AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ಭಾಗವಾಯ್ತು ಬಿಗ್​ ಬಾಸ್​ ಮನೆ; ಟಾಸ್ಕ್​ ಮಾಡುತ್ತಾ ದ್ವೇಷ ಕಟ್ಟಿಕೊಂಡ ಸ್ಪರ್ಧಿಗಳು

ಟಾಸ್ಕ್​ನ ನೆಪದಿಂದಲೇ ಗುಂಪುಗಾರಿಕೆ ಉಂಟಾದ ಉದಾಹರಣೆ ಸಾಕಷ್ಟಿದೆ. ಬಿಗ್​ ಬಾಸ್​ ಮನೆಯಲ್ಲಿ ಒಮ್ಮೆ ಗುಂಪುಗಾರಿಕೆ ಶುರುವಾದರೆ ಅದರ ಪರಿಣಾಮ ಎಲ್ಲದರ ಮೇಲೂ ಆಗುತ್ತದೆ. ಸದ್ಯಕ್ಕೆ ದೊಡ್ಮನೆಯಲ್ಲಿ ಈಗ ಕಾರ್ತಿಕ್​ ಮಹೇಶ್​ ಹಾಗೂ ವಿನಯ್​ ಗೌಡ ಅವರು ಎರಡು ಬೇರೆ ಬೇರೆ ಗುಂಪುಗಳ ಮುಂದಾಳತ್ವ ವಹಿಸಿಕೊಂಡಿದ್ದಾರೆ.

ಎರಡು ಭಾಗವಾಯ್ತು ಬಿಗ್​ ಬಾಸ್​ ಮನೆ; ಟಾಸ್ಕ್​ ಮಾಡುತ್ತಾ ದ್ವೇಷ ಕಟ್ಟಿಕೊಂಡ ಸ್ಪರ್ಧಿಗಳು
ರಕ್ಷಕ್​, ವಿನಯ್​
ಮದನ್​ ಕುಮಾರ್​
|

Updated on: Oct 17, 2023 | 9:44 PM

Share

ಬಿಗ್​ ಬಾಸ್ (Bigg Boss Kannada)​ ಮನೆಯಲ್ಲಿ ಎಲ್ಲ ರೀತಿಯ ವ್ಯಕ್ತಿಗಳೂ ಇರುತ್ತಾರೆ. ಎಲ್ಲ ರೀತಿಯ ಭಾವನೆಗಳೂ ಇರುತ್ತವೆ. ಪ್ರತಿ ಹಂತದಲ್ಲೂ ಪರಿಸ್ಥಿತಿ ಬದಲಾಗುತ್ತದೆ. ಒಂದು ಕ್ಷಣ ಸ್ನೇಹಿತರಾಗಿದ್ದರು ಮುರುಕ್ಷಣವೇ ದುಷ್ಮನ್​ಗಳಾಗುತ್ತಾರೆ. ಟಾಸ್ಕ್​ ಇದ್ದರಂತೂ ಪೈಪೋಟಿ ಜೋರಾಗುತ್ತದೆ. ಆಗ ಯಾವ ಸ್ನೇಹವೂ ಲೆಕ್ಕಕ್ಕೆ ಬರುವುದಿಲ್ಲ. ಬಿಗ್​ ಬಾಸ್​ (BBK) ಮನೆಯಲ್ಲಿ ಬದುಕಬೇಕು ಎಂದರೆ ನಿಷ್ಠುರ ಕಟ್ಟಿಕೊಳ್ಳದೇ ಬೇರೆ ದಾರಿ ಇಲ್ಲ. ಎಲ್ಲರ ಜೊತೆಗೂ ಫ್ರೆಂಡ್ಶಿಪ್​ ನಿಭಾಯಿಸಲು ಹೋದರೆ ಟಾಸ್ಕ್​ ಆಡೋಕಾಗಲ್ಲ. ಇಂಥ ಸಂದಿಗ್ಧ ಪರಿಸ್ಥಿತಿ ಈಗ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada Season 10) ಶೋನಲ್ಲಿ ಎದುರಾಗಿದೆ. ಎರಡನೇ ವಾರದಲ್ಲಿ ಪೈಪೋಟಿ ಹೆಚ್ಚಿದೆ.

ಕೆಲವು ಟಾಸ್ಕ್​ಗಳನ್ನು ಸಿಂಗಲ್​ ಆಗಿ ಆಡಬೇಕು. ಇನ್ನುಳಿದ ಟಾಸ್ಕ್​ಗಳನ್ನು ಗುಂಪುಗಳಲ್ಲಿ ಆಡಬೇಕು. ಟಾಸ್ಕ್​ನ ನೆಪದಿಂದಲೇ ಗುಂಪುಗಾರಿಕೆ ಉಂಟಾದ ಉದಾಹರಣೆ ಸಾಕಷ್ಟಿದೆ. ಬಿಗ್​ ಬಾಸ್​ ಮನೆಯಲ್ಲಿ ಒಮ್ಮೆ ಗುಂಪುಗಾರಿಕೆ ಶುರುವಾದರೆ ಅದರ ಪರಿಣಾಮ ಎಲ್ಲದರ ಮೇಲೂ ಆಗುತ್ತದೆ. ಸದ್ಯಕ್ಕೆ ದೊಡ್ಮನೆಯಲ್ಲಿ ಈಗ ಕಾರ್ತಿಕ್​ ಮಹೇಶ್​ ಹಾಗೂ ವಿನಯ್​ ಗೌಡ ಅವರು ಎರಡು ಬೇರೆ ಬೇರೆ ಗುಂಪುಗಳ ಮುಂದಾಳತ್ವ ವಹಿಸಿಕೊಂಡಿದ್ದಾರೆ. ಪರಸ್ಪರ ದ್ವೇಷ ಬೆಳೆಯುವ ಮಟ್ಟಕ್ಕೆ ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ಉಂಟಾಗಿದೆ.

ಬಿಗ್​ ಬಾಸ್​ ಮನೆಯಲ್ಲಿ ಯಾವ ಪರಿಸ್ಥಿತಿ ಕೂಡ ಯೂಸರ್​ ಮ್ಯಾನ್ಯುಯಲ್​ ಜೊತೆಗೆ ಬರುವುದಿಲ್ಲ. ಹೆಚ್ಚೇನೂ ಮುನ್ಸೂಚನೆ ನೀಡದೇ ಹೊಸ ಹೊಸ ಟಾಸ್ಕ್​ಗಳನ್ನು ನೀಡಲಾಗುತ್ತದೆ. ಕೆಲವೇ ನಿಮಿಷಗಳಲ್ಲಿ ಎಲ್ಲವನ್ನೂ ಅರ್ಥ ಮಾಡಿಕೊಳ್ಳಬೇಕು. ಟಾಸ್ಕ್​ನ ನಿಯಮವನ್ನು ಒಬ್ಬೊಬ್ಬರು ಒಂದೊಂದು ರೀತಿ ಅರ್ಥ ಮಾಡಿಕೊಂಡ ಘಟನೆಗಳೂ ನಡೆಯುತ್ತವೆ. ಅಂಥ ಸಂದರ್ಭದಲ್ಲಿ ಸ್ಪರ್ಧಿಗಳ ನಡುವೆ ಕಿತ್ತಾಟ ಶುರುವಾಗುತ್ತದೆ. ಈಗ ಬಿಗ್ ಬಾಸ್​ ಮನೆಯಲ್ಲಿ ಆಗಿರುವ ಎರಡು ಗುಂಪುಗಳು ಇದೇ ಸವಾಲನ್ನು ಎದುರಿಸುತ್ತಿವೆ.

ಬೆಳಗ್ಗೆ ಕಣ್ಣು ಬಿಡೋದಕ್ಕೂ ಮುನ್ನವೇ ಬಿಗ್​ ಬಾಸ್​ ಮನೆಯಲ್ಲಿ ಜಗಳ; 2ನೇ ವಾರದ ಆಟ ಅಷ್ಟು ಸುಲಭವಿಲ್ಲ

ಮೊದಲ ವಾರ ಸ್ನೇಕ್​ ಶ್ಯಾಮ್​ ಎಲಿಮಿನೇಟ್​ ಆದರು. ಎರಡನೇ ವಾರಕ್ಕೆ ಹಲವರ ಹೆಸರುಗಳು ನಾಮಿನೇಟ್​ ಆಗಿವೆ. ಎಲಿಮಿನೇಷನ್​ನಿಂದ ತಪ್ಪಿಸಿಕೊಳ್ಳಬೇಕು ಎಂದರೆ ಟಫ್​ ಸ್ಪರ್ಧೆ ನೀಡಲೇಬೇಕು. ಕಾರ್ತಿಕ್​ ಮಹೇಶ್​, ವಿನಯ್​ ಗೌಡ, ಸಂಗೀತಾ ಶೃಂಗೇರಿ, ಡ್ರೋನ್​ ಪ್ರತಾಪ್​, ರಕ್ಷಕ್​, ಸ್ನೇಹಿತ್​, ಸಿರಿ, ಗೌರೀಶ್​ ಅಕ್ಕಿ, ನೀತೂ ವನಜಾಕ್ಷಿ, ಭಾಗ್ಯಶ್ರೀ, ಮೈಕೆಲ್​ ಅಜಯ್​, ಈಶಾನಿ, ತುಕಾಲಿ ಸಂತೋಷ್​, ನಮ್ರತಾ ಗೌಡ, ವರ್ತೂರು ಸಂತೋಷ್​, ತನಿಶಾ ಕುಪ್ಪಂಡ ಅವರು ಸ್ಪರ್ಧೆ ನಡೆಸುತ್ತಿದ್ದಾರೆ. ಬಿಗ್​ ಬಾಸ್​ ಸಂಚಿಕೆ ಪ್ರತಿ ರಾತ್ರಿ 9.30ಕ್ಕೆ ‘ಕಲರ್ಸ್​ ಕನ್ನಡ’ ಟಿವಿಯಲ್ಲಿ ಪ್ರಸಾರ ಆಗುತ್ತದೆ. ದಿನದ 24 ಗಂಟೆಯೂ ‘ಜಿಯೋ ಸಿನಿಮಾ’ದಲ್ಲಿ ಈ ಕಾರ್ಯಕ್ರಮವನ್ನು ಉಚಿತವಾಗಿ ನೋಡಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