AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ತಪ್ಪಂತೂ ನಡೆಯಲ್ಲ’ ಜನರಿಗೆ ಭರವಸೆ ಕೊಟ್ಟ ಸುದೀಪ್

Bigg Boss Kannada season 11: ಬಿಗ್​ಬಾಸ್ ಕನ್ನಡ ಸೀಸನ್ 11ರ ಕಡೆಯ ವಾರದ ಪಂಚಾಯಿತಿ ನಡೆದಿದೆ. ಈ ವಾರದ ಮಧ್ಯಭಾಗ ನಡೆಯಬೇಕಿದ್ದ ಎಲಿಮಿನೇಷನ್ ನಡೆದಿಲ್ಲ. ಮನೆಗೆ ಹೋಗಬೇಕಿದ್ದ ಒಬ್ಬರು ಹೋಗಲಿಲ್ಲ ಇದರಿಂದ ಇನ್ನೊಬ್ಬ ಅರ್ಹ ಸ್ಪರ್ಧಿಗೆ ಅನ್ಯಾಯ ಆದಂತಾಗಿದೆ. ಆದರೆ ಬಿಗ್​ಬಾಸ್​ ನಲ್ಲಿ ಅರ್ಹ ಸ್ಪರ್ಧಿಗೆ ಅನ್ಯಾಯ ಆಗುವುದಿಲ್ಲ ಎಂದು ಸುದೀಪ್ ಭರವಸೆ ನೀಡಿದ್ದಾರೆ.

‘ತಪ್ಪಂತೂ ನಡೆಯಲ್ಲ’ ಜನರಿಗೆ ಭರವಸೆ ಕೊಟ್ಟ ಸುದೀಪ್
Bigg Boss Kannada Season 11
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.|

Updated on: Jan 18, 2025 | 10:14 PM

Share

ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ವೇದಿಕೆ ಏರುತ್ತಿದ್ದಂತೆ ಸ್ಪರ್ಧಿಗಳಿಗೆ ಒಂದು ಭರವಸೆ ನೀಡಿದ್ದಾರೆ. ತಪ್ಪಂತೂ ನಡೆಯಲ್ಲ ಎಂದು ಜನರಿಗೆ ಅವರು ಹೇಳಿದ್ದಾರೆ. ಹಾಗಾದರೆ, ಅವರು ಈ ಭರವಸೆಯನ್ನು ಜನರಿಗೆ ಏಕೆ ಕೊಟ್ಟರು? ಆ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ. ಸುದೀಪ್ ಅವರು ಈ ವಿಚಾರವನ್ನು ಹೇಳಿದ್ದು ಧನರಾಜ್ ಅವರ ವಿಚಾರಕ್ಕೆ. ಅಷ್ಟಕ್ಕೂ ವಾರಾಂತ್ಯದಲ್ಲಿ ಏನು ನಡೆಯಿತು ಎಂಬುದನ್ನು ನೋಡೋಣ.

ಈ ವಾರದಲ್ಲಿ ದೊಡ್ಮನೆಯಲ್ಲಿ ಒಂದು ಘಟನೆ ನಡೆದಿತ್ತು. ಮಧ್ಯವಾರದ ಎಲಿಮಿನೇಷ್​ನಿಂದ ಬಚಾವ್ ಆಗಲು ಸ್ಪರ್ಧಿಗಳಿಗೆ ಒಂದಷ್ಟು ಟಾಸ್ಕ್ ಕೊಡಲಾಗಿತ್ತು. ಕೊನೆಯ ಟಾಸ್ಕ್​ನಲ್ಲಿ ಭವ್ಯಾ, ಮೋಕ್ಷಿತಾ ಹಾಗೂ ಧನರಾಜ್ ಮುಂದಿದ್ದರು. ಈ ಟಾಸ್ಕ್​ನಲ್ಲಿ ಯಾರು ಗೆಲ್ಲುತ್ತಾರೋ ಅವರಿಗೆ ಮಿಡ್ ವೀಕ್​ನಿಂದ ಬಚಾವ್ ಆಗುವ ಅವಕಾಶ ಇತ್ತು. ಈ ಅವಕಾಶವನ್ನು ಧನರಾಜ್ ಪಡೆದರು. ಅವರು ಗೆದ್ದು ಮಧ್ಯವಾರದ ನಾಮಿನೇಷನ್​ನಿಂದ ಬಚಾವ್ ಆದರು.

