AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ಭಾಗವಾಯ್ತು ಬಿಗ್​ ಬಾಸ್​ ಮನೆ; ಟಾಸ್ಕ್​ ಮಾಡುತ್ತಾ ದ್ವೇಷ ಕಟ್ಟಿಕೊಂಡ ಸ್ಪರ್ಧಿಗಳು

ಟಾಸ್ಕ್​ನ ನೆಪದಿಂದಲೇ ಗುಂಪುಗಾರಿಕೆ ಉಂಟಾದ ಉದಾಹರಣೆ ಸಾಕಷ್ಟಿದೆ. ಬಿಗ್​ ಬಾಸ್​ ಮನೆಯಲ್ಲಿ ಒಮ್ಮೆ ಗುಂಪುಗಾರಿಕೆ ಶುರುವಾದರೆ ಅದರ ಪರಿಣಾಮ ಎಲ್ಲದರ ಮೇಲೂ ಆಗುತ್ತದೆ. ಸದ್ಯಕ್ಕೆ ದೊಡ್ಮನೆಯಲ್ಲಿ ಈಗ ಕಾರ್ತಿಕ್​ ಮಹೇಶ್​ ಹಾಗೂ ವಿನಯ್​ ಗೌಡ ಅವರು ಎರಡು ಬೇರೆ ಬೇರೆ ಗುಂಪುಗಳ ಮುಂದಾಳತ್ವ ವಹಿಸಿಕೊಂಡಿದ್ದಾರೆ.

ಎರಡು ಭಾಗವಾಯ್ತು ಬಿಗ್​ ಬಾಸ್​ ಮನೆ; ಟಾಸ್ಕ್​ ಮಾಡುತ್ತಾ ದ್ವೇಷ ಕಟ್ಟಿಕೊಂಡ ಸ್ಪರ್ಧಿಗಳು
ರಕ್ಷಕ್​, ವಿನಯ್​
Follow us
ಮದನ್​ ಕುಮಾರ್​
|

Updated on: Oct 17, 2023 | 9:44 PM

ಬಿಗ್​ ಬಾಸ್ (Bigg Boss Kannada)​ ಮನೆಯಲ್ಲಿ ಎಲ್ಲ ರೀತಿಯ ವ್ಯಕ್ತಿಗಳೂ ಇರುತ್ತಾರೆ. ಎಲ್ಲ ರೀತಿಯ ಭಾವನೆಗಳೂ ಇರುತ್ತವೆ. ಪ್ರತಿ ಹಂತದಲ್ಲೂ ಪರಿಸ್ಥಿತಿ ಬದಲಾಗುತ್ತದೆ. ಒಂದು ಕ್ಷಣ ಸ್ನೇಹಿತರಾಗಿದ್ದರು ಮುರುಕ್ಷಣವೇ ದುಷ್ಮನ್​ಗಳಾಗುತ್ತಾರೆ. ಟಾಸ್ಕ್​ ಇದ್ದರಂತೂ ಪೈಪೋಟಿ ಜೋರಾಗುತ್ತದೆ. ಆಗ ಯಾವ ಸ್ನೇಹವೂ ಲೆಕ್ಕಕ್ಕೆ ಬರುವುದಿಲ್ಲ. ಬಿಗ್​ ಬಾಸ್​ (BBK) ಮನೆಯಲ್ಲಿ ಬದುಕಬೇಕು ಎಂದರೆ ನಿಷ್ಠುರ ಕಟ್ಟಿಕೊಳ್ಳದೇ ಬೇರೆ ದಾರಿ ಇಲ್ಲ. ಎಲ್ಲರ ಜೊತೆಗೂ ಫ್ರೆಂಡ್ಶಿಪ್​ ನಿಭಾಯಿಸಲು ಹೋದರೆ ಟಾಸ್ಕ್​ ಆಡೋಕಾಗಲ್ಲ. ಇಂಥ ಸಂದಿಗ್ಧ ಪರಿಸ್ಥಿತಿ ಈಗ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada Season 10) ಶೋನಲ್ಲಿ ಎದುರಾಗಿದೆ. ಎರಡನೇ ವಾರದಲ್ಲಿ ಪೈಪೋಟಿ ಹೆಚ್ಚಿದೆ.

