AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama: ಸೀತಾ ರಾಮರ ನಡುವಿನ ವಿಷಯದಲ್ಲಿ ಅಶೋಕ್ ತೊಳಲಾಟ; ಪ್ರಿಯಾಗೆ ಪ್ರಾಣಸಂಕಟ!

ಅಶೋಕ್ ಪ್ರಿಯಾಳ ಬಳಿ ಅಡ್ವಾನ್ಸ್ ಸ್ಯಾಲರಿ ವಿಷಯವನ್ನು ಹೇಳುತ್ತಾನೆ. ಅದನ್ನು ಕೇಳಿ ಅವಳಿಗೆ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತಾಗುತ್ತದೆ. ಪ್ರಿಯಾ ಆಫೀಸ್ ಹಣವನ್ನು ಹಿಂತಿರುಗಿಸಿ ಕೊಡುತ್ತಾಳಾ? ಈ ವಿಷಯವಾಗಿ ಸೀತಾಳ ಅಭಿಪ್ರಾಯ ಏನಾಗಿರಬಹುದು? ಕಾದು ನೋಡೋಣ.

Seetha Raama: ಸೀತಾ ರಾಮರ ನಡುವಿನ ವಿಷಯದಲ್ಲಿ ಅಶೋಕ್ ತೊಳಲಾಟ; ಪ್ರಿಯಾಗೆ ಪ್ರಾಣಸಂಕಟ!
ವೈಷ್ಣವಿ ಗೌಡ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Sep 16, 2023 | 2:46 PM

Share

‘ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 46: ಪಿಕ್ನಿಕ್​​ಗೆ ಹೋಗಲು ಅಮ್ಮನ ಒಪ್ಪಿಗೆಯನ್ನು ಪಡೆಯಲು ಕಾಯುತ್ತಿರುವ ಸಿಹಿಗೆ, ಕತ್ತಲಾದರೂ ಸೀತಮ್ಮ ಬಂದಿಲ್ಲ ಎಂಬ ಚಿಂತೆ ಶುರುವಾಗುತ್ತದೆ. ತನ್ನ ಅಮ್ಮನನ್ನು ಮೆಚ್ಚಿಸಲು ಎಲ್ಲ ಸಿದ್ಧತೆಗಳನ್ನು ಮಾಡಿ ಕಾಯುತ್ತಾಳೆ. ಇನ್ನು ಅಡ್ವಾನ್ಸ್ ಸ್ಯಾಲರಿ ವಿಚಾರವಾಗಿ ರಾಮ್, ಅಶೋಕ್​ನಿಗೆ ಒಂದು ಮೀಟಿಂಗ್ ಕರೆದು ಮಾತನಾಡುವಂತೆ ಹೇಳುತ್ತಾನೆ. ಅದೇ ರೀತಿ ಮಾಡಿದ ಅಶೋಕ್ ಪ್ರಿಯಾ ಮತ್ತು ಸೀತಾಳನ್ನು ಕರೆಯುತ್ತಾನೆ.

ಸೀತಾ ಕತ್ತಲಾದರೂ ಮನೆಗೆ ಬರದಿದ್ದನ್ನು ನೋಡಿ ಅಕ್ಕ ಪಕ್ಕದ ಮನೆಯವರು ನೂರಾರು ಕಥೆ ಕಟ್ಟಿ ಸಿಹಿಗೆ ಹೇಳುತ್ತಾರೆ. ಏನು ಅರ್ಥವಾಗದ ಸಿಹಿ ಅಮ್ಮನ ಪರ ವಹಿಸಿ ಮಾತನಾಡುತ್ತಾಳೆ. ಅಷ್ಟು ಹೊತ್ತಿಗೆ ಅಲ್ಲಿಗೆ ಬಂದ ಸಿಹಿಯ ಅಜ್ಜಿ ಅವರಿಗೆಲ್ಲಾ ಬುದ್ದಿವಾದ ಹೇಳುವುದರ ಜೊತೆಗೆ ಸೀತಾಳನ್ನು ವಹಿಸಿಕೊಂಡು ಮಾತನಾಡುತ್ತಾರೆ.

ಇದನ್ನೂ ಓದಿ: Seetha Raama: ಭಾರ್ಗವಿಯ ಮೋಸದಾಟ ರಾಮ್ ಮತ್ತು ಸೂರ್ಯ ಪ್ರಕಾಶ್​ಗೆ ತಿಳಿಯುತ್ತಾ?

ಅಶೋಕ್ ಕರೆದ ಮೀಟಿಂಗ್​ಗೆ ಸೀತಾ, ರಾಮ್ ಮತ್ತು ಪ್ರಿಯಾ ಬರುತ್ತಾರೆ. ರಾಮ್​ನಿಗೆ ವಿಷಯ ಗೊತ್ತಿದ್ದರೂ ಹೇಳಲಾಗದ ಸಂದರ್ಭ. ಇನ್ನು ಪ್ರಿಯಾಳಿಗೆ ನನ್ನ ಬಳಿ ಪ್ರೀತಿಯ ವಿಷಯವನ್ನು ಮಾತನಾಡಲು ಕರೆದಿದ್ದಾರೆ ಎಂಬ ನಂಬಿಕೆ. ಸೀತಾಳಿಗೆ ಇದಾವುದರ ಬಗ್ಗೆ ಚಿಂತೆ ಇಲ್ಲವಾದರೂ ಮನೆಗೆ ಹೋಗಲು ತಡವಾಗುತ್ತದೆ ಎಂಬ ಕೊರಗು ಕಾಡುತ್ತದೆ. ಸಿಹಿಗೂ ಕರೆ ಮಾಡಿ ಈ ವಿಷಯ ತಿಳಿಸುತ್ತಾಳೆ. ಅವಳು ಬೇಸರ ಮಾಡಿಕೊಂಡರೂ ಸೀತಾಳಿಗೆ ಬೇರೆ ದಾರಿ ಇರುವುದಿಲ್ಲ. ಇನ್ನು ಅಶೋಕ್ ಪ್ರಿಯಾ ಒಬ್ಬಳೇ ಒಳಗೆ ಬಂದಿದ್ದರಿಂದ ಅಡ್ವಾನ್ಸ್ ಸ್ಯಾಲರಿ ವಿಷಯವನ್ನು ಹೇಳುತ್ತಾನೆ. ಅದನ್ನು ಕೇಳಿ ಅವಳಿಗೆ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತಾಗುತ್ತದೆ. ಹಾಗಾದರೆ ಪ್ರಿಯಾ ಆಫೀಸ್ ಹಣವನ್ನು ಹಿಂತಿರುಗಿಸಿ ಕೊಡುತ್ತಾಳಾ? ಈ ವಿಷಯವಾಗಿ ಸೀತಾಳ ಅಭಿಪ್ರಾಯ ಏನಾಗಿರಬಹುದು? ಕಾದು ನೋಡೋಣ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು