Seetha Raama: ಭಾರ್ಗವಿಯ ಮೋಸದಾಟ ರಾಮ್ ಮತ್ತು ಸೂರ್ಯ ಪ್ರಕಾಶ್​ಗೆ ತಿಳಿಯುತ್ತಾ?

ಅಶೋಕ್ ಆಫೀಸ್​ನಿಂದ ಕೆಲವು ಮಾಹಿತಿಗಳನ್ನು ತಂದು ಸೂರ್ಯ ಪ್ರಕಾಶ್ ಮತ್ತು ಶ್ರೀರಾಮನ ಮುಂದೆ ಇಟ್ಟಿದ್ದಾನೆ. ಅದನ್ನೆಲ್ಲಾ ನೋಡಿ ಇಬ್ಬರಿಗೂ ಆತಂಕವಾಗುತ್ತದೆ. ಇದನ್ನೆಲ್ಲಾ ಭಾರ್ಗವಿ ಬಳಿ ಕೇಳೋಣ ಎಂದು ರಾಮ್ ಹೊರಡುತ್ತಾನೆ. ಆದರೆ ಅವನನ್ನು ಅಶೋಕ್ ತಡೆಯುತ್ತಾನೆ. ಭಾರ್ಗವಿಯ ಮೋಸದಾಟ ರಾಮ್ ಮತ್ತು ಸೂರ್ಯ ಪ್ರಕಾಶ್​ಗೆ ತಿಳಿಯುತ್ತಾ? ರಾಮನಿಗೆ ಮದ್ದರೆಯುತ್ತಿರುವ ಭಾರ್ಗವಿಗೆ ಅಶೋಕ್ ಶಾಕ್ ಕೊಡುತ್ತಾನಾ? ಕಾದು ನೋಡೋಣ.

Seetha Raama: ಭಾರ್ಗವಿಯ ಮೋಸದಾಟ ರಾಮ್ ಮತ್ತು ಸೂರ್ಯ ಪ್ರಕಾಶ್​ಗೆ ತಿಳಿಯುತ್ತಾ?
ಗಗನ್​ ಚಿನ್ನಪ್ಪ
Follow us
| Updated By: ಮದನ್​ ಕುಮಾರ್​

Updated on: Sep 11, 2023 | 10:44 PM

‘ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 42: ಸೀತಾ ಮತ್ತು ಸಿಹಿ ತಮ್ಮ ವಠಾರದಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿಯಲ್ಲಿ ಕೃಷ್ಣ, ಯಶೋದೆಯಾಗಿ ಎಲ್ಲರ ಮನಗೆಲ್ಲುತ್ತಾರೆ. ಇನ್ನು ರಾಮನ ಜೊತೆಯಲ್ಲಿ ಬಂದ ಅಶೋಕ್, ಸೀತಾಳ ಗೆಳತಿ ಪ್ರಿಯಾಳ ಕೈಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಅವಳಿಗೆ ನೂರು ಸುಳ್ಳು ಹೇಳಿ ನಂಬಿಸುವುದರಲ್ಲಿ ಅಶೋಕ್ ಸುಸ್ತೋ ಸುಸ್ತು. ಇನ್ನು ಸಿಹಿ ಹುಡುಕಿಕೊಂಡು ಬಂದ ಶ್ರೀರಾಮ ಅವಳು ಮುದ್ದಾಗಿ ಮಲಗಿರುವುದನ್ನು ನೋಡಿ ಖುಷಿ ಪಡುತ್ತಾನೆ. ಆಗ ಸೀತಾ (Seetha) ನಿಮ್ಮ ಫ್ರೆಂಡ್​ನನ್ನು ಎಷ್ಟು ಬೇಕೋ ಅಷ್ಟು ನೋಡಿಕೊಳ್ಳಿ. ನಾಳೆ ಈ ಮನೆ ನಮ್ಮದೋ ಅಲ್ಲವೋ ಗೊತ್ತಿಲ್ಲ ಎನ್ನುತ್ತಾಳೆ. ಆ ಮಾತಿಗೆ ಶ್ರೀರಾಮ್ ಈ ಮನೆ ಸಿಹಿಯದ್ದೇ. ಇದನ್ನು ಬಿಟ್ಟು ನೀವೆಲ್ಲಿಗೂ ಹೋಗುವುದಿಲ್ಲ ಎನ್ನುತ್ತಾನೆ.

