AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶಾರ್ಕ್​ ಟ್ಯಾಂಕ್’ಗೆ ಪ್ರತಿ ಜಡ್ಜ್​​ಗಳು ಪಡೆದ ಸಂಭಾವನೆ ಎಷ್ಟು? ಇಲ್ಲಿದೆ ಅಚ್ಚರಿಯ ವಿಚಾರ

ಅಶ್ನೀರ್, ವಿನೀತ್​ ಸಿಂಗ್, ಪೀಯುಶ್ ಬನ್ಸಲ್, ನಮಿತಾ ಥಾಪರ್, ಅಮನ್​ ಗುಪ್ತಾ, ಘಜಲ್, ಅನುಪಮ್ ಮಿತ್ತಲ್​ ಈ ಶೋನಲ್ಲಿ ಶಾರ್ಕ್​ ಆಗಿ ಕಾಣಿಸಿಕೊಂಡಿದ್ದರು. ಇವರು ಪ್ರತಿ ಎಪಿಸೋಡ್​ಗೆ ಲಕ್ಷ ಲಕ್ಷ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿತ್ತು.

‘ಶಾರ್ಕ್​ ಟ್ಯಾಂಕ್’ಗೆ ಪ್ರತಿ ಜಡ್ಜ್​​ಗಳು ಪಡೆದ ಸಂಭಾವನೆ ಎಷ್ಟು? ಇಲ್ಲಿದೆ ಅಚ್ಚರಿಯ ವಿಚಾರ
ಶಾರ್ಕ್​ ಟ್ಯಾಂಕ್
TV9 Web
| Edited By: |

Updated on: May 06, 2022 | 5:16 PM

Share

‘ಶಾರ್ಕ್​ ಟ್ಯಾಂಕ್’ ರಿಯಾಲಿಟಿ ಶೋನ (Shark Tank Show) ಮೊದಲ ಸೀಸನ್ ಪೂರ್ಣಗೊಂಡಿದೆ. ಈ ಶೋ ವೀಕ್ಷಕರಿಗೆ ಇಷ್ಟವಾಗಿದೆ. ಸೋನಿಯಲ್ಲಿ ಪ್ರಸಾರವಾಗಿದ್ದ ಈ ಶೋನ ಎರಡನೇ ಸೀಸನ್ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಇದು ಭಾರತದ ವೀಕ್ಷಕರ ಪಾಲಿಗೆ ಹೊಸ ರೀತಿಯ ಶೋ. ಸ್ಟಾರ್ಟ್​ಅಪ್​ ಆರಂಭಿಸಿದವರು ಹೂಡಿಕೆ ಪಡೆಯಲು ಈ ಶೋಗೆ ಬರುತ್ತಾರೆ. ಈ ಶೋನ ಶಾರ್ಕ್​​ಗಳ (ಜಡ್ಜ್​​) ಬಳಿ ತಮ್ಮ ಐಡಿಯಾ ಹೇಳುತ್ತಾರೆ. ಈ ಐಡಿಯಾ ಇಷ್ಟವಾದರೆ ಶಾರ್ಕ್​ಗಳು ಹಣ ಹೂಡಿಕೆಗೆ ಒಪ್ಪಿಕೊಳ್ಳುತ್ತಾರೆ. ಭಾರತ್​ಪೇನ (BharatPe) ಸಹ ಸಂಸ್ಥಾಪಕ ಹಾಗೂ ಮಾಜಿ ಮ್ಯಾನೆಜಿಂಗ್ ಡೈರೆಕ್ಟರ್​ ಅಶ್ನೀರ್ ಗ್ರೋವರ್ (Ashneer Grover) ಅವರು ಶಾರ್ಕ್​ ಟ್ಯಾಂಕ್​ನ ಮೊದಲ ಸೀಸನ್​ನಲ್ಲಿ ಜಡ್ಜ್​ ಆಗಿದ್ದರು. ಈಗ ಅವರು ತಮ್ಮ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ.

ಅಶ್ನೀರ್, ವಿನೀತ್​ ಸಿಂಗ್, ಪೀಯುಶ್ ಬನ್ಸಲ್, ನಮಿತಾ ಥಾಪರ್, ಅಮನ್​ ಗುಪ್ತಾ, ಘಜಲ್, ಅನುಪಮ್ ಮಿತ್ತಲ್​ ಈ ಶೋನಲ್ಲಿ ಶಾರ್ಕ್​ ಆಗಿ ಕಾಣಿಸಿಕೊಂಡಿದ್ದರು. ಇವರು ಪ್ರತಿ ಎಪಿಸೋಡ್​ಗೆ ಲಕ್ಷ ಲಕ್ಷ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿತ್ತು. ಆದರೆ, ಇದನ್ನು ಅಶ್ನೀರ್ ಅಲ್ಲಗಳೆದಿದ್ದಾರೆ. ಈ ಶೋನ ಯಾವ ಜಡ್ಜ್​​ಗಳಿಗೂ ಸಂಭಾವನೆ ನೀಡಿಲ್ಲ.

