AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಬಗ್ಗೆ ಬಿಗ್​ಬಾಸ್ ಮನೆ ಒಳಗೆ ಏನು ಹೇಳಿಕೊಂಡಿದ್ದಾರೆ ವರ್ತೂರು ಸಂತೋಷ್?

Varthur Santhosh: ವರ್ತೂರು ಸಂತೋಷ್ ಮದುವೆಯಾಗಿರುವ ವಿಷಯ ವಿವಾದ ಎಬ್ಬಿಸಿದೆ. ಸಂತೋಷ್ ಅವರ ಮಾವ ಮಾಧ್ಯಮಗಳ ಮುಂದೆ ತಮ್ಮ ಅಳಿಯನ ಬಗ್ಗೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತಮ್ಮ ಖಾಸಗಿ ಜೀವನದ ಬಗ್ಗೆ, ಮದುವೆ ಬಗ್ಗೆ ವರ್ತೂರು ಸಂತೋಷ್ ಬಿಗ್​ಬಾಸ್ ಮನೆಯ ಒಳಗೆ ಏನು ಹೇಳುಕೊಂಡಿದ್ದಾರೆ ಎಂಬುದನ್ನು ಈ ವಾರ ಮನೆಯಿಂದ ಹೊರಗೆ ಬಂದ ಸದಸ್ಯರು ಹೇಳಿದ್ದಾರೆ.

ಮದುವೆ ಬಗ್ಗೆ ಬಿಗ್​ಬಾಸ್ ಮನೆ ಒಳಗೆ ಏನು ಹೇಳಿಕೊಂಡಿದ್ದಾರೆ ವರ್ತೂರು ಸಂತೋಷ್?
ವರ್ತೂರು ಸಂತೋಷ್
Follow us
ಮಂಜುನಾಥ ಸಿ.
|

Updated on: Nov 20, 2023 | 10:40 PM

ಹಳ್ಳಿಕಾರ್ ತಳಿಗಳ ಸಂರಕ್ಷಣೆ ಕುರಿತಾಗಿ ಕೆಲಸ ಮಾಡುತ್ತಿದ್ದ ವರ್ತೂರು ಸಂತೋಷ್ (Varthur Santhosh) ಬಿಗ್​ಬಾಸ್ ಮನೆಯ ಒಳಗೆ ಹೋದ ಬಳಿಕ ಒಂದರ ಹಿಂದೊಂದು ವಿವಾದಗಳಿಗೆ ಗುರಿಯಾಗುತ್ತಿದ್ದಾರೆ. ಬಿಗ್​ಬಾಸ್​ ಮನೆಯೊಳಗೆ ಹೋದ ಕೆಲವೇ ದಿನಗಳಲ್ಲಿ ಹುಲಿ ಉಗುರು ಪ್ರಕರಣದಲ್ಲಿ ವರ್ತೂರು ಸಂತೋಷ್ ಜೈಲು ಪಾಲಾದರು. ಅದಾದ ಬಳಿಕ ಜಾಮೀನಿನ ಮೇಲೆ ಹೊರಗೆ ಬಂದರಾದರೂ, ಈಗ ವರ್ತೂರು ಸಂತೋಷ್​ರ ಖಾಸಗಿ ಜೀವನ ವಿವಾದಕ್ಕೆ ಈಡಾಗಿದೆ.

ವರ್ತೂರು ಸಂತೋಷ್​ರಿಗೆ ಮದುವೆ ಆಗಿದ್ದರೂ ಅದನ್ನು ಮುಚ್ಚಿಟ್ಟಿದ್ದಾರೆ, ಈಗ ಮತ್ತೊಂದು ಮದುವೆ ಆಗಲು ಸಜ್ಜಾಗಿದ್ದಾರೆ ಎಂದು ಆರೋಪಿಸಲಾಗಿದೆ. ವರ್ತೂರು ಸಂತೋಷ್​ರ ಪತ್ನಿಯ ತಂದೆ ತಮ್ಮ ಅಳಿಯನ ವಿರುದ್ಧ ಮಾಧ್ಯಮಗಳ ಮುಂದೆ ಕೂತು ಸರಣಿ ಆರೋಪಗಳನ್ನು ಮಾಡಿದ್ದಾರೆ. ವರ್ತೂರು ಸಂತೋಷ್ ಮಹಿಳಾ ಪೀಡಕ, ಮಗಳನ್ನು ಕೊಲ್ಲಲು ಯತ್ನಿಸಿದ್ದ, ಆತನಿಗೆ ಮಾದಕ ವಸ್ತು ಸೇವಿಸುವ ಅಭ್ಯಾಸವಿದೆ ಇನ್ನೂ ಹಲವು ಆರೋಪಗಳನ್ನು ಮಾಡಿದ್ದಾರೆ.

