ಭಾರತ ವಿಶ್ವಕಪ್​ ಸೋತಿದ್ದು ಈ 12 ಜನರಿಗೆ ಇನ್ನೂ ಗೊತ್ತಿಲ್ಲ; ತಿಳಿಯೋದು ಯಾವಾಗ?

‘ಐಸಿಸಿ ವಿಶ್ವಕಪ್​ 2023’ ಪಂದ್ಯದಲ್ಲಿ ಭಾರತ ಫೈನಲ್​ಗೆ ಹೋಗಿತ್ತು ಎಂಬುದಾಗಲಿ, ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿದೆ ಎಂಬುದಾಗಲಿ ಇವರಿಗೆ ತಿಳಿದೇ ಇಲ್ಲ. ಆ ವಿಷಯ ತಿಳಿದರೆ ಖಂಡಿತವಾಗಿಯೂ ಅವರಿಗೆಲ್ಲ ಸಖತ್​ ಬೇಸರ ಆಗಲಿದೆ. ಸೂಕ್ತ ಸಮಯ ಬಂದಾಗ ಅವರ ಎದುರು ಸೋಲಿನ ವಿಷಯ ಬಹಿರಂಗ ಆಗಲಿದೆ.

ಭಾರತ ವಿಶ್ವಕಪ್​ ಸೋತಿದ್ದು ಈ 12 ಜನರಿಗೆ ಇನ್ನೂ ಗೊತ್ತಿಲ್ಲ; ತಿಳಿಯೋದು ಯಾವಾಗ?
ಟೀಮ್ ಇಂಡಿಯಾ
Follow us
|

Updated on: Nov 21, 2023 | 6:04 PM

ಈ ಬಾರಿ ಭಾರತ ಖಂಡಿತವಾಗಿಯೂ ವಿಶ್ವಕಪ್​ (ICC World Cup) ಗೆಲ್ಲಲ್ಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆ ಆಸೆ ಈಡೇರಲೇ ಇಲ್ಲ. ಫೈನಲ್​ ತನಕ ಸೋಲಿಲ್ಲದ ಸರದಾರರಂತೆ ಮುನ್ನುಗ್ಗಿದ್ದ ಟೀಮ್​ ಇಂಡಿಯಾ ಆಟಗಾರರು ಫೈನಲ್​ನಲ್ಲಿ ಮುಗ್ಗರಿಸಿದರು. ಇಡೀ ದೇಶಕ್ಕೆ ಇದರಿಂದ ಆಘಾತ ಆಯಿತು. ಇಂಡಿಯಾ ವರ್ಸಸ್​ ಆಸ್ಟ್ರೇಲಿಯಾ (Ind vs Aus) ಪಂದ್ಯವನ್ನು ನೋಡುತ್ತಿದ್ದ ಕೋಟ್ಯಂತರ ಹೃದಯಗಳಿಗೆ ಘಾಸಿ ಆಯಿತು. ಸೋಲಿನ ನೋವಿನಲ್ಲಿ ಕಣ್ಣೀರು ಹಾಕಿದವರಿಗೆ ಲೆಕ್ಕವೇ ಇಲ್ಲ. ಇಷ್ಟೆಲ್ಲ ಆಗಿದ್ದರೂ ಕೂಡ ಕೆಲವರಿಗೆ ಭಾರತ ವಿಶ್ವಕಪ್​ ಸೋತಿದೆ ಎಂಬುದು ಇನ್ನೂ ಗೊತ್ತಿಲ್ಲ! ಯಾರು ಅದು? ಬಿಗ್​ ಬಾಸ್​’ (Bigg Boss Kannada) ಸ್ಪರ್ಧಿಗಳು!

ಬಿಗ್​ ಬಾಸ್​ ಮನೆಗೆ ಕಾಲಿಡುವವರು ಹೊರ ಜಗತ್ತಿನ ಸಂಪರ್ಕವನ್ನು ಸಂಪೂರ್ಣವಾಗಿ ಕಡಿದುಕೊಳ್ಳಬೇಕು. ಮೊಬೈಲ್​, ಸೋಶಿಯಲ್​ ಮೀಡಿಯಾ ಬಳಸುವಂತಿಲ್ಲ. ಹೊರಗೆ ಏನು ನಡೆಯುತ್ತಿದೆ ಎಂಬುದರ ಅರಿವೇ ಇಲ್ಲದೇ ಆಟ ಆಡಬೇಕು. ಈ ಸಂದರ್ಭದಲ್ಲಿ ನಡೆಯುವ ಪ್ರಮುಖ ಘಟನೆಗಳು ಅವರ ಗಮನಕ್ಕೆ ಬರುವುದಿಲ್ಲ. ಈಗ ಭಾರತ ತಂಡ ವಿಶ್ವಕಪ್​ ಫೈನಲ್​ಗೆ ಹೋಗಿತ್ತು ಎಂಬುದಾಗಲಿ, ಫೈನಲ್​ನಲ್ಲಿ ಸೋತಿದೆ ಎಂಬುದಾಗಲಿ ಬಿಗ್​ ಬಾಸ್​ ಬಾಸ್​ ಮಂದಿಗೆ ತಿಳಿದೇ ಇಲ್ಲ. ಆ ವಿಷಯ ತಿಳಿದರೆ ಖಂಡಿತವಾಗಿಯೂ ಎಲ್ಲರಿಗೂ ಸಖತ್​ ಬೇಸರ ಆಗಲಿದೆ.