‘ನಾವೇನೂ ಹಣ ಮಾಡುವ ಉದ್ದೇಶದಿಂದ ಶೋಗೆ ಹೋಗಿಲ್ಲ. ನಾವು ಈ ಶೋನಿಂದ ಹಣ ಗಳಿಸಲಿಲ್ಲ. ನಾವು ಪ್ರತಿ ಎಪಿಸೋಡ್‌ಗೆ 10 ಲಕ್ಷ ರೂಪಾಯಿ ಪಡೆದಿದ್ದೇವೆ ಎಂದು ವರದಿ ಆಗಿದೆ. ಆದರೆ ನನಗೆ 5 ಲಕ್ಷ ರೂಪಾಯಿ ಸಿಕ್ಕಿದ್ದರೂ ಖುಷಿಪಡುತ್ತಿದ್ದೆ. ಈ ಶೋನ ಪರಿಕಲ್ಪನೆ ತುಂಬಾ ಸರಳ. ನಮ್ಮಲ್ಲಿ ಹಣವಿದೆ. ಹೀಗಾಗಿ ಸ್ವಲ್ಪ ಹಣವನ್ನು ಇಲ್ಲಿ ಹೂಡಿಕೆ ಮಾಡಲು ಕೋರಿದರು. ಈ ಶೋಗೆ ಒಬ್ಬರಿಗೆ 10 ಕೋಟಿ ರೂಪಾಯಿ ಹೂಡಿಕೆ ಮಾಡಲು ಅವಕಾಶ ಇತ್ತು. ನಾವು ಇದಕ್ಕೆ ಓಕೆ ಎಂದೆವು’ ಎಂದಿದ್ದಾರೆ ಅಶ್ನೀರ್.

ಇದನ್ನೂ ಓದಿ
Image
ಜ್ಯೂ.ಎನ್​ಟಿಆರ್​ ಜತೆ ಕಾಣಿಸಿಕೊಂಡ ಪ್ರಶಾಂತ್​ ನೀಲ್​; ಇದಕ್ಕಿದೆ ಮಹತ್ವದ ಕಾರಣ
Image
ಎ.ಆರ್​. ರೆಹಮಾನ್​ ಮಗಳು ಖತಿಜಾ ಮದುವೆ ಫೋಟೋಸ್​ ವೈರಲ್​; ಶುಭ ಹಾರೈಸಿದ ಸೆಲೆಬ್ರಿಟಿಗಳು
Image
‘ಗರುಡ ಗಮನ ವೃಷಭ ವಾಹನ’ ಚಿತ್ರಕ್ಕೆ ಕಿಚ್ಚನ ಚಪ್ಪಾಳೆ; ಸುದೀಪ್​ ಬರೆದ ದೀರ್ಘ ಪತ್ರದಲ್ಲಿ ಏನೇನಿದೆ?

ಸಂಭಾವನೆಯನ್ನು ಪಡೆದೇ ಇಲ್ಲ ಎಂದು ಹೇಳಿರುವ ಅಶ್ನೀರ್, ‘ನಮಗೆ ಯಾವುದೇ ಸಂಚಿಕೆಗೆ ಸಂಭಾವನೆ ನೀಡಿಲ್ಲ. ನಿಜವಾಗಿ ಹೇಳಬೇಕೆಂದರೆ ನಾವು ಹಲವು ಗಂಟೆಗಳ ಬಂಧಿತ ಕಾರ್ಮಿಕರಂತೆ ಕೆಲಸ ಮಾಡಿದ್ದೇವೆ’ ಎಂದು ಹೇಳಿದ್ದಾರೆ. ಅಶ್ನೀರ್ ಅವರ ಆಯ್ಕೆ ವೇಳೆ ಸೋನಿ ಅವರು ಮನೆಯಲ್ಲೇ ಶೂಟಿಂಗ್ ನಡೆಸಿದ್ದರು ಅನ್ನೋದು ವಿಶೇಷ.

ಹಣ ದುರುಪಯೋಗದ ಆರೋಪದ ನಂತರ ಮಾರ್ಚ್‌ನಲ್ಲಿ ಅಶ್ನೀರ್ ಭಾರತ್‌ಪೇ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ್ದರು. ನಂತರ ಅಶ್ನೀರ್ ಹಾಗೂ ಅವರ ಪತ್ನಿ ಮಾಧುರಿ ಜೈನ್ ಗ್ರೋವರ್ ಅವರನ್ನು ಕಂಪನಿಯ ಮಂಡಳಿಯಿಂದ ತೆಗೆದುಹಾಕಲಾಯಿತು.

ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

Follow Us
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್