AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೀತಾ ರಾಮ’ ಧಾರಾವಾಹಿಯಲ್ಲಿ ಜೀವದ ಗೆಳೆಯನಾಗಿ ಮಿಂಚಿದ ಅಶೋಕ; ನಟನೆಗೆ ಭರ್ಜರಿ ಮೆಚ್ಚುಗೆ

‘ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ’ ಸಿನಿಮಾದಲ್ಲಿ ಅಶೋಕ್ ಅವರು ದತ್ತು ಹೆಸರಿನ ಪಾತ್ರ ಮಾಡಿದ್ದರು. ಯಶ್ ಗೆಳೆಯನಾಗಿ ಅವರು ಗಮನ ಸೆಳೆದಿದ್ದರು. ‘ಗೂಗ್ಲಿ’ ಸಿನಿಮಾದಲ್ಲೂ ಯಶ್ ಗೆಳೆಯನಾಗಿ ಗಮನ ಸೆಳೆದಿದ್ದರು. ಈಗ ‘ಸೀತಾ ರಾಮ’ ಧಾರಾವಾಹಿಯಲ್ಲೂ ಅವರ ನಟನೆಗೆ ಮೆಚ್ಚುಗೆ ಸಿಗುತ್ತಿದೆ.

‘ಸೀತಾ ರಾಮ’ ಧಾರಾವಾಹಿಯಲ್ಲಿ ಜೀವದ ಗೆಳೆಯನಾಗಿ ಮಿಂಚಿದ ಅಶೋಕ; ನಟನೆಗೆ ಭರ್ಜರಿ ಮೆಚ್ಚುಗೆ
ಅಶೋಕ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 30, 2023 | 2:56 PM

Share

‘ಸೀತಾ ರಾಮ’ ಧಾರಾವಾಹಿ (Seetha Raama Serial) ಇತ್ತೀಚೆಗೆ 50 ಎಪಿಸೋಡ್​ಗಳನ್ನು ಪೂರೈಸಿದೆ. ಕಥಾ ನಾಯಕ ರಾಮ್ (ಗಗನ್ ಚಿನ್ನಪ್ಪ) ಗೆಳೆಯನ ಪಾತ್ರದಲ್ಲಿ ಅಶೋಕ್ ನಟಿಸುತ್ತಿದ್ದಾರೆ. ಧಾರಾವಾಹಿಯಲ್ಲಿ ಅವರ ಪಾತ್ರದ ಹೆಸರು ಅಶೋಕ್ ಎಂದೇ ಇದೆ. ರಾಮ್ (Ram) ಹಾಗೂ ಅಶೋಕ್ ಮಧ್ಯೆ ಇರುವ ಫ್ರೆಂಡ್​ಶಿಪ್ ಎಲ್ಲರ ಗಮನ ಸೆಳೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭರ್ಜರಿ ಚರ್ಚೆ ಆಗುತ್ತಿದೆ. ಧಾರಾವಾಹಿಯಲ್ಲಿ ಇತ್ತೀಚೆಗೆ ಪ್ರಸಾರ ಕಂಡ ಎಪಿಸೋಡ್ ಸಾಕಷ್ಟು ಹೈಲೈಟ್ ಆಗಿದೆ.

ಸೂರಿ (ಮುಖ್ಯಮಂತ್ರಿ) ಕಟ್ಟಿ ಬೆಳೆಸಿದ ಕಂಪನಿಗೆ ರಾಮ್ ಬಾಸ್. ಈ ಕಂಪನಿಯಲ್ಲಿ ಸಾಕಷ್ಟು ಗೋಲ್​ಮಾಲ್ ಆಗಿದೆ ಎನ್ನುವ ಅನುಮಾನ ಸೂರಿ, ಅಶೋಕ್ ಹಾಗೂ ರಾಮ್​ಗೆ ಬರುತ್ತದೆ. ಈ ಕಾರಣದಿಂದಲೇ ಅಶೋಕ್​ನ (ಪಾತ್ರದ ಹೆಸರು) ಬಾಸ್ ಎಂದು ಬಿಂಬಿಸಲಾಗಿದೆ. ಕಂಪನಿಯಲ್ಲಾದ ಎಲ್ಲಾ ಹಗರಣಗಳಿಗೆ ಸೂರಿಯ ಸೊಸೆ ಭಾರ್ಗವಿಯದ್ದೇ (ಪೂಜಾ ಲೋಕೇಶ್) ಮಾಸ್ಟರ್​ಮೈಂಡ್. ಆದರೆ, ಇದನ್ನು ಅವಳು ಮುಚ್ಚಿಟ್ಟಿದ್ದಾಳೆ. ಈ ವಿಚಾರದಲ್ಲಿ ಅಶೋಕ್​ಗೆ ಅನುಮಾನ ಶುರುವಾಗಿದೆ. ಈ ಕಾರಣದಿಂದಲೇ ಅಶೋಕ್ ಅಲರ್ಟ್ ಆಗಿದ್ದಾನೆ.