ಕೆಲವು ಟಾಸ್ಕ್​ಗಳನ್ನು ಸಿಂಗಲ್​ ಆಗಿ ಆಡಬೇಕು. ಇನ್ನುಳಿದ ಟಾಸ್ಕ್​ಗಳನ್ನು ಗುಂಪುಗಳಲ್ಲಿ ಆಡಬೇಕು. ಟಾಸ್ಕ್​ನ ನೆಪದಿಂದಲೇ ಗುಂಪುಗಾರಿಕೆ ಉಂಟಾದ ಉದಾಹರಣೆ ಸಾಕಷ್ಟಿದೆ. ಬಿಗ್​ ಬಾಸ್​ ಮನೆಯಲ್ಲಿ ಒಮ್ಮೆ ಗುಂಪುಗಾರಿಕೆ ಶುರುವಾದರೆ ಅದರ ಪರಿಣಾಮ ಎಲ್ಲದರ ಮೇಲೂ ಆಗುತ್ತದೆ. ಸದ್ಯಕ್ಕೆ ದೊಡ್ಮನೆಯಲ್ಲಿ ಈಗ ಕಾರ್ತಿಕ್​ ಮಹೇಶ್​ ಹಾಗೂ ವಿನಯ್​ ಗೌಡ ಅವರು ಎರಡು ಬೇರೆ ಬೇರೆ ಗುಂಪುಗಳ ಮುಂದಾಳತ್ವ ವಹಿಸಿಕೊಂಡಿದ್ದಾರೆ. ಪರಸ್ಪರ ದ್ವೇಷ ಬೆಳೆಯುವ ಮಟ್ಟಕ್ಕೆ ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ಉಂಟಾಗಿದೆ.

ಬಿಗ್​ ಬಾಸ್​ ಮನೆಯಲ್ಲಿ ಯಾವ ಪರಿಸ್ಥಿತಿ ಕೂಡ ಯೂಸರ್​ ಮ್ಯಾನ್ಯುಯಲ್​ ಜೊತೆಗೆ ಬರುವುದಿಲ್ಲ. ಹೆಚ್ಚೇನೂ ಮುನ್ಸೂಚನೆ ನೀಡದೇ ಹೊಸ ಹೊಸ ಟಾಸ್ಕ್​ಗಳನ್ನು ನೀಡಲಾಗುತ್ತದೆ. ಕೆಲವೇ ನಿಮಿಷಗಳಲ್ಲಿ ಎಲ್ಲವನ್ನೂ ಅರ್ಥ ಮಾಡಿಕೊಳ್ಳಬೇಕು. ಟಾಸ್ಕ್​ನ ನಿಯಮವನ್ನು ಒಬ್ಬೊಬ್ಬರು ಒಂದೊಂದು ರೀತಿ ಅರ್ಥ ಮಾಡಿಕೊಂಡ ಘಟನೆಗಳೂ ನಡೆಯುತ್ತವೆ. ಅಂಥ ಸಂದರ್ಭದಲ್ಲಿ ಸ್ಪರ್ಧಿಗಳ ನಡುವೆ ಕಿತ್ತಾಟ ಶುರುವಾಗುತ್ತದೆ. ಈಗ ಬಿಗ್ ಬಾಸ್​ ಮನೆಯಲ್ಲಿ ಆಗಿರುವ ಎರಡು ಗುಂಪುಗಳು ಇದೇ ಸವಾಲನ್ನು ಎದುರಿಸುತ್ತಿವೆ.

ಬೆಳಗ್ಗೆ ಕಣ್ಣು ಬಿಡೋದಕ್ಕೂ ಮುನ್ನವೇ ಬಿಗ್​ ಬಾಸ್​ ಮನೆಯಲ್ಲಿ ಜಗಳ; 2ನೇ ವಾರದ ಆಟ ಅಷ್ಟು ಸುಲಭವಿಲ್ಲ

