AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಮನೆಯಿಂದ ಈ ವಾರ ಹೊರಹೋಗಿದ್ದು ಯಾರು?

Bigg Boss Kannada: ಫಿನಾಲೆ ಹತ್ತಿರ ಬಂದಂತೆ ಗಟ್ಟಿ ಕಾಳುಗಳೇ ಮನೆಯಿಂದ ಹೊರಗೆ ಬರುತ್ತಿವೆ. ಬಿಗ್​ಬಾಸ್ ಕನ್ನಡ ಸೀಸನ್ 10ರಲ್ಲಿ ಈ ವಾರ ಮನೆಯಿಂದ ಹೊರಗೆ ಬಂದಿದ್ದು ಯಾರು?

ಬಿಗ್​ಬಾಸ್ ಮನೆಯಿಂದ ಈ ವಾರ ಹೊರಹೋಗಿದ್ದು ಯಾರು?
ಬಿಗ್​ಬಾಸ್
ಮಂಜುನಾಥ ಸಿ.
|

Updated on: Jan 07, 2024 | 11:16 PM

Share

ಬಿಗ್​ಬಾಸ್ (BiggBoss)​ ಮನೆಯ ಸದಸ್ಯರು ಕಡಿಮೆ ಆಗುತ್ತಲೇ ಬರುತ್ತಿದ್ದಾರೆ. ಪ್ರತಿ ವಾರ ಒಬ್ಬರು ಮನೆಯಿಂದ ಹೊರಗೆ ಹೋಗುವುದು ಸಹಜ, ಆದರೆ ಫಿನಾಲೆಗೆ ಹತ್ತಿರ ಬಂದಾಗ ಮನೆಯ ಗಟ್ಟಿ ಸದಸ್ಯರೇ ಹೊರಗೆ ಹೋಗಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಅಂತೆಯೇ ಈ ವಾರವೂ ಸಹ ಮನೆಯ ಗಟ್ಟಿ ಸ್ಪರ್ಧಿಯೊಬ್ಬರು ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ. ಸುದೀಪ್, ಥ್ಯಾಂಕ್ಸ್ ಹೇಳಿ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕರೆದಿದ್ದಾರೆ.

ಈ ವಾರ ಕಾರ್ತಿಕ್, ವರ್ತೂರು ಸಂತೋಷ್, ತುಕಾಲಿ ಸಂತೋಷ್, ಡ್ರೋನ್ ಪ್ರತಾಪ್ ಹಾಗೂ ವಿನಯ್ ಅವರುಗಳು ನಾಮಿನೇಟ್ ಆಗಿದ್ದರು. ಈ ವಾರ ಬರೀ ಪುರುಷರಷ್ಟೆ ನಾಮಿನೇಟ್ ಆಗಿದ್ದು ವಿಶೇಷವಾಗಿತ್ತು. ಡ್ರೋನ್ ಪ್ರತಾಪ್, ಕಾರ್ತಿಕ್, ವಿನಯ್, ತುಕಾಲಿ ಸಂತೋಷ್ ಅವರುಗಳು ಮೊದಲಿಗೆ ಸೇವ್ ಆದರು. ತುಕಾಲಿ ಅವರನ್ನು ಸೇವ್ ಮಾಡಿದಾಗ, ವಾರದ ಮಧ್ಯದಲ್ಲಿ ಮನೆಯ ಹೆಣ್ಣು ಮಕ್ಕಳ ಬಗ್ಗೆ ಅವರು ಆಡಿದ್ದ ಮಾತಿನ ಬಗ್ಗೆ ಸುದೀಪ್ ಅಸಮಾಧಾನ ವ್ಯಕ್ತಪಡಿಸಿದರು. ತುಕಾಲಿ, ಆ ತಮ್ಮ ಮಾತಿಗೆ ಕ್ಷಮೆ ಸಹ ಕೇಳಿದರು.

