AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Avinash: ‘ಕಾಳಿ ನಮ್ಮನೆಯ ಯಶೋಧಾ, ನಾನು ಹೆತ್ತವಳಷ್ಟೆ, ಆದರೆ..’; ಮಗನ ಬಗ್ಗೆ ಮಾಳವಿಕಾ ಅವಿನಾಶ್ ಮಾತು

ಯಾವ ಪರಿಸ್ಥಿತಿಯಲ್ಲಿ ಹೇಗೆ ಮಾತನಾಡಬೇಕು ಎಂಬುದು ರಮೇಶ್ ಅರವಿಂದ್​ಗೆ ಅವರಿಗೆ ಗೊತ್ತು. ಇದೇ ಕಾರಣಕ್ಕೆ ಮಗನನ್ನು ‘ವೀಕೆಂಡ್ ವಿತ್ ರಮೇಶ್’ ಶೋಗೆ ಕರೆತರೋಕೆ ಅವರು ಒಪ್ಪಿದರು.

Avinash: ‘ಕಾಳಿ ನಮ್ಮನೆಯ ಯಶೋಧಾ, ನಾನು ಹೆತ್ತವಳಷ್ಟೆ, ಆದರೆ..’; ಮಗನ ಬಗ್ಗೆ ಮಾಳವಿಕಾ ಅವಿನಾಶ್ ಮಾತು
ಗಾಲವ್-ಮಾಳವಿಕಾ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Apr 24, 2023 | 11:02 AM

Share

‘ವೀಕೆಂಡ್ ವಿತ್ ರಮೇಶ್ 5’ನೇ ಸೀಸನ್​ನಲ್ಲಿ ಕಳೆದ ವಾರ ಅತಿಥಿಯಾಗಿ ಅವಿನಾಶ್ (Avinash) ಬಂದಿದ್ದರು. ಇಂಗ್ಲಿಷ್ ಎಂಎ ಮಾಡಿ ನಂತರ ಶಿಕ್ಷಕ ವೃತ್ತಿ ಆರಂಭಿಸಿದರು. ಅವರು ನಾಟಕದಲ್ಲಿ ಆಸಕ್ತಿ ಹೊಂದಿದ್ದರು. ರಂಗಭೂಮಿಯ ಜೊತೆ ಅವರಿಗೆ ಒಡನಾಟ ಇತ್ತು. ಈಗ ಅವರು ವಿಲನ್ ಆಗಿ, ಖಡಕ್ ಪೊಲೀಸ್ ಆಗಿ ಗುರುತಿಸಿಕೊಂಡಿದ್ದಾರೆ. ಅವರು ತಮ್ಮ ಬದುಕಿನ ಪಯಣ ತೆರೆದಿಟ್ಟಿದ್ದಾರೆ. ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗ ಗಾಲವ್ ಬಗ್ಗೆ, ಆತನಿಗೆ ಇರುವ ಕಾಯಿಲೆ ಯಾವುದು ಎನ್ನುವ ಬಗ್ಗೆ ಅವಿನಾಶ್ ಹಾಗೂ ಅವರ ಪತ್ನಿ ಮಾಳವಿಕಾ ಅವಿನಾಶ್ ಮಾತನಾಡಿದ್ದಾರೆ.

ಮಾಳವಿಕಾ ಅವಿನಾಶ್ ಅವರು ಯಾವುದೇ ಶೋಗೆ ಮಗನನ್ನು ಕರೆತಂದಿಲ್ಲ. ನಿರೂಪಕರು ಕೇಳುವ ಪ್ರಶ್ನೆಯಿಂದ ತಮಗೆ ಬೇಸರ ಆಗಬಹುದು ಎನ್ನುವ ಭಯ ಅವರಿಗೆ ಇತ್ತು. ಆದರೆ, ರಮೇಶ್ ಅರವಿಂದ್ ಆ ರೀತಿ ಅಲ್ಲ. ಯಾವ ಪರಿಸ್ಥಿತಿಯಲ್ಲಿ ಹೇಗೆ ಮಾತನಾಡಬೇಕು ಎಂಬುದು ಅವರಿಗೆ ಗೊತ್ತು. ಇದೇ ಕಾರಣಕ್ಕೆ ಮಗನನ್ನು ‘ವೀಕೆಂಡ್ ವಿತ್ ರಮೇಶ್’ ಶೋಗೆ ಕರೆತರೋಕೆ ಅವರು ಒಪ್ಪಿದರು. ಈ ಮಾತನ್ನು ಸ್ವತಃ ಮಾಳವಿಕಾ ಅವಿನಾಶ್ ಹೇಳಿದ್ದಾರೆ.

