AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

20 ಲಕ್ಷ ರೂಪಾಯಿ ಆಮಿಷಕ್ಕೂ ಬದಲಾಗಲಿಲ್ಲ ಬಿಗ್ ಬಾಸ್ ಫೈನಲಿಸ್ಟ್​ಗಳ ನಿಯತ್ತು

ಬಿಗ್ ಬಾಸ್ ಆಟದಲ್ಲಿ ಹಲವು ಟ್ವಿಸ್ಟ್​ಗಳು ಎದುರಾಗುತ್ತವೆ. ಈ ಬಾರಿ ಫಿನಾಲೆಯಲ್ಲಿ ಕಿಚ್ಚ ಸುದೀಪ್ ಅವರು ಒಂದು ದೊಡ್ಡ ಟ್ವಿಸ್ಟ್ ಕೊಟ್ಟರು. 5 ಫೈನಲಿಸ್ಟ್​ಗಳಿಗೆ ಒಂದು ಆಫರ್​ ಕೊಡಲಾಯಿತು. 20 ಲಕ್ಷ ರೂಪಾಯಿ ತೆಗೆದುಕೊಂಡು ಆಟವನ್ನು ಅರ್ಧಕ್ಕೆ ನಿಲ್ಲಿಸಬಹುದು ಎಂದು ಹೇಳಲಾಯಿತು. ಆದರೆ ಈ ಆಮಿಷಕ್ಕೆ ಯಾರೂ ಬಲಿ ಆಗಲಿಲ್ಲ.

20 ಲಕ್ಷ ರೂಪಾಯಿ ಆಮಿಷಕ್ಕೂ ಬದಲಾಗಲಿಲ್ಲ ಬಿಗ್ ಬಾಸ್ ಫೈನಲಿಸ್ಟ್​ಗಳ ನಿಯತ್ತು
Bigg Boss Kannada 11 Finale
ಮದನ್​ ಕುಮಾರ್​
|

Updated on: Jan 26, 2025 | 9:34 PM

Share

ಬಿಗ್ ಬಾಸ್ ಎಂಬುದು ಕೇವಲ ಟಾಸ್ಕ್​ಗಳ ಆಟ ಅಲ್ಲ. ಅದು ವ್ಯಕ್ತಿತ್ವದ ಆಟ ಕೂಡ ಹೌದು. ನೋಡನೋಡುತ್ತಿದ್ದಂತೆಯೇ ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನ ಫಿನಾಲೆ ಬಂದಿದೆ. ಉಗ್ರಂ ಮಂಜು, ತ್ರಿವಿಕ್ರಮ್, ಹನುಮಂತ, ರಜತ್, ಮೋಕ್ಷಿತಾ ಪೈ ಅವರು ಫಿನಾಲೆ ದಿನ ಬಿಗ್ ಬಾಸ್ ಮನೆಯಲ್ಲಿ ಇದ್ದರು. ಆಗ ಕಿಚ್ಚ ಸುದೀಪ್ ಅವರು ಒಂದು ಬಂಪರ್ ಆಫರ್​ ನೀಡಿದರು. ಸೂಟ್​ ಕೇಸ್ ತುಂಬ ಹಣ ನೀಡಿ, ಅದನ್ನು ತೆಗೆದುಕೊಂಡವರು ನೇರವಾಗಿ ಮನೆಗೆ ಹೋಗಬಹುದು ಎಂದು ಹೇಳಿದರೆ. ಆದರೆ ಈ ಅವಕಾಶವನ್ನು ಯಾರೂ ಕೂಡ ಸ್ವೀಕರಿಸಲಿಲ್ಲ.