ಮೊದಲ ವಾರ ಸ್ನೇಕ್​ ಶ್ಯಾಮ್​ ಎಲಿಮಿನೇಟ್​ ಆದರು. ಎರಡನೇ ವಾರಕ್ಕೆ ಹಲವರ ಹೆಸರುಗಳು ನಾಮಿನೇಟ್​ ಆಗಿವೆ. ಎಲಿಮಿನೇಷನ್​ನಿಂದ ತಪ್ಪಿಸಿಕೊಳ್ಳಬೇಕು ಎಂದರೆ ಟಫ್​ ಸ್ಪರ್ಧೆ ನೀಡಲೇಬೇಕು. ಕಾರ್ತಿಕ್​ ಮಹೇಶ್​, ವಿನಯ್​ ಗೌಡ, ಸಂಗೀತಾ ಶೃಂಗೇರಿ, ಡ್ರೋನ್​ ಪ್ರತಾಪ್​, ರಕ್ಷಕ್​, ಸ್ನೇಹಿತ್​, ಸಿರಿ, ಗೌರೀಶ್​ ಅಕ್ಕಿ, ನೀತೂ ವನಜಾಕ್ಷಿ, ಭಾಗ್ಯಶ್ರೀ, ಮೈಕೆಲ್​ ಅಜಯ್​, ಈಶಾನಿ, ತುಕಾಲಿ ಸಂತೋಷ್​, ನಮ್ರತಾ ಗೌಡ, ವರ್ತೂರು ಸಂತೋಷ್​, ತನಿಶಾ ಕುಪ್ಪಂಡ ಅವರು ಸ್ಪರ್ಧೆ ನಡೆಸುತ್ತಿದ್ದಾರೆ. ಬಿಗ್​ ಬಾಸ್​ ಸಂಚಿಕೆ ಪ್ರತಿ ರಾತ್ರಿ 9.30ಕ್ಕೆ ‘ಕಲರ್ಸ್​ ಕನ್ನಡ’ ಟಿವಿಯಲ್ಲಿ ಪ್ರಸಾರ ಆಗುತ್ತದೆ. ದಿನದ 24 ಗಂಟೆಯೂ ‘ಜಿಯೋ ಸಿನಿಮಾ’ದಲ್ಲಿ ಈ ಕಾರ್ಯಕ್ರಮವನ್ನು ಉಚಿತವಾಗಿ ನೋಡಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
12ನೇಮನೆಯಲ್ಲಿ ಗುರು ಸಂಚಾರ;ಕಟಕ ರಾಶಿಯವರು ತಿಳಿದುಕೊಳ್ಳಲೇಬೇಕಾದ ವಿಷಯಗಳಿವು
12ನೇಮನೆಯಲ್ಲಿ ಗುರು ಸಂಚಾರ;ಕಟಕ ರಾಶಿಯವರು ತಿಳಿದುಕೊಳ್ಳಲೇಬೇಕಾದ ವಿಷಯಗಳಿವು
ಮಿಥುನ ರಾಶಿಗೆ ಈ ವರ್ಷ ಗುರುಬಲ ಇರಲ್ಲ!
ಮಿಥುನ ರಾಶಿಗೆ ಈ ವರ್ಷ ಗುರುಬಲ ಇರಲ್ಲ!
ಗುರು ಸಂಚಾರದಿಂದ ವೃಷಭ ರಾಶಿಯ ಲಕ್​​​ ಬದಲಾಗಲಿದೆಯೇ?
ಗುರು ಸಂಚಾರದಿಂದ ವೃಷಭ ರಾಶಿಯ ಲಕ್​​​ ಬದಲಾಗಲಿದೆಯೇ?
ಸರ್ಕಾರದ ಸಾಧನಾ ಸಮಾವೇಶ ನನಗೆ ಸಂಬಂಧಿಸಿದ ವಿಷಯವಲ್ಲ: ಯಡಿಯೂರಪ್ಪ
ಸರ್ಕಾರದ ಸಾಧನಾ ಸಮಾವೇಶ ನನಗೆ ಸಂಬಂಧಿಸಿದ ವಿಷಯವಲ್ಲ: ಯಡಿಯೂರಪ್ಪ
ಗೃಹಲಕ್ಷ್ಮಿ ಹಣ ವರ್ಗಾವಣೆ ಯಾವಾಗ? ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ನೋಡಿ
ಗೃಹಲಕ್ಷ್ಮಿ ಹಣ ವರ್ಗಾವಣೆ ಯಾವಾಗ? ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ನೋಡಿ
ಮಿಥುನ ರಾಶಿಗೆ ಗುರು ಸಂಚಾರ; ಮೇಷ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?
ಮಿಥುನ ರಾಶಿಗೆ ಗುರು ಸಂಚಾರ; ಮೇಷ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?