AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama: ಭಾರ್ಗವಿಯ ಮೋಸದಾಟ ರಾಮ್ ಮತ್ತು ಸೂರ್ಯ ಪ್ರಕಾಶ್​ಗೆ ತಿಳಿಯುತ್ತಾ?

ಅಶೋಕ್ ಆಫೀಸ್​ನಿಂದ ಕೆಲವು ಮಾಹಿತಿಗಳನ್ನು ತಂದು ಸೂರ್ಯ ಪ್ರಕಾಶ್ ಮತ್ತು ಶ್ರೀರಾಮನ ಮುಂದೆ ಇಟ್ಟಿದ್ದಾನೆ. ಅದನ್ನೆಲ್ಲಾ ನೋಡಿ ಇಬ್ಬರಿಗೂ ಆತಂಕವಾಗುತ್ತದೆ. ಇದನ್ನೆಲ್ಲಾ ಭಾರ್ಗವಿ ಬಳಿ ಕೇಳೋಣ ಎಂದು ರಾಮ್ ಹೊರಡುತ್ತಾನೆ. ಆದರೆ ಅವನನ್ನು ಅಶೋಕ್ ತಡೆಯುತ್ತಾನೆ. ಭಾರ್ಗವಿಯ ಮೋಸದಾಟ ರಾಮ್ ಮತ್ತು ಸೂರ್ಯ ಪ್ರಕಾಶ್​ಗೆ ತಿಳಿಯುತ್ತಾ? ರಾಮನಿಗೆ ಮದ್ದರೆಯುತ್ತಿರುವ ಭಾರ್ಗವಿಗೆ ಅಶೋಕ್ ಶಾಕ್ ಕೊಡುತ್ತಾನಾ? ಕಾದು ನೋಡೋಣ.

Seetha Raama: ಭಾರ್ಗವಿಯ ಮೋಸದಾಟ ರಾಮ್ ಮತ್ತು ಸೂರ್ಯ ಪ್ರಕಾಶ್​ಗೆ ತಿಳಿಯುತ್ತಾ?
ಗಗನ್​ ಚಿನ್ನಪ್ಪ
ಪ್ರೀತಿ ಭಟ್​, ಗುಣವಂತೆ
| Updated By: ಮದನ್​ ಕುಮಾರ್​|

Updated on: Sep 11, 2023 | 10:44 PM

Share

‘ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 42: ಸೀತಾ ಮತ್ತು ಸಿಹಿ ತಮ್ಮ ವಠಾರದಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿಯಲ್ಲಿ ಕೃಷ್ಣ, ಯಶೋದೆಯಾಗಿ ಎಲ್ಲರ ಮನಗೆಲ್ಲುತ್ತಾರೆ. ಇನ್ನು ರಾಮನ ಜೊತೆಯಲ್ಲಿ ಬಂದ ಅಶೋಕ್, ಸೀತಾಳ ಗೆಳತಿ ಪ್ರಿಯಾಳ ಕೈಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಅವಳಿಗೆ ನೂರು ಸುಳ್ಳು ಹೇಳಿ ನಂಬಿಸುವುದರಲ್ಲಿ ಅಶೋಕ್ ಸುಸ್ತೋ ಸುಸ್ತು. ಇನ್ನು ಸಿಹಿ ಹುಡುಕಿಕೊಂಡು ಬಂದ ಶ್ರೀರಾಮ ಅವಳು ಮುದ್ದಾಗಿ ಮಲಗಿರುವುದನ್ನು ನೋಡಿ ಖುಷಿ ಪಡುತ್ತಾನೆ. ಆಗ ಸೀತಾ (Seetha) ನಿಮ್ಮ ಫ್ರೆಂಡ್​ನನ್ನು ಎಷ್ಟು ಬೇಕೋ ಅಷ್ಟು ನೋಡಿಕೊಳ್ಳಿ. ನಾಳೆ ಈ ಮನೆ ನಮ್ಮದೋ ಅಲ್ಲವೋ ಗೊತ್ತಿಲ್ಲ ಎನ್ನುತ್ತಾಳೆ. ಆ ಮಾತಿಗೆ ಶ್ರೀರಾಮ್ ಈ ಮನೆ ಸಿಹಿಯದ್ದೇ. ಇದನ್ನು ಬಿಟ್ಟು ನೀವೆಲ್ಲಿಗೂ ಹೋಗುವುದಿಲ್ಲ ಎನ್ನುತ್ತಾನೆ.

