AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ತೆಲುಗು ಬಿಗ್ ಬಾಸ್ ಕಾದು’; ಮಿತಿಮೀರಿ ನಡೆದುಕೊಂಡ ಶೋಭಾ ಶೆಟ್ಟಿಗೆ ವೇದಿಕೆ ಮೇಲೆ ಸುದೀಪ್ ಕ್ಲಾಸ್

ಬಿಗ್ ಬಾಸ್ ಕನ್ನಡ ಸೀಸನ್ 11ರ 50ನೇ ದಿನಕ್ಕೆ ರಜತ್ ಮತ್ತು ಶೋಭಾ ಶೆಟ್ಟಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ. ಶೋಭಾ ಶೆಟ್ಟಿ ಅವರ ಉತ್ತರಗಳಿಗೆ ಸುದೀಪ್ ಅವರು ತರಾಟೆಗೆ ತೆಗೆದುಕೊಂಡಿದ್ದು, ತೆಲುಗು ಬಿಗ್ ಬಾಸ್ ಮತ್ತು ಕನ್ನಡ ಬಿಗ್ ಬಾಸ್ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸಿದ್ದಾರೆ.

‘ತೆಲುಗು ಬಿಗ್ ಬಾಸ್ ಕಾದು’; ಮಿತಿಮೀರಿ ನಡೆದುಕೊಂಡ ಶೋಭಾ ಶೆಟ್ಟಿಗೆ ವೇದಿಕೆ ಮೇಲೆ ಸುದೀಪ್ ಕ್ಲಾಸ್
ಬಿಗ್ ಬಾಸ್
ರಾಜೇಶ್ ದುಗ್ಗುಮನೆ
|

Updated on: Nov 18, 2024 | 6:56 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 11’ 50ನೇ ದಿನಕ್ಕೆ ಕಾಲಿಟ್ಟಿದೆ. ಹೀಗಿರುವಾಗಲೇ ಎರಡು ವೈಲ್ಡ್​ ಕಾರ್ಡ್ ಎಂಟ್ರಿಗಳನ್ನು ಕರೆಸಲಾಗಿದೆ. ರಿಯಾಲಿಟಿ ಶೋಗಳ ಮೂಲಕ ಫೇಮಸ್ ಆದ ರಜತ್ ಹಾಗೂ ತೆಲುಗು ಬಿಗ್ ಬಾಸ್​ನಲ್ಲಿ ಸ್ಪರ್ಧಿಸಿದ ಅನುಭವ ಇರುವ ಶೋಭಾ ಶೆಟ್ಟಿ ದೊಡ್ಮನೆಗೆ ಎಂಟ್ರಿ ಪಡೆದಿದ್ದಾರೆ. ವೇದಿಕೆ ಏರಿದಾಗ ಸುದೀಪ್ ಅವರ ಬಗ್ಗೆ ಶೋಭಾ ಮೆಚ್ಚುಗೆ ವ್ಯಕ್ತಪಡಿಸಿದರು. ಸಲಿಗೆ ಪಡೆಯಲು ಪ್ರಯತ್ನಿಸಿದ ಅವರಿಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಶೋಭಾ ಶೆಟ್ಟಿ ತೆಲುಗು ಬಿಗ್ ಬಾಸ್​ನಲ್ಲಿ ಈ ಮೊದಲು ಸ್ಪರ್ಧಿಸಿದ್ದರು. ಅಲ್ಲಿ ಆ್ಯಂಕರ್ ಅಕ್ಕಿನೇನಿ ನಾಗಾರ್ಜುನ. ಅವರು ನಿರೂಪಣೆಯನ್ನು ಚೆನ್ನಾಗಿಯೇ ಮಾಡುತ್ತಾರೆ. ಆದರೆ, ಸುದೀಪ್ ರೀತಿ ಖಡಕ್ ಆಗಿ ಅವರು ನಿರೂಪಣೆ ಮಾಡಿದ್ದು ಕಡಿಮೆ. ಹೀಗಾಗಿ, ಏನೇ ಮಾತನಾಡಿದರೂ ನಡೆಯುತ್ತದೆ ಎನ್ನುವ ಭಾವನೆ ಅಲ್ಲಿನ ಸ್ಪರ್ಧಿಗಳಿಗೆ ಮೂಡಿರುತ್ತದೆ. ಈಗ ಶೋಭಾ ಶೆಟ್ಟಿ ಅವರು ಸುದೀಪ್ ಎದುರು ಚಿಲ್ ಆಗಿ ಮಾತನಾಡಿಕೊಂಡಿದ್ದರು. ಆದರೆ, ಅವರು ಯಾವಾಗ ಲಯ ತಪ್ಪಿದರು ಎಂಬುದು ಗೊತ್ತಾಯಿತೋ ಆಗ ಸುದೀಪ್ ಕ್ಲಾಸ್ ತೆಗೆದುಕೊಂಡರು. ಇದರ ಬಿಸಿ ಶೋಭಾಗೆ ತಟ್ಟಿದೆ.

