AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama: ಭಾರ್ಗವಿಯ ಮೋಸದಾಟ ರಾಮ್ ಮತ್ತು ಸೂರ್ಯ ಪ್ರಕಾಶ್​ಗೆ ತಿಳಿಯುತ್ತಾ?

ಅಶೋಕ್ ಆಫೀಸ್​ನಿಂದ ಕೆಲವು ಮಾಹಿತಿಗಳನ್ನು ತಂದು ಸೂರ್ಯ ಪ್ರಕಾಶ್ ಮತ್ತು ಶ್ರೀರಾಮನ ಮುಂದೆ ಇಟ್ಟಿದ್ದಾನೆ. ಅದನ್ನೆಲ್ಲಾ ನೋಡಿ ಇಬ್ಬರಿಗೂ ಆತಂಕವಾಗುತ್ತದೆ. ಇದನ್ನೆಲ್ಲಾ ಭಾರ್ಗವಿ ಬಳಿ ಕೇಳೋಣ ಎಂದು ರಾಮ್ ಹೊರಡುತ್ತಾನೆ. ಆದರೆ ಅವನನ್ನು ಅಶೋಕ್ ತಡೆಯುತ್ತಾನೆ. ಭಾರ್ಗವಿಯ ಮೋಸದಾಟ ರಾಮ್ ಮತ್ತು ಸೂರ್ಯ ಪ್ರಕಾಶ್​ಗೆ ತಿಳಿಯುತ್ತಾ? ರಾಮನಿಗೆ ಮದ್ದರೆಯುತ್ತಿರುವ ಭಾರ್ಗವಿಗೆ ಅಶೋಕ್ ಶಾಕ್ ಕೊಡುತ್ತಾನಾ? ಕಾದು ನೋಡೋಣ.

Seetha Raama: ಭಾರ್ಗವಿಯ ಮೋಸದಾಟ ರಾಮ್ ಮತ್ತು ಸೂರ್ಯ ಪ್ರಕಾಶ್​ಗೆ ತಿಳಿಯುತ್ತಾ?
ಗಗನ್​ ಚಿನ್ನಪ್ಪ
Follow us
ಪ್ರೀತಿ ಭಟ್​, ಗುಣವಂತೆ
| Updated By: ಮದನ್​ ಕುಮಾರ್​

Updated on: Sep 11, 2023 | 10:44 PM

‘ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 42: ಸೀತಾ ಮತ್ತು ಸಿಹಿ ತಮ್ಮ ವಠಾರದಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿಯಲ್ಲಿ ಕೃಷ್ಣ, ಯಶೋದೆಯಾಗಿ ಎಲ್ಲರ ಮನಗೆಲ್ಲುತ್ತಾರೆ. ಇನ್ನು ರಾಮನ ಜೊತೆಯಲ್ಲಿ ಬಂದ ಅಶೋಕ್, ಸೀತಾಳ ಗೆಳತಿ ಪ್ರಿಯಾಳ ಕೈಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಅವಳಿಗೆ ನೂರು ಸುಳ್ಳು ಹೇಳಿ ನಂಬಿಸುವುದರಲ್ಲಿ ಅಶೋಕ್ ಸುಸ್ತೋ ಸುಸ್ತು. ಇನ್ನು ಸಿಹಿ ಹುಡುಕಿಕೊಂಡು ಬಂದ ಶ್ರೀರಾಮ ಅವಳು ಮುದ್ದಾಗಿ ಮಲಗಿರುವುದನ್ನು ನೋಡಿ ಖುಷಿ ಪಡುತ್ತಾನೆ. ಆಗ ಸೀತಾ (Seetha) ನಿಮ್ಮ ಫ್ರೆಂಡ್​ನನ್ನು ಎಷ್ಟು ಬೇಕೋ ಅಷ್ಟು ನೋಡಿಕೊಳ್ಳಿ. ನಾಳೆ ಈ ಮನೆ ನಮ್ಮದೋ ಅಲ್ಲವೋ ಗೊತ್ತಿಲ್ಲ ಎನ್ನುತ್ತಾಳೆ. ಆ ಮಾತಿಗೆ ಶ್ರೀರಾಮ್ ಈ ಮನೆ ಸಿಹಿಯದ್ದೇ. ಇದನ್ನು ಬಿಟ್ಟು ನೀವೆಲ್ಲಿಗೂ ಹೋಗುವುದಿಲ್ಲ ಎನ್ನುತ್ತಾನೆ.

ರಾಮನನ್ನು ಬಿಟ್ಟು ಅಶೋಕ್ ಆ ರಾತ್ರಿಯಲ್ಲಿ ಆಫೀಸ್ ಗೆ ಬರುತ್ತಾನೆ. ಮ್ಯಾನೇಜರ್ ಚರಣ್ ಪಾತ್ರಧಾರಿ, ಅದಕ್ಕೆ ಸೂತ್ರಧಾರಿ ಭಾರ್ಗವಿ ಆಗಿರಬಹುದು ಎಂಬ ಅನುಮಾನವನ್ನು ಅವನಿಗೆ ಬಗೆಹರಿಸಿಕೊಳ್ಳಬೇಕಾಗಿರುತ್ತದೆ. ರಾಮನಿಗೆ ಈ ವಿಚಾರ ಹೇಳದೇ ಆಫೀಸ್​ನಲ್ಲಿ ಕೆಲಸ ಇದೆ ನೀನು ಮನೆಗೆ ಹೊರಡು ಎನ್ನುತ್ತಾನೆ. ಇನ್ನು ರಾಮನ ಚಿಕ್ಕಿ ಭಾರ್ಗವಿ ತನ್ನ ಮಾತನ್ನು ಮೀರಿ ಹೊರಗಡೆ ಹೋದ ರಾಮನ ಜೀವನವನ್ನೇ ಸರ್ವನಾಶ ಮಾಡಲು ಪಣ ತೊಡುತ್ತಾಳೆ.

