AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

20 ಲಕ್ಷ ರೂಪಾಯಿ ಆಮಿಷಕ್ಕೂ ಬದಲಾಗಲಿಲ್ಲ ಬಿಗ್ ಬಾಸ್ ಫೈನಲಿಸ್ಟ್​ಗಳ ನಿಯತ್ತು

ಬಿಗ್ ಬಾಸ್ ಆಟದಲ್ಲಿ ಹಲವು ಟ್ವಿಸ್ಟ್​ಗಳು ಎದುರಾಗುತ್ತವೆ. ಈ ಬಾರಿ ಫಿನಾಲೆಯಲ್ಲಿ ಕಿಚ್ಚ ಸುದೀಪ್ ಅವರು ಒಂದು ದೊಡ್ಡ ಟ್ವಿಸ್ಟ್ ಕೊಟ್ಟರು. 5 ಫೈನಲಿಸ್ಟ್​ಗಳಿಗೆ ಒಂದು ಆಫರ್​ ಕೊಡಲಾಯಿತು. 20 ಲಕ್ಷ ರೂಪಾಯಿ ತೆಗೆದುಕೊಂಡು ಆಟವನ್ನು ಅರ್ಧಕ್ಕೆ ನಿಲ್ಲಿಸಬಹುದು ಎಂದು ಹೇಳಲಾಯಿತು. ಆದರೆ ಈ ಆಮಿಷಕ್ಕೆ ಯಾರೂ ಬಲಿ ಆಗಲಿಲ್ಲ.

20 ಲಕ್ಷ ರೂಪಾಯಿ ಆಮಿಷಕ್ಕೂ ಬದಲಾಗಲಿಲ್ಲ ಬಿಗ್ ಬಾಸ್ ಫೈನಲಿಸ್ಟ್​ಗಳ ನಿಯತ್ತು
Bigg Boss Kannada 11 Finale
ಮದನ್​ ಕುಮಾರ್​
|

Updated on: Jan 26, 2025 | 9:34 PM

Share

ಬಿಗ್ ಬಾಸ್ ಎಂಬುದು ಕೇವಲ ಟಾಸ್ಕ್​ಗಳ ಆಟ ಅಲ್ಲ. ಅದು ವ್ಯಕ್ತಿತ್ವದ ಆಟ ಕೂಡ ಹೌದು. ನೋಡನೋಡುತ್ತಿದ್ದಂತೆಯೇ ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನ ಫಿನಾಲೆ ಬಂದಿದೆ. ಉಗ್ರಂ ಮಂಜು, ತ್ರಿವಿಕ್ರಮ್, ಹನುಮಂತ, ರಜತ್, ಮೋಕ್ಷಿತಾ ಪೈ ಅವರು ಫಿನಾಲೆ ದಿನ ಬಿಗ್ ಬಾಸ್ ಮನೆಯಲ್ಲಿ ಇದ್ದರು. ಆಗ ಕಿಚ್ಚ ಸುದೀಪ್ ಅವರು ಒಂದು ಬಂಪರ್ ಆಫರ್​ ನೀಡಿದರು. ಸೂಟ್​ ಕೇಸ್ ತುಂಬ ಹಣ ನೀಡಿ, ಅದನ್ನು ತೆಗೆದುಕೊಂಡವರು ನೇರವಾಗಿ ಮನೆಗೆ ಹೋಗಬಹುದು ಎಂದು ಹೇಳಿದರೆ. ಆದರೆ ಈ ಅವಕಾಶವನ್ನು ಯಾರೂ ಕೂಡ ಸ್ವೀಕರಿಸಲಿಲ್ಲ.