ಬಾಸ್ ಚೇರ್ ಮೇಲೆ ಕುಳಿತ ಕಾರಣಕ್ಕೆ ಅಶೋಕನಿಗೆ ಅವಮಾನ ಮಾಡುವ ಕೆಲಸವನ್ನು ಭಾರ್ಗವಿ ಮಾಡಿದ್ದಳು. ಈ ವೇಳೆ ಆತ ಕಣ್ಣೀರು ಹಾಕಿದ್ದ. ಆದರೆ, ರಾಮ್​ನ ಬಿಟ್ಟುಕೊಟ್ಟಿಲ್ಲ. ಅವನು ಭಾರ್ಗವಿಯ ಬಣ್ಣ ಬಯಲು ಪ್ರಯತ್ನಿಸಿದರೂ ಇದನ್ನು ಒಪ್ಪುತ್ತಿಲ್ಲ. ಈ ದೃಶ್ಯ ಅನೇಕರಿಗೆ ಇಷ್ಟವಾಗಿದೆ. ಅಶೋಕನ ಪಾತ್ರವನ್ನು ಅಶೋಕ್ ಶರ್ಮ ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ ಎಂದು ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಅವರಿಗೆ ಈ ರೀತಿಯ ಪಾತ್ರ ಹೊಂದುತ್ತದೆ ಎಂದು ಅನೇಕರು ಹೇಳಿದ್ದಾರೆ.

‘ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ’ ಸಿನಿಮಾದಲ್ಲಿ ಅಶೋಕ್ ಅವರು ದತ್ತು ಹೆಸರಿನ ಪಾತ್ರ ಮಾಡಿದ್ದರು. ಯಶ್ ಗೆಳೆಯನಾಗಿ ಅವರು ಗಮನ ಸೆಳೆದಿದ್ದರು. ‘ಗೂಗ್ಲಿ’ ಸಿನಿಮಾದಲ್ಲೂ ಯಶ್ ಗೆಳೆಯನಾಗಿ ಗಮನ ಸೆಳೆದಿದ್ದರು. ಈಗ ‘ಸೀತಾ ರಾಮ’ ಧಾರಾವಾಹಿಯಲ್ಲೂ ಅವರ ನಟನೆಗೆ ಮೆಚ್ಚುಗೆ ಸಿಗುತ್ತಿದೆ.

View this post on Instagram

A post shared by Zee Kannada (@zeekannada)

ಇದನ್ನೂ ಓದಿ: Seetha Raama: ಸೀತಾ ರಾಮರ ನಡುವಿನ ವಿಷಯದಲ್ಲಿ ಅಶೋಕ್ ತೊಳಲಾಟ; ಪ್ರಿಯಾಗೆ ಪ್ರಾಣಸಂಕಟ!

ಧಾರಾವಾಹಿ ವೀಕ್ಷಿಸುವವರು ಇದು ನಿಜಜೀವನದಲ್ಲೇ ನಡೆಯುತ್ತಿರುವ ಘಟನೆ ಎಂಬ ರೀತಿಯಲ್ಲಿ ಪರಿಗಣಿಸುತ್ತಾರೆ. ಹೀಗಾಗಿ, ಅಶೋಕ್​ಗೆ ನ್ಯಾಯ ಸಿಗಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ. ‘ಅಶೋಕ್​​​ಗೆ ಆದ ಅವಮಾನಕ್ಕೆ ಭಾರ್ಗವಿ ಕ್ಷಮೆ ಕೇಳಲೇಬೇಕು’ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್