AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ಯಾರೂ ಇಲ್ಲ ಆದರೆ ಶೋ ನಿಲ್ಲಲ್ಲ ಎಂದ ಬಿಗ್​​ಬಾಸ್

Bigg Boss Kannada 12: ಬಿಗ್​​ಬಾಸ್ ಕನ್ನಡ ಸ್ಪರ್ಧಿಗಳು ಈಗ ಮತ್ತೆ ಬಿಗ್​​ಬಾಸ್ ಮನೆಗೆ ಮರಳಿದ್ದಾರೆ. ಆದರೆ ಸುಮಾರು 24 ಗಂಟೆಗೂ ಹೆಚ್ಚಿನ ಸಮಯ ಅವರು ಮನೆಯಿಂದ ಹೊರಗಿದ್ದರು. ಇದೀಗ ಬಿಗ್​​ಬಾಸ್ ಕನ್ನಡದ ಈ ದಿನದ ಎಪಿಸೋಡ್​ನ ಮೊದಲ ಪ್ರೋಮೊ ಬಿಡುಗಡೆ ಆಗಿದ್ದು, ಬಿಗ್​​ಬಾಸ್​​ ಮನೆಯಲ್ಲಿ ಜನರು ಇರದೇ ಇರುವ ಖಾಲಿ ಮನೆಯ ಪ್ರೋಮೊ ಬಿಡುಗಡೆ ಮಾಡಲಾಗಿದೆ.

ಮನೆಯಲ್ಲಿ ಯಾರೂ ಇಲ್ಲ ಆದರೆ ಶೋ ನಿಲ್ಲಲ್ಲ ಎಂದ ಬಿಗ್​​ಬಾಸ್
Bigg Boss Kannada 12
ಮಂಜುನಾಥ ಸಿ.
|

Updated on: Oct 09, 2025 | 8:25 AM

Share

ಬಿಗ್​​ಬಾಸ್ ಕನ್ನಡ 12 (Bigg Boss Kannada 12) ರಿಯಾಲಿಟಿ ಶೋ ತಾತ್ಕಾಲಿಕವಾಗಿ ಬಂದ್ ಆಗಿತ್ತು. ಜಾಲಿವುಡ್​​ ಸ್ಟುಡಿಯೋ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಜಾಲಿವುಡ್ ಸ್ಟುಡಿಯೋ ಬಂದ್ ಮಾಡಲಾಗಿತ್ತು. ಸ್ಟುಡಿಯೋದ ಒಳಗೆ ಇರುವ ಬಿಗ್​​ಬಾಸ್ ಮನೆಗೂ ಬೀಗ ಬಿದ್ದಿತ್ತು. ಸ್ಪರ್ಧಿಗಳನ್ನು ಮನೆಯಿಂದ ಈಗಲ್​​ಟನ್ ರೆಸಾರ್ಟ್​​ಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ ಇದೀಗ ಸುದೀಪ್ ಹಾಗೂ ಇತರರ ಸಂಘಟಿತ ಪ್ರಯತ್ನಗಳಿಂದಾಗಿ ಬಿಗ್​​ಬಾಸ್ ಸ್ಪರ್ಧಿಗಳು ಮತ್ತೆ ಬಿಗ್​​ಬಾಸ್ ಮನೆಗೆ ಮರಳಿದ್ದಾರೆ. ಆದರೆ ಸ್ಪರ್ಧಿಗಳು ಸುಮಾರು 24 ಗಂಟೆಗೂ ಹೆಚ್ಚು ಸಮಯ ಸ್ಪರ್ಧಿಗಳು ಮನೆಯಲ್ಲಿ ಇರಲಿಲ್ಲ. ಹಾಗಾಗಿ ಒಂದು ದಿನದ ಎಪಿಸೋಡ್​​ ವ್ಯರ್ಥವಾಗಿದೆ.

ಇಂದು (ಅಕ್ಟೋಬರ್ 09) ಕಲರ್ಸ್ ವಾಹಿನಿಯು ಬಿಗ್​​ಬಾಸ್ ಇಂದಿನ ಎಪಿಸೋಡ್​​ನ ಮೊದಲ ಪ್ರೋಮೊ ಬಿಡುಗಡೆ ಮಾಡಿದೆ. ಈ ಪ್ರೋಮೊ ಬಹಳ ವಿಶಿಷ್ಟವಾಗಿಯೂ, ವಿಶೇಷವಾಗಿಯೂ ಇದೆ. ನಿನ್ನೆ ಮನೆಯಲ್ಲಿ ನಡೆದುದ್ದನ್ನು ಇಂದಿನ ಎಪಿಸೋಡ್​​ನಲ್ಲಿ ತೋರಿಸಲಾಗುತ್ತದೆ. ಆದರೆ ನಿನ್ನೆ ಮನೆ ಎಲ್ಲ ಖಾಲಿ ಇತ್ತು, ಹಾಗಾಗಿ ಬಿಗ್​​ಬಾಸ್​​ ಇಂದು ಬಿಡುಗಡೆ ಮಾಡಿರುವ ಪ್ರೋಮೋನಲ್ಲೂ ಸಹ ಮನೆಯೆಲ್ಲ ಖಾಲಿ ಇದೆ!