ಇದೇ ವೀಕೆಂಡ್​ನಲ್ಲಿ ಬಿಗ್​ಬಾಸ್ ಮನೆಯಿಂದ ಭಾಗ್ಯಶ್ರೀ ಹಾಗೂ ಇಶಾನಿ ಅವರುಗಳು ಎಲಿಮಿನೇಟ್ ಆಗಿ ಹೊರಗೆ ಬಂದಿದ್ದಾರೆ. ಹಲವು ಚಾನೆಲ್​ಗಳು ಇವರಿಬ್ಬರ ಸಂದರ್ಶನ ಮಾಡುತ್ತಿವೆ. ವರ್ತೂರು ಸಂತೋಷ್ ಕುರಿತಾಗಿಯೂ ಪ್ರಶ್ನೆಗಳನ್ನು ಕೇಳಲಾಗಿದೆ. ಅಸಲಿಗೆ ವರ್ತೂರು ಸಂತೋಷ್​ರ ಖಾಸಗಿ ಜೀವನದ ಕುರಿತು ಹೊರ ಬಂದಿರುವ ವಿಷಯಗಳು ಭಾಗ್ಯಶ್ರೀ ಹಾಗೂ ಇಶಾನಿ ಅವರಿಗೆ ಆಶ್ಚರ್ಯ ಮೂಡಿಸಿವೆ.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಫೇಕ್ ಯಾರು? ಈ ಬಾರಿಯ ಫೈನಲಿಸ್ಟ್ ಯಾರು: ಇಶಾನಿ ಉತ್ತರ

ಟಿವಿ9 ಜೊತೆಗಿನ ಸಂದರ್ಶನದಲ್ಲಿ ಭಾಗ್ಯಶ್ರೀ ಹೇಳಿರುವಂತೆ, ವರ್ತೂರು ಸಂತೋಷ್ ಅವರ ಖಾಸಗಿ ಜೀವನದ ಬಗ್ಗೆ ಹೆಚ್ಚಿಗೇನೂ ಗೊತ್ತಿಲ್ಲ, ಆದರೆ ಬಿಗ್​ಬಾಸ್ ಮನೆಯಲ್ಲಿದ್ದಾಗ ತನ್ನೊಟ್ಟಿಗೆ ಮಾತನಾಡುತ್ತಾ, ‘ಬಿಗ್​ಬಾಸ್ ಮನೆಯಿಂದ ಹೊರಗೆ ಹೋದ ಮೇಲೆ ಮದುವೆ ಆಗಲಿದ್ದೇನೆ’ ಎಂದಿದ್ದರಂತೆ. ಅಲ್ಲಿಗೆ ಒಬ್ಬ ಪತ್ನಿ ಹಾಗೂ ಮಗಳು ಇರುವಾಗಲೇ ವರ್ತೂರು ಸಂತೋಷ್ ಮದುವೆ ಆಗುವ ನಿಶ್ಚಯ ಮಾಡಿದ್ದಾರೆ. ಅಲ್ಲದೆ ಬಿಗ್​ಬಾಸ್ ಮನೆಯಲ್ಲಿ ತಮಗೆ ಮದುವೆ ಆಗಿದೆ ಎಂಬ ವಿಷಯವನ್ನು ಯಾರೊಟ್ಟಿಗೂ ಹೇಳಿಕೊಂಡಿಲ್ಲವಂತೆ.

