AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರಸಿಗೆ ಕಣ್ಣೀರು ಹಾಕಿಸಿದ ಸೇವಕರು, ಅಶ್ವಿನಿ ಗೌಡ ಅತ್ತಿದ್ದು ಏಕೆ?

Bigg Boss Kannada season 12: ಬಿಗ್​​ಬಾಸ್ ಮನೆಯಲ್ಲಿ ಪ್ರಸ್ತುತ 18 ಮಂದಿ ಸದಸ್ಯರಿದ್ದಾರೆ. ಎಲ್ಲರೂ ಒಬ್ಬರಿಗಿಂತಲೂ ಒಬ್ಬರು ಭಿನ್ನ. ಕಳೆದೊಂದು ವಾರದ ಆಟ ಗಮನಿಸಿದರೆ ಅಶ್ವಿನಿ ಗೌಡ, ಮನೆಯ ಗಟ್ಟಿ ಸ್ಪರ್ಧಿ ಎನಿಸಿಕೊಂಡಿದ್ದರು. ರಾಜಮಾತೆಯಾಗಿ ಚೆನ್ನಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಆದರೆ ಅವರು ಸಹ ನಿನ್ನೆ ಕಣ್ಣೀರು ಹಾಕಿದ್ದಾರೆ. ಅಷ್ಟಕ್ಕೂ ಅವರಿಗೆ ಕಣ್ಣೀರು ಹಾಕಿಸಿದ್ದು ಯಾರು?

ಅರಸಿಗೆ ಕಣ್ಣೀರು ಹಾಕಿಸಿದ ಸೇವಕರು, ಅಶ್ವಿನಿ ಗೌಡ ಅತ್ತಿದ್ದು ಏಕೆ?
Bigg Boss Kannada 12
ಮಂಜುನಾಥ ಸಿ.
|

Updated on: Oct 07, 2025 | 8:12 AM

Share

ಬಿಗ್​​ಬಾಸ್ ಕನ್ನಡ ಸೀಸನ್ 12ರ ಮೊದಲ ವಾರಾಂತ್ಯದ ಪಂಚಾಯಿತಿ ಬಳಿಕ ಮನೆಯ ಸ್ಪಷ್ಟವಾಗಿ ಒಡೆದು ಎರಡು ಹೋಳಾಗಿದೆ. ಜಂಟಿಗಳು ಹಾಗೂ ಒಂಟಿಗಳು ಎಂದು ಮೊದಲೇ ಸ್ಪರ್ಧಿಗಳನ್ನು ಬಿಗ್​​ಬಾಸ್ ವಿಂಗಡಿಸಿದ್ದರು. ಆದರೆ ವಾರದ ಪಂಚಾಯಿತಿ ಬಳಿಕ ನಡೆದ ಕೆಲವು ಘಟನೆಗಳು ಎರಡು ಗುಂಪುಗಳನ್ನು ಸ್ಪಷ್ಟವಾಗಿ ಬೇರ್ಪಡಿಸಿದೆ. ಎರಡೂ ಗುಂಪುಗಳ ನಡುವೆ ಜೋರಾದ ವಾಗ್ದಾಳಿ, ಜಗಳಗಳು ಸಹ ನಡೆದಿವೆ. ಕಳೆದೊಂದು ವಾರದ ಆಟ ಗಮನಿಸಿದರೆ ಅಶ್ವಿನಿ ಗೌಡ, ಮನೆಯ ಗಟ್ಟಿ ಸ್ಪರ್ಧಿ ಎನಿಸಿಕೊಂಡಿದ್ದರು. ಆದರೆ ಅವರು ಸಹ ನಿನ್ನೆ ಕಣ್ಣೀರು ಹಾಕಿದ್ದಾರೆ. ಅಷ್ಟಕ್ಕೂ ಅವರಿಗೆ ಕಣ್ಣೀರು ಹಾಕಿಸಿದ್ದು ಯಾರು?

ಬಿಗ್​​ಬಾಸ್ ಮನೆಯಲ್ಲಿ ಜಂಟಿಗಳು-ಒಂಟಿಗಳ ನಡುವೆ ಮನೆ ಗೆಲಸದ ವಿಷಯಕ್ಕೆ ತಿಕ್ಕಾಟ ಆರಂಭವಾಗಿದೆ. ಜಂಟಿಗಳು ನಿಯಮ ಉಲ್ಲಂಘನೆ ಮಾಡಿರುವ ಕಾರಣಕ್ಕೆ ಒಂಟಿಗಳಿಗೆ ಬಿಗ್​​ಬಾಸ್ ಶಿಕ್ಷೆ ನೀಡಿದ್ದಾರೆ. ಆದರೆ ಇದರಿಂದ ಸಿಟ್ಟಿಗೆದ್ದ ಒಂಟಿಗಳು ಜಂಟಿಗಳ ಶಿಸ್ತು ಉಲ್ಲಂಘನೆ ಇನ್ನಿತರೆ ವಿಷಯಗಳಿಗೆ ಅವರೊಟ್ಟಿಗೆ ಜಗಳವಾಡಿದರು. ಬಳಿಕ ಕೆಲಸದ ವಿಷಯ ಬಂದಾಗ ಜಂಟಿಗಳು ತಾವು ಅಡುಗೆ ಮಾಡುವುದಿಲ್ಲ ಇನ್ನಿತರೆ ಕೆಲಸಗಳನ್ನು ಮಾಡುವುದಿಲ್ಲವೆಂದು ಹೇಳಿದರು.

