ಬಿಗ್​ಬಾಸ್ ಮನೆಯಲ್ಲಿ ಫೇಕ್ ಯಾರು? ಈ ಬಾರಿಯ ಫೈನಲಿಸ್ಟ್ ಯಾರು: ಇಶಾನಿ ಉತ್ತರ

Bigg Boss: ಬಿಗ್​ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಗೆ ಬಂದಿರುವ ಇಶಾನಿ, ಬಿಗ್​ಬಾಸ್ ಮನೆಯಲ್ಲಿ ಫೇಕ್ ಯಾರು, ನೈಜತೆಯಿಂದ ಆಡುತ್ತಿರುವುದು ಯಾರು? ಗೆಲ್ಲುವುದು ಯಾರು ಎಂಬ ಬಗ್ಗೆ ಮಾತನಾಡಿದ್ದಾರೆ.

ಬಿಗ್​ಬಾಸ್ ಮನೆಯಲ್ಲಿ ಫೇಕ್ ಯಾರು? ಈ ಬಾರಿಯ ಫೈನಲಿಸ್ಟ್ ಯಾರು: ಇಶಾನಿ ಉತ್ತರ
ಇಶಾನಿ
Follow us
|

Updated on: Nov 20, 2023 | 4:30 PM

ಬಿಗ್​ಬಾಸ್ ಕನ್ನಡ ಸೀಸನ್ 10ರ (Bigg Boss) ಈ ವೀಕೆಂಡ್​ನಲ್ಲಿ ಇಶಾನಿ ಹಾಗೂ ಭಾಗ್ಯಶ್ರೀ ಇಬ್ಬರೂ ಎಲಿಮಿನೇಟ್ ಆಗಿದ್ದಾರೆ. ಶನಿವಾರದ ಎಪಿಸೋಡ್​ನಲ್ಲಿ ಇಶಾನಿ ಎಲಿಮಿನೇಟ್ ಆಗಿದ್ದರೆ, ಭಾನುವಾರದಂದು ಭಾಗ್ಯಶ್ರೀ ಎಲಿಮಿನೇಟ್ ಆಗಿದ್ದಾರೆ. ಆರಂಭದ ಕೆಲ ವಾರ, ಇಶಾನಿ ಒಳ್ಳೆಯ ಸ್ಪರ್ಧಿ ಎನ್ನಲಾಗುತ್ತಿತ್ತು, ಆದರೆ ಬರ-ಬರುತ್ತಾ ಇಶಾನಿ, ಮತ್ತೊಬ್ಬರ ಮೇಲೆ ಡಿಪೆಂಡ್ ಆಗಿ ಆಡುತ್ತಿದ್ದಾರೆ ಅನ್ನಿಸಲಾರಂಭಿಸಿತು. ಅದೃಷ್ಟವಶಾತ್ ಒಂದು ವಾರ ಎಲಿಮಿನೇಷನ್​ನಿಂದ ಬಚಾವ್ ಆಗಿದ್ದ ಇಶಾನಿ ಇದೀಗ ಹೊರ ಬಂದಿದ್ದಾರೆ.

