AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಿನಾಲೆ ಮುಗಿವ ಮುಂಚೆಯೇ ಡ್ರೋನ್ ಪ್ರತಾಪ್-ವರ್ತೂರು ಸಂತುಗೆ ಸಿಕ್ತು ಹೊಸ ರಿಯಾಲಿಟಿ ಶೋಗೆ ಆಫರ್

Bigg Boss Kannada: ಬಿಗ್​ಬಾಸ್ ಕನ್ನಡದ ವರ್ತೂರು ಸಂತೋಷ್ ಹಾಗೂ ಡ್ರೋನ್ ಪ್ರತಾಪ್​ಗೆ ಬಿಗ್​ಬಾಸ್ ಫಿನಾಲೆ ಮುಗಿಯುವ ಮುನ್ನವೇ ಹೊಸ ರಿಯಾಲಿಟಿ ಶೋ ಇಂದ ಹೊಸ ಆಫರ್ ಬಂದಿದೆ.

ಫಿನಾಲೆ ಮುಗಿವ ಮುಂಚೆಯೇ ಡ್ರೋನ್ ಪ್ರತಾಪ್-ವರ್ತೂರು ಸಂತುಗೆ ಸಿಕ್ತು ಹೊಸ ರಿಯಾಲಿಟಿ ಶೋಗೆ ಆಫರ್
ಮಂಜುನಾಥ ಸಿ.
|

Updated on: Jan 27, 2024 | 8:52 PM

Share

ಬಿಗ್​ಬಾಸ್ ಕನ್ನಡ ಸೀಸನ್ 10 (BiggBoss) ಮುಗಿಯಲು ಕೆಲವು ಗಂಟೆಗಳಷ್ಟೆ ಬಾಕಿ ಇದೆ. ಫಿನಾಲೆ ಈಗಾಗಲೇ ಆರಂಭವಾಗಿದ್ದು, ಫಿನಾಲೆಯ ಮೊದಲ ದಿನ ಶನಿವಾರದ ಎಪಿಸೋಡ್ ಆರಂಭವಾಗಿದೆ. ಸಂಗೀತಾ ಶೃಂಗೇರಿ, ವರ್ತೂರು ಸಂತೋಷ್, ವಿನಯ್ ಗೌಡ, ಡ್ರೋನ್ ಪ್ರತಾಪ್, ಕಾರ್ತಿಕ್ ಮಹೇಶ್, ತುಕಾಲಿ ಸಂತೋಷ್ ಅವರುಗಳು ಮನೆಯ ಒಳಗಿದ್ದಾರೆ. ಇವರಲ್ಲಿ ಒಬ್ಬರು ಮಾತ್ರವೇ ವಿನ್ನರ್ ಆಗಲಿದ್ದಾರೆ. ಇನ್ನುಳಿದವರು ಬರಿಗೈಲಿ ಮನೆಗೆ ತೆರಳಲಿದ್ದಾರೆ (ರನ್ನರ್ ಅಪ್ ಹೊರತುಪಡಿಸಿ) ಆದರೆ ಮನೆಯ ಇಬ್ಬರು ಸ್ಪರ್ಧಿಗಳಿಗೆ ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗುವ ಮೊದಲೇ ಒಳ್ಳೆಯ ಅವಕಾಶವೊಂದು ದೊರೆತಿದೆ!

ಬಿಗ್​ಬಾಸ್ ಮನೆಗೆ ಗಿಚ್ಚಿ-ಗಿಲಿ-ಗಿಲಿ ತಂಡ ಬಂದಿತ್ತು. ನಿರಂಜನ್ ದೇಶಪಾಂಡೆ, ತಮ್ಮ ಇಡೀ ಗಿಚ್ಚ-ಗಿಲಿಗಿಲಿ ತಂಡವನ್ನು ಮನೆಗೆ ಕರೆದುಕೊಂಡು ಬಂದಿದ್ದರು. ಮನೆಯ ಸದಸ್ಯರನ್ನು ಮುಂದೆ ಕೂರಿಸಿಕೊಂಡು ತಮಾಷೆಯ ಸ್ಕಿಟ್ ಒಂದನ್ನು ಮಾಡಿದರು. ಸುದೀಪ್ ಅವರ ‘ವೀರಮದಕರಿ’ ಸಿನಿಮಾದ ಹಾಡೊಂದನ್ನು ಬಳಸಿಕೊಂಡು ಸ್ಪರ್ಧಿಗಳ ವ್ಯಕ್ತಿತ್ವವನ್ನು ತಮಾಷೆಯಾಗಿ ಹಾಡಿದರು. ನಿರಂಜನ್​ರ ಹಾಡು ಕೇಳಿ ಮನೆಯ ಸದಸ್ಯರು ಬಿದ್ದು-ಬಿದ್ದು ನಕ್ಕರು.