ಇದನ್ನೂ ಓದಿ:  ‘ಸೀತಾ ರಾಮ’ ಧಾರಾವಾಹಿ ಮೂಲಕ ಗಮನ ಸೆಳೆದ ವೈಷ್ಣವಿ

ಸೀತಾ ಮನೆಯಲ್ಲಿ ಅವಳ ಅತ್ತಿಗೆ ಬೆನ್ನು ಬಿಡದ ಬೇತಾಳದಂತೆ ಅವಳ ಮನೆ ಮಾರಾಟ ಮಾಡಲು ಹಿಂದೆ ಬೀಳುತ್ತಾಳೆ. ಆದರೆ ಸೀತಾ ಮನೆ ಮಾರಾಟ ಮಾಡುವುದಿಲ್ಲ ಎನ್ನುವುದನ್ನು ಕೇಳಿ ಅವಳಿಗೆ ತಾನು ದುಡ್ಡು ಹೊಡೆಯಲು ಮಾಡಿದ್ದ ಪ್ಲಾನ್ ಹಾಳಾಯಿತಲ್ಲ ಎಂದು ಬೇಸರವಾಗುತ್ತದೆ. ಸಿಹಿಗೆ ಅವಳಮ್ಮನ ಮಾತು ಕೇಳಿ ಖುಷಿಯಾಗುತ್ತದೆ. ಆದರೆ ಸೀತಾಳಿಗೆ ಮಾತ್ರ ಹೇಗೆ ಮನೆ ಉಳಿಸಿಕೊಳ್ಳುವುದು, ಆಫೀಸ್ ಹಣ ಬರುತ್ತಾ? ಎಂದೆಲ್ಲಾ ಚಿಂತೆಯಾಗುತ್ತದೆ.

ಇದನ್ನೂ ಓದಿ: ಟಿಆರ್​ಪಿ ವಿವರ: ಎರಡನೇ ಸ್ಥಾನದಲ್ಲೇ ಮುಂದುವರಿದ ‘ಸೀತಾ ರಾಮ’; ಟಾಪ್ 5 ಧಾರಾವಾಹಿಗಳಿವು..

ಇನ್ನು ಅಶೋಕ್ ಆಫೀಸ್​ನಿಂದ ಕೆಲವು ಮಾಹಿತಿಗಳನ್ನು ತಂದು ಸೂರ್ಯ ಪ್ರಕಾಶ್ ಮತ್ತು ಶ್ರೀರಾಮನ ಮುಂದೆ ಇಟ್ಟಿದ್ದಾನೆ. ಅದನ್ನೆಲ್ಲಾ ನೋಡಿ ಇಬ್ಬರಿಗೂ ಆತಂಕವಾಗುತ್ತದೆ. ಇದನ್ನೆಲ್ಲಾ ಭಾರ್ಗವಿ ಬಳಿ ಕೇಳೋಣ ಎಂದು ರಾಮ್ ಹೊರಡುತ್ತಾನೆ. ಆದರೆ ಅವನನ್ನು ಅಶೋಕ್ ತಡೆಯುತ್ತಾನೆ. ಭಾರ್ಗವಿಯ ಮೋಸದಾಟ ರಾಮ್ ಮತ್ತು ಸೂರ್ಯ ಪ್ರಕಾಶ್​ಗೆ ತಿಳಿಯುತ್ತಾ? ರಾಮನಿಗೆ ಮದ್ದರೆಯುತ್ತಿರುವ ಭಾರ್ಗವಿಗೆ ಅಶೋಕ್ ಶಾಕ್ ಕೊಡುತ್ತಾನಾ? ಕಾದು ನೋಡೋಣ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಮ್ಮ ಪಕ್ಷದ ಅಧ್ಯಕ್ಷರಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ನಾಯಕ
ತಮ್ಮ ಪಕ್ಷದ ಅಧ್ಯಕ್ಷರಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ನಾಯಕ
ರಾಜಸ್ಥಾನ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಬೆಳಗಾವಿ ಕ್ರಿಕೆಟರ್​​ಗೆ ವಂಚನೆ
ರಾಜಸ್ಥಾನ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಬೆಳಗಾವಿ ಕ್ರಿಕೆಟರ್​​ಗೆ ವಂಚನೆ
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ CM-DCMಗೆ ಹೈಕಮಾಂಡ್ ಖಡಕ್​ ಸೂಚನೆ
ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ CM-DCMಗೆ ಹೈಕಮಾಂಡ್ ಖಡಕ್​ ಸೂಚನೆ