ಇದನ್ನೂ ಓದಿ: Bigg Boss Kannada: ‘ನೋಡಪ್ಪ.. ಕೇಳಯ್ಯ ಇಲ್ಲಿ’: ಬಿಗ್​ ಬಾಸ್​ಗೆ ಏಕವಚನದಲ್ಲಿ ಮಾತನಾಡಿಸಿದ ಬ್ರಹ್ಮಾಂಡ ಗುರೂಜಿ

ಪ್ರತಿ ಬಾರಿಯೂ ಬಿಗ್​ ಬಾಸ್​ ಶೋ ಕೊನೇ ಹಂತವನ್ನು ತಲುಪುವಾಗ ಕೆಲವು ಸುದ್ದಿಗಳನ್ನು ಸ್ಪರ್ಧಿಗಳಿಗೆ ತೋರಿಸಲಾಗುತ್ತದೆ. ಬಿಗ್​ ಬಾಸ್​ ಶೋ ಆರಂಭ ಆದ ಬಳಿಕ ಇಂದಿನ ತನಕ ಹೊರಜಗತ್ತಿನಲ್ಲಿ ನಡೆದ ಕೆಲವು ಪ್ರಮುಖ ಘಟನೆಗಳನ್ನು ವಾರ್ತೆಯನ್ನು ತಿಳಿಸಲಾಗುತ್ತದೆ. ಈ ಹಿಂದಿನ ಸೀಸನ್​ಗಳಲ್ಲಿ ಈ ರೀತಿ ಮಾಡಲಾಗಿತ್ತು. ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ರಲ್ಲೂ ಆ ರೀತಿ ನ್ಯೂಸ್​ ಪ್ರಸಾರ ಮಾಡಿದರೆ ಮಾತ್ರ ಸ್ಪರ್ಧಿಗಳಿಗೆಲ್ಲ ವಿಶ್ವಕಪ್​ ಸೋಲಿನ ವಿಷಯ ಗೊತ್ತಾಗಲಿದೆ. ಒಂದು ವೇಳೆ ನ್ಯೂಸ್​ ತೋರಿಸದೇ ಇದ್ದರೆ ಬಿಗ್​ ಬಾಸ್​ ಫಿನಾಲೆ ಆದ ನಂತರವೇ ಆ ವಿಚಾರ ಗೊತ್ತಾಗಬೇಕಷ್ಟೇ.

ಇದನ್ನೂ ಓದಿ: ಬಿಗ್​ ಬಾಸ್​ಗೆ ಹೋಗಲು ಚಾನ್ಸ್​ ಕೇಳಿಕೊಂಡು ಎತ್ತಿನ ಗಾಡಿಯಲ್ಲಿ ಸುದೀಪ್​ ಮನೆಗೆ ಬಂದ ‘ಅವಿದ್ಯಾವಂತ ರೈತ’

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ರಿಯಾಲಿಟಿ ಶೋನಲ್ಲಿ ಈಗ 7ನೇ ವಾರದ ಆಟ ನಡೆಯುತ್ತಿದೆ. ಅಂದರೆ, ಬಹುತೇಕ ಅರ್ಧ ಹಂತಕ್ಕೆ ಬಂದಿದೆ. ಸದ್ಯಕ್ಕೆ ದೊಡ್ಮನೆಯಲ್ಲಿ 12 ಮಂದಿ ಇದ್ದಾರೆ. ವರ್ತೂರು ಸಂತೋಷ್​, ತುಕಾಲಿ ಸಂತೋಷ್​, ವಿನಯ್​ ಗೌಡ, ಸ್ನೇಹಿತ್​ ಗೌಡ, ನಮ್ರತಾ ಗೌಡ, ಸಂಗೀತಾ ಶೃಂಗೇರಿ, ತನಿಷಾ ಕುಪ್ಪಂಡ, ಕಾರ್ತಿಕ್​ ಮಹೇಶ್​, ಡ್ರೋನ್​ ಪ್ರತಾಪ್​, ಮೈಕೆಲ್​ ಅಜಯ್​, ನೀತು ವನಜಾಕ್ಷಿ, ಸಿರಿ ಅವರು ಆಟ ಮುಂದುವರಿಸಿದ್ದಾರೆ. 6ನೇ ವಾರದಲ್ಲಿ ಡಬಲ್​ ಎಲಿಮಿಷನ್​ ನಡೆದಿತ್ತು ಈಶಾನಿ ಮತ್ತು ಭಾಗ್ಯಶ್ರೀ ಅವರು ಔಟ್​ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