ಈ ವೇಳೆ ನಿರಂಜನ್ ಘೋಷಣೆಯೊಂದನ್ನು ಮಾಡಿದರು. ಡ್ರೋನ್ ಪ್ರತಾಪ್ ಹಾಗೂ ವರ್ತೂರು ಸಂತೋಷ್ ತಮ್ಮ ಗಿಚ್ಚ-ಗಿಲಿಗಿಲಿ ತಂಡ ಸೇರಿಕೊಳ್ಳಲಿದ್ದಾರೆ. ಬಿಗ್​ಬಾಸ್ ಮನೆಯಿಂದ ಹೊರಗೆ ಬಂದ ಕೂಡಲೇ ಅವರು ನಮ್ಮ ತಂಡ ಸೇರಲಿದ್ದಾರೆ ಎಂದರು. ಇದು ಸ್ವತಃ ಡ್ರೋನ್ ಪ್ರತಾಪ್ ಹಾಗೂ ವರ್ತೂರು ಸಂತೋಷ್​ಗೂ ಆಶ್ಚರ್ಯ ತಂದಿತು.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ರಾಜನಾದ ತುಕಾಲಿ, ಪ್ರತಾಪ್ ಖುಷಿಗೆ ಪಾರವೇ ಇಲ್ಲ

ಕೊನೆಗೆ, ವರ್ತೂರು ಸಂತೋಷ್ ಅನ್ನು ವೇದಿಕೆಗೆ ಕರೆದ ನಿರಂಜನ್, ವರ್ತೂರು ಕೈಯಲ್ಲಿ ಖಾಲಿ ಪೇಪರ್​ಗೆ ಸಹಿ ಹಾಕಿಸಿಕೊಂಡರು. ನೀವು ನಮ್ಮ ತಂಡ ಸೇರಲಿದ್ದೀರಿ ಮಾತ್ರವಲ್ಲದೆ, ನಮ್ಮ ಗಿಚ್ಚಿ-ಗಿಲಿಗಿಲಿ ಹೊಸ ಸೀಸನ್ ಗೆ ಸ್ಪಾನ್ಸರ್ ನೀಡುತ್ತಿದ್ದೀರಿ ಎಂದು ಈ ಒಪ್ಪಂದದಲ್ಲಿ ಬರೆದಿದೆ ಎಂದರು. ನಿರಂಜನ್ ಮಾತಿಗೆ ವರ್ತೂರು ಶಾಕ್ ಆದರು. ನಿರಂಜನ್ ಹೇಳಿದಂತೆ ಡ್ರೋನ್ ಪ್ರತಾಪ್ ಹಾಗೂ ವರ್ತೂರು ಸಂತೋಷ್ ನಿಜಕ್ಕೂ ಗಿಚ್ಚಿ-ಗಿಲಿಗಿಲಿ ಸೇರುತ್ತಿಲ್ಲ. ಬದಲಿಗೆ ನಿರಂಜನ್ ದೇಶಪಾಂಡೆ ತಮಾಷೆಗೆ ಈ ಇಬ್ಬರೂ ತಮ್ಮ ತಂಡ ಸೇರುತ್ತಿರುವುದಾಗಿ ಹೇಳಿದರಷ್ಟೆ.

ಗಿಚ್ಚಿ-ಗಿಲಿಗಿಲಿ ತಂಡದವರು ಮನೆಯ ಸದಸ್ಯರ ಬಗ್ಗೆ ಹೇಳಿದ ಹಾಡುಗಳು ಮಜವಾಗಿದ್ದವು. ಪ್ರತಿ ಸದಸ್ಯರ ಬಗ್ಗೆ ಒಂದೊಂದು ಹಾಡುಗಳನ್ನು ಕಟ್ಟಿಕೊಂಡು ಬಂದಿದ್ದರು. ಸದಸ್ಯರು ಮನೆಯಲ್ಲಿ ಆಡಿದ ರೀತಿ, ಅವರ ವ್ಯಕ್ತಿತ್ವವಕ್ಕೆ ಸೂಟ್ ಆಗುವಂತೆ ತಮಾಷೆಭರಿತ ಹಾಡುಗಳನ್ನು ಕಟ್ಟಿಕೊಂಡು ಬಂದಿತ್ತು ತಂಡ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