ರಾಮನನ್ನು ಬಿಟ್ಟು ಅಶೋಕ್ ಆ ರಾತ್ರಿಯಲ್ಲಿ ಆಫೀಸ್ ಗೆ ಬರುತ್ತಾನೆ. ಮ್ಯಾನೇಜರ್ ಚರಣ್ ಪಾತ್ರಧಾರಿ, ಅದಕ್ಕೆ ಸೂತ್ರಧಾರಿ ಭಾರ್ಗವಿ ಆಗಿರಬಹುದು ಎಂಬ ಅನುಮಾನವನ್ನು ಅವನಿಗೆ ಬಗೆಹರಿಸಿಕೊಳ್ಳಬೇಕಾಗಿರುತ್ತದೆ. ರಾಮನಿಗೆ ಈ ವಿಚಾರ ಹೇಳದೇ ಆಫೀಸ್​ನಲ್ಲಿ ಕೆಲಸ ಇದೆ ನೀನು ಮನೆಗೆ ಹೊರಡು ಎನ್ನುತ್ತಾನೆ. ಇನ್ನು ರಾಮನ ಚಿಕ್ಕಿ ಭಾರ್ಗವಿ ತನ್ನ ಮಾತನ್ನು ಮೀರಿ ಹೊರಗಡೆ ಹೋದ ರಾಮನ ಜೀವನವನ್ನೇ ಸರ್ವನಾಶ ಮಾಡಲು ಪಣ ತೊಡುತ್ತಾಳೆ.

ಇದನ್ನೂ ಓದಿ:  ‘ಸೀತಾ ರಾಮ’ ಧಾರಾವಾಹಿ ಮೂಲಕ ಗಮನ ಸೆಳೆದ ವೈಷ್ಣವಿ

ಸೀತಾ ಮನೆಯಲ್ಲಿ ಅವಳ ಅತ್ತಿಗೆ ಬೆನ್ನು ಬಿಡದ ಬೇತಾಳದಂತೆ ಅವಳ ಮನೆ ಮಾರಾಟ ಮಾಡಲು ಹಿಂದೆ ಬೀಳುತ್ತಾಳೆ. ಆದರೆ ಸೀತಾ ಮನೆ ಮಾರಾಟ ಮಾಡುವುದಿಲ್ಲ ಎನ್ನುವುದನ್ನು ಕೇಳಿ ಅವಳಿಗೆ ತಾನು ದುಡ್ಡು ಹೊಡೆಯಲು ಮಾಡಿದ್ದ ಪ್ಲಾನ್ ಹಾಳಾಯಿತಲ್ಲ ಎಂದು ಬೇಸರವಾಗುತ್ತದೆ. ಸಿಹಿಗೆ ಅವಳಮ್ಮನ ಮಾತು ಕೇಳಿ ಖುಷಿಯಾಗುತ್ತದೆ. ಆದರೆ ಸೀತಾಳಿಗೆ ಮಾತ್ರ ಹೇಗೆ ಮನೆ ಉಳಿಸಿಕೊಳ್ಳುವುದು, ಆಫೀಸ್ ಹಣ ಬರುತ್ತಾ? ಎಂದೆಲ್ಲಾ ಚಿಂತೆಯಾಗುತ್ತದೆ.

ಇದನ್ನೂ ಓದಿ: ಟಿಆರ್​ಪಿ ವಿವರ: ಎರಡನೇ ಸ್ಥಾನದಲ್ಲೇ ಮುಂದುವರಿದ ‘ಸೀತಾ ರಾಮ’; ಟಾಪ್ 5 ಧಾರಾವಾಹಿಗಳಿವು..

ಇನ್ನು ಅಶೋಕ್ ಆಫೀಸ್​ನಿಂದ ಕೆಲವು ಮಾಹಿತಿಗಳನ್ನು ತಂದು ಸೂರ್ಯ ಪ್ರಕಾಶ್ ಮತ್ತು ಶ್ರೀರಾಮನ ಮುಂದೆ ಇಟ್ಟಿದ್ದಾನೆ. ಅದನ್ನೆಲ್ಲಾ ನೋಡಿ ಇಬ್ಬರಿಗೂ ಆತಂಕವಾಗುತ್ತದೆ. ಇದನ್ನೆಲ್ಲಾ ಭಾರ್ಗವಿ ಬಳಿ ಕೇಳೋಣ ಎಂದು ರಾಮ್ ಹೊರಡುತ್ತಾನೆ. ಆದರೆ ಅವನನ್ನು ಅಶೋಕ್ ತಡೆಯುತ್ತಾನೆ. ಭಾರ್ಗವಿಯ ಮೋಸದಾಟ ರಾಮ್ ಮತ್ತು ಸೂರ್ಯ ಪ್ರಕಾಶ್​ಗೆ ತಿಳಿಯುತ್ತಾ? ರಾಮನಿಗೆ ಮದ್ದರೆಯುತ್ತಿರುವ ಭಾರ್ಗವಿಗೆ ಅಶೋಕ್ ಶಾಕ್ ಕೊಡುತ್ತಾನಾ? ಕಾದು ನೋಡೋಣ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!