AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK9: ‘ರಾಕೇಶ್​ ಎಲ್ಲ ಸುಖ ಅನುಭವಿಸ್ತಾನೆ, ಆದ್ರೆ ಅದನ್ನು ಅನುಭವಿಸುವ ಶಕ್ತಿ ನನಗಿಲ್ಲ’: ಆರ್ಯವರ್ಧನ್​

Aryavardhan Guruji | Rakesh Adiga: ‘ರೂಮ್​ ಅಂದ್ರೆ ಅರ್ಥ ಮಾಡಿಕೊಳ್ಳಿ ಸರ್​’ ಅಂತ ಆರ್ಯವರ್ಧನ್​ ಹೇಳಿದಾಗ, ‘ನೇರವಾಗಿ ಹೇಳಿ’ ಎಂದು ರಾಕೇಶ್ ಒತ್ತಾಯಿಸಿದರು.​ ಗುರೂಜಿ ಹೇಳಿದ ಮಾತು ಕೇಳಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ.

BBK9: ‘ರಾಕೇಶ್​ ಎಲ್ಲ ಸುಖ ಅನುಭವಿಸ್ತಾನೆ, ಆದ್ರೆ ಅದನ್ನು ಅನುಭವಿಸುವ ಶಕ್ತಿ ನನಗಿಲ್ಲ’: ಆರ್ಯವರ್ಧನ್​
ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ
TV9 Web
| Edited By: |

Updated on: Oct 10, 2022 | 2:35 PM

Share

ಸಂಖ್ಯಾಶಾಸ್ತ್ರದ ಮೂಲಕ ಗುರುತಿಸಿಕೊಂಡ ಆರ್ಯವರ್ಧನ್​ ಗುರೂಜಿ (Aryavardhan Guruji) ಅವರಿಗೆ ಬಿಗ್​ ಬಾಸ್​ ಮನೆಯಲ್ಲಿ ಬೇರೆಯದೇ ಇಮೇಜ್​ ಸಿಕ್ಕಿದೆ. ಮೊದಲು ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋನಲ್ಲಿ ಸ್ಪರ್ಧಿಸಿ ಫಿನಾಲೆವರೆಗೂ ಬಂದ ಅವರು ನಂತರ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ಕ್ಕೆ (Bigg Boss Kannada Season 9) ಎಂಟ್ರಿ ಪಡೆದುಕೊಂಡರು. ಅವರ ವ್ಯಕ್ತಿತ್ವವೇ ಡಿಫರೆಂಟ್​ ಆಗಿದೆ. ಅದು ದೊಡ್ಮನೆಯ ಎಲ್ಲರಿಗೂ ನಗು ಉಕ್ಕಿಸುತ್ತಿದೆ. ಬಿಗ್​ ಬಾಸ್​ ಹೇಳುವುದೇ ಒಂದು, ಆದರೆ ಆರ್ಯವರ್ಧನ್​ ಅರ್ಥ ಮಾಡಿಕೊಳ್ಳುವುದೇ ಮತ್ತೊಂದು. ಆ ಕಾರಣದಿಂದ ಅವರ ಫನ್ನಿ ಎನಿಸುತ್ತಾರೆ. ಕಿಚ್ಚ ಸುದೀಪ್​ (Kichcha Sudeep) ನಡೆಸಿಕೊಡುವ ‘ಸೂಪರ್ ಸಂಡೇ ವಿತ್​ ಸುದೀಪ’ ಸಂಚಿಕೆಯ​ ಯೆಸ್​ ಅಥವಾ ನೋ ಸುತ್ತಿನಲ್ಲಿ ಪ್ರತಿ ಬಾರಿ ಆರ್ಯವರ್ಧನ್​ ಅವರು ಏನೇನೋ ಉತ್ತರ ನೀಡಿ ನಗು ಉಕ್ಕಿಸುತ್ತಾರೆ. ಈ ವಾರವೂ (ಅ.9) ಅದು ಮುಂದುವರಿಯಿತು.

‘ನೀವು ಯಾರಂತೆ ಆಗಲು ಇಷ್ಟಪಡುವುದಿಲ್ಲ’ ಎಂದು ಸುದೀಪ್​ ಪ್ರಶ್ನೆ ಕೇಳಿದರು. ಆಗ ಅನೇಕರಿಂದ ಬೇರೆ ಬೇರೆ ಉತ್ತರ ಬಂದವು. ‘ಪ್ರಶಾಂತ್​ ಸಂಬರ್ಗಿ ಆಗಲು ನಾವು ಇಷ್ಟಪಡುವುದಿಲ್ಲ’ ಎಂದು ಅನೇಕರು ಹೇಳಿದರು. ಅದಕ್ಕೆ ಸೂಕ್ತ ಕಾರಣವನ್ನೂ ನೀಡಿದರು. ‘ನಾನು ರಾಕೇಶ್​ ರೀತಿ ಆಗಲ್ಲ’ ಎಂದು ಆರ್ಯವರ್ಧನ್​ ಹೇಳಿದರು. ಆದರೆ ಅದಕ್ಕೆ ಅವರು ನೀಡಿದ ಕಾರಣ ಮಾತ್ರ ಸಿಕ್ಕಾಪಟ್ಟೆ ಫನ್ನಿ ಆಗಿತ್ತು.

