AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಡಂದಿರು ಮತ್ತು ಚೆಕ್ ಬೌನ್ಸ್: ಚೈತ್ರಾ-ಅಶ್ವಿನಿ ಗೌಡ ನಡುವೆ ವಾಕ್ಸಮರ

Bigg Boss Kannada 12: ಗಿಲ್ಲಿ ಬಿಗ್​​ಬಾಸ್ ಕನ್ನಡ 12ರ ವಿನ್ನರ್ ಆಗಿದ್ದಾರೆ. ಅಶ್ವಿನಿ ಚೆನ್ನಾಗಿ ಆಡಿದ್ದರಾದರೂ ಗೆಲುವು ಅವರ ಕೈತಪ್ಪಿದೆ. ಬಿಗ್​​ಬಾಸ್ ಮನೆಗೆ ಕಳೆದ ಸೀಸನ್​​ನ ಚೈತ್ರಾ ಕುಂದಾಪುರ ಅತಿಥಿಯಾಗಿ ಹೋಗಿ ಇದ್ದು ಬಂದಿದ್ದರು. ಬಿಗ್​​ಬಾಸ್ ಮನೆಯಲ್ಲಿ ಚೈತ್ರಾ ಮತ್ತು ಅಶ್ವಿನಿ ಅವರ ನಡುವೆ ಸಾಕಷ್ಟು ಜಗಳಗಳು ನಡೆದಿದ್ದವು. ಆದರೆ ಆ ಜಗಳ ಮನೆಯಿಂದ ಹೊರಬಂದ ಮೇಲೂ ಮುಂದುವರೆದಿವೆ. ಯಾವ ಮಟ್ಟಿಗೆ ಜಗಳ ಮುಂದುವರೆದಿದೆಯೆಂದರೆ ಮಾತುಗಳು ವೈಯಕ್ತಿಕ ಮಟ್ಟಕ್ಕೆ ಇಳಿದಿವೆ.

ಗಂಡಂದಿರು ಮತ್ತು ಚೆಕ್ ಬೌನ್ಸ್: ಚೈತ್ರಾ-ಅಶ್ವಿನಿ ಗೌಡ ನಡುವೆ ವಾಕ್ಸಮರ
Chaithra Ashwini
ಮಂಜುನಾಥ ಸಿ.
|

Updated on: Feb 13, 2026 | 4:57 PM

Share

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿದು ತಿಂಗಳಾಗುತ್ತಾ ಬಂದಿದೆ. ಆದರೆ ಬಿಗ್​​ಬಾಸ್ ಮನೆಯ ಒಳಗೆ ಶುರುವಾಗಿದ್ದ ಕೆಲ ಜಗಳಗಳು ಮನೆಯ ಹೊರಗೂ ಮುಂದುವರೆದಿವೆ. ಗಿಲ್ಲಿ ಬಿಗ್​​ಬಾಸ್ ಕನ್ನಡ 12ರ ವಿನ್ನರ್ ಆಗಿದ್ದಾರೆ. ಅಶ್ವಿನಿ ಚೆನ್ನಾಗಿ ಆಡಿದ್ದರಾದರೂ ಗೆಲುವು ಅವರ ಕೈತಪ್ಪಿದೆ. ಬಿಗ್​​ಬಾಸ್ ಮನೆಗೆ ಕಳೆದ ಸೀಸನ್​​ನ ಚೈತ್ರಾ ಕುಂದಾಪುರ ಅತಿಥಿಯಾಗಿ ಹೋಗಿ ಇದ್ದು ಬಂದಿದ್ದರು. ಬಿಗ್​​ಬಾಸ್ ಮನೆಯಲ್ಲಿ ಚೈತ್ರಾ ಮತ್ತು ಅಶ್ವಿನಿ ಅವರ ನಡುವೆ ಸಾಕಷ್ಟು ಜಗಳಗಳು ನಡೆದಿದ್ದವು. ಆದರೆ ಆ ಜಗಳ ಮನೆಯಿಂದ ಹೊರಬಂದ ಮೇಲೂ ಮುಂದುವರೆದಿವೆ. ಯಾವ ಮಟ್ಟಿಗೆ ಜಗಳ ಮುಂದುವರೆದಿದೆಯೆಂದರೆ ಮಾತುಗಳು ವೈಯಕ್ತಿಕ ಮಟ್ಟಕ್ಕೆ ಇಳಿದಿವೆ.

