AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗನ ವೈರಿ ಸಂಗೀತಾಗೆ ಮೈಖಲ್​ ತಾಯಿ ಕೊಟ್ಟರು ವಿಶೇಷ ಉಡುಗೊರೆ

Bigg Boss Kannada: ಬಿಗ್​ಬಾಸ್ ಮನೆಗೆ ಬಂದಿದ್ದ ಮೈಖಲ್​ರ ತಾಯಿ ವಿಜಿ, ಸಂಗೀತಾ ಹಾಗೂ ಮಗನ ನಡುವೆ ಸಂಧಾನ ಮಾಡಿದ್ದಾರೆ. ಸಂಗೀತಾಗೆ ವಿಶೇಷ ಉಡುಗೊರೆಯೊಂದನ್ನು ಸಹ ನೀಡಿದ್ದಾರೆ.

ಮಗನ ವೈರಿ ಸಂಗೀತಾಗೆ ಮೈಖಲ್​ ತಾಯಿ ಕೊಟ್ಟರು ವಿಶೇಷ ಉಡುಗೊರೆ
Follow us
ಮಂಜುನಾಥ ಸಿ.
|

Updated on:Dec 26, 2023 | 11:40 PM

ಮಂಗಳವಾರದ ಎಪಿಸೋಡ್​ನಲ್ಲಿ ಬಿಗ್​ಬಾಸ್ (Bigg Boss) ಮನೆಗೆ ಸ್ಪರ್ಧಿಗಳ ಕುಟುಂಬ ಸದಸ್ಯರು ಆಗಮಿಸಿದರು. ಮೊದಲಿಗೆ ಹಾಲಿ ಕ್ಯಾಪ್ಟನ್ ನಮ್ರತಾರ ತಾಯಿ ಆಗಮಿಸಿದರು. ತಾಯಿಯ ಆಗಮನದಿಂದ ಬಹಳ ಭಾವುಕಗೊಂಡರು ನಮ್ರತಾ, ಅಮ್ಮನನ್ನು ನೋಡಿದಂತೆ ಕಣ್ಣೀರು ಹಾಕಿದರು. ಹಲವು ಹೊತ್ತು ಪರಸ್ಪರ ಮಾತನಾಡಿದರು. ನಮ್ರತಾರ ತಾಯಿ ಮನೆಯ ಸದಸ್ಯರಿಗಾಗಿ ಇಡ್ಲಿ, ಹಿದಿಕಿದ ಬೇಳೆ ಸಾರು ಇನ್ನಿತರೆ ತಿಂಡಿಗಳನ್ನು ಮಾಡಿಕೊಂಡು ಬಂದಿದ್ದರು.

ಅದಾದ ಬಳಿಕ ವರ್ತೂರು ಸಂತು ಅವರ ತಾಯಿ ಬಂದರು. ಇದು ಎರಡನೇ ಬಾರಿ ವರ್ತೂರು ಅವರ ತಾಯಿ ಮನೆಗೆ ಬಂದಿದ್ದು, ಮಗನ ಜೊತೆಗೆ ಮನೆಯ ಸದಸ್ಯರಿಗೆಲ್ಲ ತಮ್ಮದೇ ಶೈಲಿಯಲ್ಲಿ ಬುದ್ಧಿವಾದ ಹೇಳಿದರು. ವಿನಯ್ ಅನ್ನು ವಿಲನ್ ಎಂದು ಸಹ ಕರೆದರು. ವರ್ತೂರು ಸಂತುಗೆ ತಲೆಗೆ ಎಣ್ಣೆ ಹಾಕಿ, ಹೊಸ ಬಟ್ಟೆ ಕೊಟ್ಟು ಹೋದರು.

ಆ ಬಳಿಕ ತುಕಾಲಿ ಸಂತು ಹೆಂಡತಿ ಮಾನಸ ಮನೆಗೆ ಬಂದು ಹಂಗಾಮ ಎಬ್ಬಿಸಿದರು. ತುಕಾಲಿಗೆ ಮನೆಯೆಲ್ಲ ಓಡಾಡಿಸಿಕೊಂಡು ಹೊಡೆದರು. ಪರಸ್ಪರ ಹಾಸ್ಯ ಮಾಡುತ್ತಾ ಮನೆಯ ಸದಸ್ಯರಿಗೆ ಒಳ್ಳೆ ಮನೊರಂಜನೆ ಒದಗಿಸಿದರು. ಜೊತೆಗೆ ತುಕಾಲಿ ಬಗ್ಗೆ ಕೆಲವು ಅಪರೂಪದ ಸಂಗತಿಗಳನ್ನು ಹೇಳಿ ಭಾವುಕರಾದರು. ಸಂತು ಸಹ ಪತ್ನಿಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದರು.