ಅದಾದ ಬಳಿಕ ಅಂತಿಮವಾಗಿ ಮೈಖಲ್ ಅಜಯ್ ಹಾಗೂ ತುಕಾಲಿ ಸಂತೋಷ್ ಉಳಿದರು. ಇಬ್ಬರಲ್ಲಿ ಈ ವಾರದ ಜರ್ನಿ ಅಂತ್ಯವಾಗಿದ್ದು ಮೈಖಲ್ ಅಜಯ್​ಗೆ. ಈ ಹಿಂದೆಯೂ ಮೈಖಲ್ ಅಜಯ್ ಹಲವು ಬಾರಿ ಅಂತಿಮ ಸುತ್ತಿಗೆ ಬಂದು ಪಾರಾಗಿದ್ದರು. ಡಬಲ್ ಎಲಿಮಿನೇಷನ್​ ಸಮಯದಲ್ಲಿ ಅವಿ ಜೊತೆ ಮೈಖಲ್ ಸಹ ಹೊರಗೆ ಹೋಗಿದ್ದರು. ಆದರೆ ಅದೃಷ್ಟವಶಾತ್ ಮತ್ತೆ ಒಳಗೆ ಬಂದರು. ಈ ವಾರ ಅವರೇ ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂಬುದು ಬಹುತೇಕ ಖಾತ್ರಿಯೇ ಆಗಿತ್ತು. ಮನೆಯ ಎಲ್ಲ ಸ್ಪರ್ಧಿಗಳು ಈ ವಾರ ಮೈಖಲ್ ಅವರೇ ಹೊರಗೆ ಹೋಗಲಿದ್ದಾರೆ ಎಂದು ಸರಿಯಾಗಿಯೇ ಊಹಿಸಿದ್ದರು. ಅದರಂತೆಯೇ ಆಯ್ತು.

ಇದನ್ನೂ ಓದಿ:ಮಗನ ವೈರಿ ಸಂಗೀತಾಗೆ ಮೈಖಲ್​ ತಾಯಿ ಕೊಟ್ಟರು ವಿಶೇಷ ಉಡುಗೊರೆ

ಮೈಖಲ್ ಅನ್ನು ಹೊರಗೆ ಕರೆಯುವಾಗ ಸಹ ಸುದೀಪ್, ಮೈಖಲ್ ಅನ್ನು ಮಣ್ಣಿನ ಮಗ, ಕನ್ನಡ ಪ್ರೇಮಿ, ಒಳ್ಳೆಯ ಟಾಸ್ಕ್ ಮಾಸ್ಟರ್ ಎಂದೇ ಕೊಂಡಾಡಿದರು. ಬಿಗ್​ಬಾಸ್ ಮನೆಯಲ್ಲಿ ಬಿಂದಾಸ್ ಆಗಿದ್ದ, ಯಾವುದಕ್ಕೂ ಡೋಂಟ್ ಕೇರ್ ಆಟಿಟ್ಯೂಟ್ ತೋರಿಸುತ್ತಿದ್ದ ಮೈಖಲ್, ಮನೆಯಿಂದ ಹೊರಗೆ ಹೋಗಬೇಕಾದರೆ ಭಾವುಕರಾಗಿ ಅತ್ತು ಬಿಟ್ಟರು. ಮೈಖಲ್ ಅನ್ನು ವಿರೋಧಿಯಂತೆ ಕಂಡಿದ್ದ ಸಂಗೀತಾ ಸಹ ಕಣ್ಣಲ್ಲಿ ನೀರು ಹಾಕಿದರು. ತುಕಾಲಿ , ನಮ್ರತಾ ಸಹ ಅತ್ತರು. ಮನೆಯಿಂದ ಹೊರಗೆ ಹೋಗುವಾಗ ವಿನಯ್​ಗೆ ವಿಶೇಷ ಅಧಿಕಾರವನ್ನು ಕೊಟ್ಟು ಹೋದರು ಮೈಖಲ್.

ಬಿಗ್​ಬಾಸ್ ಮನೆಯಿಂದ ಹೊರಗೆ ಬಂದ ಮೈಖಲ್, ತಮಗೆ ಇದೊಂದು ಅದ್ಭುತವಾದ ಪಯಣವಾಗಿತ್ತು ಎಂದರು. ಈ ಬಾರಿ ವಿನಯ್, ಕಾರ್ತಿಕ್ ಹಾಗೂ ಸಂಗೀತಾ ಟಾಪ್ 3ರಲ್ಲಿ ಇರುತ್ತಾರೆ. ವಿನಯ್ ಈ ಸ್ಪರ್ಧೆಯಲ್ಲಿ ವಿಜೇತರಾಗುತ್ತಾರೆ ಎಂದರು. ಮನೆಯಲ್ಲಿ ಆಡಿ ನಾನು ಎಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದೀನಿ ಎಂದು ನೋಡುವ ಆಸೆ ನನಗೆ ಇದೆ ಎಂಬ ಕುತೂಹಲ ವ್ಯಕ್ತಪಡಿಸಿದರು. ಬಿಗ್​ಬಾಸ್ ಮನೆಯಲ್ಲಿ ಸಿಗರೇಟು ಬಿಟ್ಟು ಇದ್ದ ಬಗ್ಗೆಯೂ ಸಂತಸ ವ್ಯಕ್ತಪಡಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