AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ತೂರ್ ಸಂತೋಷ್​ನ ಮನವೊಲಿಸಲು ಭಾಗ್ಯಾಳ ಕರೆಸಿದ ಬಿಗ್ ಬಾಸ್

ಈ ಸೀಸನ್​ನಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಥಮ್, ಶಾಸಕ ಪ್ರದೀಪ್ ಈಶ್ವರ್, ನಟಿ ತಾರಾ ಹಾಗೂ ‘ಬೃಂದಾವನ’ ಧಾರಾವಾಹಿ ತಂಡದವರು ಬಂದು ಹೋಗಿದ್ದಾರೆ. ಈಗ ಸುಷ್ಮಾ ರಾವ್ ಕೂಡ ದೊಡ್ಮನೆಗೆ ಬಂದಿದ್ದಾರೆ. ಅವರು ಸಂತೋಷ್ ಅವರ ಮನ ಒಲಿಸಲು ಪ್ರಯತ್ನಿಸಿದ್ದಾರೆ.

ವರ್ತೂರ್ ಸಂತೋಷ್​ನ ಮನವೊಲಿಸಲು ಭಾಗ್ಯಾಳ ಕರೆಸಿದ ಬಿಗ್ ಬಾಸ್
ಬಿಗ್ ಬಾಸ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Nov 13, 2023 | 8:33 AM

Share

ವರ್ತೂರು ಸಂತೋಷ್ ಅವರು ಬಿಗ್ ಬಾಸ್ (Bigg Boss) ಮನೆಯಿಂದ ಹೊರಹೋಗುವುದಾಗಿ ಹಠ ಹಿಡಿದು ಕುಳಿತಿದ್ದಾರೆ. ಅವರನ್ನು ಮನ ಒಲಿಸಲು ಮೊದಲು ಸುದೀಪ್ ಪ್ರಯತ್ನಿಸಿದರು. ಆದರೆ, ಇದು ಸಾಧ್ಯವಾಗಲಿಲ್ಲ. ಆ ಬಳಿಕ ಅವರು ವೇದಿಕೆಯಿಂದ ಹೊರ ನಡೆದರು. ಮನೆ ಮಂದಿ ಕೂಡ ವರ್ತೂರು ಸಂತೋಷ್ ಅವರ ಮನ ಒಲಿಸಲು ಪ್ರಯತ್ನಿಸಿದರು. ಬಳಿಕ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯ ಭಾಗ್ಯ ಪಾತ್ರ ಮಾಡುತ್ತಿರುವ ಸುಷ್ಮಾ ರಾವ್ ಅವರು ಬಿಗ್ ಬಾಸ್​ಗೆ ಬಂದಿದ್ದಾರೆ!

ಬಿಗ್ ಬಾಸ್​ನಲ್ಲಿ ಹೊರಗಿನಿಂದ ಅತಿಥಿಗಳು ಬರೋದು ಅಪರೂಪಕ್ಕೊಮ್ಮೆ. ಆದರೆ, ಈ ಬಾರಿಯ ಬಿಗ್ ಬಾಸ್ ಆ ರೀತಿಯಲ್ಲಿ ಇಲ್ಲ. ಈ ಸೀಸನ್​ನಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಥಮ್, ಶಾಸಕ ಪ್ರದೀಪ್ ಈಶ್ವರ್, ನಟಿ ತಾರಾ ಹಾಗೂ ‘ಬೃಂದಾವನ’ ಧಾರಾವಾಹಿ ತಂಡದವರು ಬಂದು ಹೋಗಿದ್ದಾರೆ. ಈಗ ಸುಷ್ಮಾ ರಾವ್ ಕೂಡ ದೊಡ್ಮನೆಗೆ ಬಂದಿದ್ದಾರೆ. ಅವರು ಸಂತೋಷ್ ಅವರ ಮನ ಒಲಿಸಲು ಪ್ರಯತ್ನಿಸಿದ್ದಾರೆ.