ಇದನ್ನೂ ಓದಿ:ವೈಲ್ಡ್​ ಕಾರ್ಡ್ ಎಂಟ್ರಿ ಮೂಲಕ ಬಿಗ್​ಬಾಸ್ ಮನೆಗೆ ಹೋಗಿದ್ದ ಅವಿ ಪಡೆದ ಸಂಭಾವನೆ ಎಷ್ಟು?

ಮಾನಸಾ ಮನೆಯಲ್ಲಿರುವಂತೆ ಮನೆಗೆ ಬಂದರು ಮೈಖಲ್​ರ ತಾಯಿ. ಕ್ರಿಸ್​ಮಸ್​ಗಾಗಿ ಮನೆಯ ಸದಸ್ಯರಿಗೆ ಚಾಲಕೇಟ್ ಇನ್ನಿತರೆ ಐಟಂಗಳನ್ನು ತಂದಿದ್ದರು. ಎಲ್ಲರನ್ನೂ ಬಹಳ ಪ್ರೀತಿಯಿಂದ ಮಾತನಾಡಿಸಿದರು. ಸಂಗೀತಾ ಜೊತೆ ಮಾತನಾಡುತ್ತಾ, ನಿಮ್ಮಿಬ್ಬರ ನಡುವೆ ಶಾಂತಿಧೂತೆಯಾಗಿ ನಾನು ಬಂದಿದ್ದೇನೆ, ನಿಮ್ಮಿಬ್ಬರ ನಡುವೆ ಸಂಧಾನ ಮಾಡಲೆಂದು ನಾನು ಪನ್ನೀರ್ ತಂದಿದ್ದೇನೆ. ಪನ್ನೀರ್​ಗಾಗಿ ಎಷ್ಟು ಅತ್ತಿದ್ದೆ ನೀನು ಎಂದು ಹೇಳಿ, ಪನ್ನೀರ್ ನೀಡಿದರು.

ಮೈಖಲ್​ಗೂ ಸಹ ಬುದ್ಧಿವಾದ ಹೇಳಿದ ಅವರ ತಾಯಿ, ಸಂಗೀತಾ ಜೊತೆ ಸ್ನೇಹ ಬೆಳೆಸಿಕೋ, ಕೋಪ ಪ್ರದರ್ಶಿಸಬೇಡ, ಬುದ್ಧಿಯಿಂದ ಆಡುವುದು ಬೇಡ ಹೃದಯದಿಂದ ಆಡು. ಮಹಿಳೆಯರ ಮೇಲೆ ಜಗಳ ಮಾಡಬೇಡ. ಯಾರ ಮೇಲೂ ಜಗಳ ಮಾಡಬೇಡ ಎಂದರು. ಹೋಗುವಾಗಲೂ ಸಹ ಮನೆಯ ಹುಡುಗರಿಗೆ ಮಹಿಳೆಯರ ಮೇಲೆ ಜಗಳ ಮಾಡಬೇಡಿ, ಅವರಿಗೆ ಬೈಯ್ಯಬೇಡಿ ಎಂದು ಬುದ್ಧಿವಾದ ಹೇಳಿ ಹೋದರು. ಮೈಖಲ್​ರ ತಾಯಿಯನ್ನು ಸಂಗೀತಾ ಅಪ್ಪಿಕೊಂಡು ಬೀಳ್ಕೊಟ್ಟರು. ಮಾನಸ, ತನಗೆ ಸಂಗೀತಾ ಕ್ಯಾಪ್ಟನ್ ಆಗಬೇಕು ಅಂದರೆ, ಮೈಖಲ್​ರ ತಾಯಿ, ತನಿಷಾ ಈ ಬಾರಿ ಕ್ಯಾಪ್ಟನ್ ಆಗಲಿ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:39 pm, Tue, 26 December 23

ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ CM-DCMಗೆ ಹೈಕಮಾಂಡ್ ಖಡಕ್​ ಸೂಚನೆ
ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ CM-DCMಗೆ ಹೈಕಮಾಂಡ್ ಖಡಕ್​ ಸೂಚನೆ
ಭೂಮಿಕ್ ಸಾಕುತ್ತಿದ್ದ ನಾಯಿ ಅನ್ನ-ನೀರು ಬಿಟ್ಟು ರೋದಿಸುತ್ತಿದೆ: ಅಶೋಕ
ಭೂಮಿಕ್ ಸಾಕುತ್ತಿದ್ದ ನಾಯಿ ಅನ್ನ-ನೀರು ಬಿಟ್ಟು ರೋದಿಸುತ್ತಿದೆ: ಅಶೋಕ
ಪುನಾರಚನೆ ಬಗ್ಗೆ ಗೊತ್ತಿಲ್ಲ, ನನಗೆ ಸಚಿವನಾಗುವ ಆಕಾಂಕ್ಷೆ ಇಲ್ಲ: ರಾಜು ಕಾಗೆ
ಪುನಾರಚನೆ ಬಗ್ಗೆ ಗೊತ್ತಿಲ್ಲ, ನನಗೆ ಸಚಿವನಾಗುವ ಆಕಾಂಕ್ಷೆ ಇಲ್ಲ: ರಾಜು ಕಾಗೆ
ಸ್ಟೇಡಿಯಂನಲ್ಲಿ ಕಾರ್ಯಕ್ರಮ ನಡೆಯಲು ಶಿವಕುಮಾರ್ ಕಾರಣ: ವಿಜಯೇಂದ್ರ
ಸ್ಟೇಡಿಯಂನಲ್ಲಿ ಕಾರ್ಯಕ್ರಮ ನಡೆಯಲು ಶಿವಕುಮಾರ್ ಕಾರಣ: ವಿಜಯೇಂದ್ರ
11 ವರ್ಷ ಒಟ್ಟಾಗಿ ಕಳೆದ ನಯನತಾರಾ-ವಿಘ್ನೇಶ್​ಗೆ ವಿವಾಹ ವಾರ್ಷಿಕೋತ್ಸವ
11 ವರ್ಷ ಒಟ್ಟಾಗಿ ಕಳೆದ ನಯನತಾರಾ-ವಿಘ್ನೇಶ್​ಗೆ ವಿವಾಹ ವಾರ್ಷಿಕೋತ್ಸವ
ಕಾಲ್ತುಳಿತ ಪ್ರಕರಣಕ್ಕೆ ಕಾರಣ ವರದಿಯ ಬಂದ ನಂತರ ಗೊತ್ತಾಗುತ್ತೆ: ಜಾರಕಿಹೊಳಿ
ಕಾಲ್ತುಳಿತ ಪ್ರಕರಣಕ್ಕೆ ಕಾರಣ ವರದಿಯ ಬಂದ ನಂತರ ಗೊತ್ತಾಗುತ್ತೆ: ಜಾರಕಿಹೊಳಿ
ಬಸ್​ನಲ್ಲಿ ಕಂಡಕ್ಟರ್ ಮೊಬೈಲ್​​ನ್ನೇ ಕದ್ದ ಚಾಲಾಕಿ ಕಳ್ಳ
ಬಸ್​ನಲ್ಲಿ ಕಂಡಕ್ಟರ್ ಮೊಬೈಲ್​​ನ್ನೇ ಕದ್ದ ಚಾಲಾಕಿ ಕಳ್ಳ
ದಕ್ಷತೆಯಿಂದ ಗುಮಾಸ್ತ ಕೆಲಸ ಮಾಡುತ್ತಿದ್ದ: ಪ್ರಾದೇಶಿಕ ಸಾರಿಗೆ ಅಧಿಕಾರಿ
ದಕ್ಷತೆಯಿಂದ ಗುಮಾಸ್ತ ಕೆಲಸ ಮಾಡುತ್ತಿದ್ದ: ಪ್ರಾದೇಶಿಕ ಸಾರಿಗೆ ಅಧಿಕಾರಿ