ಪ್ರೋಮೊನಲ್ಲಿ ಖಾಲಿ ಇರುವ ಬೆಡ್ ರೂಂ, ಕಿಚನ್, ಲಿವಿಂಗ್ ರೂಂ, ಹೊರಗಡೆಯ ಏರಿಯಾಗಳನ್ನು ತೋರಿಸಲಾಗಿದೆ. ಪ್ರೋಮೊದ ಕೊನೆಯಲ್ಲಿ ‘ಎಂದಿನಂತೆ ಅದೇ ಸಮಯದಲ್ಲಿ, ಬಿಗ್​​ಬಾಸ್ ಕನ್ನಡ ರಾತ್ರಿ 9:30ಕ್ಕೆ ಪ್ರಸಾರ’ ಎಂದು ಬಿಗ್​​ಬಾಸ್​ ಖಡಕ್ ಧ್ವನಿಯಲ್ಲಿ ಹೇಳಿದೆ. ಆ ಮೂಲಕ, ಮನೆಯಲ್ಲಿ ಜನ ಇರಲಿ, ಇಲ್ಲದೇ ಇರಲಿ, ಬಿಗ್​​ಬಾಸ್ ಶೋ ಪ್ರಸಾರ ಆಗಿಯೇ ತೀರುತ್ತದೆ ಎಂದು ಸಾರಿ ಹೇಳಿದೆ ಬಿಗ್​​ಬಾಸ್.

ಬಿಗ್​​ಬಾಸ್ ಶೋ ನೂರು ದಿನಗಳ ಶೋ ಆಗಿದ್ದು, ಇಲ್ಲಿ ಸ್ಪರ್ಧಿಗಳಷ್ಟೆ ದಿನಗಳಿಗೂ ಸಹ ಮಹತ್ವ ಇದೆ. ಬಿಗ್​​ಬಾಸ್ ಮನೆಯಲ್ಲಿ ಯಾರು ಇದ್ದರೂ, ಬಿಟ್ಟರು, ಸಂಖ್ಯೆ ತಪ್ಪುವಂತಿಲ್ಲ. ಹಾಗಾಗಿಯೇ ಸ್ಪರ್ಧಿಗಳು ಇಲ್ಲದೇ ಹೋದ ದಿನವನ್ನೂ ಸಹ ಬಿಗ್​​ಬಾಸ್ ಶೋನ ಭಾಗವಾಗಿಯೇ ಪರಿಗಣಿಸಿದಂತಿದೆ. ಹಾಗಾಗಿಯೇ ಖಾಲಿ ಮನೆಯ ಎಪಿಸೋಡ್ ಪ್ರಸಾರಕ್ಕೆ ಮುಂದಾಗಿದೆ. ಪ್ರೋಮೊನಲ್ಲಿ ಖಾಲಿ ಮನೆ ತೋರಿಸಿದ್ದಾರಾದರೂ ಎಪಿಸೋಡ್​​ನಲ್ಲಿ, ಬಿಗ್​​ಬಾಸ್ ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗುವ ಮುಂಚೆ ನಡೆದ ಘಟನೆಗಳು, ಬಿಗ್​​ಬಾಸ್ ಮನೆಯಿಂದ ಹೊರಗೆ ಹೋದ ಸನ್ನಿವೇಶಗಳ ದೃಶ್ಯಗಳನ್ನು ಪ್ರಸಾರ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ:ಒಂದು ಫೋನ್ ಕರೆಯಿಂದ ಬಿಗ್​​ಬಾಸ್ ಬಾಗಿಲು ತೆಗೆಸಿದ ಕಿಚ್ಚ ಸುದೀಪ್

ಈ ಹಿಂದೆ ಕೋವಿಡ್ ಕಾರಣಕ್ಕೆ ಬಿಗ್​​ಬಾಸ್ ಶೋ ಅನ್ನು ಬಂದ್ ಮಾಡಲಾಗಿತ್ತು. ಅದರ ಹೊರತಾಗಿ ಇನ್ಯಾವ ಸೀಸನ್​​ನಲ್ಲೂ ಸಹ ಶೋ ಅರ್ಧಕ್ಕೆ ನಿಂತಿದ್ದು ಇಲ್ಲ. ಕಳೆದ ವರ್ಷವೂ ಸಹ ಬಿಗ್​​ಬಾಸ್ ಮನೆಯ ಬಗ್ಗೆ ಕೆಲ ಆರೋಪಗಳು ಕೇಳಿಬಂದವು, ನೊಟೀಸ್​​ಗಳು ಬಂದಿದ್ದವು. ಆದರೆ ಶೋ ಅಬಾಧಿತವಾಗಿ ನಡೆದಿತ್ತು. ಆದರೆ ಈ ಬಾರಿ ಶೋ ತಾತ್ಕಾಲಿಕವಾಗಿ ಬಂದ್ ಆಗಿ ಮತ್ತೆ ಶುರುವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!