ಅಲ್ಲದೆ ವರ್ತೂರು ಸಂತೋಷ್ ಬಂಧನವಾದ ವಿಷಯವೂ ಸಹ ಬಿಗ್​ಬಾಸ್ ಮನೆಯಲ್ಲಿರುವ ಯಾರಿಗೂ ಗೊತ್ತಿಲ್ಲವಂತೆ. ವರ್ತೂರು ಸಂತೋಷ್ ಮನೆಯಲ್ಲಿ ಯಾರಿಗೋ ಆರೋಗ್ಯ ಸರಿಯಿಲ್ಲದ ಕಾರಣ ಅವರು ಹೊರಗೆ ಹೋಗಿ ಬಂದಿದ್ದಾರೆ ಎಂದುಕೊಂಡಿದ್ದರಂತೆ ಭಾಗ್ಯಶ್ರೀ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್
ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಶಾಲಾ ಮಕ್ಕಳ ಜೊತೆ ಪ್ರಯಾಣಿಸಿದ ಪ್ರಧಾನಿ
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಶಾಲಾ ಮಕ್ಕಳ ಜೊತೆ ಪ್ರಯಾಣಿಸಿದ ಪ್ರಧಾನಿ
ಪರಿಹಾರ ಮೊತ್ತ ಹೆಚ್ಚಿಸುವಂತೆ ಸರ್ಕಾರವನ್ನೂ ಆಗ್ರಹಿಸುತ್ತೇನೆ: ಹೆಬ್ಬಾಳ್ಕರ್
ಪರಿಹಾರ ಮೊತ್ತ ಹೆಚ್ಚಿಸುವಂತೆ ಸರ್ಕಾರವನ್ನೂ ಆಗ್ರಹಿಸುತ್ತೇನೆ: ಹೆಬ್ಬಾಳ್ಕರ್
ಆರ್​ಸಿಬಿ ಕೊಡುವ ₹10 ಲಕ್ಷ ಭಿಕ್ಷೆ ಬೇಕಿಲ್ಲ, ಒಂದೊಂದು ಕೋಟಿ ಕೊಡಲಿ:ಬಿವಿವೈ
ಆರ್​ಸಿಬಿ ಕೊಡುವ ₹10 ಲಕ್ಷ ಭಿಕ್ಷೆ ಬೇಕಿಲ್ಲ, ಒಂದೊಂದು ಕೋಟಿ ಕೊಡಲಿ:ಬಿವಿವೈ
ಸಿಎಂ ಹಿಂದೆ ಸದಾ ಗೋವಿಂದ ಭಜನೆ ಮಾಡೋ ಆತನಿಂದಲೇ ಎಲ್ಲವೂ ಆಯ್ತು: HDK
ಸಿಎಂ ಹಿಂದೆ ಸದಾ ಗೋವಿಂದ ಭಜನೆ ಮಾಡೋ ಆತನಿಂದಲೇ ಎಲ್ಲವೂ ಆಯ್ತು: HDK
ಸತ್ತವರ ಮೇಲೆ ರಾಜಕೀಯ ಮಾಡಿಕೊಂಡೇ ಕುಮಾರಸ್ವಾಮಿ ಬೆಳೆದಿದ್ದು: ಸುರೇಶ್
ಸತ್ತವರ ಮೇಲೆ ರಾಜಕೀಯ ಮಾಡಿಕೊಂಡೇ ಕುಮಾರಸ್ವಾಮಿ ಬೆಳೆದಿದ್ದು: ಸುರೇಶ್
ಸಸ್ಪೆನ್ಷನ್ ಒಂದು ನಾಟಕ ಅಂತ ಪೊಲೀಸ್ ಅಧಿಕಾರಿಗಳಿಗೂ ಗೊತ್ತು: ಕುಮಾರಸ್ವಾಮಿ
ಸಸ್ಪೆನ್ಷನ್ ಒಂದು ನಾಟಕ ಅಂತ ಪೊಲೀಸ್ ಅಧಿಕಾರಿಗಳಿಗೂ ಗೊತ್ತು: ಕುಮಾರಸ್ವಾಮಿ
ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಗೊತ್ತಾಗಿತ್ತು: ಸಿಎಂ
ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಗೊತ್ತಾಗಿತ್ತು: ಸಿಎಂ
ಕ್ರೆಡಿಟ್​​ ತೆಗೆದುಕೊಳ್ಳುವ ಚಟ ನಿಮಗೆ: ಡಿಕೆಶಿ​​ ವಿರುದ್ಧ ಜೋಶಿ ಕಿಡಿ
ಕ್ರೆಡಿಟ್​​ ತೆಗೆದುಕೊಳ್ಳುವ ಚಟ ನಿಮಗೆ: ಡಿಕೆಶಿ​​ ವಿರುದ್ಧ ಜೋಶಿ ಕಿಡಿ
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆಯ ಕಣ್ತುಂಬಿಕೊಂಡ ಮೋದಿ
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆಯ ಕಣ್ತುಂಬಿಕೊಂಡ ಮೋದಿ