ಎಲ್ಲರಿಗೂ ದುಡ್ಡಿನ ಅನಿವಾರ್ಯತೆ ಇರುತ್ತದೆ. ಗೆಲ್ಲುವ ಸ್ಪರ್ಧಿಗೆ 50 ಲಕ್ಷ ರೂಪಾಯಿ ಸಿಗುತ್ತದೆ. ಆದರೆ 5ನೇ ಸ್ಥಾನದಲ್ಲಿ ಔಟ್ ಆಗುವವರಿಗೆ ಅಷ್ಟು ಹಣ ಸಿಗುವುದಿಲ್ಲ. ಅದರ ಬದಲು 20 ಲಕ್ಷ ರೂಪಾಯಿ ಪಡೆದು ಅರ್ಧಕ್ಕೆ ಆಟವನ್ನು ನಿಲ್ಲಿಸುವುದು ಕೂಡ ಉತ್ತಮ ಅವಕಾಶ ಆಗಿತ್ತು. ಆದರೆ ವ್ಯಕ್ತಿತ್ವದ ಆಟ ಆದ್ದರಿಂದ ಯಾರೂ ಕೂಡ ಆ ನಿರ್ಧಾರಕ್ಕೆ ಬರಲಿಲ್ಲ. ಎಲ್ಲರೂ ದುಡ್ಡನ್ನು ತಿರಸ್ಕರಿಸಿದರು.

‘ಈ ರೀತಿಯಾಗಿ ಕೋಟಿ ರೂಪಾಯಿ ಕೊಟ್ಟರೂ ಕೂಡ ನಮಗೆ ಇದು ಬೇಡ’ ಎಂದು ಎಲ್ಲ ಸ್ಪರ್ಧಿಗಳು ಹೇಳಿದರು. ಹಾಗಾಗಿ 20 ಲಕ್ಷ ರೂಪಾಯಿಯನ್ನು ವಾಪಸ್ ತೆಗೆದುಕೊಳ್ಳಲಾಯಿತು. ಉಗ್ರಂ ಮಂಜು, ಮೋಕ್ಷಿತಾ ಪೈ, ತ್ರಿವಿಕ್ರಮ್, ರಜತ್, ಹನುಮಂತ ಅವರ ಈ ನಿರ್ಧಾರವನ್ನು ಕಿಚ್ಚ ಸುದೀಪ್ ಅವರು ಸಿಕ್ಕಾಪಟ್ಟೆ ಮೆಚ್ಚಿಕೊಂಡರು. ಹಣಕ್ಕಿಂತ ಆಟವೇ ಮುಖ್ಯ ಎಂದು ಹೇಳಿದ ಈ ಫೈನಲಿಸ್ಟ್​ಗಳು ಪ್ರೇಕ್ಷಕರ ಮನಸ್ಸನ್ನು ಕೂಡ ಗೆದ್ದರು.

ಇದನ್ನೂ ಓದಿ: ಭಾವನೆಗೆ ಸೋತು ಬಿಗ್ ಬಾಸ್ ಟ್ರೋಫಿ ಕಳೆದುಕೊಂಡ ಉಗ್ರಂ ಮಂಜು

ಆ ಬಳಿಕ ನಡೆದ ಎಲಿಮಿನೇಷನ್​ ಪ್ರಕ್ರಿಯೆಯಲ್ಲಿ ಉಗ್ರಂ ಮಂಜು ಅವರು ಔಟ್ ಆದರು. ಬಿಗ್ ಬಾಸ್ ಟ್ರೋಫಿ ಗೆಲ್ಲಬೇಕು ಎಂಬ ಆಸೆ ಇಟ್ಟುಕೊಂಡಿದ್ದ ಅವರಿಗೆ ನಿರಾಸೆ ಆಯಿತು. ಆದರೆ 20 ಲಕ್ಷ ರೂಪಾಯಿ ಸಿಗಲಿಲ್ಲ ಎಂಬ ವಿಷಾದ ಅವರಿಗೆ ಇರಲಿಲ್ಲ. ಕಿಚ್ಚ ಸುದೀಪ್ ಅವರ ಜೊತೆ ವೇದಿಕೆಯಲ್ಲಿ ನಿಂತು ಮಾತನಾಡಿದ್ದು, ಅವರ ಜೊತೆ ಸಿನಿಮಾ ಮಾಡಿದ್ದೇ ನಿಜವಾದ ಗೆಲುವು ಎಂದು ಉಗ್ರಂ ಮಂಜು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