ಆದರೆ, ಈ ಟಾಸ್ಕ್​ ವೇಳೆ ಮೋಸ ನಡೆದಿದೆ ಎಂಬುದು ಸ್ಪಷ್ಟವಾಗಿತ್ತು. ಧನರಾಜ್ ಅವರು ಮೋಸ ಮಾಡಿ ಗೆದ್ದರು ಎನ್ನಲಾಯಿತು. ಇದನ್ನು ಅವರೂ ಒಪ್ಪಿಕೊಂಡರು. ಆ ಬಳಿಕ ಮಧ್ಯವಾರದ ಎಲಿಮಿನೇಷನ್​ ನಡೆಸಲೇ ಇಲ್ಲ. ಇದಕ್ಕೆ ಕಾರಣ ಆಗಿದ್ದು ಧನರಾಜ್ ಮೋಸ್ ಎಂದೇ ಬಿಗ್ ಬಾಸ್ ಹೇಳಿದರು. ಈ ರೀತಿಯ ನಿರ್ಧಾರವನ್ನು ಬಿಗ್ ಬಾಸ್ ತೆಗೆದುಕೊಂಡಿದ್ದು ಇದೇ ಮೊದಲು. ಈ ಕಾರಣಕ್ಕೆ ಸುದೀಪ್ ಅವರು ಬಿಗ್ ಬಾಸ್ ನಿರ್ಧಾರದ ಬಗ್ಗೆ ಸ್ಪಷ್ಟನೆ ನೀಡಿದರು. ಅವರು ಬಿಗ್ ಬಾಸ್ ನಿರ್ಧಾರವನ್ನು ಬೆಂಬಲಿಸಿದರು.

ಇದನ್ನೂ ಓದಿ:ಮಧ್ಯರಾತ್ರಿ ಬಿಗ್​ಬಾಸ್ ಮನೆಯಿಂದ ಹೊರ ಹೋದವರ್ಯಾರು?

‘ನಾನು ಕಳೆದ ವಾರ ಹೋಗುವಾಗ ಮಧ್ಯವಾರದಲ್ಲಿ ಒಬ್ಬರು ಹೋಗುತ್ತಾರೆ ಎಂದು ಜನರಿಗೆ ಭರವಸೆ ಕೊಟ್ಟು ಹೋಗಿದ್ದೆ. ಆದರೆ, ಅದು ಸುಳ್ಳಾಗಿದೆ. ಇದಕ್ಕೆ ಕಾರಣವೂ ಇದೆ. ತಪ್ಪು ಮಾಡದೆ ಇದ್ದವರಿಗೆ ಶಿಕ್ಷೆ ಆಗಬಾರದು ಎಂಬುದು ನಮ್ಮ ನಿಯಮ. ಹೀಗಾಗಿ ತಪ್ಪು ಆಗೋಕೆ ನಾವಂತೂ ಬಿಡಲ್ಲ’ ಎಂದರು ಸುದೀಪ್.

ಒಂದೊಮ್ಮೆ ಧನರಾಜ್ ಅವರು ಗೆಲ್ಲದೆ ಇದ್ದಿದ್ದರೆ ಬೇರೆ ಯಾರೋ ಆ ಟಾಸ್ಕ್ ಗೆಲ್ಲುತ್ತಿದ್ದರು. ಈ ಮೂಲಕ ಬೇರೆ ಯಾರೋ ಟಾಪ್​ಗೆ ಬಂದು ಆ ವಾರ ನಾಮಿನೇಷನ್​ನಿಂದ ಬಚಾವ್ ಆಗುತ್ತಿದ್ದರೇನೋ ಎಂಬುದು ಬಿಗ್ ಬಾಸ್ ಹಾಗೂ ಸುದೀಪ್ ಅಭಿಪ್ರಾಯ. ಈ ವಿಚಾರದಲ್ಲಿ ಸುದೀಪ್ ಅವರು ಧನರಾಜ್​ಗೆ ಹೆಚ್ಚು ಬೈಯದೇ ವಾರ್ನ್ ಮಾಡಿ ಬಿಟ್ಟಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