AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಮೇಲೆ ಆರೋಪ, ಗೆದ್ದಿದ್ದ ಲಕ್ಷ ರೂಪಾಯಿ ಕಳೆದುಕೊಂಡ ಸ್ಪರ್ಧಿಗಳು

Bigg Boss: ಬಿಗ್​ಬಾಸ್ ನೀಡಿದ್ದ ಟಾಸ್ಕ್​ನಲ್ಲಿ ತಪ್ಪು ಹುಡುಕಿದ ಮನೆ ಮಂದಿ, ಬಿಗ್​ಬಾಸ್​ ಗೆ ಚಾಲೆಂಜ್ ಮಾಡಿ, ಗೆದ್ದಿದ್ದ ಲಕ್ಷ ರೂಪಾಯಿ ಹಣವನ್ನು ಸೋತಿದ್ದಾರೆ.

ಬಿಗ್​ಬಾಸ್ ಮೇಲೆ ಆರೋಪ, ಗೆದ್ದಿದ್ದ ಲಕ್ಷ ರೂಪಾಯಿ ಕಳೆದುಕೊಂಡ ಸ್ಪರ್ಧಿಗಳು
ಮಂಜುನಾಥ ಸಿ.
|

Updated on: Jan 02, 2024 | 11:40 PM

Share

ಬಿಗ್​ಬಾಸ್ (BiggBoss) ಮನೆಯಲ್ಲಿನ ಟಾಸ್ಕ್​ಗಳು ಒಂದಕ್ಕಿಂತಲೂ ಒಂದು ಭಿನ್ನವಾಗಿರುತ್ತವೆ. ಮನೆಯಲ್ಲಿರುವ ಬಹುತೇಕ ಎಲ್ಲರೂ ಆಡಬಹುದಾದ ಆಟಗಳನ್ನೇ ಡಿಸೈನ್ ಮಾಡಲಾಗಿರುತ್ತಾದೆ. ಶಕ್ತಿ ಪ್ರದರ್ಶಿಸುವ ಟಾಸ್ಕ್​ಗಳಾದರೆ ಸ್ವತಃ ಬಿಗ್​ಬಾಸ್ ಪುರುಷರು, ಸ್ತ್ರೀಯರ ಗುಂಪುಗಳನ್ನು ಮಾಡಿ ಸಮಾನ ಬಲ ಇರುವಂತೆ ನೋಡಿಕೊಳ್ಳುತ್ತಾರೆ. ಇದೀಗ ಮಂಗಳವಾರದ ಎಪಿಸೋಡ್​ನಲ್ಲಿ ಟಾಸ್ಕ್​ ನೀಡುವಾಗ ಬಿಗ್​ಬಾಸ್​ನಿಂದ ತಪ್ಪಾಗಿದೆ ಎಂದು ಸ್ಪರ್ಧಿಗಳು ಆರೋಪ ಮಾಡಿ, ಕೊನೆಗೆ ಗೆದ್ದಿದ್ದ ಒಂದು ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ.

ಆಗಿದ್ದಿಷ್ಟು, ಟಾಸ್ಕ್​ ಅನ್ನು ನೀಡುವ ಮೊದಲೇ ಆಡುವ ಆರು ಜನರನ್ನು ಕಾರಣಗಳೊಟ್ಟಿಗೆ ಆಯ್ಕೆ ಮಾಡುವಂತೆ ಬಿಗ್​ಬಾಸ್ ತನಿಷಾಗೆ ಸೂಚಿಸಿದರು. ತಾನು ನೀಡುತ್ತಿರುವ ಕಾರಣವನ್ನು ಮನೆಯ ಇತರೆ ಸ್ಪರ್ಧಿಗಳು ನೋಡುತ್ತಿದ್ದಾರೆ ಎಂಬ ಮಾಹಿತಿ ಇಲ್ಲದ ತನಿಷಾ, ಕಾರ್ತಿಕ್, ಸಂಗೀತಾ, ತುಕಾಲಿ ಸಂತು ಅವರನ್ನು ಹೊರಗಿಟ್ಟು, ತಾವು, ವಿನಯ್, ಮೈಖಲ್, ವರ್ತೂರು ಸಂತು ಹಾಗೂ ನಮ್ರತಾ ಅವರನ್ನು ಆಯ್ಕೆ ಮಾಡಿಕೊಂಡರು. ಬಳಿಕ ವಿನಯ್ ಹಾಗೂ ತಾವು, ವರ್ತೂರು-ಮೈಖಲ್, ನಮ್ರತಾ-ಡ್ರೋನ್ ಪ್ರತಾಪ್ ಜೋಡಿಯಾಗಿ ಟಾಸ್ಕ್ ಆಡುವುದಾಗಿಯೂ ಘೋಷಿಸಿದರು.