ಎಲ್ಲರಿಗೂ ದುಡ್ಡಿನ ಅನಿವಾರ್ಯತೆ ಇರುತ್ತದೆ. ಗೆಲ್ಲುವ ಸ್ಪರ್ಧಿಗೆ 50 ಲಕ್ಷ ರೂಪಾಯಿ ಸಿಗುತ್ತದೆ. ಆದರೆ 5ನೇ ಸ್ಥಾನದಲ್ಲಿ ಔಟ್ ಆಗುವವರಿಗೆ ಅಷ್ಟು ಹಣ ಸಿಗುವುದಿಲ್ಲ. ಅದರ ಬದಲು 20 ಲಕ್ಷ ರೂಪಾಯಿ ಪಡೆದು ಅರ್ಧಕ್ಕೆ ಆಟವನ್ನು ನಿಲ್ಲಿಸುವುದು ಕೂಡ ಉತ್ತಮ ಅವಕಾಶ ಆಗಿತ್ತು. ಆದರೆ ವ್ಯಕ್ತಿತ್ವದ ಆಟ ಆದ್ದರಿಂದ ಯಾರೂ ಕೂಡ ಆ ನಿರ್ಧಾರಕ್ಕೆ ಬರಲಿಲ್ಲ. ಎಲ್ಲರೂ ದುಡ್ಡನ್ನು ತಿರಸ್ಕರಿಸಿದರು.

‘ಈ ರೀತಿಯಾಗಿ ಕೋಟಿ ರೂಪಾಯಿ ಕೊಟ್ಟರೂ ಕೂಡ ನಮಗೆ ಇದು ಬೇಡ’ ಎಂದು ಎಲ್ಲ ಸ್ಪರ್ಧಿಗಳು ಹೇಳಿದರು. ಹಾಗಾಗಿ 20 ಲಕ್ಷ ರೂಪಾಯಿಯನ್ನು ವಾಪಸ್ ತೆಗೆದುಕೊಳ್ಳಲಾಯಿತು. ಉಗ್ರಂ ಮಂಜು, ಮೋಕ್ಷಿತಾ ಪೈ, ತ್ರಿವಿಕ್ರಮ್, ರಜತ್, ಹನುಮಂತ ಅವರ ಈ ನಿರ್ಧಾರವನ್ನು ಕಿಚ್ಚ ಸುದೀಪ್ ಅವರು ಸಿಕ್ಕಾಪಟ್ಟೆ ಮೆಚ್ಚಿಕೊಂಡರು. ಹಣಕ್ಕಿಂತ ಆಟವೇ ಮುಖ್ಯ ಎಂದು ಹೇಳಿದ ಈ ಫೈನಲಿಸ್ಟ್​ಗಳು ಪ್ರೇಕ್ಷಕರ ಮನಸ್ಸನ್ನು ಕೂಡ ಗೆದ್ದರು.

ಇದನ್ನೂ ಓದಿ: ಭಾವನೆಗೆ ಸೋತು ಬಿಗ್ ಬಾಸ್ ಟ್ರೋಫಿ ಕಳೆದುಕೊಂಡ ಉಗ್ರಂ ಮಂಜು

ಆ ಬಳಿಕ ನಡೆದ ಎಲಿಮಿನೇಷನ್​ ಪ್ರಕ್ರಿಯೆಯಲ್ಲಿ ಉಗ್ರಂ ಮಂಜು ಅವರು ಔಟ್ ಆದರು. ಬಿಗ್ ಬಾಸ್ ಟ್ರೋಫಿ ಗೆಲ್ಲಬೇಕು ಎಂಬ ಆಸೆ ಇಟ್ಟುಕೊಂಡಿದ್ದ ಅವರಿಗೆ ನಿರಾಸೆ ಆಯಿತು. ಆದರೆ 20 ಲಕ್ಷ ರೂಪಾಯಿ ಸಿಗಲಿಲ್ಲ ಎಂಬ ವಿಷಾದ ಅವರಿಗೆ ಇರಲಿಲ್ಲ. ಕಿಚ್ಚ ಸುದೀಪ್ ಅವರ ಜೊತೆ ವೇದಿಕೆಯಲ್ಲಿ ನಿಂತು ಮಾತನಾಡಿದ್ದು, ಅವರ ಜೊತೆ ಸಿನಿಮಾ ಮಾಡಿದ್ದೇ ನಿಜವಾದ ಗೆಲುವು ಎಂದು ಉಗ್ರಂ ಮಂಜು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!