ಮೊದಲಿಗೆ ಅಶ್ವಿನಿ ಅವರು ಇನ್​​ಸ್ಟಾಗ್ರಾಂನಲ್ಲಿ ತಮಗೆ ಆಗಿದ್ದ ತರಚಿದ ಗಾಯಗಳ ಫೋಟೊವನ್ನು ಹಂಚಿಕೊಂಡಿದ್ದರು. ಆದರೆ ಅವರು ಯಾರಿಂದ ಗಾಯ ಆಗಿದೆ ಎಂದೆಲ್ಲ ಹೇಳಿರಲಿಲ್ಲ. ಆದರೆ ಅದಕ್ಕೆ ಪ್ರತಿಕ್ರಿಯಿಸಿದ್ದ ಚೈತ್ರಾ ಕುಂದಾಪುರ, ‘ನನಗೂ ಗಾಯಗಳಾಗಿದೆ ಆದರೆ ಅದನ್ನು ತೋರಿಸಿ ಸಿಂಪತಿ ಗಿಟ್ಟಿಸಿಕೊಳ್ಳಲು ಪಿಆರ್ ಟೀಂ ಇಲ್ಲ ಎಂದಿದ್ದರು. ಅಲ್ಲಿಂದ ಇಬ್ಬರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸಣ್ಣ ವಾಗ್ವಾದ ಶುರುವಾಗಿತ್ತು.

ಆದರೆ ಇದೀಗ ಬೇರೆ ರೂಪ ಪಡೆದುಕೊಂಡಿದ್ದು ವೈಯಕ್ತಿಕ ವಾಗ್ದಾಳಿಗೆ ಇಳಿದಿದೆ. ಅಶ್ವಿನಿ ಅವರ ಖಾಸಗಿ ಜೀವನದ ಬಗ್ಗೆ ಚೈತ್ರಾ ಇತ್ತೀಚೆಗೆ ಆರೋಪ ಮಾಡಿದ್ದರು. ಅಶ್ವಿನಿ ಅವರ ವಿಚ್ಛೇದನ ಮತ್ತು ಅವರ ಮೇಲಿರುವ ಪ್ರಕರಣಗಳ ಬಗ್ಗೆ ಮಾತನಾಡಿದ್ದರು. ಇದೀಗ ಅದಕ್ಕೆ ಪ್ರತಿಕ್ರಿಯೆ ನೀಡಿರುವ ಅಶ್ವಿನಿ ಗೌಡ, ‘ಮೂವರು ಗಂಡಂದಿರು ಚೆಕ್ ಬೌನ್ಸ್ ಪ್ರಕರಣ ಇವೆಲ್ಲ ಚೈತ್ರಾ ಅವರ ಅನುಭವ ಆಗಿರಬಹುದು ಅದಕ್ಕೆ ಹಾಗೆಲ್ಲ ಮಾತನಾಡುತ್ತಿದ್ದಾರೆ’ ಎಂದಿದ್ದಾರೆ.

ಇದನ್ನೂ ಓದಿ:ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ

‘ನಾನು ಗಾಯಗಳ ಚಿತ್ರಗಳನ್ನಷ್ಟೆ ಹಂಚಿಕೊಂಡಿದ್ದೆ, ಅದು ಯಾರು ಮಾಡಿದ್ದು ಎಲ್ಲಿ ಆಗಿದ್ದು ಎಂದೆಲ್ಲ ಹೇಳಿಯೇ ಇರಲಿಲ್ಲ, ಆದರೆ ಕುಂಬಳ ಕಾಯಿ ಕಳ್ಳಿಯ ರೀತಿ ಚೈತ್ರಾ ಅವರೇ ಮೊದಲು ಪ್ರತಿಕ್ರಿಯೆ ನೀಡಿದರು, ಚೈತ್ರಾ ಅವರು ಅವರ ಮಿತಿಯಲ್ಲಿ ಇದ್ದರೆ ಒಳ್ಳೆಯದು’ ಎಂದು ಅಶ್ವಿನಿ ಅವರು ಹೇಳಿದ್ದಾರೆ.