ಈ ಬಗ್ಗೆ ಜೋರಾದ ವಾಗ್ವಾದ ನಡೆಯಿತು. ವಾಗ್ವಾದದ ಮುನ್ನೆಲೆಯಲ್ಲಿ ಇದ್ದಿದ್ದ ಅಶ್ವಿನಿ ಗೌಡ, ಜಾನ್ಹವಿ ಮತ್ತು ಜಂಟಿಗಳ ಕಡೆಯಿಂದ ಮಂಜು ಭಾಷಿಣಿ. ಜೋರು ಜಗಳ ನಡೆಯುತ್ತಿದ್ದ ಸಮಯದಲ್ಲಿಯೂ ಸಹ ಗಿಲ್ಲಿ ಮಾತ್ರ ತಮಾಷೆ ಮಾಡುತ್ತಾ ಆರಾಮವಾಗಿದ್ದ. ಅಶ್ವಿನಿ ಗೌಡ ಅವರು ಜಂಟಿಗಳೊಟ್ಟಿಗೆ ಜಗಳವಾಡುತ್ತಿದ್ದ ಸಮಯದಲ್ಲಿ ಮಂಜು ಭಾಷಿಣಿ ಅವರು ‘ಅಯ್ಯೋ ನನಗೆ ಹುಷಾರಿಲ್ಲ’ ಎಂದು ಕೆಮ್ಮಿದಂತೆ ನಟಿಸಿದರು ಇದು ಅಶ್ವಿನಿ ಗೌಡಗೆ ಬೇಸರ ತರಿಸಿತು.

ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ಕಾಲಿಟ್ಟ ಕಿರುತೆರೆ ನಟಿ ಮಂಜು ಭಾಷಿಣಿ

ಆ ನಂತರ ಧನುಶ್ ಜೊತೆ ಮಾತನಾಡುತ್ತಾ ಅಶ್ವಿನಿ ಅವರು, ‘ನನಗೆ ಕಳೆದ ಮೂರು ತಿಂಗಳಿನಿಂದಲೂ ಹುಷಾರಿಲ್ಲ. ಪ್ರತಿ ರಾತ್ರಿ ನಾನು ಕೆಮ್ಮುತ್ತಿದ್ದೇನೆ. ನನ್ನ ಆರೋಗ್ಯದ ವಿಷಯವನ್ನು ಇವರು ತಮಾಷೆ ಮಾಡುತ್ತಾರೆ ಎಂದು ಹೇಳುತ್ತಾ ಅತ್ತೇ ಬಿಟ್ಟರು. ಬಳಿಕ ಕಾಕ್ರೂಚ್ ಸುಧಿ, ಧನುಶ್ ಇನ್ನಿತರರು ಅವರಿಗೆ ಸಮಾಧಾನ ಮಾಡಿದರು.

ಬಳಿಕ ಮಂಜು ಭಾಷಿಣಿ ಸಹ ಬಂದು, ಅಶ್ವಿನಿ ಅವರಲ್ಲಿ ನೇರವಾಗಿಯೇ ಕ್ಷಮೆ ಕೇಳಿದರು. ನಾನು ತಮಾಷೆ ಮಾಡಿದೆ ಆದರೆ ನಿಮಗೆ ನೋವುಂಟು ಮಾಡಬೇಕು ಎಂಬುದು ನನ್ನ ಉದ್ದೇಶ ಆಗಿರಲಿಲ್ಲ. ನಿಮಗೆ ನೋವುಂಟು ಮಾಡುವ ಉದ್ದೇಶ ನನಗೆ ಇದ್ದಿದ್ದರೆ ನಿಮಗೆ ಆರೋಗ್ಯ ಸರಿಯಿಲ್ಲ ಎಂದಾಗ ನಾನು ಸೇವೆ ಮಾಡುತ್ತಿರಲಿಲ್ಲ ಎಂದರು. ಆದರೆ ಅಶ್ವಿನಿ, ಮಂಜು ಭಾಷಿಣಿ ಅವರ ಕ್ಷಮೆಯನ್ನು ಸ್ವೀಕರಿಸಲಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!