‘ನಿಮ್ಮ ಫೇವರಿಟ್ ಸ್ಪರ್ಧಿ ಯಾರು’ ಎಂದು ಸುದೀಪ್ ಕೇಳಿದರು. ‘ನಾನು ಫೇವರಿಟ್ ಸ್ಪರ್ಧಿ ಅಂತ ಹೇಳೋಕೆ ಆಗಲ್ಲ. ನಾವು ಹೊರಗೆ ನೋಡೋದೇ ಬೇರೆ ಇರುತ್ತದೆ..’ ಎಂದು ಏನನ್ನೋ ಹೇಳಲು ಹೊರಟರು ಶೋಭಾ. ಆಗ ಸುದೀಪ್ ನಗುತ್ತಲೇ ಶೋಭಾಗೆ ಕ್ಲಾಸ್ ತೆಗೆದುಕೊಂಡರು. ‘ನಿಮ್ಮ ಪ್ರಶ್ನೆಯನ್ನು ನೀವೆ ಆಯ್ಕೆ ಮಾಡಿಕೊಳ್ಳಬೇಡಿ. ಇದು ತೆಲುಗು ಬಿಗ್ ಬಾಸ್ ಕಾದು. ಪಕ್ಕಾ ಕನ್ನಡ. ಪ್ರಶ್ನೆ ನಮ್ಮದು, ಉತ್ತರ ಮಾತ್ರ ನಿಮ್ಮದು’ ಎಂದರು ಸುದೀಪ್.

ಇದನ್ನೂ ಓದಿ: ‘ಮಂಜು ತಿಕ್ಲ, ಚೈತ್ರಾ ಪುಕ್ಲು’: ಬಿಗ್ ಬಾಸ್ ಮನೆಗೆ ಬರುತ್ತಲೇ ವಿವಾದ ಎಬ್ಬಿಸಿದ ರಜತ್

‘10 ವರ್ಷ ಬಿಗ್ ಬಾಸ್ ನಡೆಸಿಕೊಟ್ಟಿದ್ದೀನಿ. ಇದು 11ನೇ ವರ್ಷ. ಹಲವರು ರೀತಿಯ ಜನರನ್ನು ನೋಡಿದ್ದೇನೆ’ ಎಂದರು ಸುದೀಪ್. ‘ಹೋಗಲಿ ಬಿಡಿ ನಿಮಗೆ ಟಫ್ ಸ್ಪರ್ಧಿ ಯಾರು’ ಎಂದು ಕೇಳಿದರು. ಇದಕ್ಕೆ ‘ಯಾರೂ ಇಲ್ಲ’ ಎಂಬ ಉತ್ತರ ಶೋಭಾ ಕಡೆಯಿಂದ ಬಂತು. ‘ಹಾಗಿದ್ರೆ ಇಲ್ಲೇ ಕಪ್ ಹಿಡ್ಕೊಂಡು ಹೋಗಿ ಬಿಡಿ’ ಎಂದು ಸುದೀಪ್ ಅವರು ಕಾಲೆಳೆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