ಮನೆಯಿಂದ ಹೊರಬಂದ ಮೇಲೆ ಸುದೀಪ್ ಜೊತೆಗೆ ಮಾತನಾಡುತ್ತಾ, ತನಗೆ ಇನ್ನೂ ಆಡುವ ಬಯಕೆ ಇದೆ, ನಾನು ಗಟ್ಟಿ ಹುಡುಗಿ, ನನಗೆ ಆಡಲು ಅವಕಾಶ ಕೊಡಿ ಎಂದೇ ಗೋಗರೆದರು. ಆದರೆ ಅದಕ್ಕೆ ಅವಕಾಶ ಇರಲಿಲ್ಲ. ಶೋನಿಂದ ಹೊರ ಬಂದ ಬಳಿಕ ನೀಡಿರುವ ಸಂದರ್ಶನದಲ್ಲಿ, ಬಿಗ್​ಬಾಸ್ ಮನೆಯ ಬಗ್ಗೆ, ಮನೆಯ ಸದಸ್ಯರ ಬಗ್ಗೆ ಇಶಾನಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬಿಗ್​ಬಾಸ್ ಮನೆಯಲ್ಲಿ ಫೇಕ್ ಯಾರು ಎಂಬ ಪ್ರಶ್ನೆಗೆ, ತುಕಾಲಿ ಸಂತೋಷ್, ಬಿಗ್​ಬಾಸ್ ಮನೆಯ ಫೇಕ್ ಆಟಗಾರ. ನಾನು ಅವರನ್ನು ಊಸರವಳ್ಳಿ ಎಂದು ಕರೆದಿದ್ದು, ಅದು ನಿಜ ಕೂಡ. ಒಮ್ಮೊಮ್ಮೆ ಅವರು ನನ್ನೊಟ್ಟಿಗೆ ಸರಿಯಾಗಿ ಮಾತನಾಡಿದರು, ಅದಾದ ಮೇಲೆ ಬೇರೆ ತಂಡದೊಟ್ಟಿಗೆ ಹೋಗಿ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರು. ಅವರ ಲಾಭಕ್ಕಾಗಿ ಡ್ರಾಮಾ ಕ್ರಿಯೇಟ್ ಮಾಡುತ್ತಿದ್ದರು. ಅದು ನನಗೆ ಇಷ್ಟವಾಗುತ್ತಿರಲಿಲ್ಲ. ಹಾಗಾಗಿ ಬಿಗ್​ಬಾಸ್ ಮನೆಯ ಮೊದಲ ಫೇಕ್ ತುಕಾಲಿ ಸಂತು ಎಂದಿದ್ದಾರೆ. ಜೊತೆಗೆ ನೀತು ಬಗ್ಗೆಯೂ ಮಾತನಾಡಿ, ಆಕೆಗೆ ಸರಿಯಾದ ವ್ಯಕ್ತಿತ್ವವೇ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ:ಹಿಂದಿ ಬಿಗ್​ಬಾಸ್​ನಲ್ಲಿ ಕ್ರಿಕೆಟ್ ಮೇನಿಯಾ, ಕನ್ನಡ ಬಿಗ್​ಬಾಸ್ ಸ್ಪರ್ಧಿಗಳಿಗೆ ವಿಶ್ವಕಪ್ ಫೈನಲ್ ನೋಡೊ ಭಾಗ್ಯ ಇಲ್ಲವಾ?

ಇನ್ನು ಬಿಗ್​ಬಾಸ್ ಮನೆಯ ಜಿನ್ಯೂನ್ ವ್ಯಕ್ತಿ ಯಾರೆಂಬ ಪ್ರಶ್ನೆಗೆ ಗೆಳೆಯ ಮೈಖಲ್ ಹೆಸರು ತೆಗೆದುಕೊಂಡಿದ್ದಾರೆ. ಮೈಖಲ್ ಜಿನ್ಯೂನ್ ವ್ಯಕ್ತಿಯಾಗಿದ್ದಾರೆ. ಆರಂಭದಲ್ಲಿ ನಾನು ಅವರನ್ನು ನಂಬಿರಲಿಲ್ಲ ಆದರೆ ಬರ ಬರುತ್ತಾ ಅವರ ನಿಜಾಯಿತಿ ಅರ್ಥವಾಗುತ್ತಾ ಹೋಯ್ತು. ಮತ್ತೊಮ್ಮೆ ಮನೆಯ ಒಳಗೆ ಹೋಗಲು ಅವಕಾಶ ಸಿಕ್ಕರೆ ಎಲ್ಲದಕ್ಕೂ ನಾನು ಮೈಖಲ್ ಅನ್ನು ಬೆಂಬಲಿಸುತ್ತೀನಿ ಎಂದಿದ್ದಾರೆ ಇಶಾನಿ.

ಬಿಗ್​ಬಾಸ್​ನ ಫೈನಲಿಸ್ಟ್​ಗಳು ಯಾರಾಗಬಹುದು ಎಂಬ ಬಗ್ಗೆ ಮಾತನಾಡಿರುವ ಇಶಾನಿ, ವಿನಯ್, ನಮ್ರತಾ, ಮೈಖಲ್, ಸಂಗೀತಾ, ಕಾರ್ತಿಕ್ ಇವರುಗಳು ಫೈನಲ್ ಹಂತಕ್ಕೆ ಬರುತ್ತಾರೆ. ಇವರಲ್ಲಿ ಯಾರಾದರೂ ಒಬ್ಬರು ಗೆಲ್ಲಬಹುದು ಎಂದಿದ್ದಾರೆ. ತಾವು ವಿನಯ್, ನಮ್ರತಾ, ಸ್ನೇಹಿತ್ ಅವರ ಗುಂಪು ಸೇರಿದ್ದಕ್ಕೆ ತೊಂದರೆಯಾಯ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಇಶಾನಿ, ಇಲ್ಲ ಅವರು ನನ್ನ ನಿಜವಾದ ಗೆಳೆಯರು. ಅವರಿಂದ ನನಗೆ ತೊಂದರೆಯಾಗಲಿಲ್ಲ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್