ಸುದೀಪ್ ಅವರು ಸಂತೋಷ್ ಅವರ ಬಳಿ ಬಿಗ್ ಬಾಸ್​ನಲ್ಲೇ ಇರುವಂತೆ ಕೋರಿದರು. ಆದರೆ, ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗುವುದಾಗಿ ಹಠ ಹಿಡಿದರು. ಇದು ಸುದೀಪ್​ಗೆ ಬೇಸರ ಮೂಡಿಸಿದೆ. 34 ಲಕ್ಷ ವೋಟ್ ಬಿದ್ದ ಹೊರತಾಗಿಯೂ ತಾವು ಹೊರ ನಡೆಯುವುದಾಗಿ ಅವರು ಹೇಳಿದ್ದಾರೆ. ಹೀಗೇಕೆ ಎನ್ನುವ ಪ್ರಶ್ನೆ ಮನೆ ಮಂದಿಗೆ ಮೂಡಿದೆ. ‘ಹೊರಗೆ ಎಲ್ಲವೂ ಸಹಜವಾಗಿದೆ’ ಎಂದು ಸುದೀಪ್ ಹೇಳಿದರೂ ವರ್ತೂರು ಸಂತೋಷ್ ಅವರು ಒಪ್ಪಲು ರೆಡಿ ಇರಲಿಲ್ಲ. ಕೊನೆಗೆ ಸುದೀಪ್ ಅವರು ವೇದಿಕೆಯಿಂದ ನಡೆದ ಬಳಿಕ ದೊಡ್ಮನೆಗೆ ಸುಷ್ಮಾ ರಾವ್ ಬಂದಿದ್ದಾರೆ.

ಇದನ್ನೂ ಓದಿ: ‘ನಿಮ್ಮ ಹಠ ಕಾಣುತ್ತಿಲ್ಲ’; ಎಂದ ಸುದೀಪ್; ‘ನನಗೆ ಅದು ತುಂಬಾ ಕಾಡುತ್ತಿದೆ’ ಎಂದ ಸಂತೋಷ್

‘ನಾನು ನಿನ್ನ ಅಕ್ಕ ಎಂದುಕೋ. ನಿನ್ನಿಂದ ಆಗಲ್ಲ ಎನ್ನೋದನ್ನು ತೆಗೆದುಹಾಕು’ ಎಂದು ಸುಷ್ಮಾ ಕೇಳಿಕೊಂಡಿದ್ದಾರೆ. ‘ನನ್ನ ಕೈಯಲ್ಲಿ ಆಗುತ್ತಿಲ್ಲ’ ಎಂದು ಸಂತೋಷ್ ಪದೇಪದೇ ಹೇಳುತ್ತಿದ್ದಾರೆ. ಡ್ರೋನ್ ಪ್ರತಾಪ್ ಊಟ ತಂದುಕೊಟ್ಟರೂ ಅದನ್ನು ಅವರು ಸ್ವೀಕರಿಸಲಿಲ್ಲ. ಇಂದಿನ ಎಪಿಸೋಡ್​ನಲ್ಲಿ ಅವರು ಇರುತ್ತಾರಾ ಅಥವಾ ಹೋಗುತ್ತಾರಾ ಅನ್ನೋ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:32 am, Mon, 13 November 23