ರಾಮನನ್ನು ಬಿಟ್ಟು ಅಶೋಕ್ ಆ ರಾತ್ರಿಯಲ್ಲಿ ಆಫೀಸ್ ಗೆ ಬರುತ್ತಾನೆ. ಮ್ಯಾನೇಜರ್ ಚರಣ್ ಪಾತ್ರಧಾರಿ, ಅದಕ್ಕೆ ಸೂತ್ರಧಾರಿ ಭಾರ್ಗವಿ ಆಗಿರಬಹುದು ಎಂಬ ಅನುಮಾನವನ್ನು ಅವನಿಗೆ ಬಗೆಹರಿಸಿಕೊಳ್ಳಬೇಕಾಗಿರುತ್ತದೆ. ರಾಮನಿಗೆ ಈ ವಿಚಾರ ಹೇಳದೇ ಆಫೀಸ್​ನಲ್ಲಿ ಕೆಲಸ ಇದೆ ನೀನು ಮನೆಗೆ ಹೊರಡು ಎನ್ನುತ್ತಾನೆ. ಇನ್ನು ರಾಮನ ಚಿಕ್ಕಿ ಭಾರ್ಗವಿ ತನ್ನ ಮಾತನ್ನು ಮೀರಿ ಹೊರಗಡೆ ಹೋದ ರಾಮನ ಜೀವನವನ್ನೇ ಸರ್ವನಾಶ ಮಾಡಲು ಪಣ ತೊಡುತ್ತಾಳೆ.

ಇದನ್ನೂ ಓದಿ:  ‘ಸೀತಾ ರಾಮ’ ಧಾರಾವಾಹಿ ಮೂಲಕ ಗಮನ ಸೆಳೆದ ವೈಷ್ಣವಿ

ಸೀತಾ ಮನೆಯಲ್ಲಿ ಅವಳ ಅತ್ತಿಗೆ ಬೆನ್ನು ಬಿಡದ ಬೇತಾಳದಂತೆ ಅವಳ ಮನೆ ಮಾರಾಟ ಮಾಡಲು ಹಿಂದೆ ಬೀಳುತ್ತಾಳೆ. ಆದರೆ ಸೀತಾ ಮನೆ ಮಾರಾಟ ಮಾಡುವುದಿಲ್ಲ ಎನ್ನುವುದನ್ನು ಕೇಳಿ ಅವಳಿಗೆ ತಾನು ದುಡ್ಡು ಹೊಡೆಯಲು ಮಾಡಿದ್ದ ಪ್ಲಾನ್ ಹಾಳಾಯಿತಲ್ಲ ಎಂದು ಬೇಸರವಾಗುತ್ತದೆ. ಸಿಹಿಗೆ ಅವಳಮ್ಮನ ಮಾತು ಕೇಳಿ ಖುಷಿಯಾಗುತ್ತದೆ. ಆದರೆ ಸೀತಾಳಿಗೆ ಮಾತ್ರ ಹೇಗೆ ಮನೆ ಉಳಿಸಿಕೊಳ್ಳುವುದು, ಆಫೀಸ್ ಹಣ ಬರುತ್ತಾ? ಎಂದೆಲ್ಲಾ ಚಿಂತೆಯಾಗುತ್ತದೆ.

ಇದನ್ನೂ ಓದಿ: ಟಿಆರ್​ಪಿ ವಿವರ: ಎರಡನೇ ಸ್ಥಾನದಲ್ಲೇ ಮುಂದುವರಿದ ‘ಸೀತಾ ರಾಮ’; ಟಾಪ್ 5 ಧಾರಾವಾಹಿಗಳಿವು..

ಇನ್ನು ಅಶೋಕ್ ಆಫೀಸ್​ನಿಂದ ಕೆಲವು ಮಾಹಿತಿಗಳನ್ನು ತಂದು ಸೂರ್ಯ ಪ್ರಕಾಶ್ ಮತ್ತು ಶ್ರೀರಾಮನ ಮುಂದೆ ಇಟ್ಟಿದ್ದಾನೆ. ಅದನ್ನೆಲ್ಲಾ ನೋಡಿ ಇಬ್ಬರಿಗೂ ಆತಂಕವಾಗುತ್ತದೆ. ಇದನ್ನೆಲ್ಲಾ ಭಾರ್ಗವಿ ಬಳಿ ಕೇಳೋಣ ಎಂದು ರಾಮ್ ಹೊರಡುತ್ತಾನೆ. ಆದರೆ ಅವನನ್ನು ಅಶೋಕ್ ತಡೆಯುತ್ತಾನೆ. ಭಾರ್ಗವಿಯ ಮೋಸದಾಟ ರಾಮ್ ಮತ್ತು ಸೂರ್ಯ ಪ್ರಕಾಶ್​ಗೆ ತಿಳಿಯುತ್ತಾ? ರಾಮನಿಗೆ ಮದ್ದರೆಯುತ್ತಿರುವ ಭಾರ್ಗವಿಗೆ ಅಶೋಕ್ ಶಾಕ್ ಕೊಡುತ್ತಾನಾ? ಕಾದು ನೋಡೋಣ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