ತೂತುಗಳಿರುವ ಉದ್ದನೆಯ ಹಲಗೆಯೊಂದರ ಮೇಲೆ ಎರಡು ದಾರಗಳಿಂದ ಮಾಡಿದ ಹಿಡಿಯನ್ನು ಬಳಸಿ ಚೆಂಡನ್ನು ಎಲ್ಲ ರಂಧ್ರಗಳಿಂದ ದಾಟಿಸಿ ಮೇಲಿರುವ ರಂಧ್ರಕ್ಕೆ ದಾಟಿಸುವ ಟಾಸ್ಕ್ ನೀಡಲಾಯ್ತು. ಆ ಟಾಸ್ಕ್​ ಅನ್ನು ಮಾಡಲು 20 ನಿಮಿಷ ಕಾಲಾವಕಾಶ ನೀಡಲಾಗಿತ್ತು. ಮೈಖಲ್-ವರ್ತೂರು ಬಹಳ ನಿಧಾನಕ್ಕೆ ಆಡಿದರು, ಬಳಿಕ ವಿನಯ್ ಹಾಗೂ ತನಿಷಾ ಆಡಿದರು. ಮೈಖಲ್ ಹಾಗೂ ನಮ್ರತಾ ತುಸು ವೇಗವಾಗಿ ಆಡಿದರಾದರೂ ಚೆಂಡನ್ನು ಗುರಿಮುಟ್ಟಿಸುವ ಮೊದಲೇ ಸಮಯ ಮುಗಿಯಿತು. ಅಲ್ಲಿಗೆ ಮನೆಯು 1 ಲಕ್ಷ ರೂಪಾಯಿ ಹಣ ಗೆದ್ದಿತು.

ಇದನ್ನೂ ಓದಿ:ಬಿಗ್​ಬಾಸ್ ಸ್ಪರ್ಧಿ ಮೇಲೆ ಕಳ್ಳತನದ ಆರೋಪ, ಪ್ರಕರಣ ದಾಖಲು

ಟಾಸ್ಕ್ ಮುಗಿದ ಬಳಿಕ ಹೊರಗೆ ಕೂತಿದ್ದ ಸಂಗೀತಾ, ಮೈಖಲ್ ಹಾಗೂ ವರ್ತೂರಿಗೆ ನೀಡಿದ್ದ ಬೋರ್ಡ್​ನಲ್ಲಿ ದೋಷವಿದೆ ಎಂದರು. ವಿನಯ್ ಸೇರಿದಂತೆ ಮನೆಯ ಇತರೆ ಸ್ಪರ್ಧಿಗಳು ಸಹ ಅದನ್ನು ಅನುಮೋದಿಸಿದರು. ಬಳಿಕ ಬಿಗ್​ಬಾಸ್, ಸರಿ ಹಾಗಿದ್ದರೆ ನಿಮಗೆ ಇನ್ನೊಂದು ಅವಕಾಶ ನೀಡುತ್ತಿದ್ದೇವೆ, 7 ನಿಮಿಷದಲ್ಲಿ ಚೆಂಡನ್ನು ಹಾಕಿ ಐದು ಲಕ್ಷ ಹಣ ಗೆಲ್ಲಿ, ಸೋತರೆ ಒಂದು ಲಕ್ಷ ಹಣ ಕಳೆದುಕೊಳ್ಳುತ್ತೀರಿ ಎಂದರು. ವಿನಯ್ ಹಾಗೂ ಸಂಗೀತಾ ಬೇಡ ಎಂದರಾದರೂ ಇತರರು ಒಪ್ಪಿ ಮತ್ತೆ ಆಡಿ, ಟಾಸ್ಕ್ ಸೋತು, ಲಕ್ಷ ರೂಪಾಯಿ ಹಣ ಕಳೆದುಕೊಂಡರು.