ಇವರಿಬ್ಬರ ಜಗಳದ ನಡುವೆ, ಗಿಲ್ಲಿ ಬಿಗ್​​ಬಾಸ್ ಮನೆಯಲ್ಲಿ ಹೇಳಿದ್ದ ಹಳೆಯ ಡೈಲಾಗ್ ಒಂದು ವೈರಲ್ ಆಗುತ್ತಿದೆ. ‘ಹುಡುಗರು ಕಿತ್ತಾಡಿಕೊಂಡರು ಕೆಲವೇ ನಿಮಿಷಕ್ಕೆ ಕಾಂಪ್ರೊಮೈಸ್ ಆಗಿ ಬಿಡುತ್ತಾರೆ. ಆದರೆ ಹೆಣ್ಣುಮಕ್ಕಳು ಬಿಗ್​​ಬಾಸ್ ಹೊರಗೂ ಜಗಳ ಮುಂದುವರೆಸುತ್ತಾರೆ’ ಎಂದಿದ್ದರು ಅದು ಹಾಗೆಯೇ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಹಿಳಾ ಮೀಸಲಾತಿಗೆ ಬಹುಮತ ಸಿಗದಿದ್ದಕ್ಕೆ ಸಂಸತ್​​ನಲ್ಲಿ ಎನ್​ಡಿಎ ಪ್ರತಿಭಟನೆ
ಮಹಿಳಾ ಮೀಸಲಾತಿಗೆ ಬಹುಮತ ಸಿಗದಿದ್ದಕ್ಕೆ ಸಂಸತ್​​ನಲ್ಲಿ ಎನ್​ಡಿಎ ಪ್ರತಿಭಟನೆ
ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಲು ಯೋಗ್ಯರಲ್ಲ; ಚಿರಾಗ್ ಪಾಸ್ವಾನ್ ಟೀಕೆ
ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಲು ಯೋಗ್ಯರಲ್ಲ; ಚಿರಾಗ್ ಪಾಸ್ವಾನ್ ಟೀಕೆ
ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ: ಲಾಯರ್ ಹೇಳಿದ್ದಿಷ್ಟು
ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ: ಲಾಯರ್ ಹೇಳಿದ್ದಿಷ್ಟು
ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಸ್ಫೋಟಕ ವಿಚಾರ ಬಿಚ್ಚಿಟ್ಟ ಹೋರಾಟಗಾರ
ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಸ್ಫೋಟಕ ವಿಚಾರ ಬಿಚ್ಚಿಟ್ಟ ಹೋರಾಟಗಾರ
ದರ್ಶನ್ ಅಂದು ಆ ಮಾತು ಹೇಳಲು ಬಿಡಲಿಲ್ಲ: ಮಾಜಿ ಮ್ಯಾನೇಜರ್
ದರ್ಶನ್ ಅಂದು ಆ ಮಾತು ಹೇಳಲು ಬಿಡಲಿಲ್ಲ: ಮಾಜಿ ಮ್ಯಾನೇಜರ್
ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ನನ್ನ ಮಾತು ಸತ್ಯವಾಗಿದೆ ಎಂದ BSY
ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ನನ್ನ ಮಾತು ಸತ್ಯವಾಗಿದೆ ಎಂದ BSY
ರಾಹುಲ್ ಗಾಂಧಿಯ ಭಾಷಣವೇ ದೊಡ್ಡ ತಲೆನೋವು; ಕಂಗನಾ ರಣಾವತ್ ಟೀಕೆ
ರಾಹುಲ್ ಗಾಂಧಿಯ ಭಾಷಣವೇ ದೊಡ್ಡ ತಲೆನೋವು; ಕಂಗನಾ ರಣಾವತ್ ಟೀಕೆ
ಜಮಖಂಡಿ ಕಾರಾಗೃಹಕ್ಕೆ ಎಡಿಜಿಪಿ ಭೇಟಿ: ಏನೇನೆಲ್ಲ ಪರಿಶೀಲಿಸಿದ್ರು ನೋಡಿ
ಜಮಖಂಡಿ ಕಾರಾಗೃಹಕ್ಕೆ ಎಡಿಜಿಪಿ ಭೇಟಿ: ಏನೇನೆಲ್ಲ ಪರಿಶೀಲಿಸಿದ್ರು ನೋಡಿ
ಗಾಜಿಯಾಬಾದ್‌ನಲ್ಲಿ ಗುಡಿಸಲುಗಳು ಬೆಂಕಿಗಾಹುತಿ; ಪೆಟಾದಿಂದ ಪ್ರಾಣಿಗಳ ರಕ್ಷಣೆ
ಗಾಜಿಯಾಬಾದ್‌ನಲ್ಲಿ ಗುಡಿಸಲುಗಳು ಬೆಂಕಿಗಾಹುತಿ; ಪೆಟಾದಿಂದ ಪ್ರಾಣಿಗಳ ರಕ್ಷಣೆ
ಮೈಮೇಲೆ ಸೊಳ್ಳೆ ಪರದೆ ಹಾಕಿಕೊಂಡು ನೈಟ್ ಡ್ಯೂಟಿ ಮಾಡಿದ ಸೆಕ್ಯೂರಿಟಿ ಗಾರ್ಡ್
ಮೈಮೇಲೆ ಸೊಳ್ಳೆ ಪರದೆ ಹಾಕಿಕೊಂಡು ನೈಟ್ ಡ್ಯೂಟಿ ಮಾಡಿದ ಸೆಕ್ಯೂರಿಟಿ ಗಾರ್ಡ್