್ಬಂದಿ ಅಷ್ಟೇ’ ಎಂಬ ಎಚ್ಚರಿಕೆಯನ್ನು ನೀಡಿದ್ದಾಳೆ. ಮತ್ತೊಂದು ಕಡೆ ಸಂಜುನ ಕಂಡು ಆಕೆಗೆ ಮರುಕ ಹುಟ್ಟುತ್ತಿದೆ.

ಸಂಜುಗೆ ಕ್ಲೋಸ್ ಆದ ಅನು

ಅನು ಹಾಗೂ ಸಂಜು ಇಬ್ಬರೂ ಕ್ಲೋಸ್ ಆಗುತ್ತಿದ್ದಾರೆ. ಇಬ್ಬರೂ ಫ್ಯಾಕ್ಟರಿಗೆ ತೆರಳಿದ ಸಂದರ್ಭದಲ್ಲಿ ಸಂಜು ತಾನು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಹೇಳಿಕೊಂಡಿದ್ದಾನೆ. ‘ನನ್ನ ಪ್ರೀತಿಸಿದವಳು ಯಾರು ಎಂಬುದು ನೆನಪಿಲ್ಲ. ಆದರೆ, ಅಪಘಾತಕ್ಕೂ ಮೊದಲು ನಾನು ಅವಳಿಗೆ ಏನೋ ಹೇಳಬೇಕಿತ್ತು. ಆದರೆ, ಅದನ್ನು ಹೇಳಿಲ್ಲ. ನಾವಿಬ್ಬರೂ ಯಾವುದೋ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದೆವು ಎಂಬುದಷ್ಟೇ ಗೊತ್ತಿತ್ತು’ ಎಂದು ಹೇಳಿದ್ದಾನೆ. ಇದನ್ನು ಕೇಳಿ ಅನುಗೆ ಮರುಕ ಉಂಟಾಗಿದೆ.

ಆರ್ಯವರ್ಧನ್​ಗೆ ಅಪಘಾತ ಆಗುವುದಕ್ಕೂ ಮೊದಲು ಅನು ಜತೆ ಜಗಳ ಮಾಡಿಕೊಂಡಿದ್ದ. ಕಂಪನಿಯಲ್ಲಿ ನಡೆದ ಅಕ್ರಮ ವಿಚಾರಕ್ಕೆ ಸಂಬಂಧಿಸಿ ಇಬ್ಬರ ಮಧ್ಯೆ ಸಾಕಷ್ಟು ಜಗಳ ಆಗಿತ್ತು. ಈ ವಿಚಾರ ಇತ್ಯರ್ಥ ಆಗುವುದಕ್ಕೂ ಮೊದಲೇ ಆರ್ಯವರ್ಧನ್​ಗೆ ಅಪಘಾತವಾಯಿತು. ಈ ಅಪಘಾತದಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಅನು ಭಾವಿಸಿದ್ದಾಳೆ. ಹೀಗಾಗಿ ಸಂಜುವಿನ ಕಥೆ ಆಕೆಗೆ ಬೇಸರ ಆಗಿದೆ. ತನ್ನ ಕಥೆಗೆ ಇದರ ಹೋಲಿಕೆ ಇದೆ ಎಂದು ಅನಿಸಿದೆ. ‘ನಿಮ್ಮ ಕಥೆ ಕೇಳ್ತಾ ನನ್ನ ಕಥೆ ಮರೆಯಬಹುದು’ ಎಂದು ಅನು ಬೇಸರಗೊಂಡಿದ್ದಾಳೆ.

ಸಂಜು ಈಗ ಹರ್ಷನಿಗೆ ಸ್ಪೆಷಲ್

ಹರ್ಷ ಹಾಗೂ ಸಂಜು ಭೇಟಿ ಆಗಿ ಕೆಲವೇ ದಿನಗಳು ಕಳೆದಿವೆ. ಸಂಜು ಆತನಿಗೆ ವಿಶೇಷ ಎನ್ನಿಸುತ್ತಿದ್ದಾನೆ. ಭೇಟಿ ಆದ ಕೆಲವೇ ದಿನಗಳಲ್ಲಿ ಸಂಜುವಿನ ಬಗ್ಗೆ ಆತನಿಗೆ ವಿಶೇಷ ಕಾಳಜಿ ಮೂಡಿದೆ. ಸಂಜು ಬಗ್ಗೆ ಆತ ಒಲವು ತೋರುತ್ತಿರುವುದನ್ನು ನೋಡಿ ಮೀರಾ ಹೆಗ್ಡೆಗೆ ಅನುಮಾನ ಮೂಡಿದೆ. ಇತ್ತ ಝೇಂಡೆ ಸಂಜುನ ವಿಚಾರದಲ್ಲಿ ಸಾಕಷ್ಟು ತನಿಖೆ ನಡೆಸೋಕೆ ಆರಂಭಿಸಿದ್ದಾನೆ. ಮೀರಾ ಹೆಗ್ಡೆಗೆ ಈ ವಿಚಾರ ಇಕ್ಕಟ್ಟಿಗೆ ಸಿಲುಕಿಸುತ್ತಿದೆ.

ಶ್ರೀಲಕ್ಷ್ಮಿ ಎಚ್.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್