ಉತ್ತರ ಪ್ರದೇಶದ ಕಲ್ಲು ಗಣಿಗಾರಿಕೆ ವೇಳೆ ಭೂಕುಸಿತವಾಗಿ ಓರ್ವ ಸಾವು
ಉತ್ತರ ಪ್ರದೇಶದ ಕಲ್ಲು ಗಣಿಗಾರಿಕೆ ವೇಳೆ ಭೂಕುಸಿತವಾಗಿ ಓರ್ವ ಸಾವು
ನಾಯಕತ್ವ ಬದಲಾವಣೆ ಬಗ್ಗೆ ನಂಗೇನೂ ಗೊತ್ತಿಲ್ಲ, ಸಿಎಂ ಹತ್ರನೇ ಕೇಳಿ; ಡಿಕೆಶಿ
ನಾಯಕತ್ವ ಬದಲಾವಣೆ ಬಗ್ಗೆ ನಂಗೇನೂ ಗೊತ್ತಿಲ್ಲ, ಸಿಎಂ ಹತ್ರನೇ ಕೇಳಿ; ಡಿಕೆಶಿ
ರಾಹುಲ್ ಗಾಂಧಿಗೆ ಧೈರ್ಯ ತುಂಬಿದ್ದೇನೆ; ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ರಾಹುಲ್ ಗಾಂಧಿಗೆ ಧೈರ್ಯ ತುಂಬಿದ್ದೇನೆ; ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
‘ಗತವೈಭವ’ಕ್ಕಾಗಿ ಒಂದು ಕೋಟಿ ಮೌಲ್ಯದ ಆಭರಣ ಧರಿಸಿದ್ದ ಆಶಿಕಾ: ವಿಡಿಯೋ
‘ಗತವೈಭವ’ಕ್ಕಾಗಿ ಒಂದು ಕೋಟಿ ಮೌಲ್ಯದ ಆಭರಣ ಧರಿಸಿದ್ದ ಆಶಿಕಾ: ವಿಡಿಯೋ
ಸುದೀಪ್​ ಅವರನ್ನೇ ಮ್ಯಾನ್ಯುಪಲೇಷನ್ ಮಾಡಲು ಹೋದ ಜಾನ್ವಿ
ಸುದೀಪ್​ ಅವರನ್ನೇ ಮ್ಯಾನ್ಯುಪಲೇಷನ್ ಮಾಡಲು ಹೋದ ಜಾನ್ವಿ
ಬೆಳಗಾವಿ: 28 ಕೃಷ್ಣಮೃಗಗಳ ಸಾವು; ತನಿಖೆ ಬಗ್ಗೆ ಸಚಿವ ಈಶ್ವರ್ ಖಂಡ್ರೆ ಮಾತು
ಬೆಳಗಾವಿ: 28 ಕೃಷ್ಣಮೃಗಗಳ ಸಾವು; ತನಿಖೆ ಬಗ್ಗೆ ಸಚಿವ ಈಶ್ವರ್ ಖಂಡ್ರೆ ಮಾತು
ಗುಜರಾತ್​​ನಲ್ಲಿ ಮೋದಿ ರೋಡ್ ಶೋ; ಸಾಂಪ್ರದಾಯಿಕ ನೃತ್ಯದ ಮೂಲಕ ಸ್ವಾಗತ
ಗುಜರಾತ್​​ನಲ್ಲಿ ಮೋದಿ ರೋಡ್ ಶೋ; ಸಾಂಪ್ರದಾಯಿಕ ನೃತ್ಯದ ಮೂಲಕ ಸ್ವಾಗತ
Cabinet Reshuffle: ಸಂಪುಟ ಪುನಾರಚನೆಗೆ ಹೈಕಮಾಂಡ್​ ಗ್ರೀನ್ ​ಸಿಗ್ನಲ್
Cabinet Reshuffle: ಸಂಪುಟ ಪುನಾರಚನೆಗೆ ಹೈಕಮಾಂಡ್​ ಗ್ರೀನ್ ​ಸಿಗ್ನಲ್
ನೆತ್ತಿಗೇರಿತು ಕಿಚ್ಚನ ಸಿಟ್ಟು, ರಕ್ಷಿತಾ-ಗಿಲ್ಲಿಗೆ ಕಾದಿದೆ ಹಬ್ಬ
ನೆತ್ತಿಗೇರಿತು ಕಿಚ್ಚನ ಸಿಟ್ಟು, ರಕ್ಷಿತಾ-ಗಿಲ್ಲಿಗೆ ಕಾದಿದೆ ಹಬ್ಬ
ರಾಹುಲ್ ಗಾಂಧಿಯದು ಐರನ್ ಲೆಗ್ ಎಂಬುದು ಮತ್ತೆ ಸಾಬೀತಾಗಿದೆ; ಬಿವೈ ವಿಜಯೇಂದ್ರ
ರಾಹುಲ್ ಗಾಂಧಿಯದು ಐರನ್ ಲೆಗ್ ಎಂಬುದು ಮತ್ತೆ ಸಾಬೀತಾಗಿದೆ; ಬಿವೈ ವಿಜಯೇಂದ್ರ