‘ಮಗ ಗಾಲವ್​​ನನ್ನು ಕಾಳಿ (ಕೇರ್​ ಟೇಕರ್) ನೋಡಿಕೊಳ್ಳುತ್ತಾಳೆ. ಹೆತ್ತವಳು ಮಾತ್ರ ನಾನು, ಆದರೆ, ಇವನನ್ನು ಸಾಕುವವಳು ಇವಳೇ. ಗಾಲವ್ ಹುಟ್ಟಿದಾಗ ಎಲ್ಲರ ರೀತಿ ಇರಲಿಲ್ಲ. ಅವನನ್ನು ನೋಡಿ ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದರು. 2018ರಲ್ಲಿ ಆತನ ಆರೋಗ್ಯದಲ್ಲಿ ತೀವ್ರ ಏರುಪೇರಾಯಿತು. ಆತ 50 ದಿನ ಐಸಿಯುನಲ್ಲಿ ಇದ್ದ. ನಮ್ಮನ್ನು ಬಿಟ್ಟು ಹೋಗೋಕೆ ರೆಡಿ ಆದ ಎಂದುಕೊಂಡೆ. ಆದರೆ, ಬದುಕಿದ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಜಗತ್ತಿನಲ್ಲಿ ಎರಡು ಸಾವಿರ ಮಕ್ಕಳು ಮಾತ್ರ ಹೀಗಿರೋದು’; ಮಗನ ಪರಿಸ್ಥಿತಿ ನೆನೆದು ಅವಿನಾಶ್-ಮಾಳವಿಕಾ ಭಾವುಕ

‘ನಾವು ಒಂದು ಪರೀಕ್ಷೆ​ ಮಾಡಿಸಿದೆವು. ಅವನಿಗೆ ವುಲ್ಫ್ ಹರ್ಷೋನ್ ಸಿಂಡ್ರೋಮ್ ಇದೆ ಅಂತ ನಮಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗೊತ್ತಾಯ್ತು. ಆರಂಭದಲ್ಲಿ ನಮಗೆ ಯಾವ ವೈದ್ಯರೂ ಈ ಬಗ್ಗೆ ಹೇಳಿರಲಿಲ್ಲ. ಈ ಸಿಂಡ್ರೋಮ್ ಇದ್ದರೆ ಬುದ್ಧಿಮಾಂದ್ಯತೆ ಉಂಟಾಗುತ್ತದೆ. ಮಾತು ಬರುವುದಿಲ್ಲ. ನಡಿಗೆ ಸ್ವಲ್ಪ ಬರುತ್ತದೆ. ಆಯಸ್ಸಿನ ಬಗ್ಗೆ ಗ್ಯಾರಂಟಿ ಇಲ್ಲ. ಪರೀಕ್ಷೆ ಮಾಡಿಸಿದಾಗ, ನಿಮ್ಮ ಕಾರಣಕ್ಕೂ, ಅವಿನಾಶ್ ಕಾರಣಕ್ಕೂ ಅವನು ಹಿಗಿಲ್ಲ. ನೀವು ಅನ್​ಲಕ್ಕಿ ಅಷ್ಟೇ ಎಂದು ವೈದ್ಯರು ಹೇಳಿದರು’ ಎಂದು ಮಾಳವಿಕಾ ನೋವು ತೋಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