‘ರಾಕೇಶ್​ ಎಲ್ಲ ಸುಖವನ್ನೂ ಅನುಭವಿಸುತ್ತಾನೆ. ಆದರೆ ನನಗೆ ಅಷ್ಟೊಂದು ಶಕ್ತಿ ಇಲ್ಲ. ಅವನು ನನ್ನ ಬಳಿ ಪರ್ಸನಲ್​ ಆಗಿ ಹೇಳಿಕೊಂಡ ಮಾತನ್ನೆಲ್ಲ ನಾನು ಇಲ್ಲ ಹೇಳೋಕೆ ಆಗಲ್ಲ. ಅಷ್ಟು ಓಪನ್​ ಆಗಿ ಮಾತನಾಡಿದ್ದಾನೆ. ಒಂದು ವಾರ ನಾನು ಮತ್ತು ಅವನು ಫ್ರೀ ಆಗಿ ಇದ್ದಾಗ, ರೂಮಲ್ಲಿ ಒಂದಷ್ಟು ವಿಚಾರ ಹಂಚಿಕೊಂಡಿದ್ವಿ. ಅವನು ಹೇಳಿದ್ದು ಕೇಳಿದ್ರೆ ಭಯ ಆಗತ್ತೆ. ರೂಮ್​ ಅಂದ್ರೆ ಅರ್ಥ ಮಾಡಿಕೊಳ್ಳಿ. ಎಲ್ಲವನ್ನೂ ಇಲ್ಲಿ ಹೇಳೋಕೆ ಕಷ್ಟ ಆಗತ್ತೆ. ಅದನ್ನೆಲ್ಲ ಅವನು ಮರೆತಿರಬಹುದು. ನಾನು ಮರೆತಿಲ್ಲ’ ಎಂದು ಆರ್ಯವರ್ಧನ್ ಹೇಳಿದರು.

ಇದನ್ನೂ ಓದಿ
Image
‘ಬಿಗ್ ಬಾಸ್ ಕನ್ನಡ ಸೀಸನ್ 9’ ಸೇರಿದ 18 ಸ್ಪರ್ಧಿಗಳು ಇವರೇ ನೋಡಿ; ಇಲ್ಲಿದೆ ಫೋಟೋ ಹಾಗೂ ವಿವರ
Image
ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಟ್ಟ ಬೈಕ್ ರೇಸರ್ ಐಶ್ವರ್ಯಾ, ‘ಮಂಗಳಗೌರಿ ಮದುವೆ’ ಖ್ಯಾತಿಯ ಕಾವ್ಯಶ್ರೀ
Image
ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟ ನೇಹಾ ಗೌಡ ಹಾಗೂ ವಿನೋದ್​; ಇವರ ವಿಶೇಷತೆಗಳೇನು?
Image
ಬಿಗ್ ಬಾಸ್ ಮನೆ ಸೇರಿದ ಒಟಿಟಿ ಸ್ಪರ್ಧಿಗಳು; ಇವರಿಗಿರುವ ಸವಾಲುಗಳು ಒಂದೆರಡಲ್ಲ

ಎಷ್ಟೇ ಬಾಯಿ ಬಿಡಿಸಿದರೂ ರಾಕೇಶ್​ ಹೇಳಿಕೊಂಡಿದ್ದ ಆ ಮಾತು ಏನು ಎಂಬುದನ್ನು ಆರ್ಯವರ್ಧನ್​ ಬಹಿರಂಗಪಡಿಸಲಿಲ್ಲ. ‘ನೇರವಾಗಿ ಹೇಳಿ’ ಎಂದು ಸ್ವತಃ ರಾಕೇಶ್​ ಹೇಳಿದರೂ ಕೂಡ ಆರ್ಯವರ್ಧನ್ ಬಾಯಿ ಬಿಡಲಿಲ್ಲ. ಒಟ್ಟಿನಲ್ಲಿ ಅವರ ಮಾತುಗಳನ್ನು ಕೇಳಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ.

ತಾವು ಆರ್ಯವರ್ಧನ್​ ರೀತಿ ಆಗಲ್ಲ ಎಂದು ಅನೇಕರು ಹೇಳಿದ್ದಾರೆ. ಕಾವ್ಯಶ್ರೀ ಗೌಡ, ಅರುಣ್ ಸಾಗರ್, ವಿನೋದ್​ ಗೊಬ್ಬರಗಾಲ, ರಾಕೇಶ್​ ಮುಂತಾದವರ ಕಡೆಯಿಂದ ಈ ಅಭಿಪ್ರಾಯ ಬಂತು. ‘ಇವರಿಗೆ ಗ್ರಹಗತಿ, ನಕ್ಷತ್ರ ಎಲ್ಲ ಅರ್ಥ ಆಗತ್ತೆ. ಆದ್ರೆ ಟಾಸ್ಕ್​ ಅರ್ಥ ಆಗಲ್ಲ ಅಂದ್ರೆ ಹೆಂಗೆ?’ ಎಂದು ರಾಕೇಶ್​ ಪ್ರಶ್ನಿಸಿದರು. ಹಾಗಾಗಿ ತಾವು ಆರ್ಯವರ್ಧನ್​ ರೀತಿ ಆಗಲು ಇಷ್ಟಪಡುವುದಿಲ್ಲ ಎಂದು ಅವರು ಹೇಳಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