ಬಳಿಕ ಮಾತನಾಡಿದ ಬಿಗ್​ಬಾಸ್, ಆಟದಲ್ಲಿ ಸೋತಾಗ ಅದನ್ನು ಒಪ್ಪಿಕೊಂಡು ಮುಂದೆ ಸಾಗಿ, ಸೋಲಿಗೆ ಕಾರಣ ಹುಡುಕಿ, ಬೇರೆಯವರನ್ನು ದೂಷಿಸಿದರೆ ನಿಮ್ಮ ವ್ಯಕ್ತಿತ್ವ ವೀಕ್ಷಕರ ಎದುರು ಕಳಪೆಯಾಗುತ್ತದೆ ಎಂದರು. ಅಲ್ಲಿಗೆ ಮನೆಯವರಿಗೆ ತಾವು ಮಾಡಿದ ತಪ್ಪಿನ ಅರಿವಾಯ್ತು ಆದರೆ ಅಷ್ಟರಲ್ಲಾಗಲೆ ಗೆದ್ದಿದ್ದ ಹಣವನ್ನು ಕಳೆದುಕೊಂಡಿದ್ದಾಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಕೋರ್ಟ್​ ಮುಂದೆ ಶರಣಾದ ತ್ವಿಶಾ ಶರ್ಮಾ ಗಂಡನ ಕಾನೂನು ಲೈಸೆನ್ಸ್ ರದ್ದು
ಕೋರ್ಟ್​ ಮುಂದೆ ಶರಣಾದ ತ್ವಿಶಾ ಶರ್ಮಾ ಗಂಡನ ಕಾನೂನು ಲೈಸೆನ್ಸ್ ರದ್ದು
ಕೇದಾರನಾಥ ಮಾರ್ಗದ ಸೋನ್‌ಪ್ರಯಾಗ್ ಬಳಿ ಪ್ರವಾಸಿಗರ ಮೇಲೆ ಉರುಳಿದ ಬಂಡೆಗಳು
ಕೇದಾರನಾಥ ಮಾರ್ಗದ ಸೋನ್‌ಪ್ರಯಾಗ್ ಬಳಿ ಪ್ರವಾಸಿಗರ ಮೇಲೆ ಉರುಳಿದ ಬಂಡೆಗಳು
3 ಜೀವದಾನಗಳ ಲಾಭ ಪಡೆದು ಅರ್ಧಶತಕ ಬಾರಿಸಿದ ಅಭಿಷೇಕ್
3 ಜೀವದಾನಗಳ ಲಾಭ ಪಡೆದು ಅರ್ಧಶತಕ ಬಾರಿಸಿದ ಅಭಿಷೇಕ್
4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ
4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ
ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ಭಾರಿ ಗಾಳಿಗೆ ಮುರಿದು ಬಿದ್ದ ಬೃಹತ್ ಫಲಕ
ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ಭಾರಿ ಗಾಳಿಗೆ ಮುರಿದು ಬಿದ್ದ ಬೃಹತ್ ಫಲಕ
ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ
ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ
ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ
ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ
ನಿಯಂತ್ರಣ ತಪ್ಪಿದ ಬೈಕ್‌ನ ಅಬ್ಬರ; ಕಬ್ಬಿಣದ ಗೇಟ್ ಪುಡಿ ಪುಡಿ, CCTVನಲ್ಲಿ ಸ
ನಿಯಂತ್ರಣ ತಪ್ಪಿದ ಬೈಕ್‌ನ ಅಬ್ಬರ; ಕಬ್ಬಿಣದ ಗೇಟ್ ಪುಡಿ ಪುಡಿ, CCTVನಲ್ಲಿ ಸ
ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗ್ತಾರಾ?ಅಭಿಪ್ರಾಯ ಸಂಗ್ರಹದಲ್ಲಿ ಏನೆಲ್ಲಾ ಆಯ್ತು
ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗ್ತಾರಾ?ಅಭಿಪ್ರಾಯ ಸಂಗ್ರಹದಲ್ಲಿ ಏನೆಲ್ಲಾ ಆಯ್ತು
ಆಗಸ್ಟ್‌ 31 ರೊಳಗೆ ಗ್ರೇಟರ್ ಬೆಂಗಳೂರು ಚುನಾವಣೆ ಅಸಾಧ್ಯ?
ಆಗಸ್ಟ್‌ 31 ರೊಳಗೆ ಗ್ರೇಟರ್ ಬೆಂಗಳೂರು ಚುನಾವಣೆ ಅಸಾಧ್ಯ?