AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆದ್ದರೆ ಒಂದು ರೀತಿ, ಸೋತರೆ ಒಂದು ರೀತಿ? ಪ್ರತಾಪ್ ನಡವಳಿಕೆಗೆ ತಿರುಗಿ ಬಿತ್ತು ಮನೆ

ನಮ್ರತಾ, ಡ್ರೋನ್ ಪ್ರತಾಪ್ ಹಾಗೂ ಸಂಗೀತಾ ಅತಿ ಹೆಚ್ಚು ಅಂಕ ಪಡೆದು ಟಿಕೆಟ್ ರೇಸ್​ಗೆ ಅರ್ಹರಾದರು. ತುಕಾಲಿ ಸಂತೋಷ್, ಕಾರ್ತಿಕ್ ಹಾಗೂ ತನಿಷಾ ಅವರು ಸಂಗೀತಾಗೆ ವೋಟ್ ಹಾಕಿದರು. ಈ ಮೂಲಕ ಫಿನಾಲೆ ಟಿಕೆಟ್ ಸಂಗೀತಾ ಕೈ ಸೇರಿತು.

ಗೆದ್ದರೆ ಒಂದು ರೀತಿ, ಸೋತರೆ ಒಂದು ರೀತಿ? ಪ್ರತಾಪ್ ನಡವಳಿಕೆಗೆ ತಿರುಗಿ ಬಿತ್ತು ಮನೆ
ಪ್ರತಾಪ್-ಸಂಗೀತಾ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Jan 13, 2024 | 8:33 AM

Share

ಡ್ರೋನ್ ಪ್ರತಾಪ್ (Drone Prathap) ಅವರು ಈ ವಾರ ಉತ್ತಮವಾದ ಪ್ರದರ್ಶನ ನೀಡಿದ್ದಾರೆ. ಅವರಿಗೆ ಬಿಗ್ ಬಾಸ್ ಫಿನಾಲೆ ಟಿಕೆಟ್ ಮಿಸ್ ಆಗಿದೆ. ಸಂಗೀತಾ ಟಿಕೆಟ್ ಪಡೆದು ಫಿನಾಲೆ ತಲುಪಿದ್ದಾರೆ. ಇದರಿಂದ ಡ್ರೋನ್ ಪ್ರತಾಪ್ ಅವರು ಡಲ್ ಆಗಿದ್ದಾರೆ. ಸಾಕಷ್ಟು ಬೇಸರ ಮಾಡಿಕೊಂಡಿದ್ದಾರೆ. ಅವರು ನಡೆದುಕೊಂಡ ರೀತಿಗೆ ವರ್ತೂರು ಸಂತೋಷ್ ಹಾಗೂ ಸಂಗೀತಾ ಸಾಕಷ್ಟು ಸಿಟ್ಟಾಗಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಜನವರಿ 12ರಂದು ಈ ಎಪಿಸೋಡ್ ಪ್ರಸಾರ ಕಂಡಿದೆ.

ಈ ವಾರ ವೈಯಕ್ತಿಕ ಟಾಸ್ಕ್ ನೀಡಲಾಗಿತ್ತು. ಡ್ರೋನ್ ಪ್ರತಾಪ್, ನಮ್ರತಾ ಹಾಗೂ ಸಂಗೀತಾ ಅತಿ ಹೆಚ್ಚು ಅಂಕ ಪಡೆದು ಟಿಕೆಟ್ ರೇಸ್​ಗೆ ಅರ್ಹರಾದರು. ಆ ಬಳಿಕ ಉಳಿದ ಐವರು ಸದಸ್ಯರು ಯಾರು ಟಿಕೆಟ್​ಗೆ ಅರ್ಹರು ಎಂದು ವೋಟ್ ಮಾಡಿದರು. ಡ್ರೋನ್ ಪ್ರತಾಪ್​ಗೆ ವರ್ತೂರು ಸಂತೋಷ್ ವೋಟ್ ಮಾಡಿದರೆ, ನಮ್ರತಾಗೆ ವಿನಯ್ ಮತ ಚಲಾಯಿಸಿದರು. ತುಕಾಲಿ ಸಂತೋಷ್, ತನಿಷಾ ಹಾಗೂ ಕಾರ್ತಿಕ್ ಸಂಗೀತಾಗೆ ವೋಟ್ ಹಾಕಿದರು. ಈ ಮೂಲಕ ಫಿನಾಲೆ ಟಿಕೆಟ್ ಸಂಗೀತಾ ಕೈ ಸೇರಿತು. ಜೊತೆಗೆ ಅವರು ಕ್ಯಾಪ್ಟನ್ ಕೂಡ ಆದರು.

ಹೆಚ್ಚು ಅಂಕ ಪಡೆದ ಪ್ರತಾಪ್​ ತಮಗೆ ಫಿನಾಲೆ ಟಿಕೆಟ್ ಸಿಗಬಹುದು ಎಂದು ಭಾವಿಸಿದ್ದರು. ಆದರೆ, ಹಾಗಾಗಿಲ್ಲ. ಇದು ಅವರಿಗೆ ಬೇಸರ ಮೂಡಿಸಿತು. ಜೊತೆಗೆ ಕ್ಯಾಪ್ಟನ್ ಆಗಬೇಕು ಎನ್ನುವ ಅವರ ಕನಸು ಕನಸಾಗಿಯೇ ಉಳಿಯಿತು. ‘ನಾನು ಇಷ್ಟು ಶ್ರಮ ಹಾಕಿ ಆಡಿ ಅತಿ ಹೆಚ್ಚು ಅಂಕ ಗಳಿಸಿದರೂ ನನಗೆ ನೀವು ಯಾರೂ ವೋಟ್ ಮಾಡಲಿಲ್ಲ. ನಾನು ಫಿನಾಲೆ ಟಿಕೆಟ್ ಪಡೆಯಲು ಅರ್ಹನಾಗಿದ್ದೆ. ಕ್ಯಾಪ್ಟನ್ ಆಗಬೇಕು ಎಂದು ಕನಸು ಕಂಡಿದ್ದೆ’ ಎಂದು ಬೇಸರ ಮಾಡಿಕೊಂಡರು. ಸಂಗೀತಾ ಹ್ಯಾಂಡ್​ಶೇಕ್ ಮಾಡಲು ಬಂದರೂ ಅವರು ಅದಕ್ಕೆ ಒಪ್ಪಲಿಲ್ಲ.

ಪ್ರತಾಪ್ ನಡೆದುಕೊಂಡ ರೀತಿ ಸಂಗೀತಾಗೆ ಬೇಸರ ಮೂಡಿಸಿತು. ಈ ಕಾರಣಕ್ಕೆ ಅವರು ಸಂಗೀತಾ ಅಸಮಾಧಾನಗೊಂಡರು. ‘ಪ್ರತು ನಾನು ನಿನಗೆ ಒಳ್ಳೆಯದಾಗಲಿ ಎಂದು ಬಯಸಿದೆ. ಆದರೆ, ನೀನೇಕೆ ಇಷ್ಟು ಬೇಸರ ಮಾಡಿಕೊಂಡಿದ್ದೀಯಾ? ನಾನು ಗೆದ್ದಿರೋದು ನಿನಗೆ ಖುಷಿ ನೀಡಿಲ್ಲ ಅಲ್ಲವೇ’ ಎಂದರು. ಇದಕ್ಕೆ ಪ್ರತಾಪ್ ‘ಹೌದು’ ಎಂದು ನೇರವಾಗಿ ಉತ್ತರಿಸಿದರು. ಈ ಮಧ್ಯೆ ಸಂಗೀತಾ ಕಾಲಿಗೆ ಬೀಳೋಕೂ ಹೋದರು ಪ್ರತಾಪ್.

ಇದನ್ನೂ ಓದಿ: ಸಂಗೀತಾಗೆ ಫಿನಾಲೆ ಟಿಕೆಟ್ ಜೊತೆ ಮತ್ತೊಂದು ದೊಡ್ಡ ಅಡ್ವಾಂಟೇಜ್ ಕೊಟ್ಟ ಬಿಗ್ ಬಾಸ್

ಆ ಬಳಿಕ ವರ್ತೂರು ಸಂತೋಷ್ ಅವರು ಪ್ರತಾಪ್​ಗೆ ಕ್ಲಾಸ್ ತೆಗೆದುಕೊಂಡರು. ‘ಇಡೀ ಮನೆಯಲ್ಲಿ ಯಾರೂ ನನ್ನ ಪರ ಇಲ್ಲ ಎಂದು ಹೇಳ್ತಾ ಇದೀಯಲ್ಲ. ನಾನು ನಿನ್ನ ಪರವಾಗಿ ನಿಂತಿದ್ದು ಕಾಣುತ್ತಿಲ್ಲವೇ? ಇಡೀ ಮನೆಯಲ್ಲಿ ಮೊದಲಿನಿಂದ ನಾನು ನಿನಗೆ ಬೆಂಬಲ ನೀಡುತ್ತಾ ಬಂದಿದ್ದೀನಿ. ಆದರೆ, ಅದಕ್ಕೆ ನೀನು ಬೆಲೆ ಕೊಡಲೇ ಇಲ್ಲ. ನಾನು ನಿನಗೆ ವೋಟ್ ಮಾಡಿ ಏನು ಪ್ರಯೋಜನ? ನನ್ನನ್ನು ನೀನು ಪರಿಗಣಿಸುತ್ತಲೇ ಇಲ್ಲವಲ್ಲ’ ಎಂದು ವರ್ತೂರು ಸಂತೋಷ್ ಸಿಟ್ಟಾದರು. ಎಪಿಸೋಡ್ ಜೊತೆ ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:58 am, Sat, 13 